ಜೈರಾಮ್ ರಮೇಶ್ 
ದೇಶ

ಸುಪ್ರೀಂ ಕೋರ್ಟ್ ವಂತಾರಾದಂತೆ ಎಲ್ಲಾ ಪ್ರಕರಣ ಇಷ್ಟು ಬೇಗ ಇತ್ಯರ್ಥಪಡಿಸಿದರೆ...: ಜೈರಾಮ್ ರಮೇಶ್

ದೀರ್ಘ ವಿಳಂಬಗಳಿಂದ ವ್ಯಾಖ್ಯಾನಿಸಲ್ಪಟ್ಟ ಭಾರತೀಯ ನ್ಯಾಯಾಂಗ ವ್ಯವಸ್ಥೆಯು ತಾನು ಬಯಸಿದಾಗ, ಅತ್ಯಂತ ವೇಗವಾಗಿ ಚಲಿಸುತ್ತದೆ ಎಂದು ಹೇಳಿದ್ದಾರೆ.

ನವದೆಹಲಿ: ಉದ್ಯಮಿ ಮುಖೇಶ್ ಅಂಬಾನಿ ಕುಟುಂಬ ಒಡೆತನದ ಪ್ರಾಣಿ ರಕ್ಷಣಾ ಮತ್ತು ಪುನರ್ವಸತಿ ಕೇಂದ್ರ ವಂತಾರಾ ವಿರುದ್ಧದ ಪ್ರಕರಣದಲ್ಲಿ ಎಸ್‌ಐಟಿ ಕ್ಲೀನ್ ಚಿಟ್ ನೀಡಿಡ ನಂತರ ಸುಪ್ರೀಂ ಕೋರ್ಟ್ ಪ್ರಕರಣವನ್ನು ಮುಕ್ತಾಯಗೊಳಿಸಿದ ಒಂದು ದಿನದ ನಂತರ, ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಅವರು ಮಂಗಳವಾರ ಎಲ್ಲಾ ಪ್ರಕರಣಗಳನ್ನು ಇಷ್ಟೇ ತ್ವರಿತವಾಗಿ ಮತ್ತು ಸ್ಪಷ್ಟವಾಗಿ ಇತ್ಯರ್ಥಪಡಿಸಿದರೆ ಎಂದು ಅಚ್ಚರಿ ವ್ಯಕ್ತಪಡಿಸಿದ್ದಾರೆ.

ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮತ್ತು ಮಾಜಿ ಪರಿಸರ ಸಚಿವರು ಆಗಿರುವ ಜೈರಾಮ್ ರಮೇಶ್ ಅವರು, ದೀರ್ಘ ವಿಳಂಬಗಳಿಂದ ವ್ಯಾಖ್ಯಾನಿಸಲ್ಪಟ್ಟ ಭಾರತೀಯ ನ್ಯಾಯಾಂಗ ವ್ಯವಸ್ಥೆಯು ತಾನು ಬಯಸಿದಾಗ, ಅತ್ಯಂತ ವೇಗವಾಗಿ ಚಲಿಸುತ್ತದೆ ಎಂದು ಹೇಳಿದ್ದಾರೆ.

"ಆಗಸ್ಟ್ 25, 2025 ರಂದು, ಸುಪ್ರೀಂ ಕೋರ್ಟ್ ಜಾಮ್‌ನಗರದಲ್ಲಿ ರಿಲಯನ್ಸ್ ಫೌಂಡೇಶನ್ ಸ್ಥಾಪಿಸಿದ ವನ್ಯಜೀವಿ ರಕ್ಷಣಾ ಮತ್ತು ಪುನರ್ವಸತಿ ಕೇಂದ್ರ ವಂತಾರಾದ ವ್ಯವಹಾರಗಳ ಬಗ್ಗೆ ತನಿಖೆಗೆ ಸುಪ್ರೀಂ ಕೋರ್ಟ್ ವಿಶೇಷ ತನಿಖಾ ತಂಡ(ಎಸ್‌ಐಟಿ) ರಚಿಸಲು ಆದೇಶಿಸಿತ್ತು.

ನಾಲ್ವರು ಸದಸ್ಯರನ್ನು ಒಳಗೊಂಡ ಎಸ್‌ಐಟಿಗೆ ಸೆಪ್ಟೆಂಬರ್ 12, 2025 ರೊಳಗೆ ತನ್ನ ವರದಿ ಸಲ್ಲಿಸುವಂತೆ ನಿರ್ದೇಶಿಸಲಾಗಿತ್ತು. ಅದರಂತೆ ಎಸ್‌ಐಟಿ ತನ್ನ ವರದಿಯನ್ನು "ಮುಚ್ಚಿದ ಲಕೋಟೆಯಲ್ಲಿ" ಸಲ್ಲಿಸಿತು ಮತ್ತು ಸೆಪ್ಟೆಂಬರ್ 15, 2025 ರಂದು ಸುಪ್ರೀಂ ಕೋರ್ಟ್ ಎಸ್ಐಟಿ ಶಿಫಾರಸುಗಳನ್ನು ಅಂಗೀಕರಿಸಿತು. ಈ ಮೂಲಕ ಆಗಸ್ಟ್ 7, 2025 ರಂದು ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ಮುಕ್ತಾಯಗೊಳಿಸಿತು ಎಂದು ಅವರು ಹೇಳಿದ್ದಾರೆ.

"ಖಂಡಿತ, ಈ ನಿಗೂಢ 'ಮುಚ್ಚಿದ ಲಕೋಟೆ' ವ್ಯವಹಾರವಿಲ್ಲದೆ! ಎಲ್ಲಾ ಪ್ರಕರಣಗಳನ್ನು ಇಷ್ಟು ತ್ವರಿತವಾಗಿ ಮತ್ತು ವಿಭಾಗವಾರು ಇತ್ಯರ್ಥಪಡಿಸಿದರೆ ಇನ್ನೇನು ಬೇಕು" ಎಂದು ಜೈರಾಮ್ ರಮೇಶ್ ಹೇಳಿದ್ದಾರೆ.

ಸೋಮವಾರ ಸುಪ್ರೀಂ ಕೋರ್ಟ್ ತನ್ನ ವಿಶೇಷ ತನಿಖಾ ತಂಡ, ವಂತಾರಾಗೆ ಕ್ಲೀನ್ ಚಿಟ್ ನೀಡಿದ ವರದಿಯನ್ನು ಅಂಗೀಕರಿಸಿದೆ ಮತ್ತು "ಯಾವುದೇ ಕಾನೂನಿನ ಉಲ್ಲಂಘನೆ ಆಗಿಲ್ಲ" ಎಂದು ಹೇಳಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

UKP 3ನೇ ಹಂತ: ನೀರಾವರಿ ಭೂಮಿಗೆ 40 ಲಕ್ಷ ರೂ. ಪರಿಹಾರ ನೀಡಲು ಸಚಿವ ಸಂಪುಟ ನಿರ್ಧಾರ

75ರ ವಸಂತಕ್ಕೆ ಕಾಲಿಡುತ್ತಿರುವ ನರೇಂದ್ರ ಮೋದಿ: ಜನರ ಪ್ರಧಾನಿಯ ಏಳು ಬೀಳುಗಳ ಸ್ಮರಣೀಯ ಪ್ರಯಾಣ

Operation Sindoor ವೇಳೆ ಮೂರನೇ ದೇಶದ ಮಧ್ಯಸ್ಥಿಕೆ ಇರಲಿಲ್ಲ: ಟ್ರಂಪ್ ಮುಖವಾಡ ಬಯಲು ಮಾಡಿದ ಪಾಕ್ ಸಚಿವ

ಗುಜರಾತ್‌: ರಸ್ತೆ ಇಲ್ಲದೆ ಗರ್ಭಿಣಿಯನ್ನು ಜೋಲಿಯಲ್ಲಿ ಆಸ್ಪತ್ರೆಗೆ ಹೊತ್ತೊಯ್ದ ಕುಟುಂಬ; ದಾರಿ ಮಧ್ಯೆ ಮಹಿಳೆ ಸಾವು!

Gaza ವಶಕ್ಕೆ ಇಸ್ರೇಲ್ ಕಾರ್ಯಾಚರಣೆ; US ಕುಮ್ಮಕ್ಕು: IDF ದಾಳಿಯಲ್ಲಿ 62 ಪ್ಯಾಲೆಸ್ತೀನಿಯರು ಸಾವು, ಲಕ್ಷಾಂತರ ಮಂದಿ ಪಲಾಯನ!

SCROLL FOR NEXT