ಕಂಟೆಂಟ್ ಕ್ರಿಯೇಟರ್ ಆಗಿರುವ ರಜತ್ ದಲಾಲ್  
ದೇಶ

ಪಾರ್ಕಿಂಗ್ ನಲ್ಲಿ ನಿಂತಿದ್ದ ಕಾರಿಗೆ 'ಬಿಗ್ ಬಾಸ್ 18' ಖ್ಯಾತಿಯ ರಜತ್ 'ಥಾರ್' ಕಾರಿನಿಂದ ಡಿಕ್ಕಿ: Video ವೈರಲ್!

ಈ ಘಟನೆಯು ಆನ್‌ಲೈನ್‌ನಲ್ಲಿ ಚರ್ಚೆಗೆ ಕಾರಣವಾಗುತ್ತಿದ್ದಂತೆಯೇ ದಲಾಲ್ ಸ್ಪಷ್ಟನೆ ನೀಡಿದ್ದು, ನನ್ನ ಕಾರಿಗೆ ಬೇರೆ ದಾರಿ ಇಲ್ಲದ ಕಾರಣ ಸುಮಾರು 45-50 ನಿಮಿಷಗಳ ಕಾಲ ಕಾಯುವ ಪರಿಸ್ಥಿತಿ ಎದುರಾಗಿತ್ತು ಎಂದು ಸಮಜಾಯಿಷಿ ನೀಡಿದ್ದಾರೆ.

ಫರಿದಾಬಾದ್‌: ಪಾರ್ಕಿಂಗ್ ನಲ್ಲಿ ನಿಂತಿದ್ದ ಮತ್ತೊಂದು ಕಾರಿಗೆ ಬಿಗ್ ಬಾಸ್ 18 ಖ್ಯಾತಿಯ ರಜತ್ ದಲಾಲ್ ಅವರ ಥಾರ್ ಕಾರು ಡಿಕ್ಕಿ ಹೊಡೆದಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಕಂಟೆಂಟ್ ಕ್ರಿಯೇಟರ್ ಆಗಿರುವ ರಜತ್ ದಲಾಲ್ ತಮ್ಮ ಮಹೀಂದ್ರಾ ಥಾರ್ ಕಾರನ್ನು ಹೊರತೆಗೆಯಲು ಪ್ರಯತ್ನಿಸುವಾಗ ಮತ್ತೊಂದು ಕಾರಿಗೆ ಡಿಕ್ಕಿ ಹೊಡೆಯುವುದು ಈ ವಿಡಿಯೋದಲ್ಲಿ ಕಂಡುಬರುತ್ತದೆ.

ಈ ಘಟನೆಯು ಆನ್‌ಲೈನ್‌ನಲ್ಲಿ ಚರ್ಚೆಗೆ ಕಾರಣವಾಗುತ್ತಿದ್ದಂತೆಯೇ ದಲಾಲ್ ಸ್ಪಷ್ಟನೆ ನೀಡಿದ್ದು, ನನ್ನ ಕಾರಿಗೆ ಬೇರೆ ದಾರಿ ಇಲ್ಲದ ಕಾರಣ ಸುಮಾರು 45-50 ನಿಮಿಷಗಳ ಕಾಲ ಕಾಯುವ ಪರಿಸ್ಥಿತಿ ಎದುರಾಗಿತ್ತು ಎಂದು ಸಮಜಾಯಿಷಿ ನೀಡಿದ್ದಾರೆ.

ಮತ್ತೊಂದು ಕಾರನ್ನು ಅಡ್ಡಲಾಗಿ ನಿಲ್ಲಿಸಿದ್ದರಿಂದ ಅವರ ಥಾರ್ ಕಾರು ಹೊರಬರಲು ಬಹಳ ಕಡಿಮೆ ಜಾಗವಿತ್ತು. ಸಾಕಷ್ಟು ಸಮಯ ಕಳೆದರೂ ಕಾರಿನ ಮಾಲೀಕರು ಬರಲಿಲ್ಲ. ಆ ಕಾರಿನ ಮೇಲೆ ಯಾವುದೇ ಮೊಬೈಲ್ ನಂಬರ್ ಇರಲಿಲ್ಲ, ಹೀಗಾಗಿ ಆ ಕಾರನ್ನು ಸ್ಥಳಾಂತರಿಸುವಂತೆ ಮಾಲೀಕರನ್ನು ನೇರವಾಗಿ ಕೇಳಲು ಸಾಧ್ಯವಾಗಲಿಲ್ಲ ಎಂದು ರಜತ್ ತಿಳಿಸಿದ್ದಾರೆ.

ವೈರಲ್ ವಿಡಿಯೋದಲ್ಲಿ, ಅವರು ದಟ್ಟಣೆಯಿರುವ ಪಾರ್ಕಿಂಗ್ ಸ್ಥಳದಿಂದ ತಮ್ಮ ಥಾರ್ ಕಾರನ್ನು ಹೊರತೆಗೆಯಲು ಪ್ರಯತ್ನಿಸಿ, ಮುಂದೆ ನಿಂತಿದ್ದ ವಾಹನಕ್ಕೆ ಡಿಕ್ಕಿ ಹೊಡೆದು ಅಲ್ಲಿಂದ ಹೊರಟುಹೋಗುವುದು ಕಂಡುಬರುತ್ತದೆ.

ತಮ್ಮ ಥಾರ್ ಕಾರಿನ ಮುಂಭಾಗದಲ್ಲಿ ನಿಲ್ಲಿಸಲಾಗಿದ್ದ ಮತ್ತೊಂದು ಕಾರಿನ ಫೋಟೋವನ್ನು ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ ಮತ್ತು ಈ ಪುನರಾವರ್ತಿತ ಸಮಸ್ಯೆಯ ಬಗ್ಗೆ ದೂರು ನೀಡಿದ್ದಾರೆ.

ಇದು ಪ್ರತಿದಿನದ ನಾಟಕವಾಗಿದೆ. ಇಷ್ಟು ದೊಡ್ಡ ಪಾರ್ಕಿಂಗ್ ಪ್ರದೇಶದಲ್ಲಿ, ಇಷ್ಟೊಂದು ಕಾರುಗಳ ನಡುವೆ ಯಾವಾಗಲೂ ನನ್ನ ಕಾರಿಗೆ ಅಡ್ಡಲಾಗಿ ನಿಲ್ಲಿಸಲಾಗುತ್ತದೆ ಎಂದು ಹೇಳಿಕೊಂಡಿದ್ದಾರೆ.

ನಂತರ ರಜತ್ ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಗಳಲ್ಲಿ ಸರಣಿ ವಿಡಿಯೋಗಳನ್ನು ಹಂಚಿಕೊಂಡಿದ್ದು, ಇದರಲ್ಲಿ ಇತರ ಸಂದರ್ಭಗಳಲ್ಲಿಯೂ ತಮ್ಮ ಕಾರಿಗೆ ಅಡ್ಡಲಾಗಿ ನಿಲ್ಲಿಸಲಾಗಿತ್ತು ಎಂಬುದನ್ನು ತೋರಿಸಿದ್ದಾರೆ. ಪಾರ್ಕಿಂಗ್ ಸಮಸ್ಯೆಯು ಇದೊಂದೇ ಬಾರಿಗೆ ನಡೆದ ಘಟನೆಯಲ್ಲ ಮತ್ತು ತಾವು ಪದೇ ಪದೇ ಇಂತಹ ಪರಿಸ್ಥಿತಿಗಳನ್ನು ಎದುರಿಸುತ್ತಿದ್ದೇನೆ ಎಂದು ಅವರು ಹೇಳಿಕೊಂಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಬಿ ನಾಗೇಂದ್ರ ರಾಜೀನಾಮೆ ಅಂಗೀಕರಿಸಿದ ರಾಜ್ಯಪಾಲ ಥಾವರಚಂದ್ ಗೆಹ್ಲೋಟ್; ಕೊನೆಗೂ ಊಹಾಪೋಹಗಳಿಗೆ ತೆರೆ!

ದಾಂಪತ್ಯ ಜೀವನಕ್ಕೆ ಕಾಲಿಟ್ಟ ಸ್ಯಾಂಡಲ್ ವುಡ್ ಹಾಸ್ಯ ನಟ: ಪಾವನಾ ಕೈಹಿಡಿದ ಚಿಕ್ಕಣ್ಣ! ಸಿನಿ ತಾರೆಯರಿಂದ ಶುಭ ಹಾರೈಕೆ

ನೇಪಾಳ ದುರಂತಕ್ಕೆ 5 ತಿಂಗಳ ಹಿಂದೆಯೇ ಎಚ್ಚರಿಕೆ; ಹಿಮನದಿಗಳ ಕರಗುವಿಕೆ ಕುರಿತು ಬೆಚ್ಚಿಬೀಳಿಸುವ ವರದಿ

ಬೆಂಗಳೂರು–ಹೊಸೂರು ಹೆದ್ದಾರಿಯಲ್ಲಿ ಹೊತ್ತಿ ಉರಿದ ಕಾರು; ಚಾಲಕ ಸಮಯಪ್ರಜ್ಞೆಯಿಂದ ಪಾರು, Video

ನೇಪಾಳ ಪ್ರವಾಹದ ರೌದ್ರಾವತಾರ; 5ನೇ ದಿನಕ್ಕೆ ಕಾಲಿಟ್ಟ ರಕ್ಷಣಾ ಕಾರ್ಯಾಚರಣೆ; ಸಾವಿನ ಸಂಖ್ಯೆ 734ಕ್ಕೆ ಏರಿಕೆ, 2,498 ಮಂದಿ ನಾಪತ್ತೆ..!