ಲಖನೌ: ಬಿಜೆಪಿಯ ಹಿರಿಯ ನಾಯಕರೊಂದಿಗೆ ಸಂಪರ್ಕ ಹೊಂದಿದ್ದ ಧೀರೇಂದ್ರ ಪ್ರತಾಪ್ ಸಿಂಗ್ ಶನಿವಾರದಿಂದ ಲಕ್ನೋದ ಸುಶಾಂತ್ ಗಾಲ್ಫ್ ಸಿಟಿಯಿಂದ ಕಾಣೆಯಾಗಿದ್ದು ಇದೀಗ ಅವರ ಮೃತದೇಹ ಪತ್ತೆಯಾಗಿದೆ. ಸುಮಾರು 50 ಕೋಟಿ ಮೌಲ್ಯದ ಜಮೀನಿನ ವಿವಾದದಲ್ಲಿ ಭಾಗಿಯಾಗಿದ್ದು ಪ್ರಕರಣದ ಎಲ್ಲಾ ಅಂಶಗಳನ್ನು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಬಿಜೆಪಿಯ ಹಿರಿಯ ನಾಯಕರೊಂದಿಗೆ ಸಂಪರ್ಕ ಹೊಂದಿದ್ದ ಧೀರೇಂದ್ರ ಪ್ರತಾಪ್ ಅವರನ್ನು ಅವರ ಫಾರ್ಚೂನರ್ ಒಳಗೆ ಗುಂಡು ಹಾರಿಸಿ, ಅವರ ದೇಹವನ್ನು ಕಾಲುವೆಗೆ ಎಸೆಯಲಾಗಿದೆ. ಭೂ ವಿವಾದದಿಂದಾಗಿ ಈ ಕೊಲೆ ನಡೆದಿದೆ ಎನ್ನಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಅವರ ಚಾಲಕ ಮತ್ತು ಇತರ ಐದು ಜನರನ್ನು ಬಂಧಿಸಿದ್ದಾರೆ. ಪೊಲೀಸರು ಮತ್ತು ವಿಶೇಷ ಕಾರ್ಯಪಡೆ (ಎಸ್ಟಿಎಫ್) ತಂಡಗಳು ಅವರನ್ನು ವಿಚಾರಣೆ ನಡೆಸುತ್ತಿವೆ.
ಉನ್ನಾವೋದ ರಾಜೇಪುರದ ಮಹಾರಾಣಾ ಪ್ರತಾಪ್ ಚಾರಿಟೇಬಲ್ ಫೌಂಡೇಶನ್ನ ಅಧ್ಯಕ್ಷ ಧೀರೇಂದ್ರ ಪ್ರತಾಪ್ ಸಿಂಗ್, ಮೂಲತಃ ಉನ್ನಾವೋದ ರಾಜೇಪುರ ಬಂಗಾರಮೌನವರು ಮತ್ತು ಪ್ರಸ್ತುತ ಪಿಜಿಐನ ಸೆಕ್ಟರ್ 11ರಲ್ಲಿ ವಾಸಿಸುತ್ತಿದ್ದಾರೆ. ಅವರನ್ನು ಅವರ ಚಾಲಕ ಮತ್ತು ಅವರ ಸಹಚರರು ಗುಂಡಿಕ್ಕಿ ಕೊಂದಿದ್ದಾರೆ. ಕೊಲೆಯ ನಂತರ, ಅವರ ಶವವನ್ನು ದುಬಗ್ಗಾದ ಕಿಸಾನ್ ಪಥ್ ಬಳಿಯ ಕಾಲುವೆಗೆ ಎಸೆಯಲಾಯಿತು. ಪೊಲೀಸರು ಚಾಲಕ ರವಿ ತಿವಾರಿ, ಅವರ ಸಹಚರ ದಿಲೀಪ್ ಮತ್ತು ಇತರ ನಾಲ್ವರನ್ನು ಬಂಧಿಸಿದ್ದಾರೆ.