ಪ್ರಧಾನಿ ಮೋದಿ, ಅಭಿಷೇಕ್ ಬ್ಯಾನರ್ಜಿ ಸಾಂದರ್ಭಿಕ ಚಿತ್ರ 
ದೇಶ

ಕೋಲ್ಕತ್ತಾ ಮೇಲೆ ಪಾಕಿಸ್ತಾನ ದಾಳಿಯ ಬೆದರಿಕೆ: ಪ್ರಧಾನಿ ಮೋದಿ ಯಾಕೆ ಸೈಲೆಂಟ್ ಆಗಿದ್ದಾರೆ? ಅಭಿಷೇಕ್ ಪ್ರಶ್ನೆ

ಭಾರತದಿಂದ ಯಾವುದೇ "ಭವಿಷ್ಯದ ದುಸ್ಸಾಹಸ" ಗಳಿಗೆ ಕೋಲ್ಕತ್ತಾದಲ್ಲಿ ದಾಳಿ ಮೂಲಕ ತಮ್ಮ ದೇಶವು ಪ್ರತ್ಯುತ್ತರ ನೀಡಲಿದೆ ಎಂದು ಪಾಕಿಸ್ತಾನದ ರಕ್ಷಣಾ ಸಚಿವ ಖವಾಜಾ ಆಸಿಫ್ ಶನಿವಾರ ಎಚ್ಚರಿಕೆ ನೀಡಿದ್ದರು.

ಕೋಲ್ಕತ್ತಾ: ಕೋಲ್ಕತ್ತಾದ ಮೇಲೆ ದಾಳಿ ಮಾಡುವುದಾಗಿ ಪಾಕಿಸ್ತಾನದ ರಕ್ಷಣಾ ಸಚಿವ ಬೆದರಿಕೆ ಹಾಕಿದ್ದರೂ ಪ್ರಧಾನಿ ನರೇಂದ್ರ ಮೋದಿ ಸೈಲೆಂಟ್ ಆಗಿದ್ದಾರೆ ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸೋದರಳಿಯ ಹಾಗೂ ಟಿಎಂಸಿಯ ಹಿರಿಯ ನಾಯಕ ಅಭಿಷೇಕ್ ಬ್ಯಾನರ್ಜಿ ಸೋಮವಾರ ಹೇಳಿದ್ದಾರೆ.

ಭಾರತದಿಂದ ಯಾವುದೇ "ಭವಿಷ್ಯದ ದುಸ್ಸಾಹಸ" ಗಳಿಗೆ ಕೋಲ್ಕತ್ತಾದಲ್ಲಿ ದಾಳಿ ಮೂಲಕ ತಮ್ಮ ದೇಶವು ಪ್ರತ್ಯುತ್ತರ ನೀಡಲಿದೆ ಎಂದು ಪಾಕಿಸ್ತಾನದ ರಕ್ಷಣಾ ಸಚಿವ ಖವಾಜಾ ಆಸಿಫ್ ಶನಿವಾರ ಎಚ್ಚರಿಕೆ ನೀಡಿದ್ದರು. ಭಾರತ ಈ ಬಾರಿ ಯಾವುದೇ ಸುಳ್ಳ ಕಾರ್ಯಾಚರಣೆ ನಡೆಸಲು ಪ್ರಯತ್ನಿಸಿದರೆ, ಕೋಲ್ಕತ್ತಾದ ಮೇಲೆ ದಾಳಿ ಮಾಡುವುದಾಗಿ ಆಸಿಫ್ ಸಿಯಾಲ್ಕೋಟ್‌ನಲ್ಲಿ ಸುದ್ದಿಗಾರರಿಗೆ ಹೇಳಿದ್ದರು.

ಈ ಹೇಳಿಕೆ ಕುರಿತು ಇಂದು ಸಿಲಿಗುರಿಯಲ್ಲಿ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅಭಿಷೇಕ್ ಬ್ಯಾನರ್ಜಿ, ಪ್ರಧಾನಿ ಮತ್ತು ಅವರ ಹಿರಿಯ ಕ್ಯಾಬಿನೆಟ್ ಸಹೋದ್ಯೋಗಿಗಳ ಮೌನವನ್ನು ಟೀಕಿಸಿದರು.

ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ನಿರ್ಲಜ್ಜ ಬೆದರಿಕೆಯ ಬಗ್ಗೆ ಮೌನವಾಗಿದ್ದಾರೆ. ಖವಾಜಾ ಆಸಿಫ್ ಪಾಕಿಸ್ತಾನದಲ್ಲಿ ಕುಳಿತು ಕೋಲ್ಕತ್ತಾದ ಮೇಲೆ ದಾಳಿ ಮಾಡುವುದಾಗಿ ಬೆದರಿಕೆ ಹಾಕುತ್ತಿದ್ದಾರೆ, ಆದರೆ ಮೋದಿ ಕೂಚ್ ಬೆಹಾರ್‌ನಲ್ಲಿ ಪ್ರಚಾರದಲ್ಲಿ ತೊಡಗಿದ್ದು, ಟಿಎಂಸಿಯನ್ನು ಅಧಿಕಾರದಿಂದ ತೆಗೆದುಹಾಕುವಂತೆ ಜನರನ್ನು ಕೇಳುತ್ತಿದ್ದಾರೆ ಎಂದರು.

ಒಳನುಸುಳುವಿಕೆಯ ಬಗ್ಗೆ ಬಿಜೆಪಿ ನಾಯಕರ ಟೀಕೆಗಳ ವಿರುದ್ಧ ವಾಗ್ದಾಳಿ ನಡೆಸಿದ ಅಭಿಷೇಕ್, ಅಮಿತ್ ಶಾ ನಮ್ಮನ್ನು ಬಾಂಗ್ಲಾದೇಶಿಗಳು ಮತ್ತು ಪಾಕಿಸ್ತಾನಿಗಳು ಎಂದು ಬ್ರಾಂಡ್ ಮಾಡ್ತಾರೆ. ಅವರು ಕೋಲ್ಕತ್ತಾದ ಮೇಲೆ ದಾಳಿ ಮಾಡುವುದಾಗಿ ಬೆದರಿಕೆ ಹಾಕಿದಾಗ ಈಗ ಮೂಕ ಪ್ರೇಕ್ಷಕರಂತೆ ಕುಳಿತುಕೊಳ್ಳುತ್ತಾರೆ. ಇದು ನಿಮ್ಮ 56 ಇಂಚಿನ ಎದೆಯೇ? ಎಂದು ಪ್ರಶ್ನಿಸಿದರು.

ಕೇಂದ್ರ ಸರ್ಕಾರ ತನಿಖಾ ಏಜೆನ್ಸಿಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ ಎಂದು ಆರೋಪಿಸಿದ ಅಭಿಷೇಕ್ ಬ್ಯಾನರ್ಜಿ, ತನ್ನ ರಾಜಕೀಯ ವಿರೋಧಿಗಳ ವಿರುದ್ಧ ಸೇನೆ, ಪಡೆಗಳು ಮತ್ತು ಕೇಂದ್ರ ಏಜೆನ್ಸಿಗಳನ್ನು ಬಳಸುತ್ತಿರುವ ಏಕೈಕ ನಾಯಕ ಮೋದಿ, ಆದರೆ ಇತರ ದೇಶಗಳು ಹೊರಗಿನ ಶತ್ರುಗಳ ವಿರುದ್ಧ ಹೋರಾಡಲು ತಮ್ಮ ಪಡೆಗಳನ್ನು ಬಳಸುತ್ತವೆ ಎಂದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ದೇಶವನ್ನೇ ಬೆಚ್ಚಿ ಬೀಳಿಸಿದ್ದ ಲಾಕ್ ಅಪ್ ಡೆತ್ ಕೇಸ್; ತಮಿಳುನಾಡಿನ 9 ಪೊಲೀಸರಿಗೆ ಮರಣದಂಡನೆ!

ಕೊಡಗು: ಅನ್ನ, ಆಹಾರವಿಲ್ಲದೇ 4 ದಿನ ಕಾಡಿನಲ್ಲಿ ಕೇರಳಂ ಮಹಿಳೆ ಬದುಕುಳಿದಿದ್ದೇಗೆ? ಅನುಮಾನಗಳಿಗೆ ತಜ್ಞರು ಹೇಳೋದೇನು?

ಭಾರತೀಯ ಸೇನೆಗೆ ''ದಿವ್ಯಾಸ್ತ್ರ' ಬಲ: ಆಧುನಿಕ ಯುದ್ಧಕ್ಕಾಗಿ AI ಆಧಾರಿತ, ಕಡಿಮೆ ವೆಚ್ಚದ ಡ್ರೋನ್ ಅಭಿವೃದ್ಧಿ; ಇದರ ವಿಶೇಷತೆ ಏನು?

'ಸದ್ಯದ ಪರಿಸ್ಥಿತಿ'ಯಲ್ಲಿ ಸಿದ್ದರಾಮಯ್ಯ CM ಆಗಿ ಮುಂದುವರಿಯುತ್ತಾರೆ; ಹಾಗಾದ್ರೆ ಡಿಕೆಶಿ ಕಥೆ ಏನು?

ಬೆದರಿಕೆಯಡಿ ಮಾತುಕತೆ ಮುಂದುವರೆಸಲು ಸಾಧ್ಯವಿಲ್ಲ: ಟ್ರಂಪ್ ಗಡುವು ತಿರಸ್ಕರಿಸಿದ ಇರಾನ್!

SCROLL FOR NEXT