ಜುಬೀನ್ ಗಾರ್ಗ್  
ದೇಶ

ಮದ್ಯಪಾನ ಮಾಡಿ, ಲೈಫ್ ಜಾಕೆಟ್ ಧರಿಸದೆ ಈಜಲು ತೆರಳಿದ್ದು ಗಾಯಕ ಜುಬೀನ್ ಗಾರ್ಗ್ ಸಾವಿಗೆ ಕಾರಣ: ವದಂತಿಗಳಿಗೆ ತೆರೆ ಎಳೆದ ಸಿಂಗಾಪುರ್ ಕೋರ್ಟ್

2025ರ ಸೆಪ್ಟೆಂಬರ್‌ನಲ್ಲಿ ಜುಬೀನ್ ಗಾರ್ಗ್ ಅವರು ಈಶಾನ್ಯ ಭಾರತ ಉತ್ಸವದಲ್ಲಿ ಭಾಗವಹಿಸಲು ಸಿಂಗಾಪುರಕ್ಕೆ ತೆರಳಿದ್ದರು. ಸೆ.19ರಂದು ತಮ್ಮ ನಿಗದಿತ ಪ್ರದರ್ಶನಕ್ಕೆ ಒಂದು ದಿನ ಮೊದಲು ಸಾವನ್ನಪ್ಪಿದ್ದರು.

ಸಿಂಗಾಪುರ: ಮದ್ಯಪಾನ ಮಾಡಿ, ಲೈಫ್‌ ಜಾಕೆಟ್‌ ಧರಿಸದೇ ಈಜಲು ತೆರಳಿದ್ದೇ ಖ್ಯಾತ ಅಸ್ಸಾಮಿ ಗಾಯಕ ಜುಬೀನ್ ಗಾರ್ಗ್ ಸಾವಿಗೆ ಕಾರಣ ಎಂದು ಸಿಂಗಾಪುರ ಕೋರ್ಟ್‌ ಹೇಳಿದೆ.

ಸಿಂಗಾಪುರ ಪೊಲೀಸ್ ಕೋಸ್ಟ್ ಗಾರ್ಡ್ ನಡೆಸಿದ ತನಿಖೆಯ ಬಳಿಕ ಈ ಸಾವು ʻದುರದೃಷ್ಟಕರ ಮುಳುಗುವಿಕೆʼಎಂದು ತೀರ್ಮಾನಿಸಲಾಗಿದೆ ಎಂದು ವರದಿಯಾಗಿದೆ. 2025ರ ಸೆಪ್ಟೆಂಬರ್‌ನಲ್ಲಿ ಜುಬೀನ್ ಗಾರ್ಗ್ ಅವರು ಈಶಾನ್ಯ ಭಾರತ ಉತ್ಸವದಲ್ಲಿ ಭಾಗವಹಿಸಲು ಸಿಂಗಾಪುರಕ್ಕೆ ತೆರಳಿದ್ದರು. ಸೆ.19ರಂದು ತಮ್ಮ ನಿಗದಿತ ಪ್ರದರ್ಶನಕ್ಕೆ ಒಂದು ದಿನ ಮೊದಲು ಸಾವನ್ನಪ್ಪಿದ್ದರು.

ಗಾರ್ಗ್ ಬೋಟ್‌ನಲ್ಲಿ ಲಾಜರಸ್ ದ್ವೀಪಕ್ಕೆ ವಿಹಾರಕ್ಕೆ ತೆರಳಿದ್ದರು. ಈ ವೇಳೆ ಅವರು ಮದ್ಯ ಸೇವಿಸಿದ್ದರು. ನಂತರ ಬೋಟ್‌ನಿಂದ ನೀರಿಗಿಳಿದು ಈಜುವಾಗ ಲೈಫ್ ಜಾಕೆಟ್ ಧರಿಸಿದ್ದರು. ನಂತರ ಅವರು ದ್ವೀಪದ ಕಡೆಗೆ ಈಜುವಾಗ ಲೈಫ್ ಜಾಕೆಟ್ ಧರಿಸಲು ನಿರಾಕರಿಸಿದ್ದರು ಎಂದು ಸಾಕ್ಷಿದಾರರು ನ್ಯಾಯಾಲಯಕ್ಕೆ ತಿಳಿಸಿದ್ದಾರೆ. ಸ್ನೇಹಿತರು ದೋಣಿಗೆ ಹಿಂತಿರುಗಲು ಪದೇ ಪದೇ ವಿನಂತಿಸಿದ್ದರು. ದುರದೃಷ್ಟವಶಾತ್‌ ಅವರು ಸಾವನ್ನಪ್ಪಿದರು ಎಂದು ವರದಿಯಾಗಿದೆ.

ವರದಿಯ ಪ್ರಕಾರ 100 ಮಿಲಿಗೆ 333 ಮಿಗ್ರಾಂ ರಕ್ತ ಆಲ್ಕೋಹಾಲ್ ಸಾಂದ್ರತೆಯನ್ನು ಬಹಿರಂಗಪಡಿಸಿದೆ. ಇದು ಈಜಲು ತೆರಳುವಾಗ ಆಲ್ಕೋಹಾಲ್ ಸೇವನೆ ಮಾಡಿರುವುದನ್ನು ದೃಢಿಕರಿಸುತ್ತದೆ ಎಂದು ವಿಚಾರಣೆ ಸಮಯದಲ್ಲಿ ತಿಳಿಸಲಾಗಿದೆ. ಈ ಮೂಲಕ ಅವರ ಸಾವಿನ ಹಿಂದಿನ ಪಿತೂರಿ ಅನುಮಾನವನ್ನು ನ್ಯಾಯಾಲಯ ತಳ್ಳಿ ಹಾಕಿದೆ. ಜೊತೆಗೆ ಹಲವು ತಿಂಗಳುಗಳಿಂದ ಚರ್ಚೆಯಲ್ಲಿದ್ದ ವದಂತಿಗಳಿಗೆ ಕೋರ್ಟ್‌ ಬ್ರೇಕ್‌ ಹಾಕಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಮತ್ತೊಂದು F-18 ಫೈಟರ್ ಜೆಟ್ ಹೊಡೆದುರುಳಿಸಿದ್ದೇವೆ ಎಂದ Iran, ಬೆಚ್ಚಿದ ಅಮೆರಿಕದಿಂದ Fact-Check

ಆಂಧ್ರದಲ್ಲಿ ಭೀಕರ ರಸ್ತೆ ಅಪಘಾತ: ಟಿಪ್ಪರ್ ಲಾರಿ- ಖಾಸಗಿ ಬಸ್ ಮುಖಾಮುಖಿ ಡಿಕ್ಕಿ; 13 ಮಂದಿ ಸಜೀವ ದಹನ; ತನಿಖೆಗೆ ಸಿಎಂ ಆದೇಶ

ನನ್ನ ವಿರುದ್ಧ ಗೆದ್ದು ಸಿದ್ದರಾಮಯ್ಯ ಮುಂದೆ ಸೋತ್ರಿ- ಅಶೋಕ್: ನಾನು ನಿದ್ದೆ ಮಾಡದಿದ್ದಕ್ಕೆ ಪಕ್ಷ ಅಧಿಕಾರಕ್ಕೆ ಬಂತು; ಡಿಕೆಶಿ ಟಾಂಗ್

ಹಣಕಾಸು ಕೊರತೆ ಇರುವ ಪಾಲಿಕೆಗಳಿಗೆ ರಾಜ್ಯ ಸರ್ಕಾರದಿಂದ ನೆರವು: ಡಿ.ಕೆ. ಶಿವಕುಮಾರ್

ಪಾಕಿಸ್ತಾನದಂತೆ ಭಾರತ 'ಬ್ರೋಕರ್ ದೇಶವಲ್ಲ': ಸರ್ವ ಪಕ್ಷ ಸಭೆಯಲ್ಲಿ ಜೈಶಂಕರ್ ಲೇವಡಿ!

SCROLL FOR NEXT