ಬಿಜೆಪಿ ನಾಯಕಿ ನಾಜಿಯಾ ಇಲಾಹಿ ಖಾನ್ 
ದೇಶ

ಇದೆಂಥಾ ಲವ್! ಹಿಂದು ಮಹಿಳೆಯರು ಬೇಕು, ಆದ್ರೆ ಮತಾಂತರ ಯಾಕೆ ಆಗಿಲ್ಲ, ನಟ ಆಮೀರ್ ಖಾನ್ ವಿರುದ್ಧ ಮುಸ್ಲಿಂ ಲೀಡರ್ ಕಿಡಿ, Video

ಬಿಜೆಪಿ ನಾಯಕಿ ನಾಜಿಯಾ ಇಲಾಹಿ ಖಾನ್, ಆಮೀರ್ ಖಾನ್ ವೈಯಕ್ತಿಕ ಜೀವನ ಮತ್ತು ಹಿಂದಿನ ವಿವಾಹಗಳ ಬಗ್ಗೆ ವಿವಾದಾತ್ಮಕ ಹೇಳಿಕೆಗಳನ್ನು ನೀಡಿದ್ದು, ಗಮನಾರ್ಹವಾಗಿ ಗಮನ ಸಳೆದಿದೆ.

ಬಾಲಿವುಡ್ ನಟ ಆಮೀರ್ ಖಾನ್ ಹಾಗೂ ಗೌರಿ ಸ್ಪ್ರಾಟ್ ಅವರ ವಿವಾಹವು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕ ಚರ್ಚೆಯನ್ನು ಹುಟ್ಟುಹಾಕಿದೆ. ಅಭಿನಂದನಾ ಸಂದೇಶಗಳಿಂದ ಹಿಡಿದು ಟೀಕೆಗಳವರೆಗೆ ಪ್ರತಿಕ್ರಿಯೆಗಳು ಬಂದಿವೆ.

ಈ ಚರ್ಚೆಯ ನಡುವೆ ಬಿಜೆಪಿ ನಾಯಕಿ ನಾಜಿಯಾ ಇಲಾಹಿ ಖಾನ್, ಆಮೀರ್ ಖಾನ್ ವೈಯಕ್ತಿಕ ಜೀವನ ಮತ್ತು ಹಿಂದಿನ ವಿವಾಹಗಳ ಬಗ್ಗೆ ವಿವಾದಾತ್ಮಕ ಹೇಳಿಕೆಗಳನ್ನು ನೀಡಿದ್ದು, ಗಮನಾರ್ಹವಾಗಿ ಗಮನ ಸಳೆದಿದೆ.

ಆಮೀರ್ ಖಾನ್ ನ ಮೂವರು ಪತ್ನಿಯರು ಹಿಂದೂಗಳೇ ಆಗಿದ್ದಾರೆ ಯಾಕೆ ಎಂದು ನಾಜಿಯಾ ಇಲಾಹಿ ಖಾನ್ ಪ್ರಶ್ನಿಸಿದ್ದಾರೆ. ಆಮೀರ್ ಉದ್ದೇಶಪೂರ್ವಕವಾಗಿಯೇ ಮದುವೆಗೆ ಹಿಂದೂ ಮಹಿಳೆಯರನ್ನು ಆಯ್ಕೆ ಮಾಡಿಕೊಂಡಿದ್ದು, ಮಕ್ಕಳನ್ನು ಪಡೆದ ನಂತರ ಅವರಿಗೆ ವಿಚ್ಛೇದನ ನೀಡಿದ್ದಾರೆ ಎಂದು ಆರೋಪಿಸಿದ್ದಾರೆ. ಹಿಂದೂ ಮಹಿಳೆಯರನ್ನು ಮದುವೆಯಾಗಲು ಬಯಸುವ ಆಮೀರ್ ಖಾನ್, ಹಿಂದೂ ಧರ್ಮಕ್ಕೆ ಯಾಕೆ ಮತಾಂತರಗೊಂಡಿಲ್ಲ ಎಂದು ಅವರು ಪ್ರಶ್ನಿಸಿದ್ದಾರೆ.

ಆಮೀರ್ ಖಾನ್ ಮೊದಲ ಪತ್ನಿ ಹಿಂದೂ, ಅವರ ಎರಡನೇ ಪತ್ನಿ ಹಿಂದೂ, ಈಗ ಮೂರನೇ ಹೆಂಡತಿ ಕೂಡಾ ಹಿಂದೂ ಆಗಿದ್ದಾರೆ. ಮಗು ಪಡೆದ ನಂತರ ಆಕೆಗೂ ವಿಚ್ಚೇದನ ನೀಡಲಿದ್ದಾರೆ. ಅವರು ಎಂತಹ ದೊಡ್ಡ ನಟ, ಅವರು ದೇಶ- ವಿದೇಶದಾದ್ಯಂತ ಪ್ರಯಾಣಿಸುತ್ತಿರುತ್ತಾರೆ. ಮುಸ್ಲಿ ರಾಷ್ಟ್ರಗಳಿಗೂ ಭೇಟಿ ನೀಡ್ತಾ ಇರ್ತಾರೆ. ಮೂರು ಬಾರಿಯೂ ಹಿಂದೂ ಮಹಿಳೆಯರ ಪ್ರೀತಿಯಲ್ಲಿ ಬಿದಿದ್ದಾರೆ. ಆದರೆ ಒಂದು ಬಾರಿಯೂ ಮುಸ್ಲಿಂ ಮಹಿಳೆಯರ ಪ್ರೀತಿಯಲ್ಲಿ ಬಿದ್ದಿಲ್ಲ. ಇದೆಂಥಾ ಲವ್ ಅಂತಾ ಕಿಡಿಕಾರಿದ್ದಾರೆ.

ಆಮೀರ್ ಖಾನ್ ಹಿಂದೂ ಮಹಿಳೆಯರನ್ನು ಪ್ರೀತಿಸಿ, ಅವರನ್ನು ಮದುವೆಯಾಗಿ, ನಂತರ ಮಗುವನ್ನು ಪಡೆದು ಅವರಿಗೆ ವಿಚ್ಛೇದನ ನೀಡಲು ಬಯಸುವುದು ಉದ್ದೇಶಪೂರ್ವಕವೆಂದು ತೋರುತ್ತದೆ. ಅವರಿಗೆ ಹಿಂದೂ ಮಹಿಳೆಯರೇ ಇಷ್ಟ ಎಂದು ತೋರುತ್ತದೆ. ಹಾಗಾದ್ರೆ ಯಾಕೆ ಹಿಂದೂ ಆಗುವುದಿಲ್ಲ? ಎಂದು ಪ್ರಶ್ನಿಸಿದ್ದಾರೆ. ಈ ಹೇಳಿಕೆಗಳು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಚರ್ಚೆಗೆ ನಾಂದಿ ಹಾಡಿವೆ. ಇದು ನಟನ ವೈಯಕ್ತಿಕ ಜೀವನ ಮತ್ತು ಅವರ ಇತ್ತೀಚಿನ ವಿವಾಹದ ಬಗ್ಗೆ ಹೊಸ ಚರ್ಚೆಗೆ ಕಾರಣವಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಮಹಾರಾಷ್ಟ್ರದಲ್ಲಿ ವರುಣನ ಆರ್ಭಟ: ಭೂಕುಸಿತಕ್ಕೆ ಮುಂಬೈ-ಪುಣೆ ರೈಲು ಸಂಚಾರ ಸ್ಥಗಿತ; ಎಕ್ಸ್‌ಪ್ರೆಸ್‌ವೇ ಬಂದ್, ಸಾವಿರಾರು ಪ್ರಯಾಣಿಕರು ಪರದಾಟ..!

FIFA World Cup 2026: ಸೋಲಿನ ಆಘಾತದೊಂದಿಗೆ ಬ್ರೆಜಿಲ್ ನಿರ್ಗಮನ, ಅಂತಾರಾಷ್ಟ್ರೀಯ ಫುಟ್ ಬಾಲ್ ಗೆ ನೆಯ್ಮಾರ್ ಕಣ್ಣೀರ ವಿದಾಯ! Video

ಪೆಸಿಫಿಕ್ ಮಹಾಸಾಗರದಲ್ಲಿ ಪರಮಾಣು ಸಾಮರ್ಥ್ಯದ ಕ್ಷಿಪಣಿ ಪರೀಕ್ಷೆ ನಡೆಸಿದ ಚೀನಾ; ಜಪಾನ್-ನ್ಯೂಜಿಲೆಂಡ್‌ ತೀವ್ರ ಕಳವಳ..!

ಮುಂಬೈನಲ್ಲಿ ಮಳೆ ಅವಾಂತರ: ಮನ್ಖುರ್ದ್'ನಲ್ಲಿ 4 ಅಂತಸ್ತಿನ ಕಟ್ಟಡ ಕುಸಿತ; 6 ಮಂದಿ ಸಾವು, ಹಲವರು ಸಿಲುಕಿರುವ ಶಂಕೆ..!

ಹಿಜ್ಬುಲ್ಲಾ ವಿರುದ್ಧ ಹೋರಾಟ: ಅಮೆರಿಕಾ ವಿರುದ್ಧವೇ ತಿರುಗಿಬಿದ್ದ ಇಸ್ರೇಲ್; ನಾವು ಒಂಟಿಯಲ್ಲ, ನಮ್ಮ ಹಿಂದೆ 140 ಕೋಟಿ ಮಂದಿ ಭಾರತೀಯರಿದ್ದಾರೆ- JD ವ್ಯಾನ್ಸ್‌ಗೆ ನೆತನ್ಯಾಹು ತಿರುಗೇಟು