ಸಾಂದರ್ಭಿಕ ಚಿತ್ರ 
ದೇಶ

Census 2027: ದೇಶದಲ್ಲಿ ರಾಷ್ಟ್ರೀಯ ಜನಗಣತಿ ಆರಂಭ: ಇದು ಯಾಕೆ ಮುಖ್ಯ ಗೊತ್ತಾ?

ಹೇಗೆ ಜನಗಣತಿ ಮಾಡಲಾಗುತ್ತದೆ ಮತ್ತು ಅದು ಯಾಕೆ ಮುಖ್ಯ ಎಂಬುದು ಇಲ್ಲಿದೆ. 1.4 ಬಿಲಿಯನ್‌ಗಿಂತಲೂ ಹೆಚ್ಚು ಜನರನ್ನು ಎಣಿಕೆ ಮಾಡಲಾಗುತ್ತಿದೆ.

ನವದೆಹಲಿ: ಭಾರತದಲ್ಲಿ ವಿಶ್ವದ ಅತಿದೊಡ್ಡ ರಾಷ್ಟ್ರೀಯ ಜನಗಣತಿಯನ್ನು ಆರಂಭಿಸಲಾಗಿದೆ. ಇದು ದೇಶದಾದ್ಯಂತ ಕಲ್ಯಾಣ ಕಾರ್ಯಕ್ರಮಗಳು ಮತ್ತು ರಾಜಕೀಯ ಪ್ರಾತಿನಿಧ್ಯಕ್ಕೆ ಮರು ಸ್ವರೂಪ ನೀಡುವ ಸಾಧ್ಯತೆಯಿದೆ.

ಹಿಂದಿನ 2011 ರ ಜನಗಣತಿಯಲ್ಲಿ ಭಾರತದ ಒಟ್ಟು ಜನಸಂಖ್ಯೆ 1.21 ಶತಕೋಟಿ ಆಗಿತ್ತು. ಈಗ ಅದು 140 ಕೋಟಿ ದಾಟಿದೆ ಎಂದು ಅಂದಾಜಿಸಲಾಗಿದ್ದು, ಭಾರತ ಹೆಚ್ಚು ಜನಸಂಖ್ಯೆ ಹೊಂದಿರುವ ರಾಷ್ಟ್ರವಾಗಿದೆ. 2021ರಲ್ಲಿ ಹೊಸದಾಗಿ ಜನಗಣತಿ ಮಾಡಲು ಯೋಜಿಸಲಾಗಿತ್ತು. ಆದರೆ COVID-19 ಸಾಂಕ್ರಾಮಿಕ ಕಾರಣದಿಂದ ಅದನ್ನು ಮುಂದೂಡಲಾಗಿತ್ತು.

ಹೇಗೆ ಜನಗಣತಿ ಮಾಡಲಾಗುತ್ತದೆ?

ಹೇಗೆ ಜನಗಣತಿ ಮಾಡಲಾಗುತ್ತದೆ ಮತ್ತು ಅದು ಯಾಕೆ ಮುಖ್ಯ ಎಂಬುದು ಇಲ್ಲಿದೆ. 1.4 ಬಿಲಿಯನ್‌ಗಿಂತಲೂ ಹೆಚ್ಚು ಜನರನ್ನು ಎಣಿಕೆ ಮಾಡಲಾಗುತ್ತಿದೆ.

ಮೊದಲ ಹಂತದ ಜನಗಣತಿ ಬುಧವಾರ ಆರಂಭವಾಗಿದ್ದು, ಸೆಪ್ಟೆಂಬರ್‌ವರೆಗೆ ದೇಶಾದ್ಯಂತ ನಡೆಯಲಿದೆ. ಗಣತಿದಾರರು ಪ್ರತಿ ಪ್ರದೇಶದಲ್ಲಿ ಸುಮಾರು ಒಂದು ತಿಂಗಳ ಕಾಲ ಮನೆ ಮತ್ತು ಲಭ್ಯವಿರುವ ಸೌಲಭ್ಯಗಳ ಮಾಹಿತಿಯನ್ನು ಸಂಗ್ರಹಿಸುತ್ತಾರೆ ಮತ್ತು ವಸತಿ ಸ್ಟಾಕ್ ಮತ್ತು ಜೀವನ ಪರಿಸ್ಥಿತಿಗಳನ್ನು ದಾಖಲಿಸುತ್ತಾರೆ. ನಿವಾಸಿಗಳು ಬಹುಭಾಷಾ ಸ್ಮಾರ್ಟ್‌ಫೋನ್ ಆ್ಯಪ್ ಮೂಲಕವೂ ಮಾಹಿತಿಯನ್ನು ಸಲ್ಲಿಸಬಹುದು. ಸೆಪ್ಟೆಂಬರ್‌ನಿಂದ ಮುಂದಿನ ಏಪ್ರಿಲ್ 1 ರವರೆಗೆ ನಡೆಸಲಾಗುವ ಎರಡನೇ ಹಂತದಲ್ಲಿ ಧರ್ಮ ಮತ್ತು ಜಾತಿ ಸೇರಿದಂತೆ ಜನರ ಸಾಮಾಜಿಕ ಮತ್ತು ಆರ್ಥಿಕ ಸ್ಥಿತಿಗತಿ ಕುರಿತು ವಿವರವಾದ ಮಾಹಿತಿಯನ್ನು ಸಂಗ್ರಹಿಸಲಾಗುತ್ತದೆ.

ಜನಗಣತಿಗಾಗಿ ವರ್ಷದ ಅವಧಿಯಲ್ಲಿ 3 ಮಿಲಿಯನ್‌ಗಿಂತಲೂ ಹೆಚ್ಚು ಸರ್ಕಾರಿ ನೌಕರರನ್ನು ನಿಯೋಜಿಸುವ ನಿರೀಕ್ಷೆಯಿದೆ. 2011 ರಲ್ಲಿ ಸುಮಾರು 2.7 ಮಿಲಿಯನ್ ಗಣತಿದಾರರು ದೇಶಾದ್ಯಂತ 240 ಮಿಲಿಯನ್‌ಗಿಂತಲೂ ಹೆಚ್ಚು ಕುಟುಂಬಗಳನ್ನು ಸಮೀಕ್ಷೆ ಮಾಡಿದ್ದಾರೆ.

ರಾಜಕೀಯವಾಗಿ ಸೂಕ್ಷ್ಮವಾದ ಜಾತಿ ಗಣತಿ: ಎರಡನೇ ಹಂತದ ಜನಗಣತಿಯು ಐತಿಹಾಸಿಕವಾಗಿ ದುರ್ಬಲ ಗುಂಪುಗಳನ್ನು ಮೀರಿ ಸಮಗ್ರ ಜಾತಿ ಲೆಕ್ಕಾಚಾರದ ಪ್ರಯತ್ನವಾಗಿದೆ. ಭಾರತದಲ್ಲಿನ ಜಾತಿಯು ಪ್ರಾಚೀನ ಸಾಮಾಜಿಕ ಶ್ರೇಣಿ ವ್ಯವಸ್ಥೆಯಾಗಿದೆ ಮತ್ತು ಸಾಮಾಜಿಕ ಸ್ಥಾನಮಾನ ಮತ್ತು ಶಿಕ್ಷಣ ಮತ್ತು ಆರ್ಥಿಕ ಸ್ಥಾನಮಾನ ನಿರ್ಧರಿಸುವಲ್ಲಿ ಪ್ರಭಾವಶಾಲಿಯಾಗಿದೆ. ಭಾರತದಾದ್ಯಂತ ವಿಶೇಷವಾಗಿ ಹಿಂದೂಗಳಲ್ಲಿ ಉದ್ಯೋಗ ಮತ್ತು ಆರ್ಥಿಕ ಸ್ಥಿತಿಯನ್ನು ಆಧರಿಸಿ ನೂರಾರು ಜಾತಿ ಗುಂಪುಗಳಿವೆ. ಆದರೆ ಎಷ್ಟು ಜನರು ಆ ಗುಂಪಿನಲ್ಲಿ ಸೇರಿದ್ದಾರೆ ಎಂಬುದರ ಕುರಿತು ಸೀಮಿತ ಅಥವಾ ಹಳೆಯ ಡೇಟಾ ಇದೆ.

1931 ರಲ್ಲಿ ಬ್ರಿಟಿಷರ ವಸಾಹತುಶಾಹಿ ಆಳ್ವಿಕೆಯಲ್ಲಿ ವಿವರವಾದ ಜಾತಿ ಮಾಹಿತಿ ಸಂಗ್ರಹಿಸುವ ಪ್ರಯತ್ನ ನಡೆದಿತ್ತು. 1951 ರಲ್ಲಿ ಸ್ವತಂತ್ರ ಭಾರತದ ಮೊದಲ ಜನಗಣತಿಯಿಂದ ದಲಿತರು ಮತ್ತು ಆದಿವಾಸಿಗಳು, ಪರಿಶಿಷ್ಟ ಜಾತಿಗಳು ಮತ್ತು ಬುಡಕಟ್ಟುಗಳು ಎಂದು ಕರೆಯಲ್ಪಡುವ ದುರ್ಬಲ ಗುಂಪುಗಳ ಸದಸ್ಯರನ್ನು ಮಾತ್ರ ಪರಿಗಣಿಸಿದೆ. ನಂತರದ ಸರ್ಕಾರಗಳು ಸಂಪೂರ್ಣ ಜಾತಿ ಎಣಿಕೆಯನ್ನು ನಡೆಸುವುದನ್ನು ವಿರೋಧಿಸಿವೆ. ಇದು ಸಾಮಾಜಿಕ ಉದ್ವಿಗ್ನತೆಯನ್ನು ಹೆಚ್ಚಿಸಬಹುದು ಮತ್ತು ಅಶಾಂತಿಯನ್ನು ಪ್ರಚೋದಿಸಬಹುದು ಎಂಬುದು ಅವರ ವಿರೋಧಕ್ಕೆ ಕಾರಣವಾಗಿದೆ.

ಭಾರತದ ರಾಜಕೀಯಕ್ಕೆ ಜನಸಂಖ್ಯೆಯ ದತ್ತಾಂಶ ಪ್ರಮುಖವಾಗಿದೆ: ಜನಗಣತಿಯ ಮೂಲಕ ಸಂಗ್ರಹಿಸಲಾದ ಜನಸಂಖ್ಯೆಯ ದತ್ತಾಂಶ ಸರ್ಕಾರದ ಕಲ್ಯಾಣ ಕಾರ್ಯಕ್ರಮಗಳು ಮತ್ತು ವ್ಯಾಪಕ ಶ್ರೇಣಿಯ ಸಾರ್ವಜನಿಕ ನೀತಿಗಳ ವಿತರಣೆಗೆ ಆಧಾರವಾಗಿದೆ. ಜನಸಂಖ್ಯೆಯ ಬೆಳವಣಿಗೆಯನ್ನು ಪ್ರತಿಬಿಂಬಿಸಲು ಸಂಸತ್ತಿನ ಕೆಳಮನೆ ಮತ್ತು ರಾಜ್ಯ ಶಾಸಕಾಂಗಗಳಲ್ಲಿ ಸ್ಥಾನಗಳನ್ನು ಹೆಚ್ಚಿಸಬಹುದಾದ್ದರಿಂದ ಇದು ಭಾರತದ ರಾಜಕೀಯ ಚಿತ್ರಣವನ್ನು ಪುನರ್ ರೂಪಿಸಬಹುದು. 2023 ರ ಕಾನೂನು ಮಹಿಳೆಯರಿಗೆ ಶಾಸಕಾಂಗ ಸ್ಥಾನಗಳಲ್ಲಿ ಮೂರನೇ ಒಂದು ಭಾಗವನ್ನು ಕಾಯ್ದಿರಿಸುತ್ತದೆ, ಆದ್ದರಿಂದ ಯಾವುದೇ ವಿಸ್ತರಣೆಯು ಮಹಿಳಾ ಪ್ರತಿನಿಧಿಗಳಿಗೆ ಮೀಸಲಿಟ್ಟ ಸ್ಥಾನಗಳ ಸಂಖ್ಯೆಯನ್ನು ಹೆಚ್ಚಿಸುತ್ತದೆ.

ಕರ್ನಾಟಕದಲ್ಲಿಯೂ ಜನಗಣತಿ ಆರಂಭ: ಕೇಂದ್ರ ಸರ್ಕಾರ ಹಮ್ಮಿಕೊಂಡಿರುವ ಜನ ಗಣತಿ 2027ರ ಅಂಗವಾಗಿ ಕರ್ನಾಟಕ ಸರ್ಕಾರವೂ ಸ್ವಯಂ ಗಣತಿ ವ್ಯವಸ್ಥೆ ಪರಿಚಯಿಸಿದೆ. ಮುಂಬರುವ ಮನೆ ಪಟ್ಟಿ ಕಾರ್ಯಾಚರಣೆಗಳಲ್ಲಿ ನಾಗರಿಕರು ತಮ್ಮ ವಿವರಗಳನ್ನು ಆನ್‌ಲೈನ್‌ನಲ್ಲಿ ಪೂರ್ಣಗೊಳಿಸಲು ಮತ್ತು ಗಣತಿದಾರರೊಂದಿಗೆ ಸಂಪೂರ್ಣವಾಗಿ ಸಹಕರಿಸುವಂತೆ ಮನವಿ ಮಾಡಿದೆ. 2026 ರ ಏಪ್ರಿಲ್ 1 ರಿಂದ 15 ರವರೆಗೆ ಎಲ್ಲಾ ನಾಗರಿಕರು ಅಧಿಕೃತ ಪೋರ್ಟಲ್ se.census.gov.in ಮೂಲಕ ತಮ್ಮ ಮಾಹಿತಿಯನ್ನು ಆನ್ ಲೈನ್ ನಲ್ಲಿ ತಮ್ಮ ಮಾಹಿತಿಯನ್ನು ದಾಖಲಿಸಿಕೊಳ್ಳಬೇಕೆಂದು ಹೇಳಿದೆ. ಪ್ರಕಟಣೆಯ ಜೊತೆಗೆ, CMO ವೀಡಿಯೊವನ್ನು ಬಿಡುಗಡೆ ಮಾಡಿದೆ. ಸ್ವಇಚ್ಛೆಯಿಂದ ಮತ್ತು ನಿಖರವಾಗಿ ಮಾಹಿತಿಯನ್ನು ಒದಗಿಸಲು ನಾಗರಿಕರಿಗೆ ಮನವಿ ಮಾಡಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಜಾಗತಿಕ ಅನಿಶ್ಚಿತತೆ ನಡುವೆ ಸಾಮೂಹಿಕ layoff ಶಾಕ್: Oracle ಕಂಪೆನಿಯಿಂದ ಸಾವಿರಾರು ಮಂದಿ ವಜಾ, ಭಾರತಕ್ಕೂ ತಟ್ಟಿದ ಬಿಸಿ

ಹತ್ಯೆ ಬೆದರಿಕೆ ನಡುವೆ ಜನರೊಂದಿಗೆ ಬಹಿರಂಗವಾಗಿ ಕಾಣಿಸಿದ ಇರಾನ್ ಅಧ್ಯಕ್ಷ, ವಿದೇಶಾಂಗ ಸಚಿವ ಅರಾಘ್ಚಿ! Video

'ಬೂಟ್‌ ನೆಕ್ಕುವವರಿಗೆ ಮಾತ್ರ ನಿಮ್ಮಲ್ಲಿ ಅವಕಾಶವೇ? ನನ್ನ ರಾಜಕೀಯ ತ್ಯಾಗಕ್ಕೆ ಬೆಲೆಯಿಲ್ಲವೇ; ಬೆನ್ನುಮೂಳೆ ಇಲ್ಲದ ವ್ಯಕ್ತಿಯನ್ನು ಛೂ ಬಿಟ್ಟಿದ್ದೀರಾ'!

ದುಬಾರಿ ದುನಿಯಾ: ಪ್ರೀಮಿಯಂ ಪೆಟ್ರೋಲ್ ದರ, ಜೆಟ್ ಇಂಧನ ಬೆಲೆ ಏರಿಕೆ; ದೇಶೀಯ ಏರ್ ಲೈನ್ಸ್ ಗಳ ರಕ್ಷಣೆಗೆ ಕೇಂದ್ರ ಸರ್ಕಾರ ಕ್ರಮ

ಇರಾನ್‌ನ ಸರ್ವೋಚ್ಚ ನಾಯಕ ಮೊಜ್ತಾಬಾ ಖಮೇನಿ ಎಲ್ಲಿದ್ದಾರೆ? ಮಹತ್ವದ ಮಾಹಿತಿ ಬಹಿರಂಗಪಡಿಸಿದ ರಷ್ಯಾದ ರಾಯಭಾರಿ!

SCROLL FOR NEXT