ಫೈಟರ್‌ ಜೆಟ್‌  
ದೇಶ

5ನೇ ತಲೆಮಾರಿನ ಫೈಟರ್‌ ಜೆಟ್‌ ಹುಡುಕಾಟದಲ್ಲಿರುವ ಭಾರತಕ್ಕೆ ಪುಟಿನ್‌ ಬಿಗ್ ಆಫರ್; Su-57 ಸ್ಟೆಲ್ತ್ ಜಂಟಿ ಉತ್ಪಾದನೆ!

ಇದು ದೇಶೀಯವಾಗಿ ನಿರ್ಮಿಸುವ ಐದನೇ ತಲೆಮಾರಿನ ಯುದ್ಧ ವಿಮಾನವನ್ನು ಅಭಿವೃದ್ಧಿಪಡಿಸುವ ಗುರಿಯನ್ನು ಹೊಂದಿರುವ ಮಹತ್ವಾಕಾಂಕ್ಷೆಯ ಸ್ವದೇಶಿ ಯೋಜನೆಯಾಗಿದೆ.

ನವದೆಹಲಿ: 5ನೇ ತಲೆಮಾರಿನ ಯುದ್ಧ ವಿಮಾನಗಳನ್ನು ದೇಶೀಯವಾಗಿ ನಿರ್ಮಿಸಲು ಮುಂದಾಗಿರುವ ಭಾರತಕ್ಕೆ, ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಐದನೇ ತಲೆಮಾರಿನ ಸ್ಟೆಲ್ತ್ ಫೈಟರ್ ಸುಖೋಯ್ ಸು-57 ನೀಡುವುದಾಗಿ ಆಫರ್ ನೀಡಿದ್ದಾರೆ. ಭಾರತದಲ್ಲಿ ಈ ಯುದ್ಧ ವಿಮಾನವನ್ನು ಜಂಟಿಯಾಗಿ ಉತ್ಪಾದನೆ ಮಾಡುವ ಪುಟಿನ್ ಪ್ರಸ್ತಾಪ ಉಭಯ ದೇಶಗಳ ನಡುವಿನ ದೀರ್ಘಕಾಲದ ಕಾರ್ಯತಂತ್ರದ ಪಾಲುದಾರಿಕೆಯನ್ನು ಒತ್ತಿಹೇಳುತ್ತದೆ.

ಸುಖೋಯ್ Su-57 5ನೇ ತಲೆಮಾರಿನ ಸ್ಟೆಲ್ತ್‌ ಯುದ್ಧವಿಮಾನಕ್ಕೆ(Fighter Jet) ಸಂಬಂಧಿಸಿದಂತೆ ಭರ್ಜರಿ ಆಫರ್‌ವೊಂದನ್ನ ನೀಡಿದ್ದಾರೆ.

ಈ ಹಿನ್ನೆಲೆಯಲ್ಲಿ, ಭಾರತವು ಸುಧಾರಿತ ಮಲ್ಟಿರೋಲ್ ಯುದ್ಧ ವಿಮಾನ(AMCA) ಯೋಜನೆಯನ್ನು ಪ್ರಾರಂಭಿಸಿದೆ. ಇದು ದೇಶೀಯವಾಗಿ ನಿರ್ಮಿಸುವ ಐದನೇ ತಲೆಮಾರಿನ ಯುದ್ಧ ವಿಮಾನವನ್ನು ಅಭಿವೃದ್ಧಿಪಡಿಸುವ ಗುರಿಯನ್ನು ಹೊಂದಿರುವ ಮಹತ್ವಾಕಾಂಕ್ಷೆಯ ಸ್ವದೇಶಿ ಯೋಜನೆಯಾಗಿದೆ.

ಗುರುವಾರ ರಾತ್ರಿ ಪ್ರಮುಖ ಜಾಗತಿಕ ಸುದ್ದಿ ಸಂಸ್ಥೆಗಳ ಮುಖ್ಯಸ್ಥರೊಂದಿಗೆ ನಡೆದ ಸಂವಾದದಲ್ಲಿ ಪುಟಿನ್, ಭಾರತ-ರಷ್ಯಾ ರಕ್ಷಣೆ ಮತ್ತು ಮಿಲಿಟರಿ ಸಂಬಂಧಗಳ ವಿವಿಧ ಅಂಶಗಳನ್ನು ಪರಿಶೀಲಿಸಿದರು ಮತ್ತು ಮಾಸ್ಕೋ ಇನ್ನೂ Su-57 ವಿಮಾನ ಉತ್ಪಾದನಾ ಯೋಜನೆಯಲ್ಲಿ ನವದೆಹಲಿಯನ್ನು ತೊಡಗಿಸಿಕೊಳ್ಳಲು ಉತ್ಸುಕವಾಗಿದೆ ಎಂದು ಹೇಳಿದರು.

ಇದರೊಂದಿಗೆ ಭಾರತದೊಂದಿಗೆ ಜಂಟಿಯಾಗಿ ಸುಖೋಯ್‌ Su-57 ಅನ್ನು ಅಭಿವೃದ್ಧಿಪಡಿಸಲು ರಷ್ಯಾ (Russia) ಸಿದ್ಧವಾಗಿದೆ. ನಿರ್ಣಾಯಕ ತಂತ್ರಜ್ಞಾನಗಳನ್ನು ಹಂಚಿಕೊಳ್ಳಲು ಸಿದ್ಧ ಎಂದು ಪುಟಿನ್ ಹೇಳಿದ್ದಾರೆ.

ಇದರಲ್ಲಿ ನಮಗೆ ಯಾವುದೇ ಸಮಸ್ಯೆಗಳಿಲ್ಲ ಎಂದು ಪುಟಿನ್ ಹೇಳಿದ್ದಾರೆ. ಇದು ಭಾರತದೊಂದಿಗೆ ಇರುವ ರಕ್ಷಣಾ ಸಂಬಂಧಗಳನ್ನ ಇನ್ನಷ್ಟು ಬಲಪಡಿಸಲು ರಷ್ಯಾದ ಇಚ್ಛೆಯನ್ನು ಸೂಚಿಸುತ್ತದೆ.

ಸದ್ಯ ಭಾರತದ 5ನೇ ತಲೆಮಾರಿನ ಸುಧಾರಿತ ಮಧ್ಯಮ ಶ್ರೇಣಿಯ ಯುದ್ಧ ವಿಮಾನಗಳನ್ನು (ಎಎಂಸಿಎ) ತಯಾರಿಸುವ ಯೋಜನೆ ಅಭಿವೃದ್ಧಿ ಹಂತದಲ್ಲಿದೆ. ಫೈಟರ್‌ ಜೆಟ್‌ಗಳನ್ನ ದೇಶೀಯವಾಗಿ ನಿರ್ಮಿಸುವ 15 ಸಾವಿರ ಕೋಟಿ ರೂ. ಮೊತ್ತದ ಯೋಜನೆ ಇದಾಗಿದೆ. ಈ ಯೋಜನೆಯನ್ವಯ 2030 ರ ದಶಕದ ಮಧ್ಯಭಾಗದಲ್ಲಿ ಸೇವೆಗೆ ಪ್ರಸ್ತುತಪಡಿಸುವ ಸಾಧ್ಯತೆಗಳಿವೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಡಿ ಕೆ ಶಿವಕುಮಾರ್ ಸರ್ಕಾರದ ಮೊದಲ ವಿಕೆಟ್ ಪತನ: ಸಚಿವ ಸ್ಥಾನಕ್ಕೆ ರಾಮಲಿಂಗಾ ರೆಡ್ಡಿ ರಾಜೀನಾಮೆ-Video

ಮಣಿಪುರದಲ್ಲಿ ಮತ್ತೆ ಭುಗಿಲೆದ್ದ ಹಿಂಸಾಚಾರ: ಮೂವರು ಕುಕಿ ಗ್ರಾಮಸ್ಥರ ಹತ್ಯೆ; ಏಳು ಮನೆಗಳಿಗೆ ಬೆಂಕಿ!

ಹಿಜಾಬ್ ವಿರೋಧಿಸಿ ಪ್ರತಿಭಟನೆ: ವಿದ್ಯಾರ್ಥಿಗಳಿಗೆ ಕೇಸರಿ ಶಾಲು ವಿತರಿಸಲು ಯತ್ನಿಸಿದ ಯತ್ನಾಳ್, ಬೆಂಬಲಿಗರು ಪೊಲೀಸ್ ವಶಕ್ಕೆ

ನಾಲ್ಕು ಪವರ್ ಸೆಂಟರ್ ಗಳ ನಡುವೆ ಕಾಂಗ್ರೆಸ್ ಒದ್ದಾಟ! ವಿಧಾನಸಭೆ ವಿಸರ್ಜಿಸಿ ಚುನಾವಣೆ ಎದುರಿಸಿ- CM ಡಿಕೆಶಿಗೆ ಬಿ.ವೈ. ವಿಜಯೇಂದ್ರ ಸವಾಲು!

ಅಣ್ಣಾಮಲೈ ರಾಜೀನಾಮೆ ಕೊನೆಗೂ ಅಂಗೀಕಾರ: ಆರು ವರ್ಷಗಳ ಬಿಜೆಪಿ ಸಂಬಂಧಕ್ಕೆ ತಿಲಾಂಜಲಿ!

SCROLL FOR NEXT