ಅಮಿತ್ ಶಾ  
ದೇಶ

'ಮಾವೋವಾದಿಗಳೊಂದಿಗೆ ನಿಕಟತೆಯಿಂದ ರಾಹುಲ್ ಗಾಂಧಿ ನಕ್ಸಲ್ ಆಗಿದ್ದಾರೆ; ಭಾರತ ಈಗ ನಕ್ಸಲಿಸಂನಿಂದ ಮುಕ್ತವಾಗಿದೆ': ಅಮಿತ್ ಶಾ

ರಾಹುಲ್ ಗಾಂಧಿಯವರ ಮೇಲೂ ವಾಗ್ದಾಳಿ ನಡೆಸಿದ ರಾಹುಲ್ ಗಾಂಧಿ, ಮಾವೋವಾದಿಗಳೊಂದಿಗೆ ಅವರ ನಿಕಟತೆಯಿಂದ ಅವರು ಸಹ ನಕ್ಸಲ್ ಆಗಿದ್ದಾರೆ ಎಂದು ಆರೋಪಿಸಿ, ಜನರು ಚುನಾವಣೆಯ ಮೂಲಕ ಅವರಿಗೆ ತಕ್ಕ ಉತ್ತರ ನೀಡಬೇಕಾಗಿದೆ ಎಂದು ಹೇಳಿದರು.

ನವದೆಹಲಿ: ಈಗ ಭಾರತವು ನಕ್ಸಲಿಸಂನಿಂದ ಮುಕ್ತವಾಗಿದೆ ಎಂದು ಹೇಳಬಹುದು ಎಂದು ಸಾರಿದ ಗೃಹ ಸಚಿವ ಅಮಿತ್ ಶಾ ಅವರು, ದೇಶದಲ್ಲಿ ದೀರ್ಘಕಾಲ ನಡೆದ ಎಡಪಂಥೀಯ ಹಿಂಸಾಚಾರಕ್ಕೆ ಕಾಂಗ್ರೆಸ್ ಪಕ್ಷವೇ ಕಾರಣವೆಂದು ಆರೋಪಿಸಿದರು.

ಅಲ್ಲದೆ, ಅದರ ಪ್ರಮುಖ ನಾಯಕ ರಾಹುಲ್ ಗಾಂಧಿಯವರ ಮೇಲೂ ವಾಗ್ದಾಳಿ ನಡೆಸಿದ ರಾಹುಲ್ ಗಾಂಧಿ, ಮಾವೋವಾದಿಗಳೊಂದಿಗೆ ಅವರ ನಿಕಟತೆಯಿಂದ ಅವರು ಸಹ ನಕ್ಸಲ್ ಆಗಿದ್ದಾರೆ ಎಂದು ಆರೋಪಿಸಿ, ಜನರು ಚುನಾವಣೆಯ ಮೂಲಕ ಅವರಿಗೆ ತಕ್ಕ ಉತ್ತರ ನೀಡಬೇಕಾಗಿದೆ ಎಂದು ಹೇಳಿದರು.

ಕಾಂಗ್ರೆಸ್ ಮಾವೋವಾದಿಗಳ ಹಿಡಿತಕ್ಕೆ

ಲೋಕಸಭೆಯಲ್ಲಿ ‘ಎಡಪಂಥೀಯ ಅತಿರೇಕದಿಂದ ದೇಶವನ್ನು ಮುಕ್ತಗೊಳಿಸುವ ಪ್ರಯತ್ನಗಳು’ ಕುರಿತಾಗಿ ನಡೆದ ಅಲ್ಪಾವಧಿ ಚರ್ಚೆಗೆ ಉತ್ತರಿಸಿದ ಗೃಹ ಸಚಿವರು, 1969ರ ರಾಷ್ಟ್ರಪತಿ ಚುನಾವಣೆಯ ಸಮಯದಲ್ಲಿ ಕಾಂಗ್ರೆಸ್ ಒಳಗಿನ ಅಧಿಕಾರ ಹೋರಾಟದ ವೇಳೆ ಇಂದಿರಾ ಗಾಂಧಿಗೆ ಎಡಪಕ್ಷಗಳ ಬೆಂಬಲ ದೊರಕಿದ್ದು, ಆ ಮೂಲಕ ಅವರು “ಮಾವೋವಾದಿಗಳ ಬಲವಾದ ಹಿಡಿತಕ್ಕೆ ಒಳಗಾದರು” ಎಂದು ಕೂಡ ಹೇಳಿದರು.

ಮಾರ್ಚ್ 31ರೊಳಗೆ ನಕ್ಸಲಿಸಂ ನಿರ್ಮೂಲನೆಗೊಳಿಸುವ ಗಡುವಿನ ಸಂದರ್ಭದಲ್ಲಿ ಲೋಕಸಭೆಯಲ್ಲಿ ಮಾತನಾಡಿದ ಗೃಹಸಚಿವರು, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ದೇಶವನ್ನು ಈ ಕಾಟದಿಂದ ಮುಕ್ತಗೊಳಿಸಲು ಹಲವು ಕ್ರಮಗಳನ್ನು ಕೈಗೊಳ್ಳಲಾಗಿದೆ.

ಸಿಪಿಎಂ ಕೇಂದ್ರ ಸಮಿತಿ ಅಥವಾ ಪಾಲಿಟ್ ಬ್ಯೂರೋದ 21 ಸದಸ್ಯರಲ್ಲಿ 20 ಮಂದಿ ಶರಣಾಗತಿಯಾಗಿರುವುದು, ಬಂಧನಕ್ಕೊಳಗಾಗಿರುವುದು ಅಥವಾ ಮೃತಪಟ್ಟಿರುವುದರಿಂದ “ಈಗ ನಕ್ಸಲಿಸಂ ನಿರ್ಮೂಲನೆಗೊಂಡಿದೆ ಎಂದು ಹೇಳಬಹುದು” ಎಂದರು. ತಪ್ಪಿಸಿಕೊಂಡಿರುವ ಇನ್ನೊಬ್ಬ ಸದಸ್ಯರೊಂದಿಗೆ ಮಾತುಕತೆ ನಡೆಯುತ್ತಿದೆ ಎಂದೂ ಸಹ ತಿಳಿಸಿದರು.

ತಮ್ಮ ಆಡಳಿತಾವಧಿಯಲ್ಲಿ ನಕ್ಸಲಿಸಂ ತಡೆಯಲು ಕಾಂಗ್ರೆಸ್ ಏನೂ ಮಾಡಲಿಲ್ಲ ಎಂದು ಆರೋಪಿಸಿದ ಅವರು, ಛತ್ತೀಸ್‌ಗಢದ ಬಸ್ತಾರ್ ಪ್ರದೇಶದಿಂದ ಈಗ ಮಾವೋವಾದಿಗಳನ್ನು ಬಹುತೇಕ ನಿರ್ಮೂಲನೆ ಮಾಡಲಾಗಿದೆ ಎಂದರು. 75 ವರ್ಷಗಳಲ್ಲಿ 60 ವರ್ಷಗಳ ಕಾಲ ಕಾಂಗ್ರೆಸ್ ಅಧಿಕಾರದಲ್ಲಿದ್ದರೂ, ಆದಿವಾಸಿಗಳು ಅಭಿವೃದ್ಧಿಯಿಂದ ವಂಚಿತರಾಗಿದ್ದರು; ಆದರೆ ಮೋದಿ ಅಧಿಕಾರಕ್ಕೆ ಬಂದ ಬಳಿಕ ಮಾತ್ರ ನಿಜವಾದ ಅಭಿವೃದ್ಧಿ ನಡೆಯುತ್ತಿದೆ ಎಂದು ಹೇಳಿದರು.

“ನಕ್ಸಲಿಸಂನ ಮೂಲ ಕಾರಣ ಅಭಿವೃದ್ಧಿಯ ಬೇಡಿಕೆ ಅಲ್ಲ. ಅದು ಒಂದು ತತ್ವಶಾಸ್ತ್ರ, 1970ರಲ್ಲಿ ರಾಷ್ಟ್ರಪತಿ ಚುನಾವಣೆಯಲ್ಲಿ ಗೆಲ್ಲಲು ಇಂದಿರಾ ಗಾಂಧಿಯವರು ಸ್ವೀಕರಿಸಿದ ತತ್ವ. ಇದೇ ಎಡಪಂಥೀಯ ತತ್ವದಿಂದ ನಕ್ಸಲಿಸಂ ವ್ಯಾಪಿಸಿದೆ,” ಎಂದು ಅವರು ಆರೋಪಿಸಿದರು.

ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯನ್ನು ಗುರಿಯಾಗಿಸಿಕೊಂಡು ಮಾತನಾಡಿದ ಅವರು, ತಮ್ಮ ರಾಜಕೀಯ ಜೀವನದಲ್ಲಿ ಅನೇಕ ಬಾರಿ ನಕ್ಸಲರೊಂದಿಗೆ ರಾಹುಲ್ ಕಾಣಿಸಿಕೊಂಡಿದ್ದಾರೆ ಎಂದು ಆರೋಪಿಸಿದರು. ಭಾರತ್ ಜೋಡೋ ಯಾತ್ರೆಯ ಸಮಯದಲ್ಲೂ ಹಲವಾರು ನಕ್ಸಲ್ ಸಂಬಂಧಿತ ಸಂಘಟನೆಗಳು ಭಾಗವಹಿಸಿದ್ದವು ಹಾಗೂ ನಕ್ಸಲಿಸಂಗೆ ಹತ್ತಿರವಾದ ತತ್ವ ಹೊಂದಿದ್ದ ಗದ್ದರ್ ಅವರನ್ನು ಭೇಟಿಯಾದರು ಎಂದು ಹೇಳಿದರು.

“ನಕ್ಸಲ್ ಕಾರ್ಯಕರ್ತ ಹಿಡ್ಮಾ ಸಾವನ್ನಪ್ಪಿದಾಗ, ಇಂಡಿಯಾ ಗೇಟ್‌ನಲ್ಲಿ ‘ಒಬ್ಬ ಹಿಡ್ಮಾ ಸಾಯಿಸಿದರೆ, ಪ್ರತೀ ಮನೆಯಿಂದ ಹಿಡ್ಮಾ ಹುಟ್ಟುತ್ತಾನೆ’ ಎಂಬ ಘೋಷಣೆಗಳನ್ನು ಕೂಗಲಾಯಿತು. ಅದರ ವಿಡಿಯೋವನ್ನು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದರು. 1970ರಿಂದ ಮಾರ್ಚ್ 2026ರವರೆಗೆ ಅವರು ನಕ್ಸಲರಿಗೆ ಬೆಂಬಲ ನೀಡಿದ್ದಾರೆ. ಕಾಂಗ್ರೆಸ್‌ನ ಎಡಪಂಥೀಯ ತತ್ವದಿಂದ 20,000 ಜನರು ಸಾವನ್ನಪ್ಪಿದ್ದಾರೆ. ನಕ್ಸಲರೊಂದಿಗೆ ಇರುವುದರಿಂದ ಅವರ ನಾಯಕ (ರಾಹುಲ್) ‘ನಕ್ಸಲ್ವಾದಿ’ ಆಗಿದ್ದಾರೆ. ದೇಶದ ಜನರು ಇದಕ್ಕೆ ಚುನಾವಣೆಯಲ್ಲಿ ಉತ್ತರ ನೀಡಬೇಕು,” ಎಂದು ಅವರು ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಇರಾನ್: ಮಶಾದ್ ವಿಮಾನ ನಿಲ್ದಾಣದ ಮೇಲೆ ಅಮೆರಿಕ ದಾಳಿ, ಮಾನವೀಯ ನೆರವು ಸಂಗ್ರಹಿಸಲು ಭಾರತಕ್ಕೆ ಬರಬೇಕಿದ್ದ ವಿಮಾನಕ್ಕೆ ಹಾನಿ!

ಸಿದ್ದರಾಮಯ್ಯ ಅಂದು ಕಳ್ಳಮತಗಳಿಂದ ನನ್ನ ವಿರುದ್ಧ ಬಾದಾಮಿಯಲ್ಲಿ ಗೆದ್ದರು : ಶ್ರೀರಾಮುಲು

ಜಮೀರ್- ಮಲ್ಲಿಕಾರ್ಜುನ್ ಜಟಾಪಟಿ: ದಾವಣಗೆರೆ ದಕ್ಷಿಣ ಕ್ಷೇತ್ರ ಕಾಂಗ್ರೆಸ್ ಗೆ ಬಿಸಿ ತುಪ್ಪ; ಶಾಮನೂರು ಕುಟುಂಬದ ವಿರುದ್ಧ ಮುಸ್ಲಿಮರ ಕೋಪ!

'Pink Looks Good On Me': ಗನ್ ಶಾಟ್ ಸೆಲೆಬ್ರೇಷನ್, CKS ಮ್ಯಾನೇಜ್​​ಮೆಂಟ್ ಗೆ ಜಡೇಜಾ ಹೇಳಿದ್ದೇನು? Video

ನೂರಾರು ಕೋಟಿಗಳ ಒಡೆಯ TVK Vijay ತಂದೆ-ತಾಯಿ, ಮಕ್ಕಳಿಗೂ ಸಾಲ ಕೊಟ್ಟಿದ್ದಾರಾ? ಅಫಿಡವಿಟ್ಟಿನಲ್ಲಿ ನಮೂದು

SCROLL FOR NEXT