ರಿದ್ಧಿ ದಿವ್ಯೇಶ್ ಥಕ್ಕರ್ 
ದೇಶ

ಬೈಕ್‌ಗಳಿಗೆ ಟ್ರಕ್ ಡಿಕ್ಕಿ: 24 ವರ್ಷದ ಮುಂಬೈ ಮಹಿಳಾ ಬೈಕರ್ ದುರಂತ ಸಾವು; Riddhi Thakkar ಕೊನೆಯ ಪೋಸ್ಟ್ ವೈರಲ್!

ಭೀಕರ ರಸ್ತೆ ಅಪಘಾತದಲ್ಲಿ ಮುಂಬೈನ 24 ವರ್ಷದ ಬೈಕರ್ ರಿದ್ಧಿ ದಿವ್ಯೇಶ್ ಥಕ್ಕರ್ ಸಾವನ್ನಪ್ಪಿದ್ದಾರೆ. ಮಹಾರಾಷ್ಟ್ರದಿಂದ ಛತ್ತೀಸ್‌ಗಢದ ಬಸ್ತಾರ್‌ಗೆ ಪ್ರಯಾಣಿಸುತ್ತಿದ್ದಾಗ ಟ್ರಕ್ ವೊಂದು ಡಿಕ್ಕಿ ಹೊಡೆದಿದೆ.

ಬಲೋಡ್: ಭೀಕರ ರಸ್ತೆ ಅಪಘಾತದಲ್ಲಿ ಮುಂಬೈನ 24 ವರ್ಷದ ಬೈಕರ್ ರಿದ್ಧಿ ದಿವ್ಯೇಶ್ ಥಕ್ಕರ್ ಸಾವನ್ನಪ್ಪಿದ್ದಾರೆ. ಮಹಾರಾಷ್ಟ್ರದಿಂದ ಛತ್ತೀಸ್‌ಗಢದ ಬಸ್ತಾರ್‌ಗೆ ಪ್ರಯಾಣಿಸುತ್ತಿದ್ದಾಗ ಟ್ರಕ್ ವೊಂದು ಡಿಕ್ಕಿ ಹೊಡೆದಿದೆ. ಧಮತರಿ ಮತ್ತು ಬಲೋಡ್ ಜಿಲ್ಲೆಗಳ ಗಡಿಯಲ್ಲಿರುವ ಜಗತಾರಾ ಕಣಿವೆ ಪ್ರದೇಶದಲ್ಲಿ ಅಪಘಾತ ಸಂಭವಿಸಿದೆ. ರಿದ್ಧಿ ಅವರ ಬೈಕ್ ಗೆ ಅಪರಿಚಿತ ವಾಹನ ಡಿಕ್ಕಿ ಹೊಡೆದಿದೆ ಎಂದು ವರದಿಯಾಗಿದೆ.

ದೇಶದ ವಿವಿಧ ಭಾಗಗಳಿಂದ 23 ಮಹಿಳಾ ಬೈಕರ್‌ಗಳು ಸವಾರಿ ಕೈಗೊಂಡಿದ್ದರು. ಈ ಗುಂಪು ರಾಯ್‌ಪುರದಿಂದ ಬಸ್ತಾರ್‌ಗೆ 20 ಬೈಕ್ ಮತ್ತು ಕಾರಿನಲ್ಲಿ ಪ್ರಯಾಣಿಸುತ್ತಿತ್ತು. ಪ್ರವಾಸಕ್ಕೆ ಕೇವಲ 15 ಗಂಟೆಗಳ ಮೊದಲು, ರಿದ್ಧಿ Instagram ನಲ್ಲಿ ಪೋಸ್ಟ್ ಹಂಚಿಕೊಂಡಿದ್ದರು. ಬುಧವಾರ ಬೆಳಿಗ್ಗೆ ಬಲೋಡ್ ಜಿಲ್ಲೆಯಲ್ಲಿ ಟ್ರಕ್ ವೊಂದು ಹಲವು ಬೈಕ್ ಗಳಿಗೆ ಡಿಕ್ಕಿ ಹೊಡೆದಿದ್ದು ಇದರಲ್ಲಿ ಮಹಾರಾಷ್ಟ್ರದ 24 ವರ್ಷದ ಮಹಿಳಾ ಮೋಟಾರ್ ಸೈಕಲ್ ಸವಾರ ಸಾವನ್ನಪ್ಪಿದ್ದಾರೆ.

Riddhi Thakkar ಛತ್ತೀಸ್‌ಗಢದ ಬಸ್ತಾರ್ ಪ್ರದೇಶದಲ್ಲಿ ಪ್ರವಾಸಕ್ಕೆಂದು ತೆರಳುತ್ತಿದ್ದ ಮೋಟಾರ್ ಸೈಕಲ್ ಸವಾರರ ಗುಂಪಿನ ಭಾಗವಾಗಿದ್ದರು. ರಾಷ್ಟ್ರೀಯ ಹೆದ್ದಾರಿ 30ರ ಪುರೂರ್ ಪೊಲೀಸ್ ಠಾಣೆ ಪ್ರದೇಶದ ಮಾರ್ಕಟೋಲಾ ಘಾಟ್‌ನಲ್ಲಿ ಬೆಳಿಗ್ಗೆ 6 ಗಂಟೆ ಸುಮಾರಿಗೆ ಅಪಘಾತ ಸಂಭವಿಸಿದೆ. ಇನ್ನು ಅಪಘಾತದಲ್ಲಿ ಕೆಲವರು ಗಂಭೀರವಾಗಿ ಗಾಯಗೊಂಡಿದ್ದು, ಅವರ ಕಾಲುಗಳಿಗೆ ತೀವ್ರ ಗಾಯಗಳಾಗಿವೆ. ಅಪಘಾತದ ಬಳಿಕ ಚಾಲಕ ಟ್ರಕ್ ಬಿಟ್ಟು ಪರಾರಿಯಾಗಿದ್ದಾನೆ. ಘಟನೆ ನಡೆದ ಸ್ಥಳವು ರಾಜ್ಯ ರಾಜಧಾನಿ ರಾಯ್‌ಪುರದಿಂದ ಸುಮಾರು 90 ಕಿಲೋಮೀಟರ್ ದೂರದಲ್ಲಿದೆ. ವಾಹನ ಮತ್ತು ಅದರ ಚಾಲಕನನ್ನು ಪತ್ತೆಹಚ್ಚಲು ಪೊಲೀಸರು ಪ್ರಯತ್ನಿಸುತ್ತಿದ್ದಾರೆ.

ರಿದ್ಧಿ ಜೊತೆ ಪ್ರಯಾಣಿಸುತ್ತಿದ್ದ ಇತರ ಮೋಟಾರ್‌ಸೈಕಲ್ ಸವಾರರು ಪೊಲೀಸ್ ಸಹಾಯವಾಣಿ ಡಯಲ್ -112 ಗೆ ಕರೆ ಮಾಡಿ ಮಾಹಿತಿ ನೀಡಿದ್ದರು ಎಂದು ಅಧಿಕಾರಿ ತಿಳಿಸಿದ್ದಾರೆ. ನಂತರ ಅವರನ್ನು ತುರ್ತು ವಾಹನದ ಮೂಲಕ ನೆರೆಯ ಕಾಂಕೇರ್ ಜಿಲ್ಲೆಯ ಚರಮಾ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯಲಾಯಿತು. ಆಕೆಯ ಸ್ಥಿತಿ ಗಂಭೀರವಾಗಿರುವುದರಿಂದ, ನಂತರ ಅವರನ್ನು ಧಮ್ತಾರಿ ಜಿಲ್ಲೆಯ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು, ಅಲ್ಲಿ ಅವರು ಚಿಕಿತ್ಸೆಯ ಸಮಯದಲ್ಲಿ ಸಾವನ್ನಪ್ಪಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಕಾವೇರಿ ಕಿಚ್ಚು: ನಾಳೆ ಕರ್ನಾಟಕ ಬಂದ್! ಏನಿರುತ್ತೆ? ಏನಿರಲ್ಲ? ಇಲ್ಲಿದೆ ಸಂಪೂರ್ಣ ವಿವರ

ಚರ್ಚೆಗೆ ಶಾ ಸಿದ್ಧ ಅಂತ ಹೇಳಿದ್ದೇ ತಡ ವಿಪಕ್ಷಗಳು ಹೆದರಿ ಓಡಿ ಹೋಗುತ್ತಿವೆ; ಇಂತಹ ಹೇಡಿತನ ನಾನೆಂದೂ ಕಂಡಿಲ್ಲ: ಕಿರಣ್ ರಿಜಿಜು

ಸ್ವಚ್ಛ ಭಾರತಕ್ಕೆ ತಿಲಾಂಜಲಿ: ತ್ಯಾಜ್ಯ ಬಟ್ಟೆ; ಮೂತ್ರದ ಬಾಟಲ್ ಗಳು; 7,000 ಟನ್ ಕಸ, ಕನ್ವರ್ ಯಾತ್ರೆ ಬಳಿಕ ಹರಿದ್ವಾರ 'ಕಸ'ಮಯ!

ಅನುಭವ ಇಲ್ಲದ ಮಂಗನಿಗೆ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನ: ಯತೀಂದ್ರ ಬಗ್ಗೆ ವಿಶ್ವನಾಥ್ ಲೇವಡಿ

ರಾಜ್ಯವನ್ನೇ ಬೆಚ್ಚಿ ಬೀಳಿಸಿದ್ದ ಬೀದರ್ ATM ದರೋಡೆ, ಕೊಲೆ: ಕೊನೆಗೂ ಬಿಹಾರದಲ್ಲಿ ಸಿನಿಮೀಯ ರೀತಿಯಲ್ಲಿ ಆರೋಪಿಗಳ ಬಂಧನ!