ಅಶ್ಲೀಲ ವರ್ತನೆ ತೋರಿದ ಯುವಜೋಡಿ ಚಳಿ ಬಿಡಿಸಿದ ಕಾರು ಚಾಲಕ 
ದೇಶ

'ನಾಚಿಕೆ ಆಗಲ್ವಾ.. ರೂಂ ಬುಕ್ ಮಾಡಿಕೊಡ್ಲಾ..': ಕ್ಯಾಬ್ ನಲ್ಲಿ ಅಶ್ಲೀಲ ವರ್ತನೆ; ಯುವ ಜೋಡಿ ಚಳಿ ಬಿಡಿಸಿದ ಚಾಲಕ! Video

ವೈರಲ್ ಆಗಿರುವ ವಿಡಿಯೋದಲ್ಲಿರುವಂತೆ ಯುವಜೋಡಿಯೊಂದು ತಮ್ಮ ಪ್ರಯಾಣಕ್ಕೆ ಕ್ಯಾಬ್ ಬುಕ್ ಮಾಡಿಕೊಂಡಿದ್ದು, ಪ್ರಯಾಣದ ವೇಳೆ ಹಿಂಬದಿ ಸೀಟಿನಲ್ಲಿ ಅಸಭ್ಯವಾಗಿ ವರ್ತಿಸಲು ಆರಂಭಿಸಿದೆ.

ನವದೆಹಲಿ: ಕ್ಯಾಬ್ ಬುಕ್ ಮಾಡಿ ಪ್ರಯಾಣದ ವೇಳೆ ಹಿಂಬದಿ ಸೀಟಿನಲ್ಲಿ ಸರಸ-ಸಲ್ಲಾಪದಲ್ಲಿ ತೊಡಗಿದ್ದ ಯುವಜೋಡಿಗೆ ಕಾರು ಚಾಲಕ ಚಳಿ ಬಿಡಿಸಿರುವ ವಿಡಿಯೋವೊಂದು ವ್ಯಾಪಕ ವೈರಲ್ ಆಗುತ್ತಿದೆ.

ವೈರಲ್ ಆಗಿರುವ ವಿಡಿಯೋದಲ್ಲಿರುವಂತೆ ಯುವಜೋಡಿಯೊಂದು ತಮ್ಮ ಪ್ರಯಾಣಕ್ಕೆ ಕ್ಯಾಬ್ ಬುಕ್ ಮಾಡಿಕೊಂಡಿದ್ದು, ಪ್ರಯಾಣದ ವೇಳೆ ಹಿಂಬದಿ ಸೀಟಿನಲ್ಲಿ ಅಸಭ್ಯವಾಗಿ ವರ್ತಿಸಲು ಆರಂಭಿಸಿದೆ.

ತನ್ನ ತೊಡೆ ಮೇಲೆ ಮಲಗಿದ ಯುವತಿ ಜೊತೆ ಅಶ್ಲೀಲವಾಗಿ ಮಾತನಾಡುತ್ತಿರುವುದು ವಿಡಿಯೋದಲ್ಲಿ ದಾಖಲಾಗಿದೆ.

ಈ ವೇಳೆ ಒಂದಷ್ಟು ಹೊತ್ತ ಸುಮ್ಮನಿದ್ದ ಚಾಲಕ ಯುವಜೋಡಿಯ ಅಸಭ್ಯ ವರ್ತನೆ ಕಂಡು ಆಕ್ರೋಶಗೊಂಡಿದ್ದಾನೆ.

ಕಾರು ಚಾಲನೆಯಲ್ಲಿರುವಂತೆಯೇ ಯುವಜೋಡಿಗೆ ಫುಲ್ ಕ್ಲಾಸ್ ತೆಗೆದುಕೊಂಡಿದ್ದು, ರೂಂ ಬುಕ್ ಮಾಡಿಕೊಡ್ಲಾ..? ನಾಚಿಕೆಯಾಗಲ್ವಾ.. ಸಾರ್ವಜನಿಕವಾಗಿ ಈ ರೀತಿ ವರ್ತಿಸುತ್ತಿದ್ದೀರಿ ಎಂದು ಕಿಡಿಕಾರಿದ್ದಾನೆ.

"ನಾನು ನಿಮಗಾಗಿ ಹೊಟೆಲ್ ರೂಂ ಬುಕ್ ಮಾಡಬೇಕೇ?.. ನಿಮ್ಮಂತಹವರಿಗೆ ಸ್ವಲ್ಪ ಕೂಡ ನಾಚಿಕೆಯಾಗಲ್ವಾ? ಇದಕ್ಕೇ ಕ್ಯಾಬ್ ಬುಕ್ ಮಾಡಿಕೊಂಡ್ರಾ? ನಗರದಲ್ಲಿ ಇದಕ್ಕೇ ಅಂತಾನೆ ಹೊಟೆಲ್ ಮತ್ತು ರೂಮ್ ಗಳಿವೆ. ಅದನ್ನು ಆಯ್ಕೆ ಮಾಡಿಕೊಳ್ಳಿ.. ಕ್ಯಾಬ್ ನಲ್ಲಿ ಸಾರ್ವಜನಿಕ ಪ್ರದೇಶಗಳಲ್ಲಿ ಬೇಡ. ನಾಚಿಕೆ ಅನ್ನೋ ಪದವೇ ಸತ್ತು ಹೋಗಿದೆ' ಎಂದು ಕಿಡಿಕಾರಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಪರ-ವಿರೋಧ ಚರ್ಚೆ

ಇನ್ನು ಈ ವಿಡಿಯೋ ವೈರಲ್ ಆಗುತ್ತಲೇ ಸಾಮಾಜಿಕ ಜಾಲತಾಣದಲ್ಲಿ ಇದರ ಪರ-ವಿರೋಧ ಚರ್ಚೆಗಳು ನಡೆಯುತ್ತಿವೆ. ಕೆಲವರು ಕ್ಯಾಬ್ ಚಾಲಕನಿಗೆ ಬೆಂಬಲ ಸೂಚಿಸಿದರೆ, ಮತ್ತೆ ಕೆಲವರು ಕಾಬ್ ಚಾಲಕನ ವರ್ತನೆಯನ್ನೇ ಪ್ರಶ್ನಿಸಿದ್ದಾರೆ.

ಸಾರ್ವಜನಿಕ ಸ್ಥಳಗಳಲ್ಲಿ ಅಥವಾ ಸಾರ್ವಜನಿಕ ಸಾರಿಗೆಯಲ್ಲಿ ಇಂತಹ ನಡವಳಿಕೆ ಎಷ್ಟು ಸೂಕ್ತವಾಗಿದೆ ಎಂದು ಓರ್ವ ಬಳಕೆದಾರ ಟ್ವೀಟ್ ಮಾಡಿದರೆ, ಮತ್ತೋರ್ವ ಬಳಕೆದಾಕ ಚಾಲಕ ವೀಡಿಯೊವನ್ನು ರೆಕಾರ್ಡ್ ಮಾಡುವುದು ಸರಿಯೇ? ಅವರಿಗೂ ಖಾಸಗಿತನದ ಹಕ್ಕಿದೆ ಎಂದು ಪ್ರತಿಪಾದಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸೆ. 9ರಂದು ಗೃಹ ಸಚಿವಾಲಯದೊಂದಿಗೆ ಮಾತುಕತೆಗೆ ಮುನ್ನ ಹೋರಾಟ ತೀವ್ರ: ಲಡಾಖ್ ಉನ್ನತ ಮಂಡಳಿ ಎಚ್ಚರಿಕೆ

'ಜನರ ಬಳಿಗೇ ಸರ್ಕಾರ, ದೊರೆ ಎನ್ನಬೇಡಿ, ಸೇವಕ ಎನ್ನಿ': ಕರ್ನಾಟಕದಲ್ಲಿ ‘ಪ್ರಜಾಸೇವಾ ಅಭಿಯಾನ’ಕ್ಕೆ CM ಡಿಕೆ ಶಿವಕುಮಾರ್ ಚಾಲನೆ

ಹಲ್ಲೆ ಆರೋಪ: ಒಂದು ದಿನದ ಪೊಲೀಸ್ ಕಸ್ಟಡಿಗೆ ಹಿಂದುತ್ವ ಇನ್ ಫ್ಲ್ಯುಯೆನ್ಸರ್ ಸ್ವತಂತ್ರ ಭಾರದ್ವಾಜ್‌!

‘ನಿರ್ಲಕ್ಷ್ಯ ಮಾಡಿದ್ರೆ ಕ್ರಮ ಖಚಿತ’: ನಗರದಲ್ಲಿ ಸಚಿವ ಕೃಷ್ಣ ಬೈರೇಗೌಡ ದಿಢೀರ್ ತಪಾಸಣೆ, ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ!

Hanuman Ansh: ಥಿಯೇಟರ್ ಗಳಲ್ಲಿ ಭಕ್ತಿಯ ಅಲೆ, ಚಪ್ಪಲ್ಲಿ ಬಿಚ್ಚಿಟ್ಟು, ಹನುಮಾನ್ ಚಾಲೀಸಾ ಪಠಿಸಿದ ಪ್ರೇಕ್ಷಕರು! Video ವೈರಲ್