ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ 
ದೇಶ

'ತೀವ್ರ ದ್ವೇಷವಲ್ಲ, ಶುದ್ಧ- ಉದಾತ್ತ ಪ್ರೀತಿಯೇ RSS ಸಂಘಟನೆಯ ಅಡಿಪಾಯ': ಯುಕೆಯಲ್ಲಿ ಮೋಹನ್ ಭಾಗವತ್

ಕೆಲವರು ನಮ್ಮ ಕಾರ್ಯಕ್ಕೆ ತೀವ್ರ ದ್ವೇಷವೇ ಆಧಾರ ಎಂದು ಹೇಳುವುದನ್ನು ನಾನು ಕೇಳಿದ್ದೇನೆ. ಆದರೆ ವಾಸ್ತವ ಇದಕ್ಕೆ ತದ್ವಿರುದ್ಧವಾಗಿದೆ. ಶುದ್ಧ ಸಾತ್ವಿಕ ಪ್ರೇಮವೇ ನಮ್ಮ ಕಾರ್ಯಕ್ಕೆ ಮುಖ್ಯ ಆಧಾರ ಎಂದು ಭಾಗವತ್ ಹೇಳಿದರು.

ಲಂಡನ್: ಶುದ್ಧ ಸಾತ್ವಿಕ ಪ್ರೇಮವೇ ನಮ್ಮ ಸಂಸ್ಥೆಯ ಕಾರ್ಯದ ಅಡಿಪಾಯ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕ ಮೋಹನ್ ಭಾಗವತ್ ಹೇಳಿದ್ದಾರೆ.

ಲಂಡನ್‌ನಲ್ಲಿ ನಡೆದ ಸಂವಾದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಅಪನಾಪನ್ (ಆತ್ಮೀಯತೆ ಮತ್ತು ಏಕತೆಯ ಭಾವನೆ) ಎಂಬುದು ಹಿಂದೂ ಚಿಂತನೆ ಹಾಗೂ ಆರೆಸ್ಸೆಸ್‌ನ ಕಾರ್ಯವಿಧಾನದ ಮುಖ್ಯ ತಿರುಳಾಗಿದೆ ಎಂದು ತಿಳಿಸಿದರು.

ಕೆಲವರು ನಮ್ಮ ಕಾರ್ಯಕ್ಕೆ ತೀವ್ರ ದ್ವೇಷವೇ ಆಧಾರ ಎಂದು ಹೇಳುವುದನ್ನು ನಾನು ಕೇಳಿದ್ದೇನೆ. ಆದರೆ ವಾಸ್ತವ ಇದಕ್ಕೆ ತದ್ವಿರುದ್ಧವಾಗಿದೆ. ಶುದ್ಧ ಸಾತ್ವಿಕ ಪ್ರೇಮವೇ ನಮ್ಮ ಕಾರ್ಯಕ್ಕೆ ಮುಖ್ಯ ಆಧಾರ ಎಂದು ಭಾಗವತ್ ಹೇಳಿದರು.

ಆತ್ಮೀಯತೆಯ ಈ ಪರಿಕಲ್ಪನೆಯು ಕೇವಲ ಒಬ್ಬ ವ್ಯಕ್ತಿಗೆ ಸೀಮಿತವಾಗಿರದೆ ಕುಟುಂಬ, ಸಮುದಾಯ, ಸಮಾಜ ಮತ್ತು ಇಡೀ ಮಾನವಕುಲಕ್ಕೆ ವಿಸ್ತರಿಸುತ್ತದೆ. ಪ್ರಕೃತಿಯೊಂದಿಗೆ ಹಿಂದೂ ನಾಗರಿಕತೆ ಹೊಂದಿರುವ ನಿಕಟ ಸಂಬಂಧವನ್ನು ಒತ್ತಿ ಹೇಳಿದರು. ಹಿಂದೂ ಎಂದರೆ ಕೇವಲ ಒಬ್ಬ ವ್ಯಕ್ತಿಯಲ್ಲ; ಆತ ಕುಟುಂಬ, ಸಮುದಾಯ, ಸಮಾಜ ಹಾಗೂ ಇಡೀ ಮಾನವಕುಲದ ಭಾಗ. ಹಿಂದೂಗಳು ಪ್ರಕೃತಿಯನ್ನು ಪೂಜಿಸುವುದು ಮಾತ್ರವಲ್ಲ, ಪ್ರೀತಿಸುತ್ತಾರೆ ಎಂದರು.

ಆದ್ದರಿಂದ, ಒಬ್ಬ ಹಿಂದೂ ಒಬ್ಬ ವ್ಯಕ್ತಿಯಲ್ಲ ಅವನು ಕುಟುಂಬ, ಹಾಗೆಯೇ ಅವನ ಸಮುದಾಯ, ಹಾಗೆಯೇ ಅವನ ಸಮಾಜ, ಹಾಗೆಯೇ ಮಾನವೀಯತೆ. ಮತ್ತು, ನಮಗೆಲ್ಲರಿಗೂ ತಿಳಿದಿರುವಂತೆ, ಹಿಂದೂಗಳು, ಪ್ರಕೃತಿಯನ್ನು ಪೂಜಿಸುತ್ತಾರೆ, ಪೂಜಿಸುವುದು ಮಾತ್ರವಲ್ಲ, ಅವರು ಪ್ರಕೃತಿಯನ್ನು ಪ್ರೀತಿಸುತ್ತಾರೆ" ಎಂದು ಅವರು ಹೇಳಿದರು.

"ನಾವು ಸಂಘದಲ್ಲಿ ಹಾಡನ್ನು ಹಾಡುತ್ತೇವೆ; ನಾವು ಹೇಳುತ್ತೇವೆ: 'ಶುದ್ಧ ಸಾತ್ವಿಕ ಪ್ರೇಮ್ ಅಪ್ನೇ ಕಾರ್ಯಾ ಕಾ ಆಧಾರ್ ಹೈ.' (ಶುದ್ಧ, ಉದಾತ್ತ ಪ್ರೀತಿ ನಮ್ಮ ಕೆಲಸದ ಅಡಿಪಾಯ.) ಕೆಲವು ಜನರು ತೀವ್ರವಾದ ದ್ವೇಷವು ನಮ್ಮ ಕೆಲಸದ ಆಧಾರವಾಗಿದೆ ಎಂದು ಹೇಳುವುದನ್ನು ನಾನು ಕೇಳಿದ್ದೇನೆ. ಇದು ಕೇವಲ ವಿರುದ್ಧವಾಗಿದೆ. ಶುದ್ಧ ಸಾತ್ವಿಕ ಪ್ರೇಮ್, ಅದು ನಮ್ಮ ಕೆಲಸದ ಆಧಾರವಾಗಿದೆ" ಎಂದು ಅವರು ಹೇಳಿದರು.

ಈ ಭಾವನೆಯೇ ಏಕತೆ ಮತ್ತು ಚಾರಿತ್ರ್ಯ ನಿರ್ಮಾಣಕ್ಕೆ ಆಧಾರವಾಗಿದ್ದು, 100 ವರ್ಷಗಳ ನಂತರವೂ ಸಂಘದಲ್ಲಿ ಇದು ಅಚಲವಾಗಿ ಉಳಿದಿದೆ ಎಂದು ವಿವರಿಸಿದ ಅವರು, ಸಂಘದಲ್ಲಿ ನಾವು ‘ಶುದ್ಧ ಸಾತ್ವಿಕ ಪ್ರೇಮ ಅಪನೇ ಕಾರ್ಯ ಕಾ ಆಧಾರ ಹೈ’ ಎಂಬ ಗೀತೆಯನ್ನು ಹಾಡುತ್ತೇವೆ. 100 ವರ್ಷ ಕಳೆದರೂ ಈ ಭಾವನೆ ಮಾಸಿಲ್ಲ. ಸ್ವಯಂಸೇವಕರ ನಡವಳಿಕೆಯಲ್ಲಿ ಮತ್ತು ಸಂಘದ ವಾತಾವರಣದಲ್ಲಿ ಇದೇ ಸಾತ್ವಿಕ ಪ್ರೇಮವನ್ನು ನೀವು ಕಾಣಬಹುದು ಎಂದು ಹೇಳಿದರು.

ಆರೆಸ್ಸೆಸ್ ಶತಮಾನೋತ್ಸವ ಆಚರಣೆ ಹಾಗೂ ವಿದೇಶಿ ಸಂಪರ್ಕ ಅಭಿಯಾನದ ಭಾಗವಾಗಿ ಲಂಡನ್‌ನಲ್ಲಿ ಸೆಪ್ಟೆಂಬರ್ 6 ರಂದು “ಏಕತೆಯ ಆಚರಣೆ” ಎಂಬ ಧ್ಯೇಯವಾಕ್ಯದೊಂದಿಗೆ ನಾಗರಿಕ ಸಂವಾದ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. 1966 ರಲ್ಲಿ ಬ್ರಿಟನ್‌ನಲ್ಲಿ ಸ್ಥಾಪನೆಯಾದ ಹಿಂದೂ ಸ್ವಯಂಸೇವಕ ಸಂಘ ಯುಕೆ ಮತ್ತು ಇಂಟೆಗ್ರಲ್ ಸಂಸ್ಥೆಯ ಸಹಯೋಗದಲ್ಲಿ ಈ ಕಾರ್ಯಕ್ರಮ ನಡೆದಿದ್ದು, ಯುನೈಟೆಡ್ ಕಿಂಗ್‌ಡಮ್‌ನಾದ್ಯಂತ 310 ಕ್ಕೂ ಹೆಚ್ಚು ಸಮುದಾಯ ಸಂಘಟನೆಗಳು ಪಾಲ್ಗೊಂಡಿದ್ದವು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

West asia conflict: ಬೆದರಿಕೆಗೆ ಮಣಿಯಲ್ಲ, ದಾಳಿ ನಿಲ್ಲದ ಹೊರತು ಹಾರ್ಮುಜ್ ಜಲಸಂಧಿ ತೆರೆಯಲ್ಲ: ಅಮೆರಿಕಾಕ್ಕೆ Iran ಖಡಕ್ ಸಂದೇಶ..!

ದೆಹಲಿ ಹಾಸ್ಟೆಲ್ ದುರಂತ: ಸಾವಿನ ಸಂಖ್ಯೆ 6ಕ್ಕೆ ಏರಿಕೆ; 11 ಮಂದಿ ರಕ್ಷಣೆ, ಮುಂದುವರಿದ ರಕ್ಷಣಾ ಕಾರ್ಯಾಚರಣೆ

ರಸ್ತೆ ಸಾರ್ವಜನಿಕ ಆಸ್ತಿ, ಕಾರು ಮಾಲೀಕರ ಸ್ವತ್ತಲ್ಲ: ಸಂಚಾರ ದಟ್ಟಣೆ ಕಡಿಮೆಯಾಗಬೇಕಾದರೆ ಪಾರ್ಕಿಂಗ್ ನಿಯಂತ್ರಣ ಅಗತ್ಯ; ಸಚಿವ ಕೃಷ್ಣ ಬೈರೇಗೌಡ (INTERVIEW)

Bigg Boss Kannada 13 ಆರಂಭ; ಎಲ್ಲಾ 16 ಸ್ಪರ್ಧಿಗಳ ಸಂಪೂರ್ಣ ವಿವರ ಇಲ್ಲಿದೆ ನೋಡಿ!

KPSC ಹಗರಣ: ಶಾಂತಾ ಹೊಸಮನಿಗಾಗಿ ಸಿಐಡಿ ಶೋಧ; ಬಂಧನ ವಾರಂಟ್‌ಗೆ ಕೋರ್ಟ್ ಗೆ ಮನವಿ ಸಾಧ್ಯತೆ!