ಅಮಿತ್ ಶಾ 
ದೇಶ

TMC ಸರ್ಕಾರದ ವಿರುದ್ಧ ಅಮಿತ್ ಶಾ 'ಚಾರ್ಜ್ ಶೀಟ್' ಬಿಡುಗಡೆ: ಬಂಗಾಳ ಚುನಾವಣೆ ದೇಶದ ಭದ್ರತೆಗಾಗಿ ಒಂದು ಯುದ್ಧ!

"ದೇಶದ ಭದ್ರತೆಯ ದೃಷ್ಟಿಯಿಂದ ಪಶ್ಚಿಮ ಬಂಗಾಳ ಚುನಾವಣೆ ರಾಜ್ಯಕ್ಕೆ ಮಾತ್ರವಲ್ಲದೆ ಇಡೀ ದೇಶಕ್ಕೆ ಅತ್ಯಂತ ಮುಖ್ಯವಾಗಿದೆ" ಎಂದು ಅಮಿತ್ ಶಾ ಹೇಳಿದರು.

ಕೋಲ್ಕತ್ತಾ: ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಗೆ ಬಿಜೆಪಿಯ ಪ್ರಚಾರವನ್ನು ಚುರುಕುಗೊಳಿಸಿದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು, ಶನಿವಾರ ಟಿಎಂಸಿ ಸರ್ಕಾರದ ವಿರುದ್ಧ 'ಚಾರ್ಜ್ ಶೀಟ್' ಬಿಡುಗಡೆ ಮಾಡಿದ್ದಾರೆ ಮತ್ತು ಈ ಚುನಾವಣೆ ಕೇವಲ ರಾಜ್ಯಕ್ಕಾಗಿ ಮಾತ್ರವಲ್ಲದೆ ದೇಶದ ಭದ್ರತೆಗಾಗಿ ಒಂದು ಯುದ್ಧವಾಗಿದೆ ಎಂದಿದ್ದಾರೆ.

ಇಂದು ಕೋಲ್ಕತ್ತಾದಲ್ಲಿ ಆಡಳಿತಾರೂಢ ಟಿಎಂಸಿ ವಿರುದ್ಧ ವಾಗ್ದಾಳಿ ನಡೆಸಿದ ಅಮಿತ್ ಶಾ, 15 ವರ್ಷಗಳ ಆಡಳಿತದಲ್ಲಿ ರಾಜ್ಯವು, "ಒಳನುಸುಳುವಿಕೆ, ರಾಜಿ ರಾಜಕೀಯದಿಂದ ದೇಶದ ಗಡಿ ಅಭದ್ರತೆಗೆ ಪ್ರಮುಖ ಕಾರಿಡಾರ್" ಆಗಿ ಮಾರ್ಪಟ್ಟಿದೆ ಎಂದು ಆರೋಪಿಸಿದರು.

"ದೇಶದ ಭದ್ರತೆಯ ದೃಷ್ಟಿಯಿಂದ ಪಶ್ಚಿಮ ಬಂಗಾಳ ಚುನಾವಣೆ ರಾಜ್ಯಕ್ಕೆ ಮಾತ್ರವಲ್ಲದೆ ಇಡೀ ದೇಶಕ್ಕೆ ಅತ್ಯಂತ ಮುಖ್ಯವಾಗಿದೆ" ಎಂದು ಅಮಿತ್ ಶಾ ಹೇಳಿದರು.

ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಅಸ್ಸಾಂ ಮೂಲಕ ಒಳನುಸುಳುವಿಕೆ ಮಾರ್ಗಗಳನ್ನು "ಮುಚ್ಚಲಾಗುವುದು" ಎಂದು ಹೇಳಿದ ಅಮಿತ್ ಶಾ, ಪಶ್ಚಿಮ ಬಂಗಾಳವು ಈಗ ಒಳನುಸುಳುವಿಕೆಗೆ "ಉಳಿದಿರುವ ಏಕೈಕ ಮಾರ್ಗ" ಎಂದು ಆರೋಪಿಸಿದರು.

"ಒಳನುಸುಳುವವರು ದೇಶಕ್ಕೆ ಪ್ರವೇಶಿಸಿ ಗಲಭೆಗಳನ್ನು ಸೃಷ್ಟಿಸುತ್ತಿರುವ ಏಕೈಕ ರಾಜ್ಯ ಪಶ್ಚಿಮ ಬಂಗಾಳ" ಎಂದು ಅವರು ಅಮಿತ್ ಶಾ ಹೇಳಿದರು.

ಇರಾನ್ ಡ್ರೋನ್ ದಾಳಿ: UAE ಕೈಗಾರಿಕಾ ಪ್ರದೇಶದಲ್ಲಿ ಭಾರೀ ಬೆಂಕಿ: ಐವರು ಭಾರತೀಯರಿಗೆ ಗಾಯ

ದಾವಣಗೆರೆ: ಧಮ್ ತೋರಿಸಲು ಹೋಗಿದ್ದ ಪ್ರದೀಪ್ ಈಶ್ವರ್​ಗೆ ಚಪ್ಪಲಿ-ಪೊರಕೆ ತೋರಿಸಿ, ಹುಚ್ಚ...ಹುಚ್ಚ... ಅಂತ ಕೂಗಿದ BJP ಕಾರ್ಯಕರ್ತರು!

PSL 2026: ಪ್ರೇಕ್ಷಕರೇ ಇಲ್ಲ ಅಂದ್ರೆ ಕೂಗಾಡೋ ಶಬ್ದ ಎಲ್ಲಿಂದ ಬರುತ್ತೆ..: PCB ವಿರುದ್ಧ ಪಾಕ್ ಅಭಿಮಾನಿಗಳೇ ಕಿಡಿ, Video

ಬೆಂಗಳೂರು ಉತ್ತರ ನಗರ ಪಾಲಿಕೆಯ ಚೊಚ್ಚಲ ಬಜೆಟ್ ಮಂಡನೆ; ಘನತ್ಯಾಜ್ಯ ನಿರ್ವಹಣೆಗೆ ಒತ್ತು

ಭಾರತ ವಿರೋಧಿ ಉಗ್ರರಿಗೆ ಪಾಕ್ 'ಸುರಕ್ಷಿತ ಸ್ವರ್ಗ'; ಉಗ್ರಸಂಘಟನೆಗಳನ್ನು ಪೋಷಿಸುವುದನ್ನು Pak ನಿಲ್ಲಿಸಿಲ್ಲ: ಅಮೆರಿಕ ಸ್ಫೋಟಕ ವರದಿ

SCROLL FOR NEXT