ವ್ಲಾಡಿಮಿರ್ ಪುಟಿನ್, ಪ್ರಧಾನಿ ಮೋದಿ 
ದೇಶ

Putin-Modi: ಮೋದಿ ನಾಯಕತ್ವದ ಭಾರತ ಅತ್ಯಧಿಕ ಆರ್ಥಿಕ ಬೆಳವಣಿಗೆ; ವ್ಲಾಡಿಮಿರ್ ಪುಟಿನ್ ಶ್ಲಾಘನೆ

ಕ್ರೆಮ್ಲಿನ್‌ನ ಅಧಿಕೃತ ವೆಬ್‌ಸೈಟ್ ವರದಿ ಮಾಡಿದೆ. ರಷ್ಯಾ- ಭಾರತದ ಸಂಬಂಧಗಳನ್ನು 'ರಾಷ್ಟ್ರೀಯ ಒಮ್ಮತದ ಆಧಾರದ ಮೇಲೆ' ಸ್ಥಿರವಾದದ್ದು ಎಂದು ಹೇಳಿರುವ ಪುಟಿನ್, ಮೋದಿಯವರ ನಾಯಕತ್ವದಲ್ಲಿ ಆಡಳಿತ ಮತ್ತು ಆರ್ಥಿಕ ಬೆಳವಣಿಗೆಯಲ್ಲಿ ಭಾರತದ ಸಾಧನೆಗಳನ್ನು ಶ್ಲಾಘಿಸಿದ್ದಾರೆ.

ನವದೆಹಲಿ: ಮೋದಿ ನಾಯಕತ್ವದ ಭಾರತ ಅತ್ಯಧಿಕ ಆರ್ಥಿಕ ಬೆಳವಣಿಗೆ ಸಾಧಿಸಿರುವುದಾಗಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಶ್ಲಾಘಿಸಿದ್ದಾರೆ.

ಹೌದು. ಕಳೆದ ವಾರ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ದೂರವಾಣಿ ಸಂಭಾಷಣೆ ನಡೆಸಿದ ವ್ಲಾಡಿಮಿರ್ ಪುಟಿನ್, ರಷ್ಯಾ ಮತ್ತು ಭಾರತ ನಡುವಿನ ಸದೃಢ ಸಂಬಂಧವನ್ನು ಪುನರುಚ್ಚರಿಸಿದ್ದಾರೆ. ರಷ್ಯಾ ಸರ್ಕಾರದ ಸದಸ್ಯರೊಂದಿಗಿನ ಸಭೆಯಲ್ಲಿ ಪ್ರಧಾನಿ ಮೋದಿ ಜೊತೆಗಿನ ಮಾತುಕತೆಯ ವಿವರಗಳನ್ನು ಪುಟಿನ್ ಹಂಚಿಕೊಂಡಿರುವುದಾಗಿ ಕ್ರೆಮ್ಲಿನ್‌ನ ಅಧಿಕೃತ ವೆಬ್‌ಸೈಟ್ ವರದಿ ಮಾಡಿದೆ.

ರಷ್ಯಾ- ಭಾರತದ ಸಂಬಂಧಗಳನ್ನು 'ರಾಷ್ಟ್ರೀಯ ಒಮ್ಮತದ ಆಧಾರದ ಮೇಲೆ' ಸ್ಥಿರವಾದದ್ದು ಎಂದು ಹೇಳಿರುವ ಪುಟಿನ್, ಮೋದಿಯವರ ನಾಯಕತ್ವದಲ್ಲಿ ಆಡಳಿತ ಮತ್ತು ಆರ್ಥಿಕ ಬೆಳವಣಿಗೆಯಲ್ಲಿ ಭಾರತದ ಸಾಧನೆಗಳನ್ನು ಶ್ಲಾಘಿಸಿದ್ದಾರೆ.

ಪ್ರಧಾನಿ ಮೋದಿಯವರ ನಾಯಕತ್ವದಲ್ಲಿ ಭಾರತ ಸಂಪೂರ್ಣ ಸ್ವತಂತ್ರ, ಸಾರ್ವಭೌಮ ನೀತಿಯನ್ನು ಅನುಸರಿಸುತ್ತಿದೆ. ಮುಖ್ಯವಾಗಿ ಆರ್ಥಿಕ ಕ್ಷೇತ್ರದಲ್ಲಿ ಉತ್ತಮ ಫಲಿತಾಂಶಗಳನ್ನು ಸಾಧಿಸುತ್ತಿದೆ. ವಿಶ್ವದ ಪ್ರಮುಖ ಆರ್ಥಿಕತೆಗಳಲ್ಲಿ ಭಾರತವು ಅತ್ಯಧಿಕ ಆರ್ಥಿಕ ಬೆಳವಣಿಗೆ ದಾಖಲಿಸಿದೆ ಎಂದು ಅವರು ಹೇಳಿದ್ದಾರೆ.

ಮೋದಿ ಅವರ 75ನೇ ಜನ್ಮದಿನದ ಅಂಗವಾಗಿ ಟೆಲಿಗ್ರಾಂ ಮೂಲಕ ಶುಭಾಶಯ ಕಳುಹಿಸಿದ ಕೂಡಲೇ ಉಭಯ ನಾಯಕರು ದೂರವಾಣಿಯಲ್ಲಿ ಸಂಭಾಷಣೆ ನಡೆಸಿದ್ದು, ಉಭಯ ರಾಷ್ಟ್ರಗಳ ಸದೃಢ ಸಂಬಂಧದಲ್ಲಿ ಮೋದಿ ಅವರ ವೈಯಕ್ತಿಕ ಕೊಡುಗೆಗಳನ್ನು ಪುಟಿನ್ ಒತ್ತಿ ಹೇಳಿರುವುದಾಗಿ ಟಿವಿ ಬ್ರಿಕ್ಸ್ ವರದಿ ಮಾಡಿದೆ. ರಷ್ಯಾ ಧೀರ್ಘಕಾಲದ ಪ್ರಾಮಾಣಿಕ ಮಿತ್ರ ರಾಷ್ಟ್ರವಾಗಿದೆ. ರಷ್ಯಾ-ಭಾರತ ನಡುವಿನ ಸಂಬಂಧ ಅಭಿವೃದ್ಧಿ ಭಾರತದ ವಿದೇಶಾಂಗ ನೀತಿಯಲ್ಲಿ ಪ್ರಮುಖವಾಗಿದೆ ಎಂದು ಎಂದು MEA ಹೇಳಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನಟ ವಿಜಯ್‌ TVK ಪಕ್ಷದ ರ‍್ಯಾಲಿ ವೇಳೆ ಕಾಲ್ತುಳಿತ: 3 ಮಕ್ಕಳು ಸೇರಿ ಸುಮಾರು 31ಕ್ಕೂ ಹೆಚ್ಚು ಮಂದಿ ಸಾವು; 40 ಮಂದಿ ಸ್ಥಿತಿ ಚಿಂತಾಜನಕ!

ನಟ ವಿಜಯ್‌ TVK ಪಕ್ಷದ ರ‍್ಯಾಲಿ ವೇಳೆ ಕಾಲ್ತುಳಿತ: ಸುಮಾರು 31ಕ್ಕೂ ಹೆಚ್ಚು ಮಂದಿ ಸಾವು, ಪ್ರಧಾನಿ ಸಂತಾಪ, ಸ್ಟಾಲಿನ್ ಹೇಳಿದ್ದು ಏನು?

Asia CUP 2025: ಭಾರತ- ಪಾಕ್ ಫೈನಲ್ ಪಂದ್ಯಕ್ಕೂ ಮುನ್ನ ಕಿಡಿ ಹೊತ್ತಿಸಿದ PCB ಮುಖ್ಯಸ್ಥ! ಏನಿದು

ಭಾರತಕ್ಕೆ ಪ್ರಮುಖ ರಾಜತಾಂತ್ರಿಕ ಗೆಲುವು: ಅಬುಧಾಬಿಯಿಂದ ಮೋಸ್ಟ್ ವಾಂಟೆಡ್ ಖಾಲ್ಸಾ ಭಯೋತ್ಪಾದಕನ ಹಸ್ತಾಂತರ!

Attari-Wagah Border: ಇದೇನಾ 'ಸ್ವಚ್ಛ ಭಾರತ'? ತೀವ್ರ ಚರ್ಚೆ ಹುಟ್ಟುಹಾಕಿದ ರಷ್ಯಾ ಮಹಿಳೆಯ ವೈರಲ್ Video!

SCROLL FOR NEXT