ಕೋಲ್ಕತಾ: ಬಂಗಾಳ ವಿಧಾನಸಭೆ ಚುನಾವಣೆಯಲ್ಲಿ ಹೀನಾಯವಾಗಿ ಸೋತ ಮಾಜಿ ಸಿಎಂ ಮಮತಾ ಬ್ಯಾನರ್ಜಿಗೆ ಮತ್ತೊಂದು ಭಾರಿ ಆಘಾತ ಎದುರಾಗಿದ್ದು, ತೃಣಮೂಲ ಕಾಂಗ್ರೆಸ್ ಪಕ್ಷದ ಬರೊಬ್ಬರಿ 12 ಸಂಸದರು ಬಿಜೆಪಿ ಸೇರ್ಪಡೆಯಾಗುತ್ತಿದ್ದಾರೆ ಎಂದು ಹೇಳಲಾಗಿದೆ.
ಹೌದು.. 2026ರ ಪಶ್ಟಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಭಾರೀ ಸೋಲು ಕಂಡ ನಂತರ, ತೃಣಮೂಲ ಕಾಂಗ್ರೆಸ್ (All India Trinamool Congress) ಪಕ್ಷದೊಳಗಿನ ಆಂತರಿಕ ಸಂಕಷ್ಟ ಮತ್ತಷ್ಟು ಗಂಭೀರವಾಗುತ್ತಿರುವಂತೆ ಕಾಣುತ್ತಿದೆ.
ರಾಜಕೀಯ ವಲಯಗಳಲ್ಲಿ, ಹಲವಾರು ಟಿಎಂಸಿ ಸಂಸದರು ಬಿಜೆಪಿ (Bharatiya Janata Party) ಜೊತೆ ಸಂಪರ್ಕದಲ್ಲಿದ್ದು, ಶೀಘ್ರದಲ್ಲೇ ಬಿಜೆಪಿ ಸೇರ್ಪಡೆಯಾಗಲಿದ್ದಾರೆ ಎಂಬ ಚರ್ಚೆಗಳು ಜೋರಾಗಿವೆ.
ವರದಿಗಳ ಪ್ರಕಾರ, ಟಿಎಂಸಿಯ 29 ಲೋಕಸಭಾ ಸಂಸದರ ಪೈಕಿ ಸುಮಾರು 12 ಮಂದಿ ಈಗಾಗಲೇ ಬಿಜೆಪಿ ಸೇರುವ ಅಥವಾ ಬೆಂಬಲಿಸುವ ಯೋಜನೆ ಮಾಡಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಇದಲ್ಲದೆ ಇನ್ನೂ ಐದು ಅಥವಾ ಆರು ಸಂಸದರೊಂದಿಗೆ ಕೂಡ ಮಾತುಕತೆ ನಡೆಯುತ್ತಿದೆ ಎಂದು ವರದಿಯಾಗಿದೆ.
ದೈನಿಕ್ ಜಾಗರಣ್ ವರದಿ ಪ್ರಕಾರ, ಪಕ್ಷತ್ಯಾಗ ವಿರೋಧಿ ಕಾನೂನನ್ನು ತಪ್ಪಿಸಿಕೊಳ್ಳಲು ಕನಿಷ್ಠ 19-20 ಸಂಸದರನ್ನು ಒಟ್ಟುಗೂಡಿಸುವ ತಂತ್ರ ರೂಪಿಸಲಾಗುತ್ತಿದೆ. ಇವರಲ್ಲಿ, ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಮತ್ತು ಅಭಿಷೇಖ್ ಬ್ಯಾನರ್ಜಿ ಅವರಿಗೆ ಆಪ್ತರಾಗಿದ್ದಾರೆ ಎನ್ನಲಾಗುವ ಕೆಲ ಸಂಸದರೂ ಸೇರಿದ್ದಾರೆ ಎನ್ನುವುದು ವಿಶೇಷವಾಗಿದೆ. ಇದು ದೀದಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಆದರೆ ಇದು ಬಿಜೆಪಿಗೆ ರಾಜಕೀಯವಾಗಿ ಮಹತ್ವದ್ದಾಗಿದೆ.
ಪಕ್ಷಾಂತರ ಕಾಯ್ದೆ ತಪ್ಪಿಸಿಕೊಳ್ಳಲು ಮಾಸ್ಚರ್ ಪ್ಲಾನ್!
ಪಕ್ಷಾಂತರ ವಿರೋಧಿ ಕಾನೂನನ್ನು ತಪ್ಪಿಸಲು ಕನಿಷ್ಠ 19-20 ಸಂಸದರನ್ನು ಒಟ್ಟುಗೂಡಿಸಲು ಕಾರ್ಯತಂತ್ರವನ್ನು ಮಾಡಲಾಗುತ್ತಿದೆ ಎಂದು ಹೇಳಲಾಗುತ್ತಿದೆ. ಈ ಸಂಭವನೀಯ ಪಕ್ಷಾಂತರದ ಬಗ್ಗೆ ತೃಣಮೂಲ ನಾಯಕತ್ವವು ಸಹ ತಿಳಿದಿದೆ ಮತ್ತು ಪಕ್ಷವನ್ನು ಒಗ್ಗೂಡಿಸಲು ಪ್ರಯತ್ನಗಳು ಪ್ರಾರಂಭವಾಗಿವೆ ಎಂದು ರಾಜಕೀಯ ಮೂಲಗಳು ಹೇಳುತ್ತಿವೆ.
ಮಾಜಿ ಮುಖ್ಯಮಂತ್ರಿ ಮತ್ತು ಟಿಎಂಸಿ ವರಿಷ್ಠೆ ಮಮತಾ ಬ್ಯಾನರ್ಜಿ ಮತ್ತು ಅವರ ಸೋದರಳಿಯ ಮತ್ತು ಕೆಲವು ಸಂಸದರು ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ಅವರ ಆಪ್ತರು ಎಂದು ಪರಿಗಣಿಸಿದ್ದಾರೆ.
ರಾಜ್ಯಸಭೆ ಬಲಾಬಲ ಹೆಚ್ಚಿಸಿಕೊಳ್ಳಲು ಟಿಎಂಸಿ ಸಂಸದರ ಮೇಲೆ ಬಿಜೆಪಿ ಕಣ್ಣು
ಪ್ರಸ್ತುತ ಲೋಕಸಭೆಯಲ್ಲಿ ಬಿಜೆಪಿ 240 ಸಂಸದರಿದ್ದು, ಮಿತ್ರಪಕ್ಷಗಳ ಬೆಂಬಲದೊಂದಿಗೆ ಸರ್ಕಾರ ಸ್ಪರ್ಧಿಸುತ್ತಿದೆ. ಅಂತಹ ಪರಿಸ್ಥಿತಿಯಲ್ಲಿ, ತೃಣಮೂಲ ಸಂಸದರು ಹೆಚ್ಚಿನ ಸಂಖ್ಯೆಯಲ್ಲಿ ಬಿಜೆಪಿಯೊಂದಿಗೆ ಬಂದರೆ, ಪಕ್ಷದ ಬಲವು ಮತ್ತಷ್ಟು ಹೆಚ್ಚಾಗುತ್ತದೆ ಮತ್ತು ಮಿತ್ರಪಕ್ಷಗಳ ಮೇಲಿನ ಅವಲಂಬನೆ ಕಡಿಮೆಯಾಗುತ್ತದೆ. ಇದೇ ಕಾರಣಕ್ಕೆ ಬಿಜೆಪಿ ರಾಜ್ಯಸಭೆಯಲ್ಲಿ ತೃಣಮೂಲ ಸಂಸದರ ಮೇಲೆ ಕಣ್ಣಿಟ್ಟಿದ್ದು, ತೃಣಮೂಲ ಮತ್ತು ಸಾಂಸ್ಥಿಕ ಶೈಲಿಯಲ್ಲಿ ಐಪಿಎಸಿ ಪಾತ್ರದ ಬಗ್ಗೆ ಅಸಮಾಧಾನದ ಬಗ್ಗೆಯೂ ಮಾತುಕತೆ ನಡೆಯುತ್ತಿದೆ. ಆದರೆ, ಈ ಬಗ್ಗೆ ಇನ್ನೂ ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ.
ಸುವೇಂದು ಸಭೆಯಲ್ಲಿ ಟಿಎಂಸಿ ಸಂಸದರು
ಇದಕ್ಕೆ ಇಂಬು ನೀಡುವಂತೆ ಸಿಎಂ ಸುವೇಂದು ಅಧಿಕಾರಿ ನಡೆಸಿದ್ದ ಸಭೆಯಲ್ಲಿ ಟಿಎಂಸಿ ಸಂಸದೆ ಕಾಕೋಳಿ ಮತ್ತು ಇತರ ಶಾಸಕರು ಭಾಗವಹಿಸಿದ್ದರು. ಮಂಗಳವಾರ ಮುಖ್ಯಮಂತ್ರಿ ಸುವೇಂದು ಅಧಿಕಾರಿ ಅವರು ಕರೆದಿದ್ದ ಆಡಳಿತಾತ್ಮಕ ಸಭೆಯಲ್ಲಿ ಭಾಗವಹಿಸಲು ತೃಣಮೂಲ ಕಾಂಗ್ರೆಸ್ ಸಂಸದ ಕಾಕೋಲಿ ಘೋಷ್ ಆಗಮಿಸಿದ್ದರು. ಅಲ್ಲದೆ ಸಭೆಯಲ್ಲಿ ಟಿಎಂಸಿಯ ಇತರ ಶಾಸಕರ ಉಪಸ್ಥಿತಿಯು ರಾಜಕೀಯ ಚರ್ಚೆಗಳಿಗೆ ಉತ್ತೇಜನ ನೀಡಿದೆ.