ದೇಶ

ಮುಸ್ಲಿಮರಿಗೆ ನ್ಯಾಯ ಸಿಗದ ಹೊರತು ಭಾರತ ವಿಶ್ವಗುರುವಾಗಲು ಸಾಧ್ಯವಿಲ್ಲ: ನಾಯಕರುಗಳು ಆಕಾಶದಿಂದ ಉದುರುವುದಿಲ್ಲ; ಒವೈಸಿ

ದೇಶದಲ್ಲಿ ಮುಸ್ಲಿಮರ ಜನಸಂಖ್ಯೆ ಗಣನೀಯವಾಗಿದ್ದರೂ ಸೂಕ್ತ ರಾಜಕೀಯ ಪ್ರಾತಿನಿಧ್ಯ ಇಲ್ಲ. ಕೇವಲ ಬೇರೆಯವರಿಗೆ ಮತ ಹಾಕುತ್ತಾ ತನ್ನ ರಾಜಕೀಯ ಶಕ್ತಿಯನ್ನು ಕಳೆದುಕೊಂಡಿದೆ ಎಂದು ಪರೋಕ್ಷವಾಗಿ ಕಾಂಗ್ರೆಸ್‌ ಅನ್ನು ಟೀಕಿಸಿದರು.

ಗುಜರಾತ್: ಮುಸ್ಲಿಮರಿಗೆ ಈ ದೇಶದಲ್ಲಿ ಸಾಮಾಜಿಕ ನ್ಯಾಯ ಸಿಗದ ಹೊರತು ಭಾರತ ‘ವಿಶ್ವಗುರು’ ಆಗಲು ಸಾಧ್ಯವಿಲ್ಲ ಎಂದು AIMIM ಪಕ್ಷದ ಮುಖ್ಯಸ್ಥರ ಅಸಾದುದ್ದೀನ್ ಒವೈಸಿ ಹೇಳಿದರು.

ಗುಜರಾತ್‌ನ ಭುಜ್ ಜಿಲ್ಲೆಯ ಸ್ಥಳೀಯ ಸಂಸ್ಥೆಗಳ ಚುನಾವಣೆ ಪ್ರಯುಕ್ತ ತಮ್ಮ ಪಕ್ಷದ ವತಿಯಿಂದ ಹಮ್ಮಿಕೊಂಡಿದ್ದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಅವರು, ಮುಸ್ಲಿಮರೂ ಸೇರಿದಂತೆ ಅಲ್ಪಸಂಖ್ಯಾತರಿಗೆ ಈ ದೇಶದಲ್ಲಿ ಸಾಮಾಜಿಕ ನ್ಯಾಯ ಹಾಗೂ ಸಮಾನತೆ ಸಿಗದ ಹೊರತು ಭಾರತ ವಿಶ್ವಗುರು ಆಗಲು ಸಾಧ್ಯವಿಲ್ಲ ಎಂದು ಅವರು ಪ್ರತಿಪಾದಿಸಿದರು.

ನಮ್ಮ ಪಕ್ಷದ ವಿರುದ್ಧ ನಿರಂತರ ಸುಳ್ಳು ಅಪಪ್ರಚಾರಗಳನ್ನು ಬಿಜೆಪಿ, ಕಾಂಗ್ರೆಸ್, ಆರ್‌ಎಸ್‌ಎಸ್ ಮಾಡಿಕೊಂಡು ಬರುತ್ತಿವೆ. ಆದರೆ, ನಮ್ಮ ಗುರಿ ಈ ದೇಶದ ಪ್ರಜಾಪ್ರಭುತ್ವ ಮತ್ತು ಸಂವಿಧಾನ ರಕ್ಷಿಸುವುದೇ ಆಗಿದೆ ಎಂದು ಒವೈಸಿ ಹೇಳಿದರು.

ದೇಶದಲ್ಲಿ ಮುಸ್ಲಿಮರ ಜನಸಂಖ್ಯೆ ಗಣನೀಯವಾಗಿದ್ದರೂ ಸೂಕ್ತ ರಾಜಕೀಯ ಪ್ರಾತಿನಿಧ್ಯ ಇಲ್ಲ. ಕೇವಲ ಬೇರೆಯವರಿಗೆ ಮತ ಹಾಕುತ್ತಾ ತನ್ನ ರಾಜಕೀಯ ಶಕ್ತಿಯನ್ನು ಕಳೆದುಕೊಂಡಿದೆ ಎಂದು ಪರೋಕ್ಷವಾಗಿ ಕಾಂಗ್ರೆಸ್‌ ಅನ್ನು ಟೀಕಿಸಿದರು.

ಡಾ. ಬಿ. ಆರ್. ಅಂಬೇಡ್ಕರ್ ರಚಿಸಿದ ಸಂವಿಧಾನವನ್ನು ಉಲ್ಲೇಖಿಸಿದ ಓವೈಸಿ, ಅಲ್ಪಸಂಖ್ಯಾತರು ತಮ್ಮದೇ ಆದ ನಾಯಕತ್ವವನ್ನು ಬೆಳೆಸಿಕೊಳ್ಳದ ಹೊರತು ಅದರ ಮೂಲ ತತ್ವಗಳಾದ ಸ್ವಾತಂತ್ರ್ಯ, ಸಮಾನತೆ, ನ್ಯಾಯ ಮತ್ತು ಭ್ರಾತೃತ್ವವು "ಕೇವಲ ಕಾಗದದ ಮೇಲಿನ ಪದಗಳಾಗಿ" ಉಳಿಯುತ್ತದೆ ಎಂದು ಹೇಳಿದರು.

ಸಂವಿಧಾನವು ನಮ್ಮ ರಾಜಕೀಯ ನಾಯಕತ್ವವನ್ನು ನಿರ್ಮಿಸುವ ಹಕ್ಕನ್ನು ನಮಗೆ ನೀಡುತ್ತದೆ ಎಂದು ಅವರು ಹೇಳಿದರು. ಈ ದೇಶದಲ್ಲಿ ನಾವು 70 ವರ್ಷದಿಂದ ಕೇವಲ ಮತ ಚಲಾಯಿಸುತ್ತ ಬಂದಿದ್ದೇವೆ. ಇದರಿಂದ ಮುಸ್ಲಿಮರು ಹೆಚ್ಚಿರುವ ಕ್ಷೇತ್ರದಲ್ಲೂ ಸರಿಯಾದ ಶಾಲೆಗಳಿಲ್ಲ, ಆಸ್ಪತ್ರೆಗಳಿಲ್ಲ, ಸ್ವಚ್ಛತೆಯಿಲ್ಲ, ಮೂಲಭೂತ ಸೌಕರ್ಯಗಳಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ನಾಯಕರುಗಳು ಆಕಾಶದಿಂದ ಉದುರುವುದಿಲ್ಲ, ನಿಮ್ಮ ನಡುವೆಯೇ ನಾಯಕರು ಹುಟ್ಟಬೇಕು ಎಂದು ಮುಸ್ಲಿಂರಿಗೆ ಒವೈಸಿ ಕರೆ ನೀಡಿದರು.

ಕೇವಲ ಮತದಾರರು ಎಂಬುದರಿಂದ ನಾಯಕರು ಮತ್ತು ನಿರ್ಧಾರ ತೆಗೆದುಕೊಳ್ಳುವವರಾಗುವತ್ತ ಗಮನ ಹರಿಸಬೇಕೆಂದು ಅವರು ಸಮುದಾಯವನ್ನು ಒತ್ತಾಯಿಸಿದರು. ಹೈದರಾಬಾದ್‌ನಲ್ಲಿ AIMIM ನ ಕೆಲಸವನ್ನು ಓವೈಸಿ ಎತ್ತಿ ತೋರಿಸಿದರು, ಪಕ್ಷವು ಆಸ್ಪತ್ರೆಗಳು ಮತ್ತು ಕಾಲೇಜುಗಳು ಸೇರಿದಂತೆ ಹಲವಾರು ಶಿಕ್ಷಣ ಮತ್ತು ಆರೋಗ್ಯ ಸಂಸ್ಥೆಗಳನ್ನು ನಡೆಸುತ್ತದೆ, ಕೈಗೆಟುಕುವ ಸೇವೆಗಳನ್ನು ನೀಡುತ್ತದೆ. ಇದನ್ನು ಯಾರೂ ನಮಗೆ ಕಾಗದದ ಮೇಲೆ ನೀಡಲಿಲ್ಲ. ಜನರು ನಮಗೆ ಅಧಿಕಾರ ನೀಡಿದರು, ಮತ್ತು ನಾವು ಈ ಸಂಸ್ಥೆಗಳನ್ನು ನಿರ್ಮಿಸಿದ್ದೇವೆ" ಎಂದು ಅವರು ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಖಮೇನಿ ಕೈ-ಕಾಲು, ಮುಖಕ್ಕೆ ತೀವ್ರ ಗಾಯ; ಗಂಭೀರ ಸ್ಥಿತಿಯಲ್ಲಿ ಇರಾನ್ ಪರಮೋಚ್ಛ ನಾಯಕ, ಆಡಳಿತ ಸೇನೆ ಹಿಡಿತಕ್ಕೆ..?

ಭಾರತವನ್ನು ‘ನರಕಕೂಪ’ವೆಂದು ಹೀಯಾಳಿಸಿದ ಟ್ರಂಪ್: ಅಜ್ಞಾನಪೂರ್ಣ ಹೇಳಿಕೆ; ವಿದೇಶಾಂಗ ಇಲಾಖೆ ತೀವ್ರ ಕಿಡಿ

Chhattisgarh: ಮಕ್ಕಳ ಮುಂದೆಯೇ ಪತ್ನಿ ಕೊಂದು, ಊರು ತುಂಬಾ ರುಂಡ ಹಿಡಿದು ಓಡಾಡಿದ ಪತಿ! ಭಯಭೀತರಾದ ಗ್ರಾಮಸ್ಥರು

ಮುಸ್ಲಿಮರನ್ನು ನಿರ್ಲಕ್ಷಿಸಿದರೆ ಕಾಂಗ್ರೆಸ್‌ ಬೆಲೆ ತೆರಬೇಕಾದೀತು (ನೇರ ನೋಟ)

"One Leader, One Nation": ನಾಯಕತ್ವ ಕುರಿತ ಟ್ರಂಪ್ ಹೇಳಿಕೆಗೆ ತಿರುಗೇಟು ಕೊಟ್ಟ ಇರಾನ್!

SCROLL FOR NEXT