ಶಂಕಿತ ಶೂಟರ್‌ನನ್ನು ಏಜೆಂಟ್‌ಗಳು ಬಂಧಿಸಿದ್ದಾರೆ 
ದೇಶ

ಅಮೆರಿಕದ ಶ್ವೇತಭವನದಲ್ಲಿ ಆದ್ದಂತೆ ಭಾರತದಲ್ಲಿ ಜನ ಯಾವಾಗ ದಂಗೆ ಹೇಳ್ತಾರೋ ಗೊತ್ತಿಲ್ಲ? ಕಾಂಗ್ರೆಸ್ MLA

ನಾಗ್ಪುರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿಜಯ್ ವಡೆಟ್ಟಿವಾರ್, ಡೊನಾಲ್ಡ್ ಟ್ರಂಪ್ ಅಮೆರಿಕವನ್ನು ಹಾಳುಮಾಡುತ್ತಿದ್ದಾರೆ. ಅದನ್ನು ಪಶ್ಚಿಮ ಏಷ್ಯಾ ಸಂಘರ್ಷಕ್ಕೆ ಎಳೆದಿದ್ದಾರೆ ಎಂದು ಆರೋಪಿಸಿದರು.

ನಾಗ್ಪುರ: ಅಮೆರಿಕದ ಶ್ವೇತಭವನದ ಪತ್ರಕರ್ತರ ಔತಣಕೂಟದಲ್ಲಿ ನಡೆದ ಗುಂಡಿನ ದಾಳಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿರುದ್ಧ ಸಾರ್ವಜನಿಕರ ಪ್ರತಿಕ್ರಿಯೆ ಎಂದು ಮಹಾರಾಷ್ಟ್ರಕಾಂಗ್ರೆಸ್ ಶಾಸಕ ವಿಜಯ್ ವಡೆಟ್ಟಿವಾರ್ ಕರೆದಿದ್ದಾರೆ. ಭಾರತದಲ್ಲಿಯೂ ಕೇಂದ್ರ ಸರ್ಕಾರದ ವಿರುದ್ಧ ಇದೇ ರೀತಿಯ ಭಾವನೆ ಜನರಲ್ಲಿ ಮಡುಗಟ್ಟಿದೆ ಎಂದಿದ್ದಾರೆ.

ನಾಗ್ಪುರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿಜಯ್ ವಡೆಟ್ಟಿವಾರ್, ಡೊನಾಲ್ಡ್ ಟ್ರಂಪ್ ಅಮೆರಿಕವನ್ನು ಹಾಳುಮಾಡುತ್ತಿದ್ದಾರೆ. ಅದನ್ನು ಪಶ್ಚಿಮ ಏಷ್ಯಾ ಸಂಘರ್ಷಕ್ಕೆ ಎಳೆದಿದ್ದಾರೆ ಎಂದು ಆರೋಪಿಸಿದರು. ಭಾರತದ ಜನರು ಕೂಡ ಕೇಂದ್ರ ಸರ್ಕಾರದ ವಿರುದ್ಧ ತಿರುಗುತ್ತಿದ್ದಾರೆ ಆದಾಗ್ಯೂ, ಅವರು ಪ್ರತಿಭಟಿಸಲು ಬೀದಿಗಿಳಿಯುತ್ತಿಲ್ಲ ಎಂದು ಅವರು ಹೇಳಿದರು.

"ನೀವು ಬಿತ್ತಿದಂತೆ ಕೊಯ್ಯುವಿರಿ. ಒಬ್ಬರು ಮಾಡಿದಂತೆ, ಅವರು ಕೂಡ ಹಾಗೆಯೇ ಫಲ ಪಡೆಯುತ್ತಾರೆ. ಅಧಿಕಾರದಲ್ಲಿದ್ದಾಗ ಮತ್ತು ಅತ್ಯುನ್ನತ ಸ್ಥಾನದಲ್ಲಿದ್ದಾಗ, ಅವರು ಇಡೀ ಜಗತ್ತನ್ನು ನಿಯಂತ್ರಿಸಲು ಮತ್ತು ಆಕ್ರಮಿಸಿಕೊಳ್ಳಲು ಪ್ರಯತ್ನಿಸಿದ ರೀತಿಯಲ್ಲಿ, ಪ್ರತಿ ದೇಶಕ್ಕೆ ತೊಂದರೆ ಕೊಡುವ ಕೆಲಸ ಮಾಡಿದರು ಎಂದು ಆರೋಪಿಸಿದರು.

ಅಮೆರಿಕ ಪ್ರತಿಯೊಂದು ದೇಶದ ಮೇಲೆ ತನ್ನ ನಿಯಂತ್ರಣ ಸಾಧಿಸುವ ಕೆಲಸ ಮಾಡಿದ್ದಾರೆ. ಅವರ ಭಾಷೆ ಇಡೀ ಜಗತ್ತನ್ನು ಅವರ ಗುಲಾಮರನ್ನಾಗಿ ಮಾಡುವಂತಿತ್ತು. ಇಸ್ರೇಲ್ ಜೊತೆ ಸೇರಿ ದಾಳಿ ಆರಂಭಿಸುವವರೆಗೂ ಅವರಿಗೆ ಯಾವುದೇ ಸಂಬಂಧ ಇರಲಿಲ್ಲ. ಇಂದು, ಟ್ರಂಪ್ ತಮ್ಮ ಯೋಜನೆಗಳನ್ನು ಪೂರೈಸಲು ಮತ್ತು ಅವರ ಆಸೆಗಳನ್ನು ಪೂರೈಸಲು ಇಡೀ ಅಮೆರಿಕವನ್ನು ಹಾಳುಮಾಡಿದ್ದಾರೆ ಎಂದು ಕಿಡಿಕಾರಿದರು.

"ನಮ್ಮ ದೇಶದಲ್ಲಿ ನಡೆಯುತ್ತಿರುವಂತೆಯೇ ಅಲ್ಲಿಯೂ ಸಂಭವಿಸಿತು. ಟ್ರಂಪ್ ಆಡಳಿತ ವಿರೋಧಿ ಜನರು ಬೀದಿಗಿಳಿದರು. ಈಗ ಭಾರತದಲ್ಲಿರುವ ಜನರು ಹೊರಬರುತ್ತಿಲ್ಲ, ಹಾಗಾಗೀ ಎಲ್ಲವೂ ಚೆನ್ನಾಗಿದೆ ಎಂದು ಆಡಳಿತ ನಡೆಸುತ್ತಿರುವವರು ಭಾವಿಸುತ್ತಾರೆ. ಆದರೆ ಇಂದು ಇಡೀ ಭಾರತವೂ ವಿನಾಶದ ಹಾದಿಯಲ್ಲಿ ಸಾಗುತ್ತಿದೆ ಎಂಬ ಭಾವನೆ ಅದೇ ಜನರಲ್ಲಿದೆ" ಎಂದು ವಡೆಟ್ಟಿವಾರ್ ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನ್ಯಾಯ ಸಿಗುತ್ತೆ ಅನ್ನೋ ನಂಬಿಕೇನೆ ಇಲ್ಲ.. ಸತ್ಯಾಗ್ರಹ ಕೂರ್ತೀನಿ': ನ್ಯಾಯಮೂರ್ತಿಗಳ ವಿರುದ್ಧವೇ Arvind Kejriwal ರಣಕಹಳೆ!

ಲೆಕ್ಕ ಕೊಡ್ತೀವಿ.. ಕೂಡಲೇ ಮಠ ಖಾಲಿ ಮಾಡಿ: ವಚನಾನಂದ ಶ್ರೀಗಳಿಗೆ ಟ್ರಸ್ಟ್ ತಾಕೀತು

ಯುದ್ಧ ಕೊನೆಗೊಳಿಸಿ, ಹಾರ್ಮುಜ್ ಜಲಸಂಧಿ ತೆರೆಯಲು 'ಹೊಸ ಪ್ರಸ್ತಾವನೆ' ಮುಂದಿಟ್ಟ ಇರಾನ್!

ಪಾಕಿಸ್ತಾನದೊಂದಿಗೆ ಮಾತುಕತೆ ಮುಗಿಸಿ, ರಷ್ಯಾಕ್ಕೆ ತೆರಳಿದ ಅರಾಘ್ಚಿ! ಪುಟಿನ್ ಭೇಟಿಯಾಗ್ತಾರಾ? ಹೇಳಿದ್ದೇನು?

ಜನಸಂಖ್ಯೆ ಅಸಮಾನತೆಯಿಂದ 1947ರಲ್ಲಿ ದೇಶ ವಿಭಜನೆಯಾಯಿತು: RSS ನಾಯಕ

SCROLL FOR NEXT