ಉದಯನಿಧಿ ಸ್ಟಾಲಿನ್ 
ದೇಶ

ನಟಿ ತ್ರಿಶಾ ಕುರಿತು ಡಬಲ್ ಮೀನಿಂಗ್ ಹೇಳಿಕೆ; ಉದಯನಿಧಿ ಸ್ಟಾಲಿನ್ ವಿರುದ್ಧ ಮಹಿಳಾ ಆಯೋಗ, ಪೊಲೀಸರಿಗೆ TVK ದೂರು!

ಈಮಧ್ಯೆ, ತಂಜಾವೂರಿನಲ್ಲಿ ಉದಯನಿಧಿ ತಂಗಿರುವ ನಿವಾಸದ ಮುಂದೆ ತಮಿಳುನಾಡು ಪೊಲೀಸರು ಭಾರಿ ಪೊಲೀಸ್ ಪಡೆಯನ್ನು ನಿಯೋಜಿಸಿದ್ದಾರೆ.

ಚೆನ್ನೈ: ನಟಿ ತ್ರಿಶಾ ಕುರಿತು ಡಿಎಂಕೆ ನಾಯಕ ಉದಯನಿಧಿ ಸ್ಟಾಲಿನ್ ಅವರು ನೀಡಿದ್ದಾರೆನ್ನಲಾದ ಆಕ್ಷೇಪಾರ್ಹ ಹೇಳಿಕೆಗಳ ವಿರುದ್ಧ ಆಡಳಿತಾರೂಢ ಟಿವಿಕೆ (TVK) ತನ್ನ ಪ್ರತಿಭಟನೆಯನ್ನು ತೀವ್ರಗೊಳಿಸಿದ್ದು, ಮಂಗಳವಾರ ಸ್ಥಳೀಯ ಪೊಲೀಸ್ ಹಾಗೂ ರಾಷ್ಟ್ರೀಯ ಮಹಿಳಾ ಆಯೋಗಕ್ಕೆ (NCW) ದೂರು ಸಲ್ಲಿಸಿದೆ.

ತಂಜಾವೂರಿನ ಟಿವಿಕೆ (TVK) ಕೇಂದ್ರ ಜಿಲ್ಲಾ ಮಹಿಳಾ ಘಟಕದ ಸಂಘಟಕಿ ಎಸ್. ಭೈರವಿ ಅವರು ತಂಜಾವೂರು ಪೂರ್ವ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ವಿರೋಧ ಪಕ್ಷದ ನಾಯಕರನ್ನು ಬಂಧಿಸುವ ಸಾಧ್ಯತೆಯಿದೆ ಎಂಬ ಮಾತುಗಳು ಕೇಳಿಬರುತ್ತಿವೆ.

ಈಮಧ್ಯೆ, ತಂಜಾವೂರಿನಲ್ಲಿ ಉದಯನಿಧಿ ತಂಗಿರುವ ನಿವಾಸದ ಮುಂದೆ ತಮಿಳುನಾಡು ಪೊಲೀಸರು ಭಾರಿ ಪೊಲೀಸ್ ಪಡೆಯನ್ನು ನಿಯೋಜಿಸಿದ್ದಾರೆ.

ಸೋಮವಾರ ತಂಜಾವೂರಿನ ಪನಗಲ್ ಕಟ್ಟಡದ ಬಳಿ ಉದಯನಿಧಿ ಅವರ ನೇತೃತ್ವದಲ್ಲಿ ನಡೆದ ಡಿಎಂಕೆ ಪ್ರತಿಭಟನೆ ವೇಳೆ ವಿವಾದಾತ್ಮಕ ಹೇಳಿಕೆ ನೀಡಲಾಗಿದೆ. ಕಾವೇರಿ ವಿಷಯದ ಕುರಿತು ಉದಯನಿಧಿ ಭಾಷಣ ಮಾಡುತ್ತಿದ್ದಾಗ ಜನಸಮೂಹವು 'ತ್ರಿಶಾ, ತ್ರಿಶಾ' ಎಂದು ಘೋಷಣೆ ಕೂಗಿದಾಗ, ಅವರು ಅಶ್ಲೀಲ ಹಾಗೂ ದ್ವಂದ್ವಾರ್ಥದ ಹೇಳಿಕೆ ಮೂಲಕ ಪ್ರತಿಕ್ರಿಯಿಸಿದರು ಎಂದು ಪತ್ರದಲ್ಲಿ ಆರೋಪಿಸಲಾಗಿದೆ.

ದೂರುದಾರರು, ಆತ ಮತ್ತು ಡಿಎಂಕೆ ಐಟಿ ವಿಭಾಗದ ಪದಾಧಿಕಾರಿಗಳು ಮಹಿಳೆಯರನ್ನು ಉದ್ದೇಶಪೂರ್ವಕವಾಗಿ ಅವಮಾನಿಸಿದ್ದಾರೆ. ನಟಿ ಹಾಗೂ ಒಟ್ಟಾರೆಯಾಗಿ ಮಹಿಳೆಯರಿಗೆ ಮಾನಸಿಕ ವೇದನೆ ಉಂಟುಮಾಡಿದ್ದಾರೆ ಮತ್ತು ಸಾರ್ವಜನಿಕ ಅಶಾಂತಿಯನ್ನು ಸೃಷ್ಟಿಸುವ ಉದ್ದೇಶದಿಂದ ಆ ಘಟನೆಯ 2 ನಿಮಿಷ 39 ಸೆಕೆಂಡುಗಳ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಉದ್ದೇಶಪೂರ್ವಕವಾಗಿ ಹರಡಿದ್ದಾರೆ ಎಂದು ಆರೋಪಿಸಿದ್ದಾರೆ.

ಅದೇ ಸಮಯದಲ್ಲಿ, ಟಿವಿಕೆ (TVK) ಪಕ್ಷದ ರಾಷ್ಟ್ರೀಯ ವಕ್ತಾರ ಪಳ ಸೆಲ್ವಕುಮಾರ್ ಅವರು ನವದೆಹಲಿಯಲ್ಲಿರುವ ರಾಷ್ಟ್ರೀಯ ಮಹಿಳಾ ಆಯೋಗಕ್ಕೆ (NCW) ಅಧಿಕೃತ ದೂರು ಸಲ್ಲಿಸಿದರು.

ಕಾವೇರಿ ನೀರಿನ ವಿಷಯದಲ್ಲಿ ತಮಿಳುನಾಡಿನ ಹಕ್ಕುಗಳನ್ನು ಎತ್ತಿಹಿಡಿಯುವ ನಿಟ್ಟಿನಲ್ಲಿ ದೃಢವಾದ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಲು ಡಿಎಂಕೆ (DMK) ಮೂಲತಃ ತಂಜಾವೂರಿನಲ್ಲಿ ಪ್ರತಿಭಟನೆಯನ್ನು ನಡೆಸಿತ್ತು.

ಸ್ಪಷ್ಟೀಕರಣ ಕೋರಿ ನೋಟಿಸ್ ಜಾರಿಗೊಳಿಸುವಂತೆಯೂ ಹಾಗೂ ಉದಯನಿಧಿ ಅವರಿಂದ ಬೇಷರತ್ ಸಾರ್ವಜನಿಕ ಕ್ಷಮೆಯಾಚನೆಯನ್ನು ಪಡೆಯುವಂತೆಯೂ ಆಡಳಿತ ಪಕ್ಷವು ಆಯೋಗವನ್ನು ಒತ್ತಾಯಿಸಿದೆ.

ವಿವಾದಾತ್ಮಕ ಹೇಳಿಕೆಗಳ ಬೆನ್ನಲ್ಲೇ, ಎನ್. ಆನಂದ್ ಮತ್ತು ಅಧವ್ ಅರ್ಜುನ ಸೇರಿದಂತೆ ಟಿವಿಕೆ (TVK) ಸಚಿವರು ಹಾಗೂ ಶಾಸಕರು ಡಿಎಂಕೆ ವಿರುದ್ಧ 'ಎಕ್ಸ್' ವೇದಿಕೆಯಲ್ಲಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಡಿಎಂಕೆ ನಡವಳಿಕೆ 'ಅತ್ಯಂತ ಅಸಹ್ಯಕರ' ಎಂದು ಬಣ್ಣಿಸಿದ್ದಲ್ಲದೆ, ಇಂತಹ ಕೃತ್ಯಗಳು 'ಅರಿವಾಲಯಂ ಗುಂಪಿನ ಮನಸ್ಥಿತಿ, ರಾಜಕೀಯ ಸಂಸ್ಕೃತಿ ಮತ್ತು ಕುಸಿಯುತ್ತಿರುವ ಮೌಲ್ಯಗಳನ್ನು' ತೋರಿಸುತ್ತದೆ ಎಂದು ಟೀಕಿಸಿದರು.

ಈ ವಿಷಯಕ್ಕೆ ಸಂಬಂಧಿಸಿದಂತೆ ಬಿಜೆಪಿ ಕೂಡ ಡಿಎಂಕೆ ನಾಯಕರನ್ನು ತೀವ್ರವಾಗಿ ಟೀಕಿಸಿದೆ.

ತಮಿಳುನಾಡು ಬಿಜೆಪಿ ಮುಖ್ಯ ವಕ್ತಾರ ನಾರಾಯಣನ್ ತಿರುಪತಿ ಅವರು ಉದಯನಿಧಿ ಅವರ ಹೇಳಿಕೆಗಳನ್ನು 'ಅಸಹ್ಯಕರ, ಅಶ್ಲೀಲ, ಒರಟು ಮತ್ತು ನಾಚಿಕೆಗೇಡಿನವು' ಎಂದು ಬಣ್ಣಿಸಿ, ಅವರನ್ನು ಬಂಧಿಸುವಂತೆ ಆಗ್ರಹಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಹೊಸ ಸುಂಕ ನೀತಿಗೆ ಅಮೆರಿಕದಲ್ಲೇ ಭಾರಿ ವಿರೋಧ: ಭಾರತ ಸೇರಿ 59 ದೇಶಗಳ ಪರ ನಿಂತ 25 ರಾಜ್ಯಗಳು; ಟ್ರಂಪ್ ಸರ್ಕಾರಕ್ಕೆ ಕಾನೂನು ಸಂಕಷ್ಟ..!

West Asia War: ಒಪ್ಪಂದಕ್ಕೆ ಬರ್ತೀರಾ? ಇತಿಹಾಸ ಸೇರ್ತೀರಾ?; ಇರಾನ್‌ಗೆ ಟ್ರಂಪ್ ಲಾಸ್ಟ್ ವಾರ್ನಿಂಗ್..!

"ನನಗೊಬ್ಬ ಪಾಕಿಸ್ತಾನಿ ಹುಡುಗನನ್ನು ಹುಡುಕಿ ಕೊಡಿ" ಸಂಘಿ ಹೇಳಿಕೆ ಬೆನ್ನಲ್ಲೇ ಕಂಗನಾ ರಣಾವತ್ ಹಳೆಯ VIDEO ವೈರಲ್!

ಹೊಸ ಮುಖಗಳ ನಿರೀಕ್ಷೆ ಹುಸಿ; ಡಿಕೆಶಿ ಸಂಪುಟದಲ್ಲಿ ಹಿರಿಯರ ಪ್ರಾಬಲ್ಯ, ಅನುಭವಿಗಳಿಗೆ ಮಣೆ ಹಾಕಿದ ಹೈಕಮಾಂಡ್..!

ಅತಿವೃಷ್ಟಿ, ಅನಾವೃಷ್ಟಿ ಬಗ್ಗೆ ವರದಿ ನೀಡಲು ನೂತನ ಸಚಿವರಿಗೆ ಸೂಚನೆ: ಸಿದ್ದುಗೆ ಯಾವುದೇ ಅಸಮಾಧಾನವಿಲ್ಲ, ತಮಿಳುನಾಡಿಗೆ ಕಾನೂನು ಮೂಲಕವೇ ಉತ್ತರ- ಸಿಎಂ ಡಿಕೆ ಶಿವಕುಮಾರ್