ಲೋನಾವಾಲ ಟೈಗರ್ ಪಾಯಿಂಟ್‌ 
ದೇಶ

ಲೋನಾವಾಲ: ಸೋಲೋ ಟ್ರಿಪ್ ಹೋಗಿದ್ದ ಕಾನೂನು ವಿದ್ಯಾರ್ಥಿನಿ ಆತ್ಮಹತ್ಯೆ!

ಮೃತ ವಿದ್ಯಾರ್ಥಿನಿಯನ್ನು ನವಿ ಮುಂಬೈ ನಿವಾಸಿ ಶ್ರೀಯಾ ಪತಿ ಎಂದು ಗುರುತಿಸಲಾಗಿದ್ದು, ಥಾಣೆ ಜಿಲ್ಲೆಯ ಕಲ್ಯಾಣ್ ಪಟ್ಟಣದ ಖಾಸಗಿ ಕಾಲೇಜಿನಲ್ಲಿ ಕಾನೂನು ಓದುತ್ತಿದ್ದಳು.

ಲೋನಾವಾಲ: ಮಹಾರಾಷ್ಟ್ರದ ಲೋನಾವಾಲ ಗಿರಿಧಾಮದಲ್ಲಿ ಮನೆಯಿಂದ ಸೋಲೋ ಟ್ರಿಪ್ ಹೋಗಿದ್ದ 19 ವರ್ಷದ ಕಾನೂನು ವಿದ್ಯಾರ್ಥಿನಿ ಕಮರಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ.

ಮೃತ ವಿದ್ಯಾರ್ಥಿನಿಯನ್ನು ನವಿ ಮುಂಬೈ ನಿವಾಸಿ ಶ್ರೀಯಾ ಪತಿ ಎಂದು ಗುರುತಿಸಲಾಗಿದ್ದು, ಥಾಣೆ ಜಿಲ್ಲೆಯ ಕಲ್ಯಾಣ್ ಪಟ್ಟಣದ ಖಾಸಗಿ ಕಾಲೇಜಿನಲ್ಲಿ ಕಾನೂನು ಓದುತ್ತಿದ್ದಳು.

ಮೇಲ್ನೋಟಕ್ಕೆ ಇದು ಆತ್ಮಹತ್ಯೆ ಪ್ರಕರಣವಾಗಿದ್ದರೂ, ಸ್ಥಳದಿಂದ ವಶಪಡಿಸಿಕೊಳ್ಳಲಾದ ಅವರ ಮೊಬೈಲ್ ಫೋನ್ ಮತ್ತು ಲ್ಯಾಪ್‌ಟಾಪ್ ಅನ್ನು ಪರಿಶೀಲಿಸಿದ ನಂತರ ಸಾವಿಗೆ ನಿಖರವಾದ ಕಾರಣ ತಿಳಿದುಬರುತ್ತದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಜನವರಿ 30 ರಂದು ಬೆಳಗ್ಗೆ ಮನೆಯಿಂದ ಒಬ್ಬಳೇ ಪ್ರವಾಸ ಹೊರಟಿದ್ದ ವಿದ್ಯಾರ್ಥಿನಿ, ತಾನು ಸೋಲೋ ಟ್ರಿಪ್ ಹೋಗುತ್ತಿರುವುದಾಗಿ ಪೋಷಕರಿಗೆ ತಿಳಿಸಿದ್ದಳು ಮತ್ತು ಸಂಜೆಯೊಳಗೆ ವಾಪಸ್ ಬರುವುದಾಗಿ ಹೇಳಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.

ಲೋನಾವಾಲ ಬಳಿಯ ಜನಪ್ರಿಯ ವೀಕ್ಷಣಾ ತಾಣವಾದ ಡ್ಯೂಕ್ಸ್ ನೋಸ್‌ಗೆ ಭೇಟಿ ನೀಡಿದ್ದ ಯುವತಿ, ನಂತರ ಮತ್ತೊಂದು ಪ್ರವಾಸಿ ತಾಣವಾದ ಟೈಗರ್ ಪಾಯಿಂಟ್‌ಗೆ ಹೋಗಿದ್ದಳು. ಅಲ್ಲಿಂದ ಯುವತಿ ಕಮರಿಗೆ ಹಾರಿದ್ದಾಳೆ ಎಂದು ಹೇಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಟೈಗರ್ ಪಾಯಿಂಟ್‌ನಲ್ಲಿ ಟೀ ಸ್ಟಾಲ್ ನಡೆಸುತ್ತಿರುವ ಸ್ಥಳೀಯ ನಿವಾಸಿ ವಿಜಯ್ ಭಲೇರಾವ್ ಅವರ ಅಂಗಡಿಯ ಹಿಂದೆ ಅವರ ಐಡಿ ಕಾರ್ಡ್ ಇರುವ ಬ್ಯಾಗ್ ಪತ್ತೆಯಾಗಿದೆ. ಐಡಿ ಕಾರ್ಡ್ ನೋಡಿ ಅವರು ಆಕೆಯ ಪೋಷಕರನ್ನು ಸಂಪರ್ಕಿಸಿದ್ದಾರೆ. ಬಳಿಕ ಪೋಷಕರು ಸ್ಥಳಕ್ಕೆ ಧಾವಿಸಿ, ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ನಂತರ ಸ್ಥಳೀಯ ರಕ್ಷಣಾ ತಂಡಗಳ ಸಹಾಯದಿಂದ ಪೊಲೀಸರು ಹುಡುಕಾಟ ನಡೆಸಿ, ಡ್ರೋನ್ ಸಹಾಯದಿಂದ ಕಮರಿಯಲ್ಲಿ ಸುಮಾರು 300 ಅಡಿ ಆಳದಲ್ಲಿ ಆಕೆಯ ದೇಹವನ್ನು ಪತ್ತೆ ಮಾಡಿ, ಜನವರಿ 31 ರಂದು ಶವವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗಾಗಿ ಸರ್ಕಾರಿ ಆಸ್ಪತ್ರೆಗೆ ಕಳುಹಿಸಲಾಗಿದೆ.

ಈ ಸಂಬಂಧ ಲೋನಾವಾಲ ಗ್ರಾಮೀಣ ಪೊಲೀಸರು ಆಕಸ್ಮಿಕ ಸಾವಿನ ಪ್ರಕರಣ ದಾಖಲಿಸಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

‘ಸ್ಸಾರಿ ಅಮ್ಮ-ಅಪ್ಪಾ': ಕೊರಿಯನ್ ಗೇಮ್ಸ್ ಚಟಕ್ಕೆ ಬಿದ್ದು ಡೆತ್ ನೋಟ್ ಬರೆದಿಟ್ಟು ಮೂವರು ಅಪ್ರಾಪ್ತ ಸೋದರಿಯರು ಆತ್ಮಹತ್ಯೆ-Video

ವ್ಯಾಪಾರ ಒಪ್ಪಂದ: US ಸರಕುಗಳು ಅಗ್ಗದ ದರದಲ್ಲಿ ಭಾರತದ ಮಾರುಕಟ್ಟೆಗೆ ಲಗ್ಗೆ; ನಮ್ಮ ರೈತರು ಏನು ಮಾಡ್ಬೇಕು? ಸಂಜಯ್ ರಾವತ್; Video

Operation KIYA: ಉಧಂಪುರದಲ್ಲಿ ಎನ್ಕೌಂಟರ್; ಗುಹೆಯಲ್ಲಿ ಅಡಗಿ ಕುಳಿತಿದ್ದ ಇಬ್ಬರು ಉಗ್ರರ ಸದೆಬಡಿದ ಭಾರತೀಯ ಸೇನೆ..! Video

NCP ಬಣಗಳ ವಿಲೀನ? ಶರದ್ ಪವಾರ್, ಅಜಿತ್ ಪವಾರ್ ಪುತ್ರರ ನಡುವೆ ಮಹತ್ವದ ಮಾತುಕತೆ!

ಜ್ಯೋತಿಷಿ ಕಮಲಾಕರ್ ಭಟ್ ಅಕ್ರಮ ಸಂಬಂಧ; ವ್ಯಕ್ತಿಯ ಹತ್ಯೆ: MLA ಸುರೇಶ್ ಕುಮಾರ್ ನೈತಿಕ ಹೊಣೆ ಹೊರಬೇಕು; ಇದೇನಿದು ಹರಿಪ್ರಸಾದ್ ಆರೋಪ?

SCROLL FOR NEXT