RSS ಮುಖ್ಯಸ್ಥ ಮೋಹನ್ ಭಾಗವತ್ 
ದೇಶ

'ದೇಶ ವಿಭಜನೆಯ ಬಳಿಕ ಭಾರತಕ್ಕೆ ಬಂದವರು ನಿರಾಶ್ರಿತರಲ್ಲ, ಹೋರಾಟದ ಯೋಧರು'; RSS ಮುಖ್ಯಸ್ಥ ಮೋಹನ್ ಭಾಗವತ್

ಮಾತೃಭೂಮಿಯ ಮೇಲಿನ ಪ್ರೀತಿ ಮತ್ತು ತಮ್ಮ ಧರ್ಮದ ಮೇಲಿನ ನಿಷ್ಠೆಯಿಂದ ಅವರು ಈ ಹೋರಾಟ ನಡೆಸಿದರು. ಭಾರತವನ್ನು ಒಗ್ಗೂಡಿಸಿ ಉಳಿಸಿಕೊಳ್ಳುವ ಹೋರಾಟದಲ್ಲಿ ಸೋತಿದ್ದೇವೆ. ಅದು ಅವರೊಬ್ಬರ ತಪ್ಪಿನಿಂದಲ್ಲ, ನಮ್ಮೆಲ್ಲರ ಸೋಲಾಗಿತ್ತು.

ನಾಗ್ಪುರ: 1947ರ ಭಾರತ ವಿಭಜನೆ ಬಳಿಕ ಪಾಕಿಸ್ತಾನದಿಂದ ಭಾರತಕ್ಕೆ ಬಂದವರನ್ನು "ನಿರಾಶ್ರಿತರು (Refugees)" ಎಂದು ಕರೆಯುವುದು ತಪ್ಪು. ಅವರು ತಮ್ಮ ದೇಶ ಮತ್ತು ಧರ್ಮದ ಮೇಲಿನ ಪ್ರೀತಿಯಿಂದ ಎಲ್ಲವನ್ನೂ ತ್ಯಾಗ ಮಾಡಿದ "ಹೋರಾಟದ ಯೋಧರು" ಎಂದು ಆರ್‌ಎಸ್‌ಎಸ್ ಸರಸಂಘಚಾಲಕ ಮೋಹನ್ ಭಾಗವತ್ ಹೇಳಿದ್ದಾರೆ.

ಬುಧವಾರ ನಾಗಪುರದಲ್ಲಿ ನಡೆದ ಸಿಂಧು ಎಜುಕೇಶನ್ ಸೊಸೈಟಿಯ 75ನೇ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪಾಕಿಸ್ತಾನದಿಂದ ಭಾರತಕ್ಕೆ ಬಂದವರು ತಮ್ಮ ಮನೆ, ಆಸ್ತಿ, ವ್ಯಾಪಾರ ಹಾಗೂ ಹಲವು ತಲೆಮಾರುಗಳಿಂದ ಸಂಪಾದಿಸಿದ್ದ ಸಂಪತ್ತನ್ನು ಬಿಟ್ಟು ಭಾರತವನ್ನು ಆಯ್ಕೆ ಮಾಡಿಕೊಂಡಿದ್ದರು. "ಅವರು ನಿರಾಶ್ರಿತರಲ್ಲ. ಹೌದು, ಅವರು ಸ್ಥಳಾಂತರಗೊಂಡಿದ್ದರು. ಆದರೆ, ಅವರನ್ನು ನಿರಾಶ್ರಿತರು ಎಂದು ಕರೆಯುವುದು ಆ ಕಾಲದಲ್ಲೇ ಬಳಸಲಾದ ತಪ್ಪು ಪದ. ಅವರು ಹೋರಾಟದ ಯೋಧರು ಎಂದು ಹೇಳಿದರು.

ಮಾತೃಭೂಮಿಯ ಮೇಲಿನ ಪ್ರೀತಿ ಮತ್ತು ತಮ್ಮ ಧರ್ಮದ ಮೇಲಿನ ನಿಷ್ಠೆಯಿಂದ ಅವರು ಈ ಹೋರಾಟ ನಡೆಸಿದರು. ಭಾರತವನ್ನು ಒಗ್ಗೂಡಿಸಿ ಉಳಿಸಿಕೊಳ್ಳುವ ಹೋರಾಟದಲ್ಲಿ ಸೋತಿದ್ದೇವೆ. ಅದು ಅವರೊಬ್ಬರ ತಪ್ಪಿನಿಂದಲ್ಲ, ನಮ್ಮೆಲ್ಲರ ಸೋಲಾಗಿತ್ತು ಎಂದು ತಿಳಿಸಿದರು.

ಅವರು ತಮ್ಮ ವೃತ್ತಿ, ಸಂಪತ್ತು ಅಥವಾ ವೈಯಕ್ತಿಕ ಭವಿಷ್ಯವನ್ನು ಆಯ್ಕೆ ಮಾಡಲಿಲ್ಲ. ಬದಲಿಗೆ ದೇಶವನ್ನು ಆಯ್ಕೆ ಮಾಡಿಕೊಂಡರು. ತಮ್ಮ ಧರ್ಮವನ್ನು ಆಯ್ಕೆ ಮಾಡಿಕೊಂಡರು. ವಿಭಜನೆಯ ಬಳಿಕ ಭಾರತಕ್ಕೆ ಬಂದವರು, ತಮ್ಮ ಧರ್ಮವನ್ನು ಭಯವಿಲ್ಲದೆ ಆಚರಿಸಬಹುದಾದ ದೇಶವಾಗಿ ಭಾರತವನ್ನು ಪ್ರಜ್ಞಾಪೂರ್ವಕವಾಗಿ ಆಯ್ಕೆ ಮಾಡಿಕೊಂಡಿದ್ದರು ಎಂದರು.

ಇದೇ ವೇಳೆ ಜೀವನದಲ್ಲಿ ಎದುರಾಗುವ ಸಂಕಷ್ಟಗಳ ಬಗ್ಗೆ ಮಾತನಾಡಿದ ಅವರು, ಪರಿಸ್ಥಿತಿಗಳು ಅಥವಾ ವಿಧಿಯ ಮುಂದೆ ಅಸಹಾಯಕರಾಗಬಾರದು. ಕಷ್ಟದ ಸಮಯದಲ್ಲಿ ಪ್ರಯತ್ನಿಸುವ ವ್ಯಕ್ತಿಯೇ ಅಂತಿಮವಾಗಿ ಯಶಸ್ಸು ಸಾಧಿಸುತ್ತಾನೆ. ಸಮಸ್ಯೆಗಳಿಂದ ಓಡಿ ಹೋಗುವವನು ಮೊದಲೇ ಸೋಲನ್ನು ಒಪ್ಪಿಕೊಂಡಂತೆಯೇ ಎಂದು ಹೇಳಿದರು.

ಶಿಕ್ಷಣದ ಕುರಿತು ಮಾತನಾಡಿ, ಶಿಕ್ಷಣದ ಉದ್ದೇಶ ಕೇವಲ ಉದ್ಯೋಗ ಪಡೆಯುವುದಲ್ಲ. ಉತ್ತಮ ವ್ಯಕ್ತಿತ್ವ ಮತ್ತು ಮೌಲ್ಯಗಳನ್ನು ಬೆಳೆಸುವುದೂ ಆಗಿರಬೇಕು ಎಂದು ಅಭಿಪ್ರಾಯಪಟ್ಟರು.

ಮೌಲ್ಯಾಧಾರಿತ ಶಿಕ್ಷಣವು ಸರಿ-ತಪ್ಪುಗಳ ನಡುವಿನ ವ್ಯತ್ಯಾಸವನ್ನು ಅರಿಯಲು ಸಹಾಯ ಮಾಡುತ್ತದೆ. ಈ ಮೌಲ್ಯಗಳು ಕೇವಲ ಪಠ್ಯಪುಸ್ತಕಗಳಿಂದ ಮಾತ್ರವಲ್ಲ, ಶಿಕ್ಷಕರ ನಡವಳಿಕೆ ಮತ್ತು ಅವರು ವಿದ್ಯಾರ್ಥಿಗಳಿಗೆ ನೀಡುವ ಸಂಸ್ಕಾರಗಳಿಂದಲೂ ರೂಪುಗೊಳ್ಳುತ್ತವೆ. ಶಿಕ್ಷಣದ ಅಂತಿಮ ಗುರಿ ಸಮಾಜದ ಒಳಿತಿಗಾಗಿ ಬದುಕುವ ಉತ್ತಮ ವ್ಯಕ್ತಿಗಳನ್ನು ರೂಪಿಸುವುದೇ ಆಗಿದೆ ಎಂದು ತಿಳಿಸಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಬೆಂಗಳೂರು ದಕ್ಷಿಣ ತಾಲ್ಲೂಕಿನಲ್ಲಿ ಭಾರೀ ದುರಂತ: ಕಲ್ಲು ಕ್ವಾರಿಯಲ್ಲಿ ಬಂಡೆ ಕುಸಿದು 7 ಕಾರ್ಮಿಕರು ಸಾವು

''ಲೋ-ವೇಜ್ ಫಾರಿನರ್ಸ್ ಬೇಡ'' ಎಂದ ಜೆಡಿ ವ್ಯಾನ್ಸ್: 'ನಿಮ್ಮ ಹಿಂದೂ ಪತ್ನಿಯೂ ವಿದೇಶಿಯಲ್ಲವೇ?' ಉಷಾ ವ್ಯಾನ್ಸ್ ಹಿನ್ನೆಲೆ ಹಿಡಿದು ನೆಟ್ಟಿಗರ ಹಿಗ್ಗಾಮುಗ್ಗಾ ಟ್ರೋಲ್..!

'ಪನಾಮ ಕಾಲುವೆ ಬಿಟ್ಟುಕೊಟ್ಟಿದ್ದು ದೊಡ್ಡ ಮೂರ್ಖತನದ ನಿರ್ಧಾರ': ಚೀನಾ ಕಬಳಿಸಲು ಯತ್ನಿಸುತ್ತಿದೆ; ಟ್ರಂಪ್

'ಗುರುದಕ್ಷಿಣೆಯೇ ನಮ್ಮ ಆದಾಯ, ಪ್ರತಿಯೊಂದು ರೂಪಾಯಿಗೂ ಲೆಕ್ಕವಿದೆ', ನಮಗೆ ನೋಂದಣಿಯ ಅಗತ್ಯವಿಲ್ಲ: ಪ್ರಿಯಾಂಕ್ ಖರ್ಗೆಗೆ RSS ತಿರುಗೇಟು

Hindi Imposition: BEL ಸರ್ಕಲ್‌ನಲ್ಲಿ ಹಿಂದಿ ನಾಮಫಲಕ ಕಿತ್ತೆಸೆದ ಕರವೇ ಕಾರ್ಯಕರ್ತರು; FIR ದಾಖಲು