ನವದೆಹಲಿ: ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಅವರು ತಮ್ಮ ಒಂಬತ್ತನೇ ಬಜೆಟ್ ಗ್ರಾಮೀಣ ಮಹಿಳೆಯರಿಗಾಗಿ ಗುಡ್ನ್ಯೂಸ್ ನೀಡಿದ್ದಾರೆ.
ಗ್ರಾಮೀಣ ಮಹಿಳೆಯರು ನಡೆಸುವ, ಸ್ವ-ಸಹಾಯ ಉದ್ಯಮಗಳಿಗೆ ಶಿ-ಮಾರ್ಟ್ಗಳನ್ನು ಪ್ರಾರಂಭಿಸಲಾಗುವುದು. ಇದು ಮಹಿಳೆಯರ ಸಬಲೀಕರಣ ಮಾಡಲು ಸಹಾಯಕವಾಗಿದೆ ಎಂದು ಹೇಳಿದ್ದಾರೆ. ಇದು ಸ್ವ-ಸಹಾಯ ಉದ್ಯಮಿಗಳಿಂದ ನಡೆಸಲ್ಪಡುವ ಮತ್ತು ಸಮುದಾಯದ ಒಡೆತನದ ಚಿಲ್ಲರೆ ಮಾರಾಟ ಮಳಿಗೆಗಳಾಗಿ ಕಾರ್ಯನಿರ್ವಹಿಸುತ್ತದೆ.
ಮಹಿಳೆಯರು ಸಾಲ ಆಧಾರಿತ ಜೀವನೋಪಾಯದಿಂದ ತಮ್ಮದೇ ಆದ ಉದ್ಯಮಗಳ ಮಾಲೀಕರಾಗಲು ಸಹಾಯ ಮಾಡಲು ಸರ್ಕಾರ ಬಯಸುತ್ತದೆ ಎಂದು ಶುಕ್ರವಾರ ಹೇಳಿದ್ದಾರೆ. ಲಖ್ಪತಿ ದೀದಿ ಕಾರ್ಯಕ್ರಮದ ಯಶಸ್ಸಿನಿಂದಾಗಿ ಈ ಪ್ರಸ್ತಾಪವನ್ನು ಮಾಡಲಾಗಿದೆ ಎಂದು ಅವರು ಹೇಳಿದರು.