ಮಂಜೀವ್ ಸಿಂಗ್ ಪುರಿ 
ದೇಶ

ThinkEdu 2026: ರಾಜತಾಂತ್ರಿಕತೆಯು ರಾಜಕೀಯ ನಾಯಕರ ಕೈಯಲ್ಲಿ ಒಂದು ಸಾಧನವಾಗಿದೆ; ಮಂಜೀವ್ ಸಿಂಗ್ ಪುರಿ

ಇಂದು ಚೆನ್ನೈನಲ್ಲಿ ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ಆಯೋಜಿಸಿದ್ದ ಥಿಂಕ್‌ಎಡು ಕಾನ್ಕ್ಲೇವ್‌ನ 14ನೇ ಆವೃತ್ತಿಯಲ್ಲಿ "ರಕ್ಷಣೆ ಮತ್ತು ರಾಜತಾಂತ್ರಿಕತೆ" ಎಂಬ ವಿಷಯದ ಕುರಿತು ಮಾತನಾಡಿದ ಸಿಂಗ್, ರಕ್ಷಣೆ ಮತ್ತು ರಾಜತಾಂತ್ರಿಕತೆ ಒಂದೇ ನಾಣ್ಯದ ಎರಡು ಮುಖಗಳು ಎಂದರು.

ಚೆನ್ನೈ: ರಾಷ್ಟ್ರೀಯ ಹಿತಾಸಕ್ತಿಯನ್ನು ರಕ್ಷಿಸಲು ರಾಜತಾಂತ್ರಿಕತೆಯು ಒಂದು ಸರಳ ಸಾಧನವಾಗಿದ್ದು, "ರಾಷ್ಟ್ರೀಯ ಹಿತಾಸಕ್ತಿಗಿಂತ ಬೇರೇನೂ ಮುಖ್ಯವಲ್ಲ ಮತ್ತು ಅದು ಎಲ್ಲವನ್ನೂ ಮೀರಿದ್ದು. ಆದರೆ ಅದು ಈಗ ರಾಜಕೀಯ ನಾಯಕರ ಕೈಯಲ್ಲಿ ಒಂದು ಸಾಧನವಾಗಿದೆ" ಎಂದು ನೇಪಾಳ, ಲಕ್ಸೆಂಬರ್ಗ್ ಮತ್ತು ಬೆಲ್ಜಿಯಂನ ಮಾಜಿ ಭಾರತೀಯ ರಾಯಭಾರಿ ಮಂಜೀವ್ ಸಿಂಗ್ ಪುರಿ ಅವರು ಸೋಮವಾರ ಹೇಳಿದ್ದಾರೆ.

ಇಂದು ಚೆನ್ನೈನಲ್ಲಿ ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ಆಯೋಜಿಸಿದ್ದ ಥಿಂಕ್‌ಎಡು ಕಾನ್ಕ್ಲೇವ್‌ನ 14ನೇ ಆವೃತ್ತಿಯಲ್ಲಿ "ರಕ್ಷಣೆ ಮತ್ತು ರಾಜತಾಂತ್ರಿಕತೆ" ಎಂಬ ವಿಷಯದ ಕುರಿತು ಮಾತನಾಡಿದ ಸಿಂಗ್, ರಕ್ಷಣೆ ಮತ್ತು ರಾಜತಾಂತ್ರಿಕತೆ ಒಂದೇ ನಾಣ್ಯದ ಎರಡು ಮುಖಗಳು ಎಂದರು.

ರಾಷ್ಟ್ರೀಯ ಹಿತಾಸಕ್ತಿ ಮತ್ತು ಮಿಲಿಟರಿ ಸಾಮರ್ಥ್ಯಗಳ ಕಲ್ಪನೆಯನ್ನು ಮತ್ತಷ್ಟು ಅನ್ವೇಷಿಸಿದ ವಾಯುಪಡೆಯ ಮಾಜಿ ಮುಖ್ಯಸ್ಥ(ನಿವೃತ್ತ) ಮಾರ್ಷಲ್ ರಾಕೇಶ್ ಕುಮಾರ್ ಸಿಂಗ್ ಭದೌರಿಯಾ ಅವರು, ರಕ್ಷಣಾ ಸಾಮರ್ಥ್ಯವು ಯಾವಾಗಲೂ "ಯಾವುದೇ ಜಾಗತಿಕ ಕ್ರಮ"ದ ಪ್ರಮುಖ ಸ್ತಂಭವಾಗಿದೆ. "ರಾಜತಾಂತ್ರಿಕತೆಗೆ ಅದರ ಉತ್ತುಂಗವನ್ನು ನೀಡಿದ್ದು ಈ ಸಾಮರ್ಥ್ಯವೇ" ಎಂದರು.

"ಜಗತ್ತಿನಾದ್ಯಂತ ನಡೆಯುತ್ತಿರುವ ಸಂಘರ್ಷಗಳೊಂದಿಗೆ, ನಮ್ಮದೇ ಆದ ಸಾಮರ್ಥ್ಯವನ್ನು ಹೊಂದಿರುವುದು ಹೆಚ್ಚು ಮುಖ್ಯ, ಹೆಚ್ಚು ಅಗತ್ಯವಾಗಿದೆ" ಎಂದು ಭದೌರಿಯಾ ಒತ್ತಿ ಹೇಳಿದರು.

ರಾಜತಾಂತ್ರಿಕತೆಯ ಮಹತ್ವದ ಅಂಶವನ್ನು ತಿಳಿಸಿದ ಅಸ್ಸಾಂ ರೈಫಲ್ಸ್‌ನ ಮಾಜಿ ಮಹಾನಿರ್ದೇಶಕ(ನಿವೃತ್ತ) ಲೆಫ್ಟಿನೆಂಟ್ ಜನರಲ್ ಶೋಕಿನ್ ಚೌಹಾಣ್ ಅವರು, ದೇಶದ ಎಲ್ಲಾ ಶಸ್ತ್ರಾಸ್ತ್ರಗಳು - ಅದು ರಕ್ಷಣೆ, ರಾಜತಾಂತ್ರಿಕತೆ, ಅರ್ಥಶಾಸ್ತ್ರ ಅಥವಾ ಅಧಿಕಾರಶಾಹಿಯಾಗಿರಬಹುದು. ಎಲ್ಲವೂ ಕೇವಲ ರಾಜಕೀಯ ನಾಯಕರ ಕೈಯಲ್ಲಿರುವ ಸಾಧನಗಳಾಗಿವೆ ಎಂದು ಗಮನಸೆಳೆದರು.

ಯುದ್ಧದ ಪ್ರಸ್ತುತ ಸ್ವರೂಪದ ಬಗ್ಗೆ ಮಾತನಾಡುತ್ತಾ, ಇಂದಿನ ಯುದ್ಧಗಳು ಕೆಲವು ದಶಕಗಳ ಹಿಂದೆ ಇದ್ದವುಗಳಿಗಿಂತ ಈಗ ಭಿನ್ನವಾಗಿವೆ ಮತ್ತು ಆಧುನಿಕ ಯುದ್ಧವು ಸಾಮಾನ್ಯವಾಗಿ ಹಲವು-ಕ್ಷೇತ್ರಗಳ ಪ್ರಯತ್ನವಾಗಿದೆ ಎಂದು ಚೌಹಾಣ್ ಹೇಳಿದರು.

"ಮೊದಲು, ನಮಗೆ ವಾಯು, ಭೂಮಿ ಮತ್ತು ಸಮುದ್ರ ಡೊಮೇನ್‌ಗಳು ಮಾತ್ರ ಇದ್ದವು. ಆದರೆ ಈಗ ಸೈಬರ್, ನರೆಟಿವ್ ಮತ್ತು ಬಾಹ್ಯಾಕಾಶ ಡೊಮೇನ್‌ಗಳು" ಸೇರಿವೆ ಎಂದು ಅವರು ವಿವರಿಸಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಬಹ್ರೇನ್ ರಾಜ, ಸೌದಿ ಕ್ರೌನ್ ಪ್ರಿನ್ಸ್ ಜತೆ ಪ್ರಧಾನಿ ಮೋದಿ ಮಾತುಕತೆ; ಇರಾನ್ ದಾಳಿ ಖಂಡಿಸಿದ ಭಾರತ

ನೆತನ್ಯಾಹು ಹತ್ಯೆ? ಶಕ್ತಿಶಾಲಿ ಖೈಬರ್ ಬ್ಯಾಲಿಸ್ಟಿಕ್ ಕ್ಷಿಪಣಿ ಮೂಲಕ ಇಸ್ರೇಲ್ ಪ್ರಧಾನಿ ಕಚೇರಿ ಮೇಲೆ ದಾಳಿ, ಇರಾನ್ ಹೇಳಿಕೆ

'ಮೆಜೆಸ್ಟಿಕ್ to ಕತ್ರಿಗುಪ್ಪೆಗೆ 700 ರೂ': ಮಹಿಳೆ ಜೊತೆ ಜಗಳ ಮಾಡಿದ್ದ ಆಟೋ ಚಾಲಕರಿಗೆ ಶಾಕ್ ಕೊಟ್ಟ ಪೊಲೀಸರು!

ಉತ್ತರ ಪ್ರದೇಶ: ತಂದೆ, ತಾಯಿ, ಅಜ್ಜಿ ಹಾಗೂ ಸಹೋದರಿಯನ್ನು ಕೊಡಲಿಯಿಂದ ಕೊಚ್ಚಿ ಕೊಂದ ವ್ಯಕ್ತಿ!

ಈ ಮತಾಂಧರರ ನಿಯತ್ತು ಯಾರಿಗೆ... ಇಂತಹವರನ್ನು ಇರಾನ್ ಗೆ ಓಡಿಸಿ: ಪ್ರಧಾನಿ ಮೋದಿಗೆ Telugu ಆಂಕರ್ ರಶ್ಮಿ ಗೌತಮ್ ಒತ್ತಾಯ!

SCROLL FOR NEXT