ಸುಪ್ರೀಂ ಕೋರ್ಟ್‌ 
ದೇಶ

'ವಿಚಾರಣೆ ವಿಳಂಬದಿಂದ ಕಸಬ್, ಹಫೀಜ್ ಸಯೀದ್‌ಗೂ ಜಾಮೀನು ಸಿಗುತ್ತಿತ್ತೇ?': ಸುಪ್ರೀಂ ಕೋರ್ಟ್‌ಗೆ ಕೇಂದ್ರ ಪ್ರಶ್ನೆ

ಮುಂಬೈ ಭಯೋತ್ಪಾದಕ ದಾಳಿಯ ಅಪರಾಧಿ, ಉಗ್ರ ಅಜ್ಮಲ್ ಕಸಬ್ ಅಥವಾ ಪಾಕಿಸ್ತಾನ ಮೂಲದ ಲಷ್ಕರ್-ಎ-ತೊಯ್ಬಾ ಭಯೋತ್ಪಾದಕ ಹಫೀಜ್ ಸಯೀದ್‌ರಂತಹ ವ್ಯಕ್ತಿಗಳು ಸಹ ಇದೇ ರೀತಿಯ ಆಧಾರದ ಮೇಲೆ ರಿಲೀಫ್ ಪಡೆಯಬಹುದಿತ್ತೇ? ಎಂದು ಪ್ರಶ್ನಿಸಿದರು.

ನವದೆಹಲಿ: 2020ರ ದೆಹಲಿ ಗಲಭೆಗೆ ಪಿತೂರಿ ಪ್ರಕರಣದ ಇಬ್ಬರು ಆರೋಪಿಗಳಿಗೆ ಮಧ್ಯಂತರ ಜಾಮೀನು ನೀಡಬಹುದು. ಆದರೆ ಅನಿವಾರ್ಯ ಸಂದರ್ಭಗಳಲ್ಲಿ ಮಾತ್ರ ಜಾಮೀನು ನಿರಾಕರಿಸಬೇಕು ಎನ್ನುವ ನಿಯಮವು ಕಾನೂನುಬಾಹಿರ ಚಟುವಟಿಕೆಗಳ (ತಡೆ) ಕಾಯ್ದೆಗೂ (ಯುಎಪಿಎ) ಅನ್ವಯವಾಗುತ್ತದೆ ಎಂದು ಸುಪ್ರೀಂ ಕೋರ್ಟ್ ಹೇಳಿರುವುದು ಚರ್ಚೆಗೆ ಕಾರಣವಾಗಿದೆ.

ಈ ಮಧ್ಯೆ ಕಾನೂನುಬಾಹಿರ ಚಟುವಟಿಕೆಗಳ(ತಡೆಗಟ್ಟುವಿಕೆ) ಕಾಯ್ದೆ ಕುರಿತ ತೀರ್ಪುಗಳನ್ನು ವಿಸ್ತೃತ ಪೀಠ ಪರಿಗಣಿಸುವ ಅಗತ್ಯವಿದೆಯೇ ಎಂದು ಪರಿಶೀಲಿಸಲು ಸುಪ್ರೀಂ ಕೋರ್ಟ್ ಶುಕ್ರವಾರ ಒಪ್ಪಿಕೊಂಡಿದೆ.

ವಿಚಾರಣೆಯ ಸಮಯದಲ್ಲಿ, ದೆಹಲಿ ಪೊಲೀಸರು, ದೀರ್ಘಕಾಲದ ಸೆರೆವಾಸ ಅಥವಾ ವಿಚಾರಣೆಯಲ್ಲಿ ವಿಳಂಬವು ಕಾನೂನುಬಾಹಿರ ಚಟುವಟಿಕೆಗಳು(ತಡೆಗಟ್ಟುವಿಕೆ) ಕಾಯ್ದೆ (ಯುಎಪಿಎ) ಅಡಿಯಲ್ಲಿ ಜಾಮೀನು ಪಡೆಯಲು ಅವಕಾಶ ನೀಡುವುದಿಲ್ಲ ಎಂದು ವಾದಿಸಿದರು ಮತ್ತು 26/11 ಮುಂಬೈ ಭಯೋತ್ಪಾದಕ ದಾಳಿಯ ಅಪರಾಧಿ, ಉಗ್ರ ಅಜ್ಮಲ್ ಕಸಬ್ ಅಥವಾ ಪಾಕಿಸ್ತಾನ ಮೂಲದ ಲಷ್ಕರ್-ಎ-ತೊಯ್ಬಾ ಭಯೋತ್ಪಾದಕ ಹಫೀಜ್ ಸಯೀದ್‌ರಂತಹ ವ್ಯಕ್ತಿಗಳು ಸಹ ಇದೇ ರೀತಿಯ ಆಧಾರದ ಮೇಲೆ ರಿಲೀಫ್ ಪಡೆಯಬಹುದಿತ್ತೇ? ಎಂದು ಪ್ರಶ್ನಿಸಿದರು.

ವಿಚಾರಣೆಯಲ್ಲಿ ವಿಳಂಬವು ಯುಎಪಿಎ ಅಡಿಯಲ್ಲಿ ಕಠಿಣ ಜಾಮೀನು ನಿರ್ಬಂಧಗಳನ್ನು ಅತಿಕ್ರಮಿಸಬಹುದೇ ಎಂಬ ಬಗ್ಗೆ ಉಲ್ಲೇಖವನ್ನು ಕೋರಿ ಪೊಲೀಸರು ಸಲ್ಲಿಸಿದ ಮನವಿಯನ್ನು ಪರಿಗಣಿಸುವುದಾಗಿ ನ್ಯಾಯಮೂರ್ತಿಗಳಾದ ಅರವಿಂದ್ ಕುಮಾರ್ ಮತ್ತು ಪಿಬಿ ವರಾಲೆ ಅವರ ಪೀಠ ಹೇಳಿದೆ.

ದೆಹಲಿ ಪೊಲೀಸರ ಪರವಾಗಿ ವಿಚಾರಣೆಗೆ ಹಾಜರಾದ ಹೆಚ್ಚುವರಿ ಸಾಲಿಸಿಟರ್ ಜನರಲ್ ಎಸ್.ವಿ. ರಾಜು, ಕಸಬ್ ಪ್ರಕರಣದ ವಿಚಾರಣೆಯು ಹೆಚ್ಚಿನ ಸಂಖ್ಯೆಯ ಸಾಕ್ಷಿಗಳಿರುವುದರಿಂದ ಏಳು ವರ್ಷಗಳ ಕಾಲ ವಿಳಂಬವಾಗಿದೆ ಎಂದು ನ್ಯಾಯಪೀಠಕ್ಕೆ ತಿಳಿಸಿದರು. "ಇದರರ್ಥ ನ್ಯಾಯಾಲಯವು ಕಸಬ್‌ಗೆ ಜಾಮೀನು ನೀಡುತ್ತದೆಯೇ? ಯುಎಪಿಎ ಪ್ರಕರಣದಲ್ಲಿ ಆರೋಪಿಯ ಪಾತ್ರವನ್ನು ನಾವು ಪರಿಶೀಲಿಸಬೇಕು" ಎಂದು ರಾಜು ಹೇಳಿದರು.

"ಹಫೀಜ್ ಸಯೀದ್‌ನನ್ನು ಭಾರತಕ್ಕೆ ಕರೆತಂದರೆ, ಪ್ರಕರಣವು ಹೆಚ್ಚಿನ ಸಂಖ್ಯೆಯ ಸಾಕ್ಷಿಗಳನ್ನು ಹೊಂದಿರುತ್ತದೆ ಮತ್ತು ವಿಚಾರಣೆ ವಿಳಂಬವಾದರೆ, ನ್ಯಾಯಾಲಯವು ಅವನಿಗೆ ಜಾಮೀನು ನೀಡುತ್ತದೆಯೇ? ಇದೆಲ್ಲವೂ ಪ್ರತಿಯೊಂದು ಪ್ರಕರಣದ ಸಂಗತಿಗಳನ್ನು ಅವಲಂಬಿಸಿರುತ್ತದೆ. ಇದಕ್ಕೆ ಸಿದ್ಧ ಸೂತ್ರವಿರುವುದಿಲ್ಲ" ಎಂದು ಅವರು ಹೇಳಿದರು.

ಯುಎಪಿಎ ಅಡಿಯಲ್ಲಿ ಕಟ್ಟಾ ಅಪರಾಧಿಗಳಿಗೆ ಜಾಮೀನು ನಿರಾಕರಣೆಯನ್ನು ಈ ನ್ಯಾಯಾಲಯವು ಹಲವಾರು ತೀರ್ಪುಗಳಲ್ಲಿ ಎತ್ತಿಹಿಡಿದಿದೆ ಎಂದು ರಾಜು ವಾದಿಸಿದರು. ಯುಎಪಿಎ ಅಡಿಯಲ್ಲಿ ಆರೋಪಿಗಳನ್ನು ಸಾಮಾನ್ಯೀಕರಿಸಲು ಸಾಧ್ಯವಿಲ್ಲ. ಏಕೆಂದರೆ ಅವರಲ್ಲಿ ಕೆಲವು ಕಟ್ಟಾ ಅಪರಾಧಿಗಳು ಇರಬಹುದು ಮತ್ತು ಕೆಲವರು ಅವರ ಸಹಚರರಾಗಿರಬಹುದು, ಆದ್ದರಿಂದ ಪ್ರತಿಯೊಬ್ಬ ಆರೋಪಿಗೆ ನೀಡಲಾದ ಪಾತ್ರವನ್ನು ಪರಿಗಣಿಸಬೇಕಾಗಿದೆ ಎಂದು ಅವರು ಹೇಳಿದರು.

ಜಾಮೀನು ಅರ್ಜಿಗಳ ಮೇಲಿನ ತೀರ್ಪನ್ನು ಸುಪ್ರೀಂ ಕೋರ್ಟ್ ಕಾಯ್ದಿರಿಸಿದೆ. ರಿಲೀಫ್ ಸಿಗುವ ಸಾಧ್ಯತೆಯಿದೆ ಮತ್ತು ನ್ಯಾಯಾಲಯವು ಮೇ 25 ರಂದು ಆದೇಶವನ್ನು ನೀಡುತ್ತದೆ ಎಂದು ಆರೋಪಿಗಳಾದ ಅಬ್ದುಲ್ ಖಾಲಿದ್ ಸೈಫಿ ಮತ್ತು ತಸ್ಲೀಮ್ ಅಹ್ಮದ್ ಪರ ವಕೀಲೆ ರೆಬೆಕ್ಕಾ ಜಾನ್ ಅವರು ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಮಾತೃತ್ವಕ್ಕೆ ಗೌರವ ನೀಡಿ, ದ್ವೇಷ ರಾಜಕಾರಣ ಬೇಡ: WFIಗೆ ದೆಹಲಿ ಹೈಕೋರ್ಟ್ ತೀವ್ರ ತರಾಟೆ, ವಿನೇಶ್ ಫೋಗಟ್‌ 'ಅನರ್ಹತೆ' ನಿರ್ಧಾರಕ್ಕೆ ತಡೆ..!

Mount Everest ಹತ್ತಿದ ಖುಷಿ ಕ್ಷಣ ಮಾತ್ರ ಉಳಿಯಲಿಲ್ಲ; ಅರ್ಧದಲ್ಲೇ ಪ್ರಾಣಬಿಟ್ಟ ಭಾರತೀಯ ಪರ್ವತಾರೋಹಿಗಳು!

ಕರ್ನಾಟಕ, ಕೇರಳ ನಂತರ ಪಶ್ಚಿಮ ಬಂಗಾಳದಲ್ಲೂ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ: ಬಿಜೆಪಿ ಸರ್ಕಾರ ಘೋಷಣೆ

'Cockroach Eating Mangoes: 'ಕಾಕ್ರೋಜ್ ಜನತಾ ಪಾರ್ಟಿ ಬೆಂಬಲಿಸಿ ನಟ ಪ್ರಕಾಶ್ ರಾಜ್ ಪೋಸ್ಟ್, ವೈರಲ್!

ರಾಷ್ಟ್ರೀಯ ಭದ್ರತೆಗೆ ಬೆದರಿಕೆ? ಕಾಕ್ರೋಚ್ ಜನತಾ ಪಕ್ಷದ x ಖಾತೆ ನಿರ್ಬಂಧಕ್ಕೆ ಕಾರಣ! ವರದಿಗಳು

SCROLL FOR NEXT