ಉದ್ಧವ್ ಠಾಕ್ರೆ, ಅಭಿಜೀತ್ ದಿಪ್ಕಿ 
ದೇಶ

ಕೇಂದ್ರ ಸರ್ಕಾರ 'ಕಾಕ್ರೋಚ್ ಜನತಾ ಪಾರ್ಟಿ' ಅನ್ನು ಕಡೆಗಣಿಸಬಾರದು- ಉದ್ಧವ್ ಠಾಕ್ರೆ!

ನೀಟ್ ಪತ್ರಿಕೆ ಸೋರಿಕೆ ಲಕ್ಷಾಂತರ ಯುವಕರ ಜೀವನವನ್ನು ನಾಶಮಾಡಿದೆ. ಹೀಗಾಗಿ ಅವರು ಪ್ರತಿಭಟನೆ ನಡೆಸುತ್ತಿದ್ದಾರೆ ಎಂದು ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಹೇಳಿದ್ದಾರೆ.

ಮುಂಬೈ: ಪರೀಕ್ಷೆಗೆ ಸಂಬಂಧಿಸಿದ ಲೋಪಗಳಿಗಾಗಿ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಒತ್ತಾಯಿಸಿ ನವದೆಹಲಿಯ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸುತ್ತಿರುವ ಯುವಕರ ಮಾತನ್ನು ಕೇಂದ್ರ ಸರ್ಕಾರ ಕೇಳಬೇಕು ಮತ್ತು ಅವರನ್ನು ಕಡೆಗಣಿಸಬಾರದು ಎಂದು ಶಿವಸೇನೆ-ಯುಬಿಟಿ ಮುಖ್ಯಸ್ಥ ಉದ್ಧವ್ ಠಾಕ್ರೆ ಶನಿವಾರ ಹೇಳಿದ್ದಾರೆ.

ಉದ್ಧವ್ ಠಾಕ್ರೆ ಅವರ ಸಂದೇಶವನ್ನು ಶಿವಸೇನೆ-ಯುಬಿಟಿ ನಾಯಕ ಸಂಜಯ್ ರಾವತ್, ತಮ್ಮ ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿದ್ದಾರೆ. ಯುವಕರು ದೇಶದ ಭವಿಷ್ಯ ಮತ್ತು ಅವರು ಸುಡುವ ಬಿಸಿಲಿನಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಅವರಿಗೆ ನ್ಯಾಯವನ್ನು ನಿರಾಕರಿಸುವುದು ಮತ್ತು ಅವರನ್ನು ಕಾಕ್ರೋಚ್ ಎಂದು ಸಂಬೋಧಿಸುವುದು ಅನುಚಿತ ಎಂದಿದ್ದಾರೆ.

ನೀಟ್ ಪತ್ರಿಕೆ ಸೋರಿಕೆ ಲಕ್ಷಾಂತರ ಯುವಕರ ಜೀವನವನ್ನು ನಾಶಮಾಡಿದೆ. ಹೀಗಾಗಿ ಅವರು ಪ್ರತಿಭಟನೆ ನಡೆಸುತ್ತಿದ್ದಾರೆ ಎಂದು ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಹೇಳಿದ್ದಾರೆ.

ಸರ್ಕಾರ ಯುವಕರ ಧ್ವನಿಯನ್ನು ಕೇಳಬೇಕು ಮತ್ತು ಕಾಕ್ರೋಚ್ ಜನತಾ ಪಾರ್ಟಿಯನ್ನು ಕಡೆಗಣಿಸಬಾರದು. ಜಂತರ್ ಮಂತರ್‌ನಲ್ಲಿ ಪ್ರತಿಭಟನಾಕಾರರು ನೀಡಿದ ಸೂಚನೆಯಾಗಿದೆ ಎಂದು ಠಾಕ್ರೆ ತಿಳಿಸಿದ್ದಾರೆ.

ಕಾಕ್ರೋಚ್ ಜನತಾ ಪಕ್ಷದ (CJP) ಬೆಂಬಲಿಗರು ಆಯೋಜಿಸಿದ್ದ ಶನಿವಾರ ರಾಷ್ಟ್ರ ರಾಜಧಾನಿಯ ಜಂತರ್ ಮಂತರ್‌ನಲ್ಲಿ ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದವರಲ್ಲಿ ಬಹುತೇಕ ಶಾಲಾ-ಕಾಲೇಜು ವಿದ್ಯಾರ್ಥಿಗಳು, ಸ್ಪರ್ಧಾತ್ಮಕ ಪರೀಕ್ಷೆಯ ಆಕಾಂಕ್ಷಿಗಳು ಮತ್ತು ಪೋಷಕರು ಇದ್ದರು.

ನೀಟ್, ಸಿಯುಇಟಿ, ಸಿಬಿಎಸ್‌ಇ-ಸಂಬಂಧಿತ ಪರೀಕ್ಷೆಗಳು ಮತ್ತು SSC ನೇಮಕಾತಿ ಪ್ರಕ್ರಿಯೆಗಳು ಸೇರಿದಂತೆ ಹಲವಾರು ಪರೀಕ್ಷೆಗಳು ಮತ್ತು ನೇಮಕಾತಿಯಲ್ಲಿ ಅಕ್ರಮದ ಆರೋಪ ಕೇಳಿಬಂದ ನಂತರ ಕಾಕ್ರೋಚ್ ಜನತಾ ಪಾರ್ಟಿ ಆನ್ ಲೈನ್ ಅಭಿಯಾನ ಶುರುವಾಯಿತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಕಾಂಗ್ರೆಸ್ ಸಚಿವ ಸಂಪುಟ ಭಿನ್ನಮತ ಶಮನ: ರಾಜೀನಾಮೆ ವಾಪಸ್ ಪಡೆದ ರಾಮಲಿಂಗಾ ರೆಡ್ಡಿ!

Karnataka CET Result 2026 Announced: ಬೆಂಗಳೂರಿನ ಆರ್ ವಿ ಕಾಲೇಜಿನ ತನಿಷಾ ಕಾರ್ತಿಕ್ ಮೊದಲ ಸ್ಥಾನ, 2,92,782 ಅಭ್ಯರ್ಥಿಗಳು ಪ್ರವೇಶಕ್ಕೆ ಅರ್ಹತೆ!

India vs Afghanistan: 6, 6, 6, ವಿಂಟೇಜ್ Rishab Pant ಈಸ್ ಬ್ಯಾಕ್, ಧೋನಿ, ಕಿರ್ಮಾನಿ ಇರುವ ಎಲೈಟ್ ಗ್ರೂಪ್ ಸೇರ್ಪಡೆ! LSG ಶ್ಲಾಘನೆ

India vs Afghanistan: KL Rahul, ನಾಯಕ ಶುಭ್ ಮನ್ ಗಿಲ್ ಭರ್ಜರಿ ಶತಕ; ಬೃಹತ್ ಮೊತ್ತದತ್ತ ಭಾರತ, ದಿನದಾಟ ಅಂತ್ಯಕ್ಕೆ 368/3

ಬಕ್ರೀದ್ ಕುರ್ಬಾನಿ ವಿಚಾರದಲ್ಲಿ ಗಲಾಟೆ ಕೇಸ್: BJP ಶಾಸಕ ಶರಣು ಸಲಗರ್‌ಗೆ ಬಂಧನ ಭೀತಿ!

SCROLL FOR NEXT