ಅಜಿತ್ ಪವಾರ್ ಜೊತೆ ಪಿಂಕಿ ಮಾಲಿ 
ದೇಶ

'ಅಪ್ಪಾ, ನಾನು ಅಜಿತ್ ಪವಾರ್ ಜೊತೆ ಬಾರಾಮತಿಗೆ ಹೋಗುತ್ತಿದ್ದೇನೆ': ತಂದೆಗೆ ಕೊನೆಯ ಕರೆ ಮಾಡಿದ್ದ ಪಿಂಕಿ ಮಾಲಿ!

ಕೆಲಸ ಮುಗಿದ ನಂತರ ನಾಳೆ ನಿಮ್ಮೊಂದಿಗೆ ಖಂಡಿತ ಮಾತನಾಡುತ್ತೇನೆ ಎಂದು ಮಗಳು ಭರವಸೆ ನಿಡಿದ್ದಳು. ಆದರೆ, ಆ ಕ್ಷಣ ಇನ್ನೆಂದಿಗೂ ಬರುವುದಿಲ್ಲ’ ಎಂದು ಶಿವಕುಮಾರ್‌ ನೋವಿನಿಂದ ನುಡಿದರು.

ಮುಂಬೈ: ಅಪ್ಪಾ, ನಾನು ನಾಳೆ ಉಪ ಮುಖ್ಯಮಂತ್ರಿ ಅಜಿತ್‌ ಪವಾರ್‌ ಅವರೊಂದಿಗೆ ಬಾರಾಮತಿಗೆ ಹೋಗುತ್ತಿದ್ದೇನೆ. ಬಾರಾಮತಿಯಲ್ಲಿ ಅವರು ವಿಮಾನದಿಂದ ಇಳಿದ ನಂತರ, ನಾನು ನಾಂದೇಡ್‌ಗೆ ಹೋಗುತ್ತೇನೆ, ಹೋಟೆಲ್‌ ತಲುಪಿದ ತಕ್ಷಣವೇ ನಿಮಗೆ ಫೋನ್‌ ಮಾಡುತ್ತೇನೆ.

ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಮತ್ತು ಇತರ ನಾಲ್ವರು ಸಾವನ್ನಪ್ಪಿದ ಬಾರಾಮತಿ ವಿಮಾನ ಅಪಘಾತದಲ್ಲಿ ಪಿಂಕಿ ಮಾಲಿ ಸಹಾಯಕಿಯಾಗಿ ಕೆಲಸ ಮಾಡುತ್ತಿದ್ದರು, ಕೊನೆಯ ಬಾರಿಗೆ ಅವರ ತಂದೆ ಶಿವಕುಮಾರ್ ಮಾಲಿ ನಡುವಿನ ಫೋನ್ ಸಂಭಾಷಣೆ ಹೊರಬಿದ್ದಿದೆ.

ಮಗಳು ಪಿಂಕಿ ಮಾಲಿ ನನ್ನೊಂದಿಗೆ ಆಡಿದ ಕೊನೆಯ ನುಡಿಗಳಿವು. ನಾಳೆ ಮಾತನಾಡುತ್ತೇನೆ ಎಂದು ಆಕೆ ನೀಡಿದ ಭರವಸೆ ಇನ್ನೆಂದೂ ಈಡೇರುವುದಿಲ್ಲ. ವಿಮಾನ ದುರಂತದಲ್ಲಿ ಅಜಿತ್‌ ಪವಾರ್‌ ಅವರೊಂದಿಗೆ ಮಗಳು ಸಹ ಮೃತಪಟ್ಟಿದ್ದಾಳೆ ಎಂದು ಪಿಂಕಿಯ ತಂದೆ, ಸೆಂಟ್ರಲ್‌ ಮುಂಬೈನ ಪ್ರಭಾದೇವಿ ಪ್ರದೇಶದ ನಿವಾಸಿ ಶಿವಕುಮಾರ್‌ ಮಾಲಿ ತಿಳಿಸಿದ್ದಾರೆ.

ದೆಹಲಿಯ ವಿಎಸ್‌ಆರ್‌ ವೆಂಚರ್ಸ್‌ಗೆ ಸೇರಿದ, ಅಜಿತ್‌ ಪವಾರ್‌ ಪ್ರಯಾಣಿಸುತ್ತಿದ್ದ ವಿಶೇಷ ವಿಮಾನದಲ್ಲಿ ಪಿಂಕಿ ಮಾಲಿ ಸಹಾಯಕಿ ಆಗಿದ್ದರು. ಸಿಬ್ಬಂದಿ ಸೇರಿ ಒಟ್ಟು ಐವರು ದುರಂತದಲ್ಲಿ ಮೃತಪಟ್ಟಿದ್ದಾರೆ.

ಕೆಲಸ ಮುಗಿದ ನಂತರ ನಾಳೆ ನಿಮ್ಮೊಂದಿಗೆ ಖಂಡಿತ ಮಾತನಾಡುತ್ತೇನೆ ಎಂದು ಮಗಳು ಭರವಸೆ ನಿಡಿದ್ದಳು. ಆದರೆ, ಆ ಕ್ಷಣ ಇನ್ನೆಂದಿಗೂ ಬರುವುದಿಲ್ಲ’ ಎಂದು ಶಿವಕುಮಾರ್‌ ನೋವಿನಿಂದ ನುಡಿದರು.

"ಅವಳು ಇತ್ತೀಚಿನ ಹಲವಾರು ಪ್ರವಾಸಗಳಲ್ಲಿ ಪವಾರ್ ಜೊತೆಗಿದ್ದಳು ಎಂದು ಅವರು ಉಲ್ಲೇಖಿಸಿದರು. ತೀವ್ರ ಆಘಾತಕ್ಕೊಳಗಾದ ಶಿವಕುಮಾರ್ ಹೇಳಿದರು: "ನಾನು ನನ್ನ ಮಗಳನ್ನು ಕಳೆದುಕೊಂಡಿದ್ದೇನೆ. ಅಂತಹ ಘಟನೆಗಳ ಬಗ್ಗೆ ನನಗೆ ಯಾವುದೇ ತಾಂತ್ರಿಕ ಜ್ಞಾನವಿಲ್ಲದ ಕಾರಣ ನಿಖರವಾಗಿ ಏನಾಯಿತು ಎಂದು ನನಗೆ ತಿಳಿದಿಲ್ಲ. ನಾನು ಸಂಪೂರ್ಣವಾಗಿ ಛಿದ್ರಗೊಂಡಿದ್ದೇನೆ. ನನ್ನ ಮಗಳ ಅಂತ್ಯಕ್ರಿಯೆಯನ್ನು ಗೌರವದಿಂದ ಮಾಡಲು ನನಗೆ ಅವಳ ದೇಹವು ಬೇಕು. "ನಾನು ಬಯಸುವುದು ಇಷ್ಟೇ," ಎಂದು ಅವರು ಹೇಳಿದರು.

ಬುಧವಾರ ಬೆಳಿಗ್ಗೆ ಪುಣೆ ಜಿಲ್ಲೆಯ ಬಾರಾಮತಿ ವಿಮಾನ ನಿಲ್ದಾಣದ ಬಳಿ ಅಪಘಾತ ಸಂಭವಿಸಿದ್ದು, ದೆಹಲಿ ಮೂಲದ ವಿಎಸ್ಆರ್ ವೆಂಚರ್ಸ್ ನಿರ್ವಹಿಸುವ ವಿಟಿ-ಎಸ್‌ಎಸ್‌ಕೆ ನೋಂದಣಿ ಹೊಂದಿರುವ ಲಿಯರ್‌ಜೆಟ್ 45 ವಿಮಾನ ಅಪಘಾತಕ್ಕೀಡಾಗಿದೆ.

ಪಿಂಕಿ ಮಾಲಿ ಐದು ವರ್ಷಗಳಿಂದ ಫ್ಲೈಟ್‌ ಅಟೆಂಡೆಂಟ್‌ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಆರಂಭದಲ್ಲಿ ಏರ್‌ ಇಂಡಿಯಾದಲ್ಲಿದ್ದ ಅವರು ನಂತರ, ಖಾಸಗಿ ವಿಶೇಷ ವಿಮಾನಗಳಲ್ಲಿ ಸಹಾಯಕಿ ಆಗಿ ಸೇರಿದ್ದರು. ಜನವರಿ 16ರಂದು ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಮತ ಚಲಾಯಿಸಲು ಮುಂಬೈಗೆ ಬಂದಿದ್ದಾಗ ಪಿಂಕಿ, ತಂದೆಯನ್ನು ಕೊನೆಯ ಬಾರಿ ಭೇಟಿಯಾಗಿದ್ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ತಮಿಳುನಾಡು ಮತ್ತು ಬಂಗಾಳ ಸೇರಿದಂತೆ 5 ರಾಜ್ಯಗಳ ಚುನಾವಣಾ ದಿನಾಂಕ ಪ್ರಕಟಿಸಿದ ಚುನಾವಣಾ ಆಯೋಗ!

ಎರಡೆರಡು ಅತ್ಯಾಚಾರ ಆರೋಪ: ಗುಟ್ಟಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ RCB ವೇಗಿ ಯಶ್ ದಯಾಳ್!

ಕರ್ನಾಟಕ ಉಪ ಚುನಾವಣೆ: ಜೋರಾದ ಟಿಕೆಟ್​​ ಫೈಟ್​​, 'ಕೈ-ಕಮಲ' ಕುತೂಹಲ, ಮೇಟಿ, ಶಾಮನೂರು ಕುಟುಂಬಸ್ಥರಿಗೆ ಮಣೆ?

ಕರ್ನಾಟಕ ಉಪ ಚುನಾವಣೆ: ಬಾಗಲಕೋಟೆ, ದಾವಣಗೆರೆ ದಕ್ಷಿಣದಲ್ಲಿ ಏಪ್ರಿಲ್ 9ರಂದು ಮತದಾನ, ಮೇ 4 ಫಲಿತಾಂಶ

Cricket: 'ಕ್ರಿಕೆಟ್​ನ ಮೌಲ್ಯಗಳನ್ನೇ ನಿರ್ನಾಮ ಮಾಡಿದ್ದಾರೆ': ವಿವಾದಿತ ರನೌಟ್ ಕುರಿತು ಅಮಿರ್ ಆಕ್ರೋಶ

SCROLL FOR NEXT