ದೇಶ

ಕಾನ್ಪುರದಲ್ಲಿ ಕಸದ ರಾಶಿಯಲ್ಲಿ ಅವಧಿ ಮೀರಿದ ಚಾಕೊಲೇಟ್‌ಗಳಿಗೆ ಮುಗಿಬಿದ್ದ ಜನ-Viral Video

ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ. ಜನರು ಕಸದ ರಾಶಿಯಲ್ಲಿ ಹುಡುಕಿ ಪ್ಯಾಕ್ ಮಾಡಲಾದ ಚಾಕಲೇಟ್ ಗಳನ್ನು ಸಂಗ್ರಹಿಸುತ್ತಿರುವುದು ಇದರಲ್ಲಿ ಕಾಣಿಸುತ್ತದೆ.

ಕಾನ್ಪುರದ ಪಂಕಿ ಪ್ರದೇಶದಲ್ಲಿ ಜನರ ವರ್ತನೆ ಆತಂಕ ಮತ್ತು ಕಳವಳ ಹುಟ್ಟಿಸಿದ್ದು ಇದಕ್ಕೆ ಸಂಬಂಧಪಟ್ಟ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವ್ಯಾಪಕವಾಗಿ ವೈರಲ್ ಆಗಿದೆ. ಅವಧಿ ಮುಗಿದ (Expired) ಕಾರಣಕ್ಕೆ ತ್ಯಾಜ್ಯದ ಗುಡ್ಡಕ್ಕೆ ಎಸೆಯಲಾಗಿದ್ದ ಟಾಫಿ ಹಾಗೂ ಚಾಕೊಲೇಟ್‌ಗಳನ್ನು ಜನರು ಹೆಕ್ಕಿ ತೆಗೆದುಕೊಂಡು ಹೋಗುತ್ತಿದ್ದಾರೆ.

ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ. ಜನರು ಕಸದ ರಾಶಿಯಲ್ಲಿ ಹುಡುಕಿ ಪ್ಯಾಕ್ ಮಾಡಲಾದ ಚಾಕಲೇಟ್ ಗಳನ್ನು ಸಂಗ್ರಹಿಸುತ್ತಿರುವುದು ಇದರಲ್ಲಿ ಕಾಣಿಸುತ್ತದೆ.

ಈ ಸಿಹಿತಿಂಡಿಗಳನ್ನು ಎಸೆದುಹೋದ ಸಂದರ್ಭ ಹಾಗೂ ವಿಡಿಯೋದಲ್ಲಿರುವ ಜನರ ಗುರುತನ್ನು ಅಧಿಕೃತ ವರದಿಗಳಿಂದ ಸ್ವತಂತ್ರವಾಗಿ ದೃಢೀಕರಿಸಲು ಸಾಧ್ಯವಾಗಿಲ್ಲವಾದರೂ, ಕಸದ ರಾಶಿಯಿಂದ ಸಂಗ್ರಹಿಸಿದ ಆಹಾರವನ್ನು ಸೇವಿಸುವುದರಿಂದ ಉಂಟಾಗುವ ಅಪಾಯಗಳ ಬಗ್ಗೆ ಈ ದೃಶ್ಯಗಳು ಗಂಭೀರ ಪ್ರಶ್ನೆಗಳನ್ನು ಎತ್ತಿವೆ.

ಕಾನ್ಪುರ ಪ್ರದೇಶದಲ್ಲಿ ಆಹಾರ ಭದ್ರತಾ ಇಲಾಖೆಯು ಕಟ್ಟುನಿಟ್ಟಿನ ಕಾರ್ಯಾಚರಣೆ ನಡೆಸುತ್ತಿರುವ ಬೆನ್ನಲ್ಲೇ ಈ ಘಟನೆ ಸಂಭವಿಸಿದೆ. ಇತ್ತೀಚೆಗೆ ಹಬ್ಬದ ಋತುವಿನಲ್ಲಿ ಆಹಾರ ಭದ್ರತಾ ಅಧಿಕಾರಿಗಳು ದಾಳಿ ನಡೆಸಿ, ಕಲಬೆರಕೆ ಹಾಗೂ ಅಸುರಕ್ಷಿತ ಆಹಾರ ಪದಾರ್ಥಗಳನ್ನು ನಾಶಪಡಿಸುತ್ತಿದ್ದಾರೆ. ಇತ್ತೀಚಿನ ಒಂದು ಕಾರ್ಯಾಚರಣೆಯಲ್ಲಿ, ಅಧಿಕಾರಿಗಳು ಅತಿಯಾದ ಕೃತಕ ಬಣ್ಣ ಬೆರೆಸಿದ ಭಾರಿ ಪ್ರಮಾಣದ ಸಿಹಿತಿಂಡಿಗಳನ್ನು ನಾಶಪಡಿಸಿದ್ದರು. ಹಾಗೆಯೇ ಇತರ ತಪಾಸಣೆಗಳಲ್ಲೂ ಆರೋಗ್ಯಕ್ಕೆ ಕಂಟಕವಾಗುವಂತಹ ಆಹಾರ ಪದಾರ್ಥಗಳು ಪತ್ತೆಯಾಗಿದ್ದವು.

ಅವಧಿ ಮುಗಿದ ಆಹಾರ ಪದಾರ್ಥಗಳ ಗುಣಮಟ್ಟ ಕುಸಿಯುತ್ತದೆ, ಅವುಗಳನ್ನು ಸರಿಯಾಗಿ ಸಂಗ್ರಹಿಸದಿದ್ದರೆ ಅಥವಾ ಕಸದ ವಾತಾವರಣಕ್ಕೆ ತೆರೆದುಕೊಂಡರೆ ಗಂಭೀರ ಆರೋಗ್ಯ ಸಮಸ್ಯೆಗಳನ್ನು ತಂದೊಡ್ಡಬಹುದು. ಹೀಗಾಗಿ, ವೈರಲ್ ವಿಡಿಯೋವು ಆಹಾರ ಭದ್ರತೆಯ ಬಗ್ಗೆ ಮತ್ತೊಮ್ಮೆ ಜಾಗೃತಿ ಮತ್ತು ಎಚ್ಚರಿಕೆಯ ಅಗತ್ಯವನ್ನು ನೆನಪಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನಮ್ಮಲ್ಲೂ ಅಸ್ತ್ರಗಳಿವೆ, ದಾಳಿಗೆ ಸಂಪೂರ್ಣ ಸಿದ್ಧ: ಅಮೆರಿಕಾ ಆರ್ಥಿಕ ದಿಗ್ಬಂಧನಕ್ಕೆ ಇರಾನ್‌ ಪ್ರತಿರೋಧ, ಭಾರೀ ಪ್ರತೀಕಾರದ ಎಚ್ಚರಿಕೆ

‘Iran ನನ್ನ ಪುತ್ರನನ್ನು ಹತ್ಯೆ ಮಾಡಲು ಯತ್ನಿಸಿತ್ತು’: ಟೆಹ್ರಾನ್‌ ವಿರುದ್ಧ ನೆತನ್ಯಾಹು ಗಂಭೀರ ಆರೋಪ

ಭಾರತ-ರಷ್ಯಾ ಆರ್ಥಿಕ ಬಾಂಧವ್ಯಕ್ಕೆ ಹೊಸ ಬಲ; ಪುಟಿನ್ ಭೇಟಿಯಾದ ಜೈಶಂಕರ್, ಪರಮಾಣು ಸಹಕಾರ ಸೇರಿ ಹಲವು ಅಂಶಗಳ ಕುರಿತು ಚರ್ಚೆ!

3 ದಿನ ಮೊದಲೇ ಮುಂಗಾರು ಅಧಿವೇಶನಕ್ಕೆ ತೆರೆ: 'ವಿರೋಧ ಪಕ್ಷಕ್ಕೆ ಹೆದರಿ ಅಧಿವೇಶನ ರದ್ದು'; ರಾಜ್ಯಪಾಲರಿಗೆ BJP ದೂರು!

Video: ಕುದಿಯುತ್ತಿದ್ದ ಬೆಲ್ಲದ ಪಾಕಕ್ಕೆ ಬಿದ್ದ ಯುವಕ; ಅಣ್ಣನ ಸಾಲ ತೀರಿಸಲು ಕೆಲಸಕ್ಕೆ ಹೋಗಿದ್ದವನ ದಾರುಣ ಅಂತ್ಯ