ಉಪರಾಷ್ಟ್ರಪತಿ ಸಿಪಿ ರಾಧಾಕೃಷ್ಣನ್ online desk
ದೇಶ

ಉಪರಾಷ್ಟ್ರಪತಿ ಕಚೇರಿಯಲ್ಲಿ ಧನ್ಕರ್ ನೇಮಿಸಿದ್ದ ಎಲ್ಲಾ ಸಿಬ್ಬಂದಿಗಳಿಗೆ ಗೇಟ್ ಪಾಸ್: ಹೊಸ ಸಿಬ್ಬಂದಿಗಳ ನೇಮಿಸಿದ VP Radhakrishnan!

ಹೊಸ ಸಿಬ್ಬಂದಿಗಳನ್ನು ನೇಮಕ ಮಾಡಿಕೊಳ್ಳಲು ಸಿಪಿ ರಾಧಾಕೃಷ್ಣನ್ ಸಿದ್ಧತೆ ನಡೆಸಿದ್ದಾರೆ. ಉಪರಾಷ್ಟ್ರಪತಿಗಳ ಕಚೇರಿಯಲ್ಲಿ ಪ್ರಸ್ತುತ ಇರುವ ಹಿರಿಯ ಅಧಿಕಾರಿಗಳೆಂದರೆ ಅದು ಕಾರ್ಯದರ್ಶಿ ಅಮಿತ್ ಖರೆ ಮತ್ತು ಖಾಸಗಿ ಕಾರ್ಯದರ್ಶಿ ಚಂದ್ರಶೇಖರ್ ಎಸ್ ಆಗಿದ್ದಾರೆ.

ನವದೆಹಲಿ: ನೂತನ ಉಪರಾಷ್ಟ್ರಪತಿ ಸಿಪಿ ರಾಧಾಕೃಷ್ಣನ್ ಅವರು ಈ ಹಿಂದಿನ ಉಪರಾಷ್ಟ್ರಪತಿ ಧನ್ಕರ್ ನೇಮಿಸಿದ್ದ ಎಲ್ಲಾ ಸಿಬ್ಬಂದಿಗಳಿಗೆ, ಅಧಿಕಾರಿಗಳಿಗೆ ಕಚೇರಿಯಿಂದ ಗೇಟ್ ಪಾಸ್ ನೀಡಿದ್ದಾರೆ.

ಹೊಸ ಸಿಬ್ಬಂದಿಗಳನ್ನು ನೇಮಕ ಮಾಡಿಕೊಳ್ಳಲು ಸಿಪಿ ರಾಧಾಕೃಷ್ಣನ್ ಸಿದ್ಧತೆ ನಡೆಸಿದ್ದಾರೆ. ಉಪರಾಷ್ಟ್ರಪತಿಗಳ ಕಚೇರಿಯಲ್ಲಿ ಪ್ರಸ್ತುತ ಇರುವ ಹಿರಿಯ ಅಧಿಕಾರಿಗಳೆಂದರೆ ಅದು ಕಾರ್ಯದರ್ಶಿ ಅಮಿತ್ ಖರೆ ಮತ್ತು ಖಾಸಗಿ ಕಾರ್ಯದರ್ಶಿ ಚಂದ್ರಶೇಖರ್ ಎಸ್ ಆಗಿದ್ದಾರೆ. ಧಂಖರ್ ಅವರ ಅಧಿಕಾರಾವಧಿಯಿಂದ ರಾಧಾಕೃಷ್ಣನ್ ವಿ.ಪಿ. ಎಸ್ಟೇಟ್‌ಗೆ ಆಗಮನದವರೆಗೆ ಪರಿವರ್ತನೆಯನ್ನು ಮೇಲ್ವಿಚಾರಣೆ ಮಾಡಿದ ಅಧೀನ ಕಾರ್ಯದರ್ಶಿ ಚಂದನ್ ಗೋಲಿ, ಉಪರಾಷ್ಟ್ರಪತಿಗಳ ಕಚೇರಿಯಲ್ಲಿರುವ ಇನ್ನೊಬ್ಬ ಅಧಿಕಾರಿಯಾಗಿದ್ದಾರೆ.

ಧಂಖರ್ ಸೆಪ್ಟೆಂಬರ್ 1 ರಂದು ಉಪರಾಷ್ಟ್ರಪತಿ ಎಸ್ಟೇಟ್‌ನಿಂದ ಹೊರಬಂದು ದಕ್ಷಿಣ ದೆಹಲಿಯ ಛತ್ತರ್‌ಪುರದಲ್ಲಿರುವ ಹರಿಯಾಣ ರಾಜಕಾರಣಿ ಅಭಯ್ ಸಿಂಗ್ ಚೌತಾಲ ಅವರ ಒಡೆತನದ ಆಸ್ತಿಗೆ ಸ್ಥಳಾಂತರಗೊಂಡಿದ್ದಾರೆ.

"ಸಾಮಾನ್ಯವಾಗಿ ಹೊಸ ಉಪರಾಷ್ಟ್ರಪತಿಗಳು ಅಥವಾ ರಾಷ್ಟ್ರಪತಿಗಳು ಆಯ್ಕೆಯಾದಾಗ ಸುಗಮ ಪರಿವರ್ತನೆಗಾಗಿ ಹಲವಾರು ಅಧಿಕಾರಿಗಳು ಅದೇ ಸ್ಥಾನದಲ್ಲಿ ಮುಂದುವರೆಯುತ್ತಾರೆ. ಎಂದು ಹಿರಿಯ ಅಧಿಕಾರಿಯೊಬ್ಬರು ಮಾಧ್ಯಮಗಳಿಗೆ ತಿಳಿಸಿದ್ದಾರೆ. "ಆದರೆ, ಈ ಸಂದರ್ಭದಲ್ಲಿ, ಧನ್ಖರ್ ರಾಜೀನಾಮೆ ನೀಡಿದ ನಂತರ ಕೆಲವೇ ಕೆಲವು ಅಧಿಕಾರಿಗಳು ಮಾತ್ರ ಉಪರಾಷ್ಟ್ರಪತಿ ಕಚೇರಿಯಲ್ಲಿ ಕಾರ್ಯನಿರ್ವಹಿಸುವುದನ್ನು ಮುಂದುವರೆಸಿದ್ದಾರೆ."

1985 ರ ಬ್ಯಾಚ್ ಜಾರ್ಖಂಡ್ ಕೇಡರ್ ಐಎಎಸ್ ಅಧಿಕಾರಿಯಾಗಿರುವ ಖರೆ, ಸಿಬ್ಬಂದಿ ಮತ್ತು ತರಬೇತಿ ಇಲಾಖೆ ಹೊರಡಿಸಿದ ಆದೇಶದ ಪ್ರಕಾರ, ಭಾರತ ಸರ್ಕಾರದ ಕಾರ್ಯದರ್ಶಿಯ ಶ್ರೇಣಿ ಮತ್ತು ವೇತನದಲ್ಲಿ ಮೂರು ವರ್ಷಗಳ ಕಾಲ ಒಪ್ಪಂದದ ಆಧಾರದ ಮೇಲೆ ಸೇವೆ ಸಲ್ಲಿಸಲಿದ್ದಾರೆ.

ಖರೆ ಜೊತೆಗೆ, ಕೇರಳ ಕೇಡರ್ ಐಎಎಸ್ ಅಧಿಕಾರಿ ಚಂದ್ರಶೇಖರ್ ಕೂಡ ಉಪ ರಾಷ್ಟ್ರಪತಿ ಕಚೇರಿಗೆ ಸೇರ್ಪಡೆಗೊಂಡ ಅಧಿಕಾರಿಯಾಗಿದ್ದಾರೆ. ಭಾರತೀಯ ಮಾಹಿತಿ ಸೇವಾ ಅಧಿಕಾರಿಗಳನ್ನು ಹೊಂದಿದ್ದ ಉಪರಾಷ್ಟ್ರಪತಿಗಳ ಮಾಧ್ಯಮ ತಂಡವನ್ನು ಸಹ ಬದಲಾಯಿಸಲಾಗಿದೆ. ಈಗ, ಪತ್ರಿಕಾ ಮಾಹಿತಿ ಬ್ಯೂರೋದ ಒಬ್ಬ ಅಧಿಕಾರಿ ಮಾಧ್ಯಮ ವಿಭಾಗದ ಉಸ್ತುವಾರಿ ವಹಿಸಿಕೊಂಡಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ರಾಜ್ಯ ಸರ್ಕಾರಕ್ಕೆ ಹಿನ್ನಡೆ: ಸಿನಿಮಾ ಟಿಕೆಟ್ ದರ 200 ರೂಪಾಯಿ ನಿಗದಿಪಡಿಸಿದ್ದ ಆದೇಶಕ್ಕೆ ಹೈಕೋರ್ಟ್ ಮಧ್ಯಂತರ ತಡೆಯಾಜ್ಞೆ

ವಿಶ್ವವಿಖ್ಯಾತ ಮೈಸೂರು ದಸರಾ ಚಾಲನೆ ಸಿಕ್ಕ ಮರುದಿನವೇ ಚಾಮುಂಡಿಬೆಟ್ಟದಲ್ಲಿ ಸೂತಕತ ಛಾಯೆ: ಅರ್ಚಕ ರಾಜು ನಿಧನ

ವಿಪ್ರೋ ಕ್ಯಾಂಪಸ್ ಮೂಲಕ ವಾಹನ ಸಂಚಾರಕ್ಕೆ ಅವಕಾಶ ನೀಡಿ: ಅಜೀಂ ಪ್ರೇಮ್‌ಜಿಗೆ ಸಿಎಂ ಸಿದ್ದರಾಮಯ್ಯ ಪತ್ರ

Israel-Hamas War: ಹಮಾಸ್ ಬಂಡುಕೋರರಿಗೆ ಖಡಕ್ ಎಚ್ಚರಿಕೆ ನೀಡಿದ ಪ್ಯಾಲೆಸ್ತೀನ್‌ ಅಧ್ಯಕ್ಷ ಮಹಮೂದ್‌ ಅಬ್ಬಾಸ್‌! ಹೇಳಿದ್ದೇನು?

ಸುಂಕಾಸ್ತ್ರ, H-1B ಶುಲ್ಕ ಹೆಚ್ಚಳ ವಿವಾದ: ಜೈಶಂಕರ್‌-ಮಾರ್ಕೊ ರುಬಿಯೊ ಭೇಟಿ ಬೆನ್ನಲ್ಲೇ ಭಾರತದ ಸಂಬಂಧ ನಿರ್ಣಾಯಕ ಎಂದ ಅಮೆರಿಕಾ

SCROLL FOR NEXT