ಜನರ ರಕ್ಷಣೆಯ ದೃಶ್ಯಗಳು Online Desk
ದೇಶ

ನೋಯ್ಡಾದಲ್ಲಿ ಭೀಕರ ಅಗ್ನಿ ದುರಂತ; 2 ಸಾವು, 100 ಜನರ ರಕ್ಷಣೆ

ನೋಯ್ಡಾದ ಮಾಮುರಾ ಗ್ರಾಮದ 5 ಅಂತಸ್ತಿನ ವಸತಿ ಕಟ್ಟಡದಲ್ಲಿ ಭೀಕರ ಅಗ್ನಿ ದುರಂತದಲ್ಲಿ 2 ಸಾವನ್ನಪ್ಪಿದ್ದಾರೆ. ಜೊತೆಗೆ ಸುಮಾರು 50 ಕುಟುಂಬಗಳ 100ಕ್ಕೂ ಹೆಚ್ಚು ಜನರನ್ನು ರಕ್ಷಿಸಲಾಗಿದೆ ಎಂದು ವರದಿಯಾಗಿದೆ.

ನೋಯ್ಡಾ (ಉತ್ತರ ಪ್ರದೇಶ): ನೋಯ್ಡಾದ ಮಾಮುರಾ ಗ್ರಾಮದ 5 ಅಂತಸ್ತಿನ ವಸತಿ ಕಟ್ಟಡದಲ್ಲಿ ಉಂಟಾದ ಭೀಕರ ಅಗ್ನಿ ದುರಂತದಲ್ಲಿ 2 ಸಾವನ್ನಪ್ಪಿದ್ದಾರೆ. ಜೊತೆಗೆ ಸುಮಾರು 50 ಕುಟುಂಬಗಳ 100ಕ್ಕೂ ಹೆಚ್ಚು ಜನರನ್ನು ರಕ್ಷಿಸಲಾಗಿದೆ ಎಂದು ವರದಿಯಾಗಿದೆ.

ಸ್ಪೋಟಕ್ಕೆ ಕಾರಣವೇನು?

ವಸತಿ ಕಟ್ಟಡದ ಕೆಳಗೆ ಚಾರ್ಜ್ ಮಾಡಲಾಗುತ್ತಿದ್ದ ಎಲೆಕ್ಟ್ರಿಕ್ ವಾಹನದ ಸ್ಕೂಟರ್ ಬ್ಯಾಟರಿ ಸ್ಫೋಟಗೊಂಡಿದ್ದೇ ಈ ದುರಂತಕ್ಕೆ ಪ್ರಾಥಮಿಕ ಕಾರಣ ಎಂದು ನೋಯ್ಡಾ ಪೊಲೀಸರ ತನಿಖೆಯಿಂದ ತಿಳಿದುಬಂದಿದೆ. ಇನ್ನು ಈ EV ಸ್ಪೋಟದ ಕಾರಣದಿಂದ ಹೊತ್ತಿಕೊಂಡ ಬೆಂಕಿಯ ಕಿಡಿಯು ಪಕ್ಕಾದಲ್ಲೇ ಪಾರ್ಕ್ ಮಾಡಲಾದ ಪೆಟ್ರೋಲ್ ಗಡಿಗಳಿಗೂ ವ್ಯಾಪಿಸಿದ್ದು, ಇದರಿಂದಾಗಿ ದೊಡ್ಡ ಮಟ್ಟದಲ್ಲಿ ಹೊಗೆ ಆವರಿಸಿದೆ.

ಮುಂದುವರೆದು, ಬೆಂಕಿಯಿಂದ ಉಂಟಾದ ಹೊಗೆಯ ಪರಿಣಾಮ ಓರ್ವ ಪುರುಷ ಹಾಗೂ ಓರ್ವ ಮಹಿಳೆ ಇಬ್ಬರು ಉಸಿರಾಡಲು ಸಾಧ್ಯವಾಗದೆ ಸಾವನ್ನಪ್ಪಿದ್ದಾರೆ. ಇನ್ನ ಆ ಇಬ್ಬರನು ಆಸ್ಪತ್ರೆಗೆ ಸಾಗಿಸುವಷ್ಟರಲ್ಲೇ ಎಂದು ವೈದ್ಯರು ತಿಳಿಸಿದ್ದಾರೆ. ಇನ್ನುಳಿದಂತೆ ಒಂದು ಮಗು ಮತ್ತು ಯುವತಿಗೆ ಗಂಭೀರ ಸುಟ್ಟ ಗಾಯಗಳಾಗಿವೆ. ಅದರಂತೆ, ಅಗ್ನಿಶಾಮಕ ದಳದ ಸಿಬ್ಬಂದಿ ಸುರಕ್ಷಿತ ಕಾರ್ಯ ಮುಂದುವರೆಸಿದ್ದಾರೆ.

ಏತನ್ಮಧ್ಯೆ, ಘಟನೆಗೆ ಸಂಬಂಧಿಸಿದಂತೆ ನಿರ್ಲಕ್ಷ್ಯದ ಆರೋಪದ ಮೇಲೆ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡು, ಕಟ್ಟಡದ ಮಾಲೀಕನನ್ನು ಬಂಧಿಸಿದ್ದಾರೆ. ಕಟ್ಟಡದಲ್ಲಿ ಕಡ್ಡಾಯ ಅಗ್ನಿಶಾಮಕ ಸುರಕ್ಷತಾ ನಿಯಮಗಳನ್ನು ಪಾಲಿಸಲಾಗಿದೆಯೇ ಮತ್ತು ಪಾರ್ಕಿಂಗ್ ಜಾಗದಲ್ಲಿ ಇವಿ ಚಾರ್ಜ್ ಮಾಡಲು ಅನುಮತಿ ಇತ್ತೇ ಎಂಬ ಬಗ್ಗೆ ತನಿಖೆ ನಡೆಯುತ್ತಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನನ್ನನ್ನು ಜೈಲಿಗೆ ಕಳುಹಿಸೋ ಪ್ರಯತ್ನ ಮಾಡ್ತಾ ಇದ್ದೀಯಾ ಕುಮಾರಣ್ಣ, ಒಳ್ಳೆದಾಗ್ಲಿ, ನಾನು ಎಲ್ಲದಕ್ಕೂ ರೆಡಿ ಇದ್ದೇನೆ': HDK ವಿರುದ್ಧ CM ಡಿ.ಕೆ ಶಿವಕುಮಾರ್ ವಾಗ್ದಾಳಿ; Video

'ಅಪಾರ್ಟ್ ಮೆಂಟ್ ಹಸ್ತಾಂತರ ವೇಳೆ ಅದರ ಸಂಪೂರ್ಣ ಹಕ್ಕು ಮಾಲೀಕರಿಗೆ ಸಿಗಬೇಕು; ಮಾಲೀಕತ್ವ ರಕ್ಷಣೆಗೆ ಮಸೂದೆ ಜಾರಿ': CM ಡಿ.ಕೆ ಶಿವಕುಮಾರ್; Video

SIR ಡ್ಯೂಟಿ ನಿರ್ವಹಿಸುತ್ತಿರುವ BLO ಗಳಿಗೆ ಗುಡ್ ನ್ಯೂಸ್: ಚುನಾವಣಾ ಆಯೋಗದಿಂದ 6 ಸಾವಿರ ರೂ. ಗೌರವಧನ ಘೋಷಣೆ!

'ನ್ಯಾಯ ಎಲ್ಲಿದೆ?': RCB ವಿಜಯೋತ್ಸವದ ವೇಳೆ ಕಾಲ್ತುಳಿತ ಪ್ರಕರಣದಲ್ಲಿ ಐಪಿಎಸ್ ಅಧಿಕಾರಿಗಳಿಗೆ ಕ್ಲೀನ್ ಚಿಟ್; ಆರ್ ಅಶೋಕ ಟೀಕೆ

NDAಯತ್ತ ಶರದ್ ಪವಾರ್ ಚಿತ್ತ? "ಆಪರೇಷನ್ ಘಡಿ"ಗೆ ಫಡ್ನವೀಸ್ ಮಾಸ್ಟರ್ ಪ್ಲಾನ್!