ಭಾರತೀಯ ವಾಯುಪಡೆ ತಂಡ 
ದೇಶ

ಮಹಾರಾಷ್ಟ್ರ ಡಿಸಿಎಂ ಅಜಿತ್ ಪವಾರ್ ದುರಂತ ಸಾವು: ಬಾರಾಮತಿಯಲ್ಲಿ ತುರ್ತು ATC ತಂಡ ನಿಯೋಜಿಸಿದ IAF

ಬಾರಾಮತಿ ವಿಮಾನ ನಿಲ್ದಾಣವು ಶಾಶ್ವತ ಎಟಿಸಿ ಟವರ್ ಹೊಂದಿಲ್ಲ. ಹೀಗಾಗಿ ತುರ್ತು ಸಂದರ್ಭಗಳಲ್ಲಿ ವಿಮಾನಗಳನ್ನು ಇಳಿಸಲು ಪೈಲಟ್ ಗಳಿಗೆ ತೊಂದರೆಯಾಗುತ್ತಿತ್ತು.

ಬಾರಾಮತಿ: ಮಹಾರಾಷ್ಟ್ರ ಸರ್ಕಾರದ ತುರ್ತು ವಿನಂತಿಯ ಮೇರೆಗೆ ನಾಗರಿಕ ವಿಮಾನಯಾನ ಅಧಿಕಾರಿಗಳು ಮತ್ತು ಸ್ಥಳೀಯ ಆಡಳಿತದೊಂದಿಗೆ ನಿಕಟ ಸಮನ್ವಯದೊಂದಿಗೆ ಸಂವಹನ ಮತ್ತು ಇತರ ನಿರ್ಣಾಯಕ ಮೂಲಸೌಕರ್ಯ ಸೇರಿದಂತೆ ತುರ್ತು ಎಟಿಸಿ ಸೇವೆಗಳನ್ನು ಸ್ಥಾಪಿಸಲು ಸಿಬ್ಬಂದಿ ಮತ್ತು ಸಲಕರಣೆಗಳನ್ನು ಲೋಹೆಗಾಂವ್ ವಾಯುಪಡೆ ನಿಲ್ದಾಣದಿಂದ ಬಾರಾಮತಿಗೆ ರವಾನಿಸಲಾಗಿದೆ ಎಂದು ಐಎಎಫ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಇಂದು ಬಾರಾಮತಿಯಲ್ಲಿ ಸಂಭವಿಸಿದ ವಿಮಾನ ಅಪಘಾತದಲ್ಲಿ ದುರ್ಮರಣ ಹೊಂದಿದ್ದರು. ತನಿಖೆಗಳು ನಡೆಯುತ್ತಿರುವಾಗ ಮತ್ತು ಅಧಿಕಾರಿಗಳು ಬಾರಾಮತಿಯಲ್ಲಿ ವಿಮಾನ ಸುರಕ್ಷತೆಯನ್ನು ಬಲಪಡಿಸಲು ದೀರ್ಘಾವಧಿಯ ಕ್ರಮಗಳನ್ನು ಯೋಜಿಸುತ್ತಿರುವಾಗ ಕ್ರಮಬದ್ಧವಾದ ವಾಯು ಸಂಚಾರವನ್ನು ಖಚಿತಪಡಿಸಿಕೊಳ್ಳುವ ಗುರಿಯನ್ನು ಈ ಕ್ಷಿಪ್ರ ನಿಯೋಜನೆ ಹೊಂದಿದೆ. ಈ ಮಧ್ಯೆ, ತುರ್ತು ಎಟಿಸಿ ಸೆಟಪ್ ಮಿಲಿಟರಿ ಮತ್ತು ನಾಗರಿಕ ವಿಮಾನಗಳೆರಡನ್ನೂ ಬೆಂಬಲಿಸುತ್ತದೆ ಎಂದು ಅಧಿಕಾರಿ ವಿವರಿಸಿದರು.

ಬಾರಾಮತಿ ವಿಮಾನ ನಿಲ್ದಾಣವು ಶಾಶ್ವತ ಎಟಿಸಿ ಟವರ್ ಹೊಂದಿಲ್ಲ. ಹೀಗಾಗಿ ತುರ್ತು ಸಂದರ್ಭಗಳಲ್ಲಿ ವಿಮಾನಗಳನ್ನು ಇಳಿಸಲು ಪೈಲಟ್ ಗಳಿಗೆ ತೊಂದರೆಯಾಗುತ್ತಿತ್ತು. ಇನ್ನು ಇಂದು ಮುಂಬೈನಿಂದ ಬಾರಾಮತಿಗೆ ಹಾರುತ್ತಿದ್ದ VSR ವೆಂಚರ್ಸ್ ನಿರ್ವಹಿಸುತ್ತಿದ್ದ ಲಿಯರ್‌ಜೆಟ್ 45XR ಬಿಸಿನೆಸ್ ಜೆಟ್ ಬೆಳಿಗ್ಗೆ 8:44ರ ಸುಮಾರಿಗೆ ಬಾರಾಮತಿಯಲ್ಲಿ ಇಳಿಯಲು ಪ್ರಯತ್ನಿಸಿತ್ತು. ಹವಾಮಾನ ವೈಪರೀತ್ಯದಿಂದಾಗಿ ಪೈಲಟ್ ಗೆ ಸರಿಯಾಗಿ ರನ್ ವೇ ಕಾಣದೇ ವಿಮಾನ ನೆಲಕ್ಕೆ ಅಪ್ಪಳಿಸಿತ್ತು. ಈ ದುರಂತದಲ್ಲಿ ಅಜಿತ್ ಪವಾರ್, ಇಬ್ಬರು ಪೈಲಟ್‌ಗಳು ಮತ್ತು ಪವಾರ ಪಕ್ಷದ ಇಬ್ಬರು ಸದಸ್ಯರು ಸೇರಿದಂತೆ ಎಲ್ಲಾ ಐದು ಪ್ರಯಾಣಿಕರು ಸಾವನ್ನಪ್ಪಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

JPSC-PT ರದ್ದುಗೊಳಿಸಲು ಜಾರ್ಖಂಡ್ ಸರ್ಕಾರ ಒಪ್ಪಿದರೂ 6ನೇ ಸುತ್ತಿನ ಮಾತುಕತೆ ವಿಫಲ; ಪ್ರತಿಭಟನೆ ಮುಂದುವರಿಕೆ!

"ಹಮಾಸ್ ನಿಶ್ಯಸ್ತ್ರಗೊಳಿಸುವುದೇ ಅಂತಿಮ ಗುರಿ": ಟ್ರಂಪ್ ಗಾಜಾ ಶಾಂತಿ ಯೋಜನೆ ತಿರಸ್ಕರಿಸಿದ ಇಸ್ರೇಲ್!

ಪಾಕಿಸ್ತಾನಿಗಳು ಭಾರತೀಯರ ಸಂಪೂರ್ಣ ಬದ್ಧ ವೈರಿಗಳಲ್ಲ: RSS ಮುಖ್ಯಸ್ಥ ಮೋಹನ್ ಭಾಗವತ್

ಆಗಸ್ಟ್ 13ರಿಂದ ವಿಧಾನಮಂಡಲ ಅಧಿವೇಶನ: ಟಿ.ಬಿ ಜಯಚಂದ್ರ ಹಂಗಾಮಿ ಸಭಾಧ್ಯಕ್ಷ

ರಷ್ಯಾ-ಭಾರತ ನಡುವೆ ನೇರ ರೈಲು ಸಂಪರ್ಕ? ರಷ್ಯಾದಿಂದ ಮಹತ್ವದ ಪ್ರಸ್ತಾವನೆ!