ಕೃಷಿ ಬಾವಿಗೆ ಢಿಕ್ಕಿಯಾದ ಆರ್ ಟಿಸಿ ಬಸ್ 
ದೇಶ

ಭೀಕರ ಅಪಘಾತ: ಕೃಷಿ ಬಾವಿಗೆ ನುಗ್ಗಿದ RTC ಬಸ್‌, ಕೂದಲೆಳೆ ಅಂತರದಲ್ಲಿ ತಪ್ಪಿದ ಭಾರೀ ದುರಂತ, Video

ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ತೆಲಂಗಾಣ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (TGSRTC) ಬಸ್‌ವೊಂದು ನಿಯಂತ್ರಣ ತಪ್ಪಿ ಕೃಷಿ ಬಾವಿಯತ್ತ ನುಗ್ಗಿದ ಘಟನೆ ಜಿಲ್ಲೆಯ ಚಿಗುರುಮಾಮಿಡಿ ಮಂಡಲದ ಸುಂದರಗಿರಿ ಗ್ರಾಮದಲ್ಲಿ ನಡೆದಿದೆ.

ಕರೀಂನಗರ: ತೆಲಂಗಾಣದಲ್ಲಿ ಭೀಕರ ಅಪಘಾತ ಸಂಭವಿಸಿದ್ದು, ಕೂದಲೆಳೆ ಅಂತರದಲ್ಲಿ ಭಾರೀ ದುರಂತವೊಂದು ತಪ್ಪಿದೆ.

ಹೌದು.. ತೆಲಂಗಾಣದ ಕರೀಂನಗರದಲ್ಲಿ ಬುಧವಾರ ಭಾರೀ ರಸ್ತೆ ಅಪಘಾತವೊಂದು ಕೂದಲೆಳೆ ಅಂತರದಲ್ಲಿ ತಪ್ಪಿದೆ.

ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ತೆಲಂಗಾಣ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (TGSRTC) ಬಸ್‌ವೊಂದು ನಿಯಂತ್ರಣ ತಪ್ಪಿ ಕೃಷಿ ಬಾವಿಯತ್ತ ನುಗ್ಗಿದ ಘಟನೆ ಜಿಲ್ಲೆಯ ಚಿಗುರುಮಾಮಿಡಿ ಮಂಡಲದ ಸುಂದರಗಿರಿ ಗ್ರಾಮದ ಹೊರವಲಯದಲ್ಲಿ ನಡೆದಿದೆ.

ಬಸ್‌ ಕರೀಂನಗರದಿಂದ ಹುಸ್ನಾಬಾದ್‌ಗೆ ಪ್ರಯಾಣಿಸುತ್ತಿದ್ದ ವೇಳೆ ಈ ಘಟನೆ ಸಂಭವಿಸಿದೆ. ಅಪಘಾತದ ವೇಳೆ ಬಸ್‌ನ ಮುಂಭಾಗದ ಒಂದು ಚಕ್ರ ಬಾವಿಯೊಳಗೆ ನುಗ್ಗಿದ್ದು, ಬಸ್‌ ಬಾವಿಗೆ ಉರುಳುವ ಹಂತಕ್ಕೆ ತಲುಪಿತ್ತು. ಇದರಿಂದ ಬಸ್‌ನಲ್ಲಿದ್ದ ಪ್ರಯಾಣಿಕರು ತೀವ್ರ ಆತಂಕಕ್ಕೊಳಗಾಗಿದ್ದಾರೆ.

ಬಸ್‌ ಬಾವಿಯೊಳಗೆ ಬೀಳುವ ಸಾಧ್ಯತೆ ಕಂಡುಬಂದ ಹಿನ್ನೆಲೆಯಲ್ಲಿ ಪ್ರಯಾಣಿಕರು ಭಯಭೀತರಾಗಿ ಕಿರುಚಾಡಿ ನೆರವಿಗಾಗಿ ಕೂಗಿದ್ದಾರೆ.

ಅದೃಷ್ಟವಶಾತ್ ಬಸ್‌ ಬಾವಿ ತಡೆಗೋಡೆಗೆ ಡಿಕ್ಕಿಯಾಗಿ ಅಲ್ಲಿಯೇ ನಿಂತಿದೆ. ಬಸ್ ಸಂಪೂರ್ಣವಾಗಿ ಬಾವಿಗೆ ಉರುಳದೆ ನಿಂತಿದ್ದು, ಪ್ರಯಾಣಿಕರು ಸಣ್ಣಪುಟ್ಟ ಗಾಯಗಳೊಂದಿಗೆ ಅಪಾಯದಿಂದ ಪಾರಾಗಿದ್ದಾರೆ.

ಘಟನೆಯಿಂದ ಸಂಭವಿಸಬಹುದಾಗಿದ್ದ ಭಾರೀ ಅನಾಹುತ ತಪ್ಪಿದ್ದು, ಸ್ಥಳೀಯರು ಹಾಗೂ ಪ್ರಯಾಣಿಕರು ನಿಟ್ಟುಸಿರು ಬಿಟ್ಟಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಪಾಕ್‌ನ F-16 ವಿಮಾನ ಹೊಡೆದುರುಳಿಸಿದ್ದ ಅಭಿನಂದನ್ ಅವಧಿಗೂ ಮುನ್ನವೇ ನಿವೃತ್ತಿ; ಈಗ ಗೋವಾ ಏರ್ಲೈನ್ಸ್ ಪೈಲಟ್!

ದ್ವಿಚಕ್ರ ವಾಹನ ಮಾಲೀಕರಿಗೆ ಬೈಕ್ ಟ್ಯಾಕ್ಸಿ ಓಡಿಸಲು ಅನುಮತಿ ಕೊಡಿ, ಇದರಿಂದ 8 ಕೋಟಿ ಉದ್ಯೋಗ ಸೃಷ್ಟಿ: ರಾಜ್ಯಗಳಿಗೆ ನಿತಿನ್ ಗಡ್ಕರಿ ಮನವಿ

'ಸೇಡಿನ ಮನೋಭಾವ ಸರಿಯಲ್ಲ'.. 'ನಮ್ಮ ವಿರುದ್ಧ ಏನಾದರೊಂದು ಟ್ವೀಟ್ ಮಾಡ್ತಾನೇ ಇರ್ತಾನೆ': ಇರ್ಫಾನ್ ಪಠಾಣ್ ಬಗ್ಗೆ ಪಾಕಿಸ್ತಾನ ಮಾಜಿ ವೇಗಿ Wasim Akram ಅಚ್ಚರಿ ಹೇಳಿಕೆ

ಜನಾರ್ದನ ರೆಡ್ಡಿ ಅಂತಾರಾಷ್ಟ್ರೀಯ ಕಳ್ಳರ ಸಂಘದ ಅಧ್ಯಕ್ಷ, ಶ್ರೀರಾಮುಲು ಉಪಾಧ್ಯಕ್ಷ, ಲೂಟಿಕೋರರಿಂದ ಪಾಠ ಕಲಿಯಬೇಕಿಲ್ಲ: ಪ್ರದೀಪ್ ಈಶ್ವರ್

ಸಿಎಂಗೆ ಕಟ್ಟಿದ ಚಿನ್ನದ ರಾಖಿ ಕೂಡ ರಕ್ಷಿಸಲಿಲ್ಲ; Konda Surekhaಗೆ ಶಾಕ್ ಕೊಟ್ಟ ರೇವಂತ್ ರೆಡ್ಡಿ, ಸಂಪುಟದಿಂದ ಗೇಟ್‌ಪಾಸ್