ರಾಹುಲ್ ಗಾಂಧಿ 
ದೇಶ

'ಮತ ಕಳ್ಳತನದಿಂದ ಗೆದ್ದಿರುವ ಬಿಜೆಪಿ ಸಂಸದರು ನುಸುಳುಕೋರರು: ನ್ಯಾಯಸಮ್ಮತ ಚುನಾವಣೆ ನಡೆದರೆ ಲೋಕಸಭೆಯಲ್ಲಿ 140 ಸ್ಥಾನ ಗೆಲ್ಲುತ್ತಿರಲಿಲ್ಲ'

ಮತ ಕಳ್ಳತನದ ಮೂಲಕ ಕೆಲವೊಮ್ಮೆ ವೈಯಕ್ತಿಕ ಸ್ಥಾನಗಳನ್ನು ಕದಿಯಲಾಗುತ್ತದೆ. ಇನ್ನು ಕೆಲವು ಬಾರಿ ಇಡೀ ಸರ್ಕಾರವನ್ನೇ ಕದಿಯಬಹುದು. ಲೋಕಸಭೆಯಲ್ಲಿ ಈಗಿರುವ ಬಿಜೆಪಿಯ 240 ಸಂಸದರಲ್ಲಿ ಪ್ರತಿ ಆರನೇ ಸಂಸದರು ಮತ ಕಳ್ಳತನದ ಮೂಲಕವೇ ಗೆದ್ದಿದ್ದಾರೆ.

ನವದೆಹಲಿ: ಲೋಕಸಭೆಯ ಪ್ರತಿ ಆರರಲ್ಲಿ ಒಬ್ಬ ಬಿಜೆಪಿ ಸಂಸದ ಮತ ಕಳ್ಳತನದ ಮೂಲಕ ಗೆಲುವು ಸಾಧಿಸಿದ್ದಾರೆ ಎಂದು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಆರೋಪಿಸಿದ್ದಾರೆ.

ಈ ಸಂಬಂಧ ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿರುವ ಅವರು, ಬಿಜೆಪಿ ಪರಿಭಾಷೆಯಲ್ಲಿ ಹೇಳುವುದಾದರೆ ಅಂತಹವರನ್ನು ‘ನುಸುಳುಕೋರರು’ ಎನ್ನಬಹುದೇ ರಾಹುಲ್ ಗಾಂಧಿ ಪ್ರಶ್ನಿಸಿದ್ದಾರೆ.

ಮತ ಕಳ್ಳತನದ ಮೂಲಕ ಕೆಲವೊಮ್ಮೆ ವೈಯಕ್ತಿಕ ಸ್ಥಾನಗಳನ್ನು ಕದಿಯಲಾಗುತ್ತದೆ. ಇನ್ನು ಕೆಲವು ಬಾರಿ ಇಡೀ ಸರ್ಕಾರವನ್ನೇ ಕದಿಯಬಹುದು. ಲೋಕಸಭೆಯಲ್ಲಿ ಈಗಿರುವ ಬಿಜೆಪಿಯ 240 ಸಂಸದರಲ್ಲಿ ಪ್ರತಿ ಆರನೇ ಸಂಸದರು ಮತ ಕಳ್ಳತನದ ಮೂಲಕವೇ ಗೆದ್ದಿದ್ದಾರೆ ಎಂದು ರಾಹುಲ್ ಗಾಂಧಿ ಪೋಸ್ಟ್ ಮಾಡಿದ್ದಾರೆ.

ಒಂದು ವೇಳೆ ನ್ಯಾಯಸಮ್ಮತವಾಗಿ ಚುನಾವಣೆ ನಡೆದರೆ ಬಿಜೆಪಿ ಇಂದು ಲೋಕಸಭೆಯಲ್ಲಿ 140 ಸ್ಥಾನಗಳನ್ನು ಕೂಡ ಗೆಲ್ಲಲು ಸಾಧ್ಯವಾಗುತ್ತಿರಲಿಲ್ಲ ಎಂದು ಹೇಳಿದ್ದಾರೆ.

ಮತ ಕಳ್ಳತನದ ಮೂಲಕವೇ ಗೆದ್ದವರನ್ನು ಗುರುತಿಸುವುದು ಕಷ್ಟವೇನಲ್ಲ. ಬಿಜೆಪಿಯ ಪರಿಭಾಷೆಯಲ್ಲಿ ಹೇಳುವುದಾದರೆ ಅಂತಹವರನ್ನು ‘ನುಸುಳುಕೋರರು’ ಎಂದು ಕರೆಯಬೇಕೇ?, ಇನ್ನು ಹರಿಯಾಣದ ಕಥೆಯೇನು? ಅಲ್ಲಿರುವ ಇಡೀ ಸರ್ಕಾರ ನುಸುಳುಕೋರರು ಇದ್ದಂತೆ. ಮತದಾರರ ಪಟ್ಟಿ ಮತ್ತು ಚುನಾವಣಾ ಪ್ರಕ್ರಿಯೆಯನ್ನು ತಿರುಚಲು ಬಿಜೆಪಿ, ಚುನಾವಣಾ ಆಯೋಗವನ್ನು ರಿಮೋಟ್ ಕಂಟ್ರೋಲ್ ರೀತಿಯಲ್ಲಿ ಬಳಸಿಕೊಳ್ಳುತ್ತಿದೆ ಎಂದು ರಾಹುಲ್ ವಾಗ್ದಾಳಿ ನಡೆಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ತಮಿಳುನಾಡು ರಾಜಕೀಯದಲ್ಲಿ ಬಿಗ್​ ಟ್ವಿಸ್ಟ್: TVK ಬೆಂಬಲಿಸಲು ಕಾಂಗ್ರೆಸ್ ನಿರ್ಧಾರ; DMK ಮೈತ್ರಿಗೆ ಭಾರಿ ಶಾಕ್, ಹೊಸ ಮೈತ್ರಿ ಸರ್ಕಾರ ಅಧಿಕಾರಕ್ಕೆ..!

TVK–ಕಾಂಗ್ರೆಸ್ ಮೈತ್ರಿ: ಸಂಪುಟದಲ್ಲಿ 2 ಸ್ಥಾನಕ್ಕೆ 'ಕೈ' ಬೇಡಿಕೆ, ತಮಿಳುನಾಡಿನಲ್ಲಿ ವಿಜಯ್ ಸರ್ಕಾರ ರಚನೆ ಬಹುತೇಕ ಖಚಿತ..!

ಸಿಎಂ ಹುದ್ದೆ ತ್ಯಾಗಕ್ಕೆ ಸಿದ್ದರಾಮಯ್ಯ ಸಿದ್ದ: ಹೈಕಮಾಂಡ್ ಆದೇಶಕ್ಕೆ ಪರಮೇಶ್ವರ್ ಬದ್ಧ; ಮುಖ್ಯಮಂತ್ರಿ ಸ್ಥಾನ ಒಲ್ಲೆ ಎಂದಿದ್ದೇಕೆ ಖರ್ಗೆ?

ಸೋಲು ಬಳಿಕವೂ ಹಠಕ್ಕೆ ಬಿದ್ದ ಮಮತಾ ಬ್ಯಾನರ್ಜಿ: ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಲು ನಕಾರ, ಒದ್ದು ಹೊರಹಾಕಿ ಎಂದು ಜೇಠ್ಮಲಾನಿ ಕಿಡಿ

ಹೈಕಮಾಂಡ್ ಕರೆದ ತಕ್ಷಣ ದೆಹಲಿಗೆ ಪ್ರಯಾಣ: 2028 ರಲ್ಲೂ ನಮ್ಮದೇ ಸರ್ಕಾರ ಫಿಕ್ಸ್; ಸಿಎಂ ಸಿದ್ದರಾಮಯ್ಯ

SCROLL FOR NEXT