ಪೊಲೀಸ್ ಖೆಡ್ಡಾಗೆ ಬಿದ್ದರು 837 ಮಂದಿ! AI image
ದೇಶ

ಬ್ಯಾಂಕ್ ಖಾತೆ ಕೊಟ್ಟು ಕಮಿಷನ್ ಪಡೆಯುತ್ತಿದ್ದೀರಾ? ಎಚ್ಚರ, ಪೊಲೀಸ್ ಖೆಡ್ಡಾಗೆ ಬಿದ್ದರು 837 ಮಂದಿ!

ಸೈಬರ್ ಕ್ರೈಮ್ ವಿರುದ್ದ ಸಮರ ಸಾರಿರುವ ತಮಿಳುನಾಡು ಸೈಬರ್ ಕ್ರೈಮ್ ವಿಭಾಗದ ಪೊಲೀಸರು, ₹545.27 ಕೋಟಿ ಮೌಲ್ಯದ ಆನ್‌ಲೈನ್ ವಂಚನೆಗೆ ಸಂಬಂಧಿಸಿದಂತೆ ಕೇವಲ 48 ಗಂಟೆಗಳಲ್ಲಿ 837 ಜನರನ್ನು ಬಂಧಿಸಿದ್ದಾರೆ. ಆ ಕುರಿತ ವರದಿ ಇಲ್ಲಿದೆ:

ಚೆನ್ನೈ (ತಮಿಳುನಾಡು): ಸೈಬರ್ ಕ್ರೈಮ್ ವಿರುದ್ದ ಸಮರ ಸಾರಿರುವ ತಮಿಳುನಾಡು ಸೈಬರ್ ಕ್ರೈಮ್ ವಿಭಾಗದ ಪೊಲೀಸರು, ₹545.27 ಕೋಟಿ ಮೌಲ್ಯದ ಆನ್‌ಲೈನ್ ವಂಚನೆಗೆ ಸಂಬಂಧಿಸಿದಂತೆ ಕೇವಲ 48 ಗಂಟೆಗಳಲ್ಲಿ 837 ಜನರನ್ನು ಬಂಧಿಸಿದ್ದಾರೆ. ಆ ಕುರಿತ ವರದಿ ಇಲ್ಲಿದೆ:

837 ಜನರ ಬಂಧನ

ರಾಷ್ಟ್ರೀಯ ಸೈಬರ್ ಕ್ರೈಮ್ ವರದಿ ಪೋರ್ಟಲ್‌ನಲ್ಲಿ (NCRP) ದಾಖಲಾಗಿದ್ದ ಒಟ್ಟು 9,804 ದೂರುಗಳಿಗೆ ಸಂಬಂಧಿಸಿದಂತೆ, ತಮ್ಮ ಬ್ಯಾಂಕ್ ಖಾತೆಗಳನ್ನು ಬಾಡಿಗೆಗೆ ನೀಡುವ 'ಮ್ಯೂಲ್ ಅಕೌಂಟ್ ಹೋಲ್ಡರ್ಸ್' (Mule Account Holders) ಅರ್ಥಾತ್ ಮಧ್ಯವರ್ತಿಗಳನ್ನು ಗುರಿಯಾಗಿಸಿಕೊಂಡು, ತಮಿಳುನಾಡು ಸೈಬರ್ ಕ್ರೈಮ್ ವಿಭಾಗದ ಪೊಲೀಸರು, ವಿಶೇಷ ಸೈಬರ್ ಕಾರ್ಯಾಚರಣೆ ನಡೆಸಿ, ಈಗಾಗಲೇ ದಾಖಲಾಗಿದ್ದ 601 ಎಫ್‌ಐಆರ್‌ಗಳ (FIR) ಆಧಾರದ ಮೇಲೆ ಈ 837 ಜನರನ್ನು ಸೈಬರ್ ಪೊಲೀಸರು ಬಂಧಿಸಿದ್ದಾರೆ.

ಮುಂದುವರೆದು, ಈ 48 ಗಂಟೆಗಳ ತಪಾಸಣೆಯ ಸಮಯದಲ್ಲಿ ಪೊಲೀಸರು ಆರೋಪಿಗಳಿಂದ ಭಾರಿ ಪ್ರಮಾಣದ ಡಿಜಿಟಲ್ ಸಾಕ್ಷ್ಯಗಳನ್ನು ವಶಪಡಿಸಿಕೊಂಡಿದ್ದಾರೆ. ಅದರಂತೆ, 204 ಮೊಬೈಲ್ ಫೋನ್‌ಗಳು ಮತ್ತು 185 ಸಿಮ್ ಕಾರ್ಡ್‌ಗಳು, 4 ಲ್ಯಾಪ್‌ಟಾಪ್‌ಗಳು ಮತ್ತು ಇತರ ಸ್ಟೋರೇಜ್ ಡಿವೈಸ್‌ಗಳು, 114 ಬ್ಯಾಂಕ್ ಪಾಸ್‌ಬುಕ್‌ಗಳು ಮತ್ತು 29 ಚೆಕ್ ಬುಕ್‌ಗಳು ಹಾಗೂ 73 ಎಟಿಎಂ/ಡೆಬಿಟ್ ಕಾರ್ಡ್‌ಗಳು ಮತ್ತು ₹1.02 ಲಕ್ಷ ನಗದು ಹಣವನ್ನ ವಶಕ್ಕೆ ಪಡೆದಿದ್ದಾರೆ.

ಏತನ್ಮಧ್ಯೆ, ತಮಿಳುನಾಡಿನಲ್ಲಿ ಇಂತಹ ಮಧ್ಯವರ್ತಿಗಳಿಗೆ ವಂಚನೆ ಇಲಾಖೆಯ ಹಣದಲ್ಲಿ ಶೇಕಡಾ 10 ರಷ್ಟು ಕಮಿಷನ್ ನೀಡಲಾಗುತ್ತಿತ್ತು ಎಂಬುದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ.

ಏನಿದು ಮ್ಯೂಲ್ ಅಕೌಂಟ್?

ಮ್ಯೂಲ್ ಅಕೌಂಟ್ (Mule Account) ಎಂದರೆ ಸೈಬರ್ ಅಪರಾಧಿಗಳು ಆನ್‌ಲೈನ್ ವಂಚನೆ, ಲಾಟರಿ ಹಗರಣ ಅಥವಾ ಹ್ಯಾಕಿಂಗ್ ಮೂಲಕ ಗಳಿಸಿದ ಅಕ್ರಮ ಹಣವನ್ನು ಸರ್ಕಾರದ ಕಣ್ಣಿಗೆ ಬೀಳದಂತೆ ವರ್ಗಾಯಿಸಲು ಬಳಸುವ ಮೂರನೇ ವ್ಯಕ್ತಿಯ ಸಾಮಾನ್ಯ ಬ್ಯಾಂಕ್ ಖಾತೆಯಾಗಿದೆ. ಅಂದರೆ, ಸೈಬರ್ ಕಳ್ಳರು ವಂಚಿಸಿದ ಹಣವನ್ನು ನೇರವಾಗಿ ತಮ್ಮ ಸ್ವಂತ ಬ್ಯಾಂಕ್ ಖಾತೆಗೆ ಹಾಕಿಸಿಕೊಳ್ಳುವುದಿಲ್ಲ. ಹಾಗೆ ಮಾಡಿದರೆ ಪೊಲೀಸರು ಅವರನ್ನು ಸುಲಭವಾಗಿ ಪತ್ತೆ ಹಚ್ಚುತ್ತಾರೆ. ಇದಕ್ಕಾಗಿಯೇ ಅವರು ಬೇರೆಯವರ ಬ್ಯಾಂಕ್ ಖಾತೆಗಳನ್ನು ದಾಳವಾಗಿ ಬಳಸಿಕೊಳ್ಳುತ್ತಾರೆ. ಹೀಗೆ ಬಳಸಿಕೊಳ್ಳುವ ಅಕೌಂಟ್ ಗಳೇ ಮ್ಯೂಲ್ ಅಕೌಂಟ್.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರೇಣುಕಾಸ್ವಾಮಿ ಕೊಲೆ ಪ್ರಕರಣ: ನಟ ದರ್ಶನ್‌, ಪವಿತ್ರಾ ಗೌಡಗೆ ಬಿಗ್ ಶಾಕ್: ಪ್ರದೋಷ್‌ ಮಾಫಿ ಸಾಕ್ಷಿಗೆ ಕೋರ್ಟ್‌ ಅಸ್ತು

ಪ್ರತಿಪಕ್ಷಗಳು ಸಂಪುಟದಿಂದ ವಜಾಕ್ಕೆ ಆಗ್ರಹಿಸುತ್ತಿರುವ ಮಧ್ಯೆ ಸಚಿವ ಬಿ. ನಾಗೇಂದ್ರಗೆ ಹೈಕೋರ್ಟ್ ಬಿಗ್ ರಿಲೀಫ್!

ಸಂಪುಟ ವಿಸ್ತರಣೆ ಮುನಿಸು ಕೊನೆಗೂ ಶಮನ: ರಾಜೀನಾಮೆ ವಾಪಸ್ ಪಡೆದ ಕಾಂಗ್ರೆಸ್ ಶಾಸಕ ಯಶವಂತರಾಯಗೌಡ ಪಾಟೀಲ್

ರಾಜ್‌ಗಢದಲ್ಲಿ ಭಾರೀ ಮಳೆ: 11 ಪ್ರಯಾಣಿಕರ ಸಮೇತ ಚರಂಡಿಯಲ್ಲಿ ಕೊಚ್ಚಿ ಹೋದ ವ್ಯಾನ್; 9 ಮಂದಿ ಸಾವು!

ದೇಶದ ಅತ್ಯಂತ ದುಬಾರಿ ಪೆಂಟ್‌ಹೌಸ್! ಈ ಐಷಾರಾಮಿ ಮನೆ 271 ಕೋಟಿಗೆ ಮಾರಾಟ!