ಮಹಿಳೆಯ ಫೋಟೋ ತೆಗೆದ ಸಿಆರ್ ಪಿಎಫ್ ಅಧಿಕಾರಿ 
ದೇಶ

Delhi: ವಿಮಾನ ನಿಲ್ದಾಣದಲ್ಲಿ ರಹಸ್ಯವಾಗಿ ಫೋಟೋ ತೆಗೆದ CRPF ಅಧಿಕಾರಿ! ಸ್ಥಳದಲ್ಲಿಯೇ ಚಳಿ ಬಿಡಿಸಿದ ಮಹಿಳೆ; Video ವೈರಲ್

ಈ ಕುರಿತ ವಿಡಿಯೋವನ್ನು ಆಯೇಶಾ ಖಾನ್ ತನ್ನ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದು, ಅದು ಈಗ ಒಂದು ಮಿಲಿಯನ್ ಗೂ ಹೆಚ್ಚು ವೀಕ್ಷಣೆ ಕಂಡಿದೆ.

ನವದೆಹಲಿ: ದೆಹಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಿಆರ್‌ಪಿಎಫ್ ಅಧಿಕಾರಿಯಂತೆ ಕಾಣಿಸಿಕೊಂಡ ವ್ಯಕ್ತಿಯೊಬ್ಬ ರಹಸ್ಯವಾಗಿ ತನ್ನ ಫೋಟೋಗಳನ್ನು ತೆಗೆದಿದ್ದಾನೆ ಎಂದು ಮಹಿಳೆಯೊಬ್ಬರು ಹೇಳಿಕೊಂಡಿದ್ದಾರೆ. ಆಕೆ ಸ್ಥಳದಲ್ಲಿಯೇ ಆತನಿಗೆ ಚಳಿ ಬಿಡಿಸಿರುವ ವಿಡಿಯೋ ವೈರಲ್ ಆಗಿದೆ.

ಈ ಕುರಿತ ವಿಡಿಯೋವನ್ನು ಆಯೇಶಾ ಖಾನ್ ತನ್ನ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದು, ಅದು ಈಗ ಒಂದು ಮಿಲಿಯನ್ ಗೂ ಹೆಚ್ಚು ವೀಕ್ಷಣೆ ಕಂಡಿದೆ.

“ಸೆಪ್ಟೆಂಬರ್ 16 ರ ಬೆಳಿಗ್ಗೆ ದೆಹಲಿ ವಿಮಾನ ನಿಲ್ದಾಣದ ಟರ್ಮಿನಲ್ 1ರಲ್ಲಿ ಈ ಅನುಭವವಾಯಿತು. ಫೋನ್ ಕಾಲ್ ನಲ್ಲಿ ಇರುವಂತೆ ಕಂಡುಬಂದ ವ್ಯಕ್ತಿಯೊಬ್ಬ ರಹಸ್ಯವಾಗಿ ನನ್ನ ಫೋಟೋಗಳನ್ನು ತೆಗೆಯುತ್ತಲೇ ಇದ್ದನು. ನಂತರ ಆತನನ್ನು ಪ್ರಶ್ನಿಸಿದಾಗ ಅದನ್ನು ನಿರಾಕರಿಸಿದ. ಆತನ ಫೋನ್ ನೋಡಬೇಕು ಎಂದು ನಾನು ಕೇಳಿದಾಗ ಆತನ ಫೋನ್ ನಲ್ಲಿ ಫೋಟೋಗಳಿದ್ದವು. ನನ್ನ ಕಾಲುಗಳ ಪೋಟೋಗಳನ್ನು ತೆಗೆದಿದ್ದ ಎಂದು ಅವರು ಬರೆದುಕೊಂಡಿದ್ದಾರೆ.

ಆ ವ್ಯಕ್ತಿ ಸಿಆರ್‌ಪಿಎಫ್‌ಗೆ ಸೇರಿದವನಾಗಿರುವುದು ಅಸಮಾಧಾನ ಮೂಡಿಸಿದೆ. ಅವರು ನಮ್ಮ ಸುರಕ್ಷತೆಗಾಗಿ ಇರುವವರು. ಒಬ್ಬ ಮಹಿಳೆ ವಿಮಾನ ನಿಲ್ದಾಣದೊಳಗೆ ಸುರಕ್ಷಿತವಾಗಿಲ್ಲ ಅಂದ್ರೆ ಮತ್ತೇ ಎಲ್ಲಿ ಸುರಕ್ಷಿತವಾಗಿರಬೇಕು?" ಎಂದು ಖಾನ್ ಪ್ರಶ್ನಿಸಿದ್ದಾರೆ. ಖಾನ್ ಪ್ರಶ್ನಿಸುತ್ತಿದ್ದಂತೆಯೇ ಆತ ಫೋಟೋಗಳನ್ನು ಡಿಲೀಟ್ ಮಾಡಿರುವುದು ಕಂಡುಬಂದಿದೆ.

ಈ ಬಗ್ಗೆ ಕೇಳಿದಾಗ, ಸ್ವಯಂ ಚಾಲಿತವಾಗಿ ಫೋಟೋ ತೆಗೆಯಲಾಗಿದ್ದು, ಡಿಲೀಟ್ ಮಾಡಿರುವುದಾಗಿ ಹೇಳಿದ್ದಾನೆ. ಭಾರತದಲ್ಲಿ ಮಹಿಳೆಯರು ಸುರಕ್ಷತೆ ಎಂಬುದು 'ಭಯಾನಕ ಜೋಕ್' ಎಂದು ಖಾನ್ ತನ್ನ ಫೋಸ್ಟ್ ಮುಕ್ತಾಯಗೊಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನಟ ವಿಜಯ್‌ TVK ಪಕ್ಷದ ರ‍್ಯಾಲಿ ವೇಳೆ ಕಾಲ್ತುಳಿತ: 3 ಮಕ್ಕಳು ಸೇರಿ ಸುಮಾರು 31ಕ್ಕೂ ಹೆಚ್ಚು ಮಂದಿ ಸಾವು; 40 ಮಂದಿ ಸ್ಥಿತಿ ಚಿಂತಾಜನಕ!

Bengaluru Potholes: ರಸ್ತೆಗುಂಡಿ ಮುಚ್ಚಲು 1 ತಿಂಗಳು ಗಡುವು; ಇಂಜಿನಿಯರ್ ಅಮಾನತ್ತಿಗೆ ಸಿದ್ದರಾಮಯ್ಯ ಆದೇಶ; Video

ಭಾರತಕ್ಕೆ ಪ್ರಮುಖ ರಾಜತಾಂತ್ರಿಕ ಗೆಲುವು: ಅಬುಧಾಬಿಯಿಂದ ಮೋಸ್ಟ್ ವಾಂಟೆಡ್ ಖಾಲ್ಸಾ ಭಯೋತ್ಪಾದಕನ ಹಸ್ತಾಂತರ!

"ನಾವು ಹಾಗೆ ಮಾಡದೇ ಇದ್ದಲ್ಲಿ ಸಂಪೂರ್ಣ ಲೇಹ್ ಹೊತ್ತಿ ಉರಿಯುತ್ತಿತ್ತು": ಪೊಲೀಸರ ಕ್ರಮಕ್ಕೆ ಡಿಜಿಪಿ ಜಮ್ವಾಲ್ ಸಮರ್ಥನೆ

ಪಂಚ ಗ್ಯಾರಂಟಿ ಯೋಜನೆಗಳು ಭವಿಷ್ಯದ ಕಾಂಗ್ರೆಸ್ ಸರ್ಕಾರವನ್ನು ಕಾಪಾಡಲಿವೆ: ಡಿಸಿಎಂ ಡಿ.ಕೆ ಶಿವಕುಮಾರ್ ಅಭಿಮತ

SCROLL FOR NEXT