ಪ್ರಸೂನ್ ಜೋಶಿ 
ದೇಶ

ಪ್ರಸಾರ ಭಾರತಿ ನೂತನ ಅಧ್ಯಕ್ಷರಾಗಿ ಪ್ರಸೂನ್ ಜೋಶಿ ನೇಮಕ!

ಪ್ರಸಾರ ಭಾರತಿಯ ನೂತನ ಅಧ್ಯಕ್ಷರಾಗಿ ನೇಮಕಗೊಂಡಿರುವ ಪ್ರಸೂನ್ ಜೋಶಿ ಅವರಿಗೆ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವ ಅಶ್ವಿನಿ ವೈಷ್ಣವ್ ಅಭಿನಂದನೆ ಸಲ್ಲಿಸಿದ್ದಾರೆ.

ನವದೆಹಲಿ: ಖ್ಯಾತ ಗೀತೆ ರಚನೆಕಾರ, ಬರಹಗಾರ ಮತ್ತು ಸಂವಹನ ತಜ್ಞ ಪ್ರಸೂನ್ ಜೋಶಿ ಅವರನ್ನು ಪ್ರಸಾರ ಭಾರತಿಯ ನೂತನ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ. ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ಜೋಶಿ ಅವರನ್ನು ಪ್ರಮುಖ ಹುದ್ದೆಗೆ ನೇಮಿಸಿದೆ ಎಂದು ಅಧಿಕೃತ ಹೇಳಿಕೆಯೊಂದು ಶನಿವಾರ ತಿಳಿಸಿದೆ.

ಸಾಹಿತ್ಯ, ಜಾಹೀರಾತು, ಸಿನಿಮಾ ಮತ್ತು ಸಾರ್ವಜನಿಕ ಸಂವಹನದಲ್ಲಿ ವ್ಯಾಪಕ ಕೊಡುಗೆಗಳನ್ನು ನೀಡಿರುವ ವಿಶಿಷ್ಟ ಸೃಜನಶೀಲ, ವೃತ್ತಿಪರ ಮತ್ತು ಪ್ರಭಾವಶಾಲಿ ಬರವಣಿಗೆ, ಸಾಂಸ್ಕೃತಿಕ ಸಂವೇದನೆಗೆ ಹೆಸರುವಾಸಿಯಾದ ಜೋಶಿ, ಸಮಕಾಲೀನ ಭಾರತೀಯ ಮಾಧ್ಯಮ ನಿರೂಪಣೆಗಳನ್ನು ರೂಪಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ ಎಂದು ಆದೇಶದಲ್ಲಿ ಹೇಳಲಾಗಿದೆ.

ಪ್ರಸಾರ ಭಾರತಿಯ ನೂತನ ಅಧ್ಯಕ್ಷರಾಗಿ ನೇಮಕಗೊಂಡಿರುವ ಪ್ರಸೂನ್ ಜೋಶಿ ಅವರಿಗೆ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವ ಅಶ್ವಿನಿ ವೈಷ್ಣವ್ ಅಭಿನಂದನೆ ಸಲ್ಲಿಸಿದ್ದಾರೆ.

ಪ್ರಸೂನ್ ಅವರು ಜಾಹೀರಾತು, ಸಾಹಿತ್ಯ, ಕಲೆ ಮತ್ತು ಸಿನಿಮಾದಲ್ಲಿ ಪ್ರಪಂಚದಾದ್ಯಂತ ಹೆಸರುವಾಸಿಯಾದ ಅಪರೂಪದ ಸೃಜನಶೀಲ ಮನೋಭಾವದ ಸೆಲೆಬ್ರೆಟಿಯಾಗಿದ್ದಾರೆ. ಆದಾಗ್ಯೂ, ಅವರ ಹೃದಯ ಭಾರತಕ್ಕಾಗಿ ನಿಸ್ಸಂದೇಹವಾಗಿ ಬಡಿಯುತ್ತದೆ. ಜೋಶಿಯವರ ಮಾತುಗಳು ದೇಶದ ಮಣ್ಣಿನ ಪರಿಮಳವನ್ನು ಹೊತ್ತಿವೆ ಮತ್ತು ಅವರ ದೃಷ್ಟಿಕೋನವು ಭಾರತೀಯ ಸಂಸ್ಕೃತಿಯ ಕಾಲಾತೀತ ಸಾರವನ್ನು ಪ್ರತಿಬಿಂಬಿಸುತ್ತದೆ ಎಂದು ವೈಷ್ಣವ್ ಹೇಳಿದ್ದಾರೆ.

ಜೋಶಿ ಅವರ ನಾಯಕತ್ವದಲ್ಲಿ ಪ್ರಸಾರ ಭಾರತಿಗೆ ಹೊಸ ಚೈತನ್ಯ ಸಿಗಲಿದೆ. ಅವರ ಮುಂದಿನ ಅವಧಿ ಸ್ಮರಣೀಯ ಮತ್ತು ಅರ್ಥಪೂರ್ಣವಾಗಿರಲಿ ಎಂದು ಅಶ್ವಿನಿ ವೈಷ್ಣವ್ ಶುಭ ಕೋರಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಯೋಗೇಶ್ ಗೌಡ ಕೊಲೆ ಪ್ರಕರಣ: ವಿನಯ್ ಕುಲಕರ್ಣಿ ಶಾಸಕ ಸ್ಥಾನ ರದ್ದು; ಅಧಿಕೃತ ಆದೇಶ!

ಹೌದು ನಾವು ಒಂದ್ ರೀತಿ ಕಡಲ್ಗಳ್ಳರೇ...; ಹೆಮ್ಮೆ ಇದೆ: ಜಲಸಂಧಿಗೆ ದಿಗ್ಬಂಧನದ ವಿಷಯವಾಗಿ ಟ್ರಂಪ್ ಹೊಸ ವರಸೆ!

ಬೆಂಗಳೂರು: ಅನಾರೋಗ್ಯದಿಂದ ದಕ್ಷ ಅಧಿಕಾರಿ 39 ವರ್ಷದ SP ಲಾವಣ್ಯ ಹಠಾತ್‌ ನಿಧನ!

ಟಿಎಂಸಿ ಕಾರ್ಯಕರ್ತರಿಂದ ಜೀವ ಬೆದರಿಕೆ ಇದೆ; ಮತ ಎಣಿಕೆ ವೇಳೆ ನಮಗೆ ಭದ್ರತೆ ಕೊಡಿ: ಬಂಗಾಳದಲ್ಲಿ ನೂರಾರು ಗ್ರಾಮಸ್ಥರಿಂದ ಪ್ರತಿಭಟನೆ

ಅನ್‌ಫಾಲೋ ಪ್ರಹಸನ ಬೆನ್ನಲ್ಲೇ ದಿಢೀರ್ ಅಂತ ಅಮಿತ್ ಶಾರನ್ನು ಭೇಟಿಯಾದ ರಿಷಭ್ ಶೆಟ್ಟಿ!

SCROLL FOR NEXT