ದೆಹಲಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಸಂಜಯ್ ರಾವುತ್ 
ದೇಶ

ಶಿವಸೇನೆ (ಯುಬಿಟಿ)ಯಲ್ಲಿ ಭಿನ್ನಮತ ಸ್ಫೋಟ?: ನಮ್ಮ ಸಂಸದರಿಗೆ ತಲಾ ₹50 ಕೋಟಿ ಆಮಿಷ ಒಡ್ಡಿದ್ದಾರೆ: ಸಂಜಯ್ ರಾವುತ್ ಆರೋಪ

ಸೇನಾ (ಯುಬಿಟಿ)ಯ ಒಂಬತ್ತು ಸಂಸದರ ಪೈಕಿ, ಕೇವಲ ಮೂವರು - ಅರವಿಂದ್ ಸಾವಂತ್, ಅನಿಲ್ ದೇಸಾಯಿ ಮತ್ತು ರಾಜಭಾವು ವಾಜೆ - ಮಾತ್ರ ರಾವುತ್ ಅವರ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದ್ದರು.

ಮುಂಬೈ/ ನವದೆಹಲಿ: ಪಕ್ಷದೊಳಗೆ ಭಿನ್ನಮತ ಸ್ಫೋಟಗೊಂಡಿದೆ ಎನ್ನುವ ವರದಿಗಳ ನಡುವೆಯೇ ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ ಬುಧವಾರ ತನ್ನ ಸಂಸದರು ನವದೆಹಲಿಯಲ್ಲಿ 'ಪ್ರಮುಖ ವಿಷಯಗಳ' ಬಗ್ಗೆ ಚರ್ಚಿಸಲು ಸಭೆಯಲ್ಲಿ ಭಾಗವಹಿಸುವಂತೆ ನಿರ್ದೇಶಿಸುವ ವಿಪ್ ಜಾರಿ ಮಾಡಿದೆ. ಇದು ಬಂಡಾಯ ನಾಯಕರ ವಿರುದ್ಧ ಅನರ್ಹತೆ ಪ್ರಕ್ರಿಯೆಗಳಿಗೆ ದಾರಿ ಮಾಡಿಕೊಡುವ ಗುರಿಯನ್ನು ಹೊಂದಿದೆ.

ಮಹಾರಾಷ್ಟ್ರದ ಕೆಲವು ಸಂಸದರಿಗೆ '₹50 ಕೋಟಿ' ಆಮಿಷವೊಡ್ಡಲಾಗಿದೆ ಮತ್ತು ಬಂಡಾಯ ಸಂಸದರು ಪಕ್ಷ ಬದಲಿಸಲು ಬಯಸಿದರೆ ರಾಜೀನಾಮೆ ನೀಡಬೇಕು. ಏಕೆಂದರೆ, ಉದ್ಧವ್ ಠಾಕ್ರೆ ನೇತೃತ್ವದ ಪಕ್ಷದ ಕಾರ್ಯಕರ್ತರು ಅವರ ಗೆಲುವಿಗಾಗಿ ಶ್ರಮಿಸಿದ್ದಾರೆ ಎಂದು ಶಿವಸೇನೆ (ಯುಬಿಟಿ) ನಾಯಕ ಸಂಜಯ್ ರಾವುತ್ ಬುಧವಾರ ಆರೋಪಿಸಿದ್ದಾರೆ

2022ರಲ್ಲಿ ನಡೆದಂತೆ ಪಕ್ಷದಲ್ಲಿ ವಿಭಜನೆಯನ್ನು ಪುನರಾವರ್ತಿಸಲು ಯಾವುದೇ ಪ್ರಯತ್ನಗಳು ನಡೆದರೆ, ಮಹಾರಾಷ್ಟ್ರದ ಜನರು ಮತ್ತು ಸೇನಾ (ಯುಬಿಟಿ) ಕಾರ್ಯಕರ್ತರು ಬಂಡಾಯ ಸಂಸದರನ್ನು ಬಿಡುವುದಿಲ್ಲ ಎಂದು ಅವರು ಎಚ್ಚರಿಸಿದರು.

ಮೂಲಗಳ ಪ್ರಕಾರ, ಶಿವಸೇನೆಯ (ಯುಬಿಟಿ) ಒಂಬತ್ತು ಲೋಕಸಭಾ ಸಂಸದರಲ್ಲಿ 'ಆರರಿಂದ ಏಳು' ಮಂದಿ ಏಕನಾಥ್ ಶಿಂಧೆ ನೇತೃತ್ವದ ಆಡಳಿತಾರೂಢ ಶಿವಸೇನೆಗೆ ಸೇರಲು ಒಲವು ತೋರುತ್ತಿದ್ದು, ದೆಹಲಿಯಲ್ಲಿ ಮೊಕ್ಕಾಂ ಹೂಡಿದ್ದಾರೆ ಎನ್ನಲಾಗಿದೆ.

ರಾಷ್ಟ್ರ ರಾಜಧಾನಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ರಾವುತ್ ಜೊತೆಗೆ ಶಿವಸೇನೆ (ಯುಬಿಟಿ)ಯ ಮೂವರು ಸಂಸದರಾದ ಅರವಿಂದ್ ಸಾವಂತ್, ಅನಿಲ್ ದೇಸಾಯಿ ಮತ್ತು ರಾಜಭಾವು ವಾಜೆ ಮಾತ್ರ ಹಾಜರಿದ್ದರು.

ಸಂಜಯ್ ಪಾಟೀಲ್, ಸಂಜಯ್ ದೇಶಮುಖ್, ಓಂಪ್ರಕಾಶ್ ರಾಜೇ ನಿಂಬಾಳ್ಕರ್, ಭೌಸಾಹೇಬ್ ವಾಕ್ಚೌರೆ, ನಾಗೇಶ್ ಪಾಟೀಲ್-ಅಶ್ತಿಕರ್ ಮತ್ತು ಸಂಜಯ್ ಜಾಧವ್ ಇತರ ಆರು ಸಂಸದರಾಗಿದ್ದಾರೆ.

ಸಂಸದರು ಪಕ್ಷ ಬದಲಿಸುವ ಬಗ್ಗೆ ತಮ್ಮ ಬಳಿ ಇನ್ನೂ ಯಾವುದೇ ಅಧಿಕೃತ ಮಾಹಿತಿ ಇಲ್ಲ. ಪಕ್ಷದ ಸಂಸದರನ್ನು ಸೆಳೆಯಲು ಒತ್ತಡ ತಂತ್ರಗಳು ಮತ್ತು ಹಣ ಬಳಸಲಾಗುತ್ತಿದೆ ಎಂದು ರಾಜ್ಯಸಭಾ ಸದಸ್ಯರು ದೂರಿದರು.

'X' ನಲ್ಲಿ ಪೋಸ್ಟ್ ಮಾಡಿರುವ ರಾವುತ್, ಪಕ್ಷದ ನಾಯಕತ್ವದ ವಿರುದ್ಧ ದಂಗೆ ಏಳಲು ಯೋಜಿಸುತ್ತಿರುವವರ ವಿರುದ್ಧ ವಾಗ್ದಾಳಿ ನಡೆಸುತ್ತಾ, 'ಎಲ್ಲದಕ್ಕೂ ಲೆಕ್ಕ ನೀಡಲಾಗುವುದು' ಎಂದು ಹೇಳಿದರು.

'ಒಂದು ಚಾರ್ಟರ್ಡ್ ವಿಮಾನ ನಾಂದೇಡ್‌ನಲ್ಲಿ ಇಳಿದು ಆಪರೇಷನ್ ಟೈಗರ್ ಹೆಸರಿನಲ್ಲಿ ಇಬ್ಬರು ಸಂಸದರನ್ನು ಆಯ್ಕೆ ಮಾಡಿ ಟೇಕಾಫ್ ಆಗುತ್ತದೆ. ಅವರಿಗೆ ಆಟೋರಿಕ್ಷಾದಲ್ಲಿ ಪ್ರಯಾಣಿಸಲು ಸಹ ಆಗುತ್ತಿರಲಿಲ್ಲ. ಠಾಕ್ರೆ ಕುಟುಂಬದ ಕಾರಣದಿಂದಾಗಿಯೇ ಅವರ ಮೌಲ್ಯವು ಚಾರ್ಟರ್ಡ್ ವಿಮಾನದಲ್ಲಿ ಹಾರುವಷ್ಟು ಹೆಚ್ಚಾಗಿದೆ' ಎಂದು ಅವರು ಹೇಳಿದರು.

'ನೀವು ಅಂಜುಬುರುಕ ತೋಳಗಳನ್ನು ಆಪರೇಷನ್ ಟೈಗರ್ ಎಂದು ಏಕೆ ಕರೆಯುತ್ತಿದ್ದೀರಿ?" ಎಂದು ಅವರು ಕೇಳಿದರು.

ಲೋಕಸಭೆಯಲ್ಲಿ ಶಿವಸೇನೆ (ಯುಬಿಟಿ) ನಾಯಕರಾದ ಸಾವಂತ್, ವಿಪ್ ಜಾರಿ ಮಾಡುವ ಮೊದಲು, ಸ್ಪೀಕರ್ ಓಂ ಬಿರ್ಲಾ ಅವರನ್ನು ಯಾವುದೇ 'ಬೇರ್ಪಟ್ಟ' ಗುಂಪನ್ನು ಗುರುತಿಸಬಾರದು ಎಂದು ಒತ್ತಾಯಿಸಿದರು.

2022ರಲ್ಲಿ ಉಪಮುಖ್ಯಮಂತ್ರಿ ಏಕನಾಥ್ ಶಿಂಧೆ ನೇತೃತ್ವದ 39 ಶಾಸಕರು ಶಿವಸೇನೆ ನಾಯಕತ್ವದ ವಿರುದ್ಧ ಬಂಡಾಯವೆದ್ದಾಗ ಪಕ್ಷವು ಇದೇ ರೀತಿ ವಿಪ್ ಜಾರಿ ಮಾಡಿತ್ತು. ನಂತರ ಅವರ ವಿರುದ್ಧ ಅನರ್ಹತೆ ಪ್ರಕ್ರಿಯೆಗಳನ್ನು ಪ್ರಾರಂಭಿಸಲಾಯಿತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಭಾರತದಲ್ಲಿ Telegram ತಾತ್ಕಾಲಿಕ ನಿಷೇಧ ಪ್ರಶ್ನಿಸಿ ಹೈಕೋರ್ಟ್‌ ಮೆಟ್ಟಿಲೇರಿದ CEO ಪಾವೆಲ್; ಕೇಂದ್ರದ ವಿರುದ್ಧ ಕಿಡಿ

ನನ್ನ ಹೋರಾಟ ಸೌಜನ್ಯ ಸಾವಿನ ವಿರುದ್ಧ: 200 ಕೋಟಿ ತರಲು ನಾನು ಧರ್ಮಸ್ಥಳದ ವಿರೋಧಿಯೇ? ಮಾರಿಕೊಂಡ ಮಾಧ್ಯಮಗಳು ಹೇಳಿಕೆಗೆ ಪ್ರಕಾಶ್ ರೈ ಸ್ಪಷ್ಟನೆ

ತಿಂಗಳಾಂತ್ಯಕ್ಕೆ ಸಂಪುಟ ವಿಸ್ತರಣೆ: ಜಿಎಸ್ ಪಾಟೀಲ್​ಗೆ ಸಚಿವ ಸ್ಥಾನ ನೀಡುವಂತೆ ಆಗ್ರಹಿಸಿ ಪಾದಯಾತ್ರೆ; ಬೆಂಬಲಿಗರಿಂದ ವಿಭಿನ್ನ ಯತ್ನ!

ಭಾರತದಲ್ಲಿ Telegram ನಿಷೇಧಿಸಲು ರಿಲಯನ್ಸ್, ವಾಟ್ಸಾಪ್ ಲಾಬಿ: ಟೆಲಿಗ್ರಾಮ್ ಸಿಇಒ ಗಂಭೀರ ಆರೋಪ

ಜೂನ್ 25ಕ್ಕೆ ನಟಿ ಶರ್ಮಿಳಾ ಮಾಂಡ್ರೆ ನಿಶ್ಚಿತಾರ್ಥ; ವರ ಯಾರು ಗೊತ್ತಾ?

SCROLL FOR NEXT