ಟಂಗಸ್ಕಾ ವಾಯು ರಕ್ಷಣಾ ಕ್ಷಿಪಣಿ ವ್ಯವಸ್ಥೆ 
ದೇಶ

ಭಾರತದ ಬತ್ತಳಿಕೆ ಸೇರಲಿದೆ ರಷ್ಯಾದ ಮತ್ತೊಂದು ವಾಯು ರಕ್ಷಣಾ ಕ್ಷಿಪಣಿ ವ್ಯವಸ್ಥೆ; 445 ಕೋಟಿ ರೂ ಒಪ್ಪಂದ!

ಭಾರತೀಯ ಸೇನೆಗೆ ವಾಯು ರಕ್ಷಣಾ ಕ್ಷಿಪಣಿ ವ್ಯವಸ್ಥೆಯನ್ನು ಖರೀದಿಸಲು ರಷ್ಯಾದ ರೋಸೊಬೊರೊನೆಕ್ಸ್‌ಪೋರ್ಟ್‌ ಸಂಸ್ಥೆ ಜೊತೆ ಭಾರತೀಯ ರಕ್ಷಣಾ ಸಚಿವಾಲಯ ಶುಕ್ರವಾರ 445 ಕೋಟಿ ರೂ.ಗಳ ಒಪ್ಪಂದಕ್ಕೆ ಸಹಿ ಹಾಕಿದೆ.

ನವದೆಹಲಿ: ಪಾಕಿಸ್ತಾನ ವಿರುದ್ಧ ಆಪರೇಷನ್ ಸಿಂಧೂರ್ ವೇಳೆ ಭಾರತೀಯ ವಾಯು ಪ್ರದೇಶವನ್ನು ಗುರಾಣಿಯಂತೆ ಕಾದಿದ್ದ ರಷ್ಯಾದ S-400 ನಂತೆಯೇ ಇದೀಗ ಮತ್ತೊಂದು ವಾಯು ರಕ್ಷಣಾ ವ್ಯವಸ್ಥೆ ಭಾರತದ ಬತ್ತಳಿಕೆ ಸೇರುತ್ತಿದೆ.

ಹೌದು.. ಭಾರತೀಯ ಸೇನೆಗೆ ವಾಯು ರಕ್ಷಣಾ ಕ್ಷಿಪಣಿ ವ್ಯವಸ್ಥೆಯನ್ನು ಖರೀದಿಸಲು ರಷ್ಯಾದ ರೋಸೊಬೊರೊನೆಕ್ಸ್‌ಪೋರ್ಟ್‌ ಸಂಸ್ಥೆ ಜೊತೆ ಭಾರತೀಯ ರಕ್ಷಣಾ ಸಚಿವಾಲಯ ಶುಕ್ರವಾರ 445 ಕೋಟಿ ರೂ.ಗಳ ಒಪ್ಪಂದಕ್ಕೆ ಸಹಿ ಹಾಕಿದೆ.

ಭಾರತೀಯ ನೌಕಾಪಡೆಯ P-8I ದೀರ್ಘ-ಶ್ರೇಣಿಯ ಸಾಗರ ವಿಚಕ್ಷಣ ವಿಮಾನಗಳ ನಿರ್ವಹಣೆಗಾಗಿ ಬೋಯಿಂಗ್ ಇಂಡಿಯಾ ಡಿಫೆನ್ಸ್ ಪ್ರೈವೇಟ್ ಲಿಮಿಟೆಡ್‌ನೊಂದಿಗೆ 413 ರೂ.ಗಳ ಪ್ರತ್ಯೇಕ ಒಪ್ಪಂದವನ್ನು ಮಾಡಿಕೊಳ್ಳಲಾಗಿದೆ ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ.

"ಭಾರತೀಯ ಸೇನೆಗೆ 445 ಕೋಟಿ ರೂ.ಗಳ ಮೌಲ್ಯದ ಟಂಗಸ್ಕಾ (Tunguska) ವಾಯು ರಕ್ಷಣಾ ಕ್ಷಿಪಣಿ ವ್ಯವಸ್ಥೆಗಳ ಖರೀದಿ ಒಪ್ಪಂದವನ್ನು ರಷ್ಯಾದ ಜೆಎಸ್‌ಸಿ ರೋಸೊಬೊರೊನೆಕ್ಸ್‌ಪೋರ್ಟ್‌ (JSC Rosoboronexport)ನೊಂದಿಗೆ ಸಹಿ ಮಾಡಲಾಗಿದೆ" ಎಂದು ಅದು ಹೇಳಿದೆ.

ಅಂತೆಯೇ "ಈ ಅತ್ಯಾಧುನಿಕ ಕ್ಷಿಪಣಿಗಳು ವಿಮಾನ ಡ್ರೋನ್‌ಗಳು ಮತ್ತು ಕ್ರೂಸ್ ಕ್ಷಿಪಣಿಗಳು ಸೇರಿದಂತೆ ವೈಮಾನಿಕ ಬೆದರಿಕೆಗಳ ವಿರುದ್ಧ ಭಾರತದ ಬಹುಪದರದ ವಾಯು ರಕ್ಷಣಾ ಸಾಮರ್ಥ್ಯಗಳನ್ನು ಹೆಚ್ಚಿಸುತ್ತವೆ. ಈ ಒಪ್ಪಂದವು ಇಂಡೋ-ರಷ್ಯಾದ ಕಾರ್ಯತಂತ್ರದ ರಕ್ಷಣಾ ಪಾಲುದಾರಿಕೆಯನ್ನು ಮತ್ತಷ್ಟು ಬಲಪಡಿಸುತ್ತದೆ" ಎಂದು ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.

ಶೇ.100ರಷ್ಟು ಭಾರತದಲ್ಲೇ ನಿರ್ಮಾಣ

ಅಂತೆಯೇ ಈ ಮಹತ್ವದ ಒಪ್ಪಂದದ ಮೂಲಕ ಈ ಅತ್ಯಾಧುನಿಕ ವಾಯುರಕ್ಷಣಾ ವ್ಯವಸ್ಥೆಯನ್ನು ಶೇ.100ರಷ್ಟು ಭಾರತದಲ್ಲೇ ತಯಾರಿಸಲಾಗುತ್ತದೆ ಎನ್ನಲಾಗಿದೆ.

P8I ವಿಮಾನಗಳ ಒಪ್ಪಂದ

"100 ಪ್ರತಿಶತ ಸ್ಥಳೀಯ ವಸ್ತುಗಳನ್ನು ಹೊಂದಿರುವ ಬೈ ಇಂಡಿಯನ್ ವಿಭಾಗದ ಅಡಿಯಲ್ಲಿ P8I ವಿಮಾನಗಳ ತಪಾಸಣೆಗಾಗಿ ಒಪ್ಪಂದವು MRO (ನಿರ್ವಹಣೆ, ದುರಸ್ತಿ ಮತ್ತು ಕೂಲಂಕುಷ ಪರೀಕ್ಷೆ) ಸೌಲಭ್ಯದಲ್ಲಿ ಫ್ಲೀಟ್‌ನ ಡಿಪೋ-ಮಟ್ಟದ ನಿರ್ವಹಣೆಯನ್ನು ಖಚಿತಪಡಿಸುತ್ತದೆ" ಎಂದು ಸಚಿವಾಲಯ ಹೇಳಿಕೆಯಲ್ಲಿ ಸ್ಪಷ್ಟಪಡಿಸಿದೆ.

ಬಹು-ಪಾತ್ರದ ದೀರ್ಘ-ಶ್ರೇಣಿಯ ಕಡಲ ವಿಚಕ್ಷಣಾ ಜಲಾಂತರ್ಗಾಮಿ ವಿರೋಧಿ ಯುದ್ಧ (LRMR ASW) ವಿಮಾನವಾದ ಬೋಯಿಂಗ್ P-8I, ಹಿಂದೂ ಮಹಾಸಾಗರದಲ್ಲಿ ಭಾರತೀಯ ನೌಕಾಪಡೆಯ ಕಡಲ ಕಣ್ಗಾವಲು ಕಾರ್ಯಾಚರಣೆಗಳಿಗೆ ಅವಿಭಾಜ್ಯವಾಗಿದೆ. ಭಾರತೀಯ ನೌಕಾಪಡೆಯು ಪ್ರಸ್ತುತ 12 P-8I ವಿಮಾನಗಳನ್ನು ನಿರ್ವಹಿಸುತ್ತಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

SSLC ಪರೀಕ್ಷೆಗಳ ಅಂಕ 625 ಬದಲಿಗೆ 525ಕ್ಕೆ ಇಳಿಕೆ: ಹಿಂದಿ ಸೇರಿ ತೃತೀಯ ಭಾಷೆಗಳು ಲೆಕ್ಕಕ್ಕಿಲ್ಲ!

ಇರಾನ್‌ನ ಉನ್ನತಾಧಿಕಾರಿ ಅರಘ್ಚಿ, ಗಾಲಿಬಾಫ್'ರನ್ನು ಕೊಲ್ಲದಂತೆ ಇಸ್ರೇಲ್ ತಡೆದಿದ್ದೇ ನಾವು: Pakistan

IPL ನ ಕನಸಲ್ಲಿ ಮಾತ್ರ ಮೀರಿಸ್ತೀವಿ.. ಒಳ್ಳೆ ಆಫರ್ ಸಿಕ್ರೆ ಆಟಗಾರರು ಹೋಗ್ದೇ ಏನ್ ಮಾಡ್ತಾರೆ..: ಪಾಕ್ ಆಟಗಾರನಿಂದ PSLನ ಭೀಕರ ಟ್ರೋಲ್!

ಪೆಟ್ರೋಲ್, ಡೀಸೆಲ್ ಮೇಲಿನ ಅಬಕಾರಿ ಸುಂಕ ಕಡಿತ: ಜನರನ್ನು ಮೂರ್ಖರನ್ನಾಗಿ ಮಾಡಲು ಬಿಜೆಪಿ ಪ್ರಯತ್ನ; ಕೇಂದ್ರಕ್ಕೆ ಬುದ್ಧಿ ಕಲಿಸಿ- ಸುರ್ಜೇವಾಲ

West Bengal polls 2026: ಇಂದು ರಾಜಕೀಯ ಬದ್ಧ ವೈರಿ, ಆದರೆ ಬಿಜೆಪಿ ಗೆಲುವಿನ ಖಾತೆ ತೆರೆಯಲು ಕಾರಣವೇ TMC; ಹೇಗೆ ಗೊತ್ತೇ?

SCROLL FOR NEXT