ಪ್ರಧಾನಿ ನರೇಂದ್ರ ಮೋದಿ  online desk
ದೇಶ

"ಇನ್ನೂ 25 ಬಾಕಿ ಇದೆ": ಶುಭಾಶಯ ಕೋರಿದ ನಾಯಕನಿಗೆ ಮೋದಿ ಹೀಗೆ ಹೇಳಿದ್ದೇಕೆ?

ಇಂಫಾಲ್‌ನ ಸೈನಿಕ್ ಶಾಲೆಯ ವಿದ್ಯಾರ್ಥಿ ಇಮೋಟಾ ಕೆ ಶ್ಯಾಮ್, ಮೋದಿಗೆ ಬಾಲ್ಯದಿಂದಲೂ ತಮಗೆ ದೊಡ್ಡ ಸ್ಫೂರ್ತಿ ಎಂದು ಹೇಳಿದ್ದರು ಮತ್ತು ಅವರು ತಮ್ಮ ಹುಟ್ಟುಹಬ್ಬವನ್ನು ಪ್ರಧಾನಿಯೊಂದಿಗೆ ಹಂಚಿಕೊಳ್ಳುತ್ತಾರೆ.

ನವದೆಹಲಿ: "ಇನ್ನೂ ಇಪ್ಪತ್ತೈದು ವರ್ಷಗಳು ಉಳಿದಿವೆ" ಎಂದು ಪ್ರಧಾನಿ ನರೇಂದ್ರ ಮೋದಿ ತಮ್ಮ 75 ನೇ ಹುಟ್ಟುಹಬ್ಬದಂದು ಶುಭಾಶಯ ಕೋರಲು ಕರೆ ಮಾಡಿದ ನಾಯಕರೊಬ್ಬರಿಗೆ ಹೇಳಿದ್ದನ್ನು ನೆನಪಿಸಿಕೊಂಡಿದ್ದಾರೆ.

ಶುಕ್ರವಾರ ಪ್ರಸಾರವಾದ ಪರೀಕ್ಷಾ ಪೆ ಚರ್ಚಾ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳೊಂದಿಗೆ ಸಂವಾದದ ಸಂದರ್ಭದಲ್ಲಿ ಒಂದು ಉಪಾಖ್ಯಾನವನ್ನು ಹಂಚಿಕೊಂಡ ಮೋದಿ, ಕಳೆದ ವರ್ಷ ತಮ್ಮ 75 ನೇ ಹುಟ್ಟುಹಬ್ಬದಂದು ಒಬ್ಬ ನಾಯಕರು ತಮಗೆ ಕರೆ ಮಾಡಿದ್ದನ್ನು ನೆನಪಿಸಿಕೊಂಡು ವಿದ್ಯಾರ್ಥಿಗಳಿಗೆ ಸ್ಪೂರ್ತಿಯಾಗಬಲ್ಲ ಅಂಶವನ್ನು ಹಂಚಿಕೊಂಡಿದ್ದಾರೆ.

"ಇತ್ತೀಚೆಗೆ, ಸೆಪ್ಟೆಂಬರ್ 17 ರಂದು ನನ್ನ ಹುಟ್ಟುಹಬ್ಬದಂದು ಒಬ್ಬ ನಾಯಕರು ನನಗೆ ಕರೆ ಮಾಡಿದರು. ಅವರು 'ನಿಮಗೆ 75 ವರ್ಷ ತುಂಬಿದೆ' ಎಂದು ಹೇಳಿದರು" "ನಾನು 'ಇಲ್ಲ, ಇನ್ನೂ 25 ವರ್ಷಗಳು ಉಳಿದಿವೆ' ಎಂದು ಉತ್ತರಿಸಿದೆ" ಎಂದು ಮೋದಿ ಮಣಿಪುರದ ವಿದ್ಯಾರ್ಥಿಯೊಬ್ಬರಿಗೆ ಹೇಳಿದರು.

ಇಂಫಾಲ್‌ನ ಸೈನಿಕ್ ಶಾಲೆಯ ವಿದ್ಯಾರ್ಥಿ ಇಮೋಟಾ ಕೆ ಶ್ಯಾಮ್, ಮೋದಿಗೆ ಬಾಲ್ಯದಿಂದಲೂ ತಮಗೆ ದೊಡ್ಡ ಸ್ಫೂರ್ತಿ ಎಂದು ಹೇಳಿದ್ದರು ಮತ್ತು ಅವರು ತಮ್ಮ ಹುಟ್ಟುಹಬ್ಬವನ್ನು ಪ್ರಧಾನಿಯೊಂದಿಗೆ ಹಂಚಿಕೊಳ್ಳುತ್ತಾರೆ.

"ನಾನು ಕಳೆದದ್ದನ್ನು ನಾನು ಎಣಿಸುವುದಿಲ್ಲ. ಉಳಿದದ್ದನ್ನು ನಾನು ಎಣಿಸುತ್ತೇನೆ. ಅದಕ್ಕಾಗಿಯೇ ನಾನು ನಿಮಗೆ ಹೇಳುತ್ತೇನೆ: ಕಳೆದದ್ದನ್ನು ಎಣಿಸುತ್ತಾ ಸಮಯ ವ್ಯರ್ಥ ಮಾಡಬೇಡಿ. ಉಳಿದದ್ದನ್ನು ಹೇಗೆ ಬದುಕುವುದು ಎಂಬುದರ ಕುರಿತು ಯೋಚಿಸಿ" ಎಂದು ವಿದ್ಯಾರ್ಥಿಗಳಿಗೆ ಪ್ರಧಾನಿ ಕಿವಿ ಮಾತು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಭಾರತದ ಚುನಾವಣಾ ವ್ಯವಸ್ಥೆಯ ವಿಶ್ವಾಸಾರ್ಹತೆ ಬಗ್ಗೆ ಜಾಗತಿಕವಾಗಿ ಅತ್ಯುತ್ತಮ ಸ್ಪಷ್ಟ ಅಭಿಪ್ರಾಯ- ಟ್ರಂಪ್ ಹೇಳಿಕೆ ಬೆನ್ನಲ್ಲೇ MEA ಪ್ರತಿಕ್ರಿಯೆ!

ಮಾಜಿ ಸಚಿವ ಬಿ. ಸಿ. ನಾಗೇಶ್ ನಿಧನ: ನಾಳೆ ತಿಪಟೂರಿನಲ್ಲಿ ಅಂತ್ಯಕ್ರಿಯೆ!

ಬೆಂಗಳೂರು ದಕ್ಷಿಣ ಜಿಲ್ಲೆಯಲ್ಲಿ ನಕಲಿ ಔಷಧಿ ಮರುಪ್ಯಾಕಿಂಗ್ ಬೃಹತ್ ಜಾಲ ಪತ್ತೆ: 5 ಕೋಟಿ ರೂ. ಮೌಲ್ಯದ ವಸ್ತುಗಳು ವಶಕ್ಕೆ!

ಪಸಿಂದು ಗೋಲ್ಡನ್ ಡಕೌಟ್: ಆಡಿದ 2ನೇ ಪಂದ್ಯದಲ್ಲೇ ಕುಂಬ್ಳೆ ದಾಖಲೆ ಸರಿಗಟ್ಟಿದ Team India ಯುವ ಸ್ಪಿನ್ನರ್ ಮಾನವ್ ಸುತಾರ್!

ದೇವೇಗೌಡರ ಕೂಸನ್ನು ಹಾದಿ ತಪ್ಪಿಸಿ ಯಾರಪ್ಪನಿಗೆ ಕೊಡಲು ಹೊರಟಿದ್ದೀರಿ ಮಿಸ್ಟರ್ ಡಿ.ಕೆ. ಶಿವಕುಮಾರ್? ತಾಕತ್ ಇದ್ರೆ ಚರ್ಚೆಗೆ ಬನ್ನಿ, ಕುಮಾರಸ್ವಾಮಿ ಸವಾಲು!