ಮೀನಾಕ್ಷಿ ನಟರಾಜನ್ 
ದೇಶ

ರಾಜ್ಯಸಭೆ ಚುನಾವಣೆಗೂ ಮುನ್ನ ಕಾಂಗ್ರೆಸ್‌ಗೆ ದೊಡ್ಡ ಹೊಡೆತ: ಮೀನಾಕ್ಷಿ ನಟರಾಜನ್ ನಾಮಪತ್ರ ರದ್ದು!

ಕ್ರಿಮಿನಲ್ ಪ್ರಕರಣವನ್ನು ನಮೂದಿಸದ ಹಿನ್ನಲೆಯಲ್ಲಿ ಕಾಂಗ್ರೆಸ್ ನಾಯಕಿ ಮೀನಾಕ್ಷಿ ನಟರಾಜನ್ ಅವರ ರಾಜ್ಯಸಭಾ ನಾಮಪತ್ರ ತಿರಸ್ಕೃತಗೊಂಡಿದೆ. ರಾಜ್ಯಸಭಾ ಚುನಾವಣೆಗೂ ಮುನ್ನ ಇದು ಕಾಂಗ್ರೆಸ್ ಪಕ್ಷಕ್ಕೆ ದೊಡ್ಡ ಹೊಡೆತ ಎಂದು ಪರಿಗಣಿಸಲಾಗುತ್ತಿದೆ.

ನವದೆಹಲಿ: ಕ್ರಿಮಿನಲ್ ಪ್ರಕರಣವನ್ನು ನಮೂದಿಸದ ಹಿನ್ನಲೆಯಲ್ಲಿ ಕಾಂಗ್ರೆಸ್ ನಾಯಕಿ ಮೀನಾಕ್ಷಿ ನಟರಾಜನ್ ಅವರ ರಾಜ್ಯಸಭಾ ನಾಮಪತ್ರ ತಿರಸ್ಕೃತಗೊಂಡಿದೆ. ರಾಜ್ಯಸಭಾ ಚುನಾವಣೆಗೂ ಮುನ್ನ ಇದು ಕಾಂಗ್ರೆಸ್ ಪಕ್ಷಕ್ಕೆ ದೊಡ್ಡ ಹೊಡೆತ ಎಂದು ಪರಿಗಣಿಸಲಾಗುತ್ತಿದೆ. ಮಧ್ಯಪ್ರದೇಶದ ಮೀನಾಕ್ಷಿ ನಟರಾಜನ್ ಅವರ ನಾಮಪತ್ರವನ್ನು ಪರಿಶೀಲನೆ ಪ್ರಕ್ರಿಯೆ ವೇಳೆ ತಿರಸ್ಕರಿಸಲಾಗಿದೆ. ಇದರೊಂದಿಗೆ ರಾಜ್ಯದ ಮೂರನೇ ರಾಜ್ಯಸಭಾ ಸ್ಥಾನಕ್ಕೆ ಸ್ಪರ್ಧೆ ಕೊನೆಗೊಂಡಿದೆ. ನಟರಾಜನ್ ಅವರ ನಾಮಪತ್ರ ತಿರಸ್ಕೃತಗೊಂಡಿರುವುದರಿಂದ, ಬಿಜೆಪಿಯ ಮಹೇಶ್ ಕೆವಾಟ್ ಗೆಲ್ಲುವ ಸಾಧ್ಯತೆ ಹೆಚ್ಚಿದೆ. ಮಹೇಶ್ ಕೆವಾಟ್ ಅವರು ರಾಜ್ಯದ ಮೀನುಗಾರರ ಕಲ್ಯಾಣ ಮಂಡಳಿಯ ಅಧ್ಯಕ್ಷರಾಗಿದ್ದಾರೆ.

ಕೂಲಂಕಷ ತನಿಖೆಯ ನಂತರ, ಚುನಾವಣಾಧಿಕಾರಿ ಕಾಂಗ್ರೆಸ್ ಅಭ್ಯರ್ಥಿಯ ನಾಮಪತ್ರವನ್ನು ತಿರಸ್ಕರಿಸಿದ್ದಾರೆ. ಹೈದರಾಬಾದ್ ನ್ಯಾಯಾಲಯದಲ್ಲಿ ಬಾಕಿ ಇರುವ ಕ್ರಿಮಿನಲ್ ಪ್ರಕರಣದ ಬಗ್ಗೆ ನಟರಾಜನ್ ತಮ್ಮ ನಾಮಪತ್ರದಲ್ಲಿ ಮಾಹಿತಿ ಮರೆಮಾಚಿಸಿದ್ದಾರೆ ಎಂದು ಆರೋಪಿಸಿ ನಾಮಪತ್ರ ತಿರಸ್ಕರಿಸಲಾಗಿದೆ.

ಪ್ರಸ್ತುತ 230 ಸದಸ್ಯ ಬಲದ ಮಧ್ಯಪ್ರದೇಶ ವಿಧಾನಸಭೆಯಲ್ಲಿ ಒಟ್ಟು ಮತಗಳ ಸಂಖ್ಯೆ 228. ಬಿಜೆಪಿ 164 ಶಾಸಕರನ್ನು ಹೊಂದಿದ್ದರೆ, ಕಾಂಗ್ರೆಸ್ 64 ಶಾಸಕರನ್ನು ಹೊಂದಿದೆ. ಬಿಜೆಪಿಯತ್ತ ಒಲವಿರುವ ಬಿನಾ ಶಾಸಕಿ ನಿರ್ಮಲಾ ಸಪ್ರೆ ಅವರ ಮತದ ಅಸ್ಪಷ್ಟ ಸ್ಥಿತಿ ಮತ್ತು ವಿಜಯಪುರ ಶಾಸಕ ಮುಖೇಶ್ ಮಲ್ಹೋತ್ರಾ ಮತದಾನದ ಮೇಲಿನ ನಿಷೇಧಗಳ ಪರಿಣಾಮ ಕಾಂಗ್ರೆಸ್‌ನ ಸಂಖ್ಯೆಯನ್ನು 62ಕ್ಕೆ ಇಳಿಸಿವೆ.

ಗೆಲುವಿಗೆ ಅಗತ್ಯವಿರುವ ಮತಗಳು

ಮೂರು ರಾಜ್ಯಸಭಾ ಸ್ಥಾನಗಳನ್ನು ಗೆಲ್ಲಲು ಪ್ರತಿಯೊಬ್ಬ ಅಭ್ಯರ್ಥಿಗೆ 58 ಮತಗಳು ಬೇಕಾಗುತ್ತವೆ. ಅದರಂತೆ, ಬಿಜೆಪಿಗೆ ಎರಡು ಸ್ಥಾನಗಳನ್ನು ಗೆಲ್ಲಲು 116 ಮತಗಳು ಬೇಕಾಗುತ್ತವೆ. ಒಟ್ಟು 164 ಮತಗಳಲ್ಲಿ 116 ಮತಗಳನ್ನು ಪಡೆದ ನಂತರ, ಬಿಜೆಪಿಗೆ ಉಳಿದ 48 ಮತಗಳು ಇರುತ್ತವೆ. ಮೂರನೇ ಸ್ಥಾನವನ್ನು ಗೆಲ್ಲಲು 58 ಮತಗಳು ಬೇಕಾಗುತ್ತವೆ. ಅಂದರೆ ಬಿಜೆಪಿಗೆ 10 ಹೆಚ್ಚುವರಿ ಮತಗಳು ಬೇಕಾಗುತ್ತವೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ವಿರೋಧ ಪಕ್ಷದ ಗದ್ದಲದ ನಡುವೆ ಸಂಸತ್ತಿನಲ್ಲಿ ಮೋದಿ ಸರ್ಕಾರದಿಂದ ಡೀಲಿಮಿಟೇಷನ್ ಮಸೂದೆಗೆ ಮರು ಜೀವ?

ಟ್ರಬಲ್ ಶೂಟರ್‌ ಡಿಕೆಶಿ​ಗೆ ಖಾತೆ ಹಂಚಿಕೆ ಟ್ರಬಲ್: ಹೈಕಮಾಂಡ್‌ ಭೇಟಿಗಾಗಿ ದೆಹಲಿಗೆ ಹಾರಿದ ಸಚಿವ ಕೃಷ್ಣ ಬೈರೇಗೌಡ

ಡಾಲರ್ ಎದುರು ಮಕಾಡೆ ಮಲಗಿದ ರೂಪಾಯಿ: ನಮ್ಮ ಮೆಟ್ರೋಗೆ ಭಾರೀ ನಷ್ಟ; ಸಾಲ ಮರುಪಾವತಿ ಹೊರೆ ಹೆಚ್ಚಳ!

PoKನಲ್ಲಿ ನಿರಾಯುಧ 30 ಜನರ ಹತ್ಯೆ, ಜಗತ್ತು ನೋಡುತ್ತಿದೆ: ಪಾಕ್‌ನ ಕ್ರೌರ್ಯ ಖಂಡಿಸಿದ ಭಾರತ!

ಯುದ್ಧಸನ್ನದ್ಧತೆ?: ಇದೇ ಮೊದಲ ಬಾರಿಗೆ ಭಾರತದಿಂದ 12 ಪರಮಾಣು ಸಿಡಿತಲೆಗಳ ನಿಯೋಜನೆ!

SCROLL FOR NEXT