ರಕ್ಷಣಾ ಸಚಿವಾಲಯದ ಗರ್ಭಿಣಿ ಅಧಿಕಾರಿ ನಾಜಿಯಾ ಖಾನಮ್  
ದೇಶ

ದೆಹಲಿ: ರಕ್ಷಣಾ ಸಚಿವಾಲಯದ ಗರ್ಭಿಣಿ ಅಧಿಕಾರಿ ಆತ್ಮಹತ್ಯೆ; ಪತಿ, ಮಾವ, ಅತ್ತೆಯಿಂದ ಕಿರುಕುಳದ ಆರೋಪ!

ಮೃತ ಮಹಿಳೆಯನ್ನು ನಾಜಿಯಾ ಖಾನಮ್ ಎಂದು ಗುರುತಿಸಲಾಗಿದೆ. ಅವರು ರಕ್ಷಣಾ ಸಚಿವಾಲಯದಲ್ಲಿ ಸಹಾಯಕ ವಿಭಾಗದ ಅಧಿಕಾರಿಯಾಗಿ (Assistant Section Officer) ಕಾರ್ಯನಿರ್ವಹಿಸುತ್ತಿದ್ದರು ಎನ್ನಲಾಗಿದೆ.

ನವದೆಹಲಿ: ರಕ್ಷಣಾ ಸಚಿವಾಲಯದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಮೂರು ತಿಂಗಳ ಗರ್ಭಿಣಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ತಮ್ಮ ಮಗಳಿಗೆ ಪತಿ ಹಾಗೂ ಅತ್ತೆ, ಮಾವ ಪದೇ ಪದೇ ಮಾನಸಿಕ ಮತ್ತು ದೈಹಿಕ ಕಿರುಕುಳ ನೀಡುತ್ತಿದ್ದರು ಎಂದು ಆಕೆಯ ಕುಟುಂಬಸ್ಥರು ಆರೋಪಿಸಿದ್ದಾರೆ.

ಮೃತ ಮಹಿಳೆಯನ್ನು ನಾಜಿಯಾ ಖಾನಮ್ ಎಂದು ಗುರುತಿಸಲಾಗಿದೆ. ಅವರು ರಕ್ಷಣಾ ಸಚಿವಾಲಯದಲ್ಲಿ ಸಹಾಯಕ ವಿಭಾಗದ ಅಧಿಕಾರಿಯಾಗಿ (Assistant Section Officer) ಕಾರ್ಯನಿರ್ವಹಿಸುತ್ತಿದ್ದರು ಎನ್ನಲಾಗಿದೆ.

ಪೊಲೀಸ್ ದೂರಿನ (ಎಫ್‌ಐಆರ್) ಪ್ರಕಾರ, 30 ವರ್ಷದ ಈ ಮಹಿಳೆ ತನ್ನ ಪತಿ ಮನೆಯಲ್ಲಿ ಕಿರುಕುಳವನ್ನು ಎದುರಿಸುತ್ತಿದ್ದರು. ತಮ್ಮ ಮೇಲಾಗುತ್ತಿದ್ದ ಮಾನಸಿಕ ಮತ್ತು ದೈಹಿಕ ದೌರ್ಜನ್ಯದ ಬಗ್ಗೆ ಅವರು ದೂರವಾಣಿ ಕರೆಗಳ ಮೂಲಕ ತಮ್ಮ ಪೋಷಕರಿಗೆ ಮಾಹಿತಿ ನೀಡುತ್ತಿದ್ದರು ಎಂದು ವರದಿಯಾಗಿದೆ.

ಇದು ಕೊಲೆಯಾಗಿದ್ದು, ಘಟನೆಯನ್ನು ಆತ್ಮಹತ್ಯೆಯಂತೆ ಬಿಂಬಿಸಲಾಗಿದೆ ಎಂದೂ ಮಹಿಳೆಯ ಕುಟುಂಬಸ್ಥರು ಆರೋಪಿಸಿದ್ದಾರೆ. ಎಫ್‌ಐಆರ್ ಪ್ರಕಾರ, ನಾಜಿಯಾ ಅವರು ಅಜ್ಮ್ ಅಲಿ ಖಾನ್ ಅವರನ್ನು ಏಪ್ರಿಲ್ 11, 2026 ರಂದು ವಿವಾಹವಾಗಿದ್ದರು. ಅವರ ತಂದೆ ತವಾಬ್ ಖಾನ್ ನೀಡಿದ ಹೇಳಿಕೆಯ ಆಧಾರದ ಮೇಲೆ ದಾಖಲಾದ ಎಫ್‌ಐಆರ್‌ನಲ್ಲಿ, ಮದುವೆಯ ನಂತರ ಪತಿ ಅಜ್ಮ್ ಅಲಿ ಖಾನ್, ಅತ್ತೆ ಸಮೀಮ್ ನಿಶಾ, ಮಾವ ಬಾಬರ್ ಅಲಿ ಖಾನ್ ಮತ್ತು ಅತ್ತೆಮನೆಯ ಇತರ ಸದಸ್ಯರಿಂದ ಆಕೆ ಕಿರುಕುಳವನ್ನು ಎದುರಿಸುತ್ತಿದ್ದರು ಎಂದು ಆರೋಪಿಸಲಾಗಿದೆ.

ನಾಜಿಯಾ ಅವರಿಗೆ ಬಾಯಿಮಾತಿನ ನಿಂದನೆ ಮತ್ತು ದೈಹಿಕ ಹಲ್ಲೆ ನಡೆಸಲಾಗುತ್ತಿತ್ತು ಹಾಗೂ ಅವರನ್ನು ಮನೆಯಿಂದ ಹೊರಹಾಕುವುದಾಗಿ ಮತ್ತು ಕೊಲೆ ಮಾಡುವುದಾಗಿ ಬೆದರಿಕೆ ಹಾಕಲಾಗುತ್ತಿತ್ತು ಎಂದು ಕುಟುಂಬಸ್ಥರು ದೂರಿದ್ದಾರೆ.

ನಾಜಿಯಾ ಮೂರು ತಿಂಗಳ ಗರ್ಭಿಣಿಯಾಗಿದ್ದಳು ಮತ್ತು ತನ್ನ ಗಂಡನ ಮನೆಯಲ್ಲಿ ಎದುರಿಸುತ್ತಿದ್ದ ಸಮಸ್ಯೆಗಳ ಬಗ್ಗೆ ಆಗಾಗ್ಗೆ ಪೋಷಕರಿಗೆ ದೂರವಾಣಿ ಮೂಲಕ ತಿಳಿಸುತ್ತಿದ್ದಳು ಎಂದು ಆಕೆಯ ತಂದೆ ಹೇಳಿದ್ದಾರೆ. ಆಕೆ ದೂರು ನೀಡಿದರೂ ಪತಿಯ ವರ್ತನೆಯಲ್ಲಿ ಯಾವುದೇ ಸುಧಾರಣೆ ಕಂಡುಬಂದಿರಲಿಲ್ಲ ಎಂದು ಅವರು ಆರೋಪಿಸಿದ್ದಾರೆ.

ಎಫ್‌ಐಆರ್ (FIR) ಪ್ರಕಾರ, ಆಗಸ್ಟ್ 21 ರಂದು ಮುಂಜಾನೆ 4 ಗಂಟೆ ಸುಮಾರಿಗೆ ನಾಜಿಯಾಳ ಕುಟುಂಬಕ್ಕೆ ಕರೆ ಬಂದಿದ್ದು, ಅದರಲ್ಲಿ ಆಕೆ ಮೃತಪಟ್ಟಿರುವ ವಿಷಯವನ್ನು ತಿಳಿಸಲಾಗಿತ್ತು. ನಂತರ ಕುಟುಂಬದವರು ಸ್ಥಳಕ್ಕೆ ಧಾವಿಸಿ, ಆಕೆಯ ಸಾವಿನ ಸಂದರ್ಭಗಳ ಬಗ್ಗೆ ಅನುಮಾನ ವ್ಯಕ್ತಪಡಿಸಿದರು. ಅತ್ತೆ-ಮಾವಂದಿರೇ ಆಕೆಯನ್ನು ಕೊಲೆ ಮಾಡಿ, ಅದನ್ನು ಆತ್ಮಹತ್ಯೆಯಂತೆ ಬಿಂಬಿಸಿರಬಹುದು ಎಂದು ಅವರು ಆರೋಪಿಸಿದ್ದಾರೆ.

ದೀರ್ಘಕಾಲದ ಮಾನಸಿಕ ಮತ್ತು ದೈಹಿಕ ಕಿರುಕುಳವೇ ನಾಜಿಯಾಳನ್ನು ಆತ್ಮಹತ್ಯೆ ಮಾಡಿಕೊಳ್ಳುವಂತೆ ಪ್ರೇರೇಪಿಸಿರಬಹುದು ಎಂದೂ ಕುಟುಂಬದವರು ಹೇಳಿದ್ದಾರೆ.

ಈ ಘಟನೆಗೆ ಕಾರಣರಾದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಹಾಗೂ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸುವಂತೆ ಕುಟುಂಬದವರು ಒತ್ತಾಯಿಸಿದ್ದಾರೆ. ಅಲ್ಲದೆ, ಘಟನಾ ಸ್ಥಳಕ್ಕೆ ಸಂಬಂಧಿಸಿದ ಸಾಕ್ಷ್ಯಗಳು ಮತ್ತು ಪ್ರಕ್ರಿಯೆಗಳ ವಿಡಿಯೋಗ್ರಫಿ ಮಾಡಬೇಕೆಂದೂ ಅವರು ಕೋರಿದ್ದಾರೆ. ಈ ಪ್ರಕರಣದಲ್ಲಿ ಎಫ್‌ಐಆರ್ ದಾಖಲಿಸಲಾಗಿದ್ದು, ನಾಜಿಯಾಳ ಸಾವಿಗೆ ಸಂಬಂಧಿಸಿದ ಸಂದರ್ಭಗಳ ಕುರಿತು ತನಿಖೆ ನಡೆಯುತ್ತಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Bengaluru Tunnel Road: ಸ್ವತಃ ಅಖಾಡಕ್ಕಿಳಿದ ಗೌತಮ್ ಅದಾನಿ; CM ಡಿಕೆಶಿ ನಿವಾಸಕ್ಕೆ ದಿಢೀರ್ ಭೇಟಿ – ಸುರಂಗ ರಸ್ತೆ ಕುರಿತು ಮಹತ್ವದ ಚರ್ಚೆ

ನಾಲ್ಕು ಗೋಡೆಗಳ ನಡುವೆ ನಡೆದ ಜಗಳ SC/ST ಕಾಯ್ದೆಯಡಿ ಅಪರಾಧವಲ್ಲ: ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು

ಯಾದಗಿರಿ: ವಿದ್ಯುತ್ ಕಂಬಕ್ಕೆ ಬೊಲೆರೊ ವಾಹನ ಡಿಕ್ಕಿ: ಭೀಕರ ಅಪಘಾತದಲ್ಲಿ ಮೂವರು ಸಾವು; 8 ಕಾರ್ಮಿಕರ ಸ್ಥಿತಿ ಗಂಭೀರ

ಆರ್ಥಿಕ ದಿಗ್ಬಂಧನಕ್ಕೆ ಕೆಂಡಾಮಂಡಲ: ಅಮೆರಿಕಕ್ಕೆ ಸಾಥ್ ನೀಡುವ ದೇಶಗಳೂ ನಮಗೆ ಶತ್ರುಗಳೇ; ಇರಾನ್ ಕಠಿಣ ಎಚ್ಚರಿಕೆ

Raksha Bandhan Ad: ಬ್ರಾ ಧರಿಸಿ ಸಹೋದರ, ಸಾಕಿದ ನಾಯಿಗೂ 'ರಾಖಿ' ಕಟ್ಟಿದ ನಟಿ ಕೃತಿ ಸನೋನ್, ನೆಟ್ಟಿಗರ ತರಾಟೆ! Video