ಸಾಂದರ್ಭಿಕ ಚಿತ್ರ 
ದೇಶ

ಜಾರ್ಖಂಡ್: ಭದ್ರತಾ ಸಿಬ್ಬಂದಿ ಜೊತೆಗಿನ ಗುಂಡಿನ ಚಕಮಕಿಯಲ್ಲಿ 3 ನಕ್ಸಲರ ಹತ್ಯೆ

ಜಾರ್ಖಂಡ್​ ಜಾಗ್ವರ್​ ಮತ್ತು ಗುಮ್ಲಾ ಪೊಲೀಸರನ್ನೊಳಗೊಂಡ ಭದ್ರತಾ ಪಡೆ ಜಾರ್ಖಂಡ್​ ಜನ್​ ಮುಕ್ತಿ ಪರಿಷದ್​ (ಜೆಜೆಎಂಪಿ) ಮಾವೋ ಗುಂಪಿನ ಸದಸ್ಯರು ಇರುವಿಕೆ ಕುರಿತು ಮಾಹಿತಿ ಪಡೆದಿದ್ದಾರೆ.

ರಾಂಚಿ: ಗುಮ್ಲಾ ಜಿಲ್ಲೆಯಲ್ಲಿ ನಕ್ಸಲರು ಮತ್ತು ಮಾವೋವಾದಿಗಳ ನಡುವೆ ಗುಂಡಿನ ಚಕಮಕಿ ನಡೆದಿದ್ದು, ನಿಷೇಧಿತ ಮಾವೋವಾದಿ ವಿಭಜಿತ ಗುಂಪಿನ ಕನಿಷ್ಠ ಮೂವರು ನಕ್ಸಲರು ಭದ್ರತಾ ಪಡೆಯ ಗುಂಡಿಗೆ ಬಲಿಯಾಗಿದ್ದಾರೆ.

ಜಾರ್ಖಂಡ್​ ಜಾಗ್ವರ್​ ಮತ್ತು ಗುಮ್ಲಾ ಪೊಲೀಸರನ್ನೊಳಗೊಂಡ ಭದ್ರತಾ ಪಡೆ ಜಾರ್ಖಂಡ್​ ಜನ್​ ಮುಕ್ತಿ ಪರಿಷದ್​ (ಜೆಜೆಎಂಪಿ) ಮಾವೋ ಗುಂಪಿನ ಸದಸ್ಯರು ಇರುವಿಕೆ ಕುರಿತು ಮಾಹಿತಿ ಪಡೆದಿದ್ದಾರೆ. ಇಂದು ಬೆಳಗ್ಗೆ 8ಕ್ಕೆ ಬಿಷ್ಣುಪುರ್​ ಪೊಲೀಸ್​ ಠಾಣೆಯ ವ್ಯಾಪಿಯಡಿ ಬರುವ ಕೆಚಕಿ ಗ್ರಾಮದ ಅರಣ್ಯದೊಳಗೆ ಶೋಧ ನಡೆಸಿದ್ದಾರೆ.

ಈ ವೇಳೆ ನಡೆದ ಗುಂಡಿನ ಚಕಮಕಿಯಲ್ಲಿ ಮೂವರು ಹತರಾಗಿದ್ದಾರೆ. ಮೃತಪಟ್ಟ ನಕ್ಸಲರನ್ನು ಲೋಹರ್ದಗಾ ಜಿಲ್ಲೆಯ ನಿವಾಸಿಗಳಾದ ಲಾಲು ಲೋಹ್ರಾ, ಸುಜಿತ್ ಒರಾನ್ ಮತ್ತು ಲತೇಹಾರ್ ಮೂಲದ ಚೋಟು ಒರಾನ್ ಎಂದು ಗುರುತಿಸಲಾಗಿದೆ ಎಂದು ಗುಮ್ಲಾ ಎಸ್ಪಿ ಹ್ಯಾರಿಸ್ ಬಿನ್ ಜಮಾನ್ ಮಾಹಿತಿ ನೀಡಿದ್ದಾರೆ.

ಭದ್ರತಾ ಪಡೆ ಕಂಡೊಡನೆ ಜೆಜೆಎಂಪಿ ಮಾವೋಗಳು ಗುಂಡಿನ ದಾಳಿ ನಡೆಸಿದ್ದು, ಅದಕ್ಕೆ ಪ್ರತಿಯಾಗಿ ಭದ್ರತಾ ಪಡೆ ಕೂಡ ದಾಳಿ ಮಾಡಿತು. ಸ್ಥಳದಲ್ಲಿದ್ದ ಮೂರು ಶಸ್ತ್ರಾಸ್ತ್ರಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಜಾರ್ಖಂಡ್​ ಪೊಲೀಸ್​ ವಕ್ತಾರ ಹಾಗೂ ಐಜಿ ಮೈಕಲ್​ ರಾಜ್​ ಎಸ್​ ತಿಳಿಸಿದ್ದಾರೆ. ಈ ಪ್ರದೇಶದಲ್ಲಿ ಇನ್ನು ಕೂಡ ಕಾರ್ಯಾಚರಣೆ ಮುಂದುವರೆದಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ರಾಷ್ಟ್ರಪತಿಗಳು, ರಾಜ್ಯಪಾಲರು ಮಸೂದೆ ಅಂಗೀಕರಿಸಲು ಕಾಲಮಿತಿ ನಿಗದಿಪಡಿಸಲು ಸಾಧ್ಯವಿಲ್ಲ, ಹಾಗೆಂದು ಅನಿರ್ದಿಷ್ಟಾವಧಿಯವರೆಗೆ ವಿಳಂಬ ಮಾಡುವಂತಿಲ್ಲ: ಸುಪ್ರೀಂ ಕೋರ್ಟ್

ದಾಖಲೆಯ 10ನೇ ಬಾರಿ ಬಿಹಾರ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ನಿತೀಶ್ ಕುಮಾರ್; ಮೋದಿ ಭಾಗಿ

ಜಪಾನ್ ಕುಸಿತ, ಜಾಗತಿಕ ಕುಸಿತಕ್ಕೂ ಕಾರಣವಾಗುತ್ತದೆ ಎಚ್ಚರ! (ಹಣಕ್ಲಾಸು)

ಗಗನಯಾನ: 80 ಸಾವಿರ ಪರೀಕ್ಷೆಗಳು ಮುಗಿದಿವೆ, ಯಾವುದೇ ಸಮಯದಲ್ಲಿ ಉಡಾವಣೆಗೆ ಸಿದ್ಧ

ಬಿಹಾರ ಸೋಲಿನಿಂದ ಕಂಗೆಟ್ಟ ಕೈ ಪಡೆ: ಒಡೆದು ಛಿದ್ರವಾಯ್ತಾ INDIA ಒಕ್ಕೂಟ- ಮುಂಬರುವ ಚುನಾವಣೆಗಳಲ್ಲಿ ಕಾಂಗ್ರೆಸ್‌ ಏಕಾಂಗಿ ಹೋರಾಟ?

SCROLL FOR NEXT