ಚಂದ್ರಬಾಬು ನಾಯ್ಡು 
ದೇಶ

ಆಂಧ್ರದಲ್ಲೂ ಇಂಧನ ಬಳಕೆ ನಿರ್ಬಂಧ ಜಾರಿ; ಮನೆಯಿಂದ ಕೆಲಸ, ವಾಹನ ರಹಿತ ದಿನ, ಬೆಂಗಾವಲು ಕಡಿತ ಘೋಷಣೆ!

ವಾಹನ ರಹಿತ ದಿನ, ಆನ್‌ಲೈನ್ ತರಗತಿಗಳು, ಬೆಂಗಾವಲು ವಾಹನಗಳ ಸಂಖ್ಯೆಯಲ್ಲಿ ಕಡಿತ ಮಾಡುವುದು, ವಿಶೇಷ ವಿಮಾನಗಳ ಬಳಕೆ ಮತ್ತು ವಿದೇಶಿ ಪ್ರವಾಸಗಳನ್ನು ಕಡಿಮೆ ಮಾಡುವುದು ಹಾಗೂ ಚಿನ್ನ ಖರೀದಿ ಮುಂದೂಡುವುದು.

ಅಮರಾವತಿ: ತೈಲ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಇಂಧನ ಉಳಿತಾಯಕ್ಕೆ ಕರೆ ನೀಡಿರುವುದನ್ನು ಅನುಸರಿಸಿ ಆಂಧ್ರ ಪ್ರದೇಶದಲ್ಲೂ ಮನೆಯಿಂದ ಕೆಲಸ, ವಾಹನ ರಹಿತ ದಿನ, ಬೆಂಗಾವಲು ಕಡಿತ ಘೋಷಣೆ ಮಾಡಲಾಗಿದೆ.

ವಾಹನ ರಹಿತ ದಿನ, ಆನ್‌ಲೈನ್ ತರಗತಿಗಳು, ಬೆಂಗಾವಲು ವಾಹನಗಳ ಸಂಖ್ಯೆಯಲ್ಲಿ ಕಡಿತ ಮಾಡುವುದು, ವಿಶೇಷ ವಿಮಾನಗಳ ಬಳಕೆ ಮತ್ತು ವಿದೇಶಿ ಪ್ರವಾಸಗಳನ್ನು ಕಡಿಮೆ ಮಾಡುವುದು ಹಾಗೂ ಚಿನ್ನ ಖರೀದಿ ಮುಂದೂಡುವುದು ಸೇರಿದಂತೆ ಹಲವು ಕ್ರಮಗಳನ್ನು ಆಂಧ್ರಪ್ರದೇಶ ಸಚಿವ ಸಂಪುಟ ಗುರುವಾರ ಶಿಫಾರಸು ಮಾಡಿದೆ.

ಸಚಿವ ಸಂಪುಟ ಸಭೆ ನಂತರ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಮಾಹಿತಿ ಮತ್ತು ಸಾರ್ವಜನಿಕ ಸಂಪರ್ಕ ಸಚಿವ ಕೆ. ಪಾರ್ಥಸಾರಥಿ ಅವರು, ಮನೆಯಿಂದ ಕೆಲಸ ಮಾಡುವುದು, ಸಾರ್ವಜನಿಕ ಸಾರಿಗೆ ಬಳಸುವುದು, ವರ್ಚುವಲ್ ಸಭೆ ನಡೆಸುವುದು ಮತ್ತು ಇಂಧನ ಬಳಕೆಯನ್ನು ಮೇಲ್ವಿಚಾರಣೆ ಮಾಡುವುದು ಇತರ ಶಿಫಾರಸುಗಳಾಗಿವೆ ಎಂದರು.

ಅಮೆರಿಕ - ಇಸ್ರೇಲ್ ಮತ್ತು ಇರಾನ್ ಯುದ್ಧದಿಂದ ತೈಲ ಬಿಕ್ಕಟ್ಟು ಎದುರಾಗಿದ್ದು, ಈ ನಿರ್ಣಾಯಕ ಸಮಯದಲ್ಲಿ ದೇಶಕ್ಕಾಗಿ "ನನ್ನ ದೇಶ, ನನ್ನ ಜವಾಬ್ದಾರಿ" ತತ್ವವನ್ನು ಅಳವಡಿಸಿಕೊಳ್ಳಲು ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು ಜನರಿಗೆ ಕರೆ ನೀಡಿದ್ದಾರೆ ಎಂದು ಹೇಳಿದರು.

"ಪ್ರಸ್ತುತ ಭೌಗೋಳಿಕ-ರಾಜಕೀಯ ಸಂದರ್ಭಗಳನ್ನು, ವಿಶೇಷವಾಗಿ ನಮ್ಮ ದೇಶದ ಇಂಧನ ಅಗತ್ಯತೆಗಳು, ವಿದೇಶೀ ವಿನಿಮಯ ಮತ್ತು ರೈತರ ಉತ್ಪನ್ನಗಳ ರಫ್ತುಗಳ ಮೇಲಿನ ಒತ್ತಡವನ್ನು ಗಮನದಲ್ಲಿಟ್ಟುಕೊಂಡು, ನನ್ನ ದೇಶ, ನನ್ನ ಜವಾಬ್ದಾರಿ" ತತ್ವವನ್ನು ಹೊಂದಿರುವ ಪ್ರತಿಯೊಬ್ಬ ವ್ಯಕ್ತಿಯು ದೇಶದ ಪ್ರಯೋಜನಕ್ಕಾಗಿ ಕೆಲವು ಕ್ರಮಗಳನ್ನು ತೆಗೆದುಕೊಳ್ಳಬೇಕು" ಎಂದು ನಾಯ್ಡು ಅವರು ಹೇಳಿರುವುದಾಗಿ ಪಾರ್ಥಸಾರಥಿ ವಿವರಿಸಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ದೆಹಲಿ ಸರ್ಕಾರಿ ನೌಕರರಿಗೆ ವಾರಕ್ಕೆ 2 ದಿನ ವರ್ಕ್ ಫ್ರಮ್ ಹೋಮ್; 6 ತಿಂಗಳು ಹೊಸ ವಾಹನ ಖರೀದಿ ಮಾಡುವಂತಿಲ್ಲ!

Indian Stock Market: ಪುಟಿದೆದ್ದ ಮಾರುಕಟ್ಟೆ, Sensex 789 ಅಂಕ ಏರಿಕೆ, 5 ಲಕ್ಷ ಕೋಟಿ ರೂ ಲಾಭ

ಕನ್ನಡ ಭಾಷೆ ಮರೆತಿಲ್ಲ: ಆದ್ರೆ ಟಚ್ ಬಿಟ್ಟು ಹೋಗಿದೆ, ಮೂಲ ಮರೆಯದ ತಲೈವಾ! ಕನ್ನಡಿಗರು ಫಿದಾ Video

ಡೀಪ್-ಟೆಕ್, ನಾವೀನ್ಯತೆ ಕ್ಷೇತ್ರಗಳಲ್ಲಿ ಪಾಲುದಾರಿಕೆ: ಸಚಿವ ಪ್ರಿಯಾಂಕ್‌ ಖರ್ಗೆ ಜೊತೆ ಚಿಲಿ ನಿಯೋಗದ ಚರ್ಚೆ!

ಕೋಟ್‌ ಧರಿಸಿ ಕೋರ್ಟ್‌ಗೆ ಹಾಜರಾದ ಮಮತಾಗೆ ಸಂಕಷ್ಟ?: ವಕೀಲ ವೃತ್ತಿಯ ವಿವರ ಕೇಳಿದ ಬಾರ್ ಕೌನ್ಸಿಲ್

SCROLL FOR NEXT