ಸುಮನ್ ಬಿಲ್ಲ, ಪ್ರವಾಸೋದ್ಯಮ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ 
ದೇಶ

ಪ್ರವಾಸೋದ್ಯಮ ಬೆಳವಣಿಗೆಯಿಂದ ಸ್ಥಳೀಯ ಸಮುದಾಯಗಳಿಗೆ ಪ್ರಯೋಜನವಾಗಬೇಕು: TNIE Tourism Summit ನಲ್ಲಿ ಅಭಿಮತ

ದೇಶೀಯ ಪ್ರವಾಸೋದ್ಯಮವನ್ನು ಪುನರ್‌ರೂಪಿಸುವ ಕುರಿತು ನಡೆದ ಅಧಿವೇಶನದಲ್ಲಿ ಮಾತನಾಡಿದ ಬಿಲ್ಲ, ಭಾರತದ ದೇಶೀಯ ಪ್ರವಾಸೋದ್ಯಮ ಮಾರುಕಟ್ಟೆಯಲ್ಲಿರುವ ಅಪಾರ ಸಾಮರ್ಥ್ಯವನ್ನು ಒತ್ತಿ ಹೇಳಿದರು.

ಚೆನ್ನೈ: ಭಾರತವು ಕೇವಲ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರನ್ನು ಆಕರ್ಷಿಸುವತ್ತ ಗಮನಹರಿಸುವ ಬದಲು, ಪ್ರವಾಸಿ ತಾಣಗಳನ್ನು ವೃತ್ತಿಪರವಾಗಿ ನಿರ್ವಹಿಸುವತ್ತ ಹೆಚ್ಚಿನ ಒತ್ತು ನೀಡಬೇಕು ಎಂದು ಪ್ರವಾಸೋದ್ಯಮ ಅಧಿಕಾರಿಗಳು ಹಾಗೂ ಕ್ಷೇತ್ರದ ಪ್ರಮುಖರು ಅಭಿಪ್ರಾಯಪಟ್ಟಿದ್ದಾರೆ. ಪ್ರವಾಸೋದ್ಯಮ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ಸುಮನ್ ಬಿಲ್ಲ ಅವರು ಇಂದು ಚೆನ್ನೈನಲ್ಲಿ ನಡೆದ ಭಾರತ್ ದೇಖೋ ಟೂರಿಸಂ ಸಮಿಟ್ 2026ರಲ್ಲಿ ಮಾತನಾಡಿದರು.

ದೇಶೀಯ ಪ್ರವಾಸೋದ್ಯಮವನ್ನು ಪುನರ್‌ರೂಪಿಸುವ ಕುರಿತು ನಡೆದ ಅಧಿವೇಶನದಲ್ಲಿ ಮಾತನಾಡಿದ ಬಿಲ್ಲ, ಭಾರತದ ದೇಶೀಯ ಪ್ರವಾಸೋದ್ಯಮ ಮಾರುಕಟ್ಟೆಯಲ್ಲಿರುವ ಅಪಾರ ಸಾಮರ್ಥ್ಯವನ್ನು ಒತ್ತಿ ಹೇಳಿದರು. ಪ್ರವಾಸಿಗರ ಹರಿವನ್ನು ನಿರ್ವಹಿಸುವುದು, ಪ್ರವಾಸಿಗರ ಅನುಭವವನ್ನು ಉತ್ತಮಪಡಿಸುವುದು ಹಾಗೂ ಪ್ರವಾಸೋದ್ಯಮದಿಂದ ಸ್ಥಳೀಯ ಸಮುದಾಯಗಳಿಗೂ ಪ್ರಯೋಜನ ದೊರೆಯುವಂತೆ ಮಾಡುವ ನಿಟ್ಟಿನಲ್ಲಿ ಪ್ರವಾಸಿ ತಾಣ ಮಟ್ಟದಲ್ಲಿ ಬಲಿಷ್ಠ ಸಂಸ್ಥೆಗಳ ಅಗತ್ಯವಿದೆ ಎಂದು ಹೇಳಿದರು.

ನಾವು ದೇಶೀಯ ಪ್ರವಾಸೋದ್ಯಮವನ್ನು ಪುನರ್‌ರೂಪಿಸಬೇಕಿದೆ ಎಂದು ಬಿಲ್ಲ ಹೇಳಿದರು. ಭಾರತದ ಪ್ರವಾಸೋದ್ಯಮ ಕಾರ್ಯತಂತ್ರವು ಕೇವಲ ಪ್ರವಾಸಿಗರ ಸಂಖ್ಯೆಯನ್ನು ಹೆಚ್ಚಿಸುವುದರ ಮೇಲೆ ಕೇಂದ್ರೀಕರಿಸಬಾರದು. ದೇಶದ ಪ್ರವಾಸೋದ್ಯಮ ವೆಚ್ಚದಲ್ಲಿ ದೇಶೀಯ ಪ್ರವಾಸಿಗರ ಪಾಲು ಅತ್ಯಧಿಕವಾಗಿರುವುದರಿಂದ, ವೈವಿಧ್ಯಮಯ ಹಾಗೂ ಸುಸ್ಥಿರ ಪ್ರವಾಸ ಅನುಭವಗಳನ್ನು ಸೃಷ್ಟಿಸಲು ಭಾರತಕ್ಕೆ ದೊಡ್ಡ ಅವಕಾಶವಿದೆ ಎಂದರು.

ಡೆಸ್ಟಿನೇಷನ್ ಮ್ಯಾನೇಜ್‌ಮೆಂಟ್ ಆರ್ಗನೈಸೇಷನ್ಸ್ (DMOs) ಸ್ಥಾಪಿಸಿ ಅವುಗಳನ್ನು ಬಲಪಡಿಸುವುದು ಬಿಲ್ಲ ಅವರ ಪ್ರಮುಖ ಸಲಹೆಗಳಲ್ಲಿ ಒಂದಾಗಿತ್ತು. ಭಾರತದಲ್ಲಿ ಪ್ರವಾಸೋದ್ಯಮದ ಆಡಳಿತ ವ್ಯವಸ್ಥೆ ಸಾಂಪ್ರದಾಯಿಕವಾಗಿ ರಾಷ್ಟ್ರೀಯ ಮತ್ತು ರಾಜ್ಯ ಮಟ್ಟದಲ್ಲಿ ಹೆಚ್ಚಾಗಿ ಕಾರ್ಯನಿರ್ವಹಿಸುತ್ತಿದೆ. ಆದರೆ ಪ್ರವಾಸಿ ತಾಣಗಳಲ್ಲೇ ಪ್ರವಾಸೋದ್ಯಮಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಹರಿಸಲು ಅಗತ್ಯವಿರುವ ಪ್ರತ್ಯೇಕ ವೃತ್ತಿಪರ ವ್ಯವಸ್ಥೆಯ ಕೊರತೆಯಿದೆ ಎಂದು ಹೇಳಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಅ. 15ರಿಂದ UPI ಪಾವತಿಗೆ ಶುಲ್ಕ ಜಾರಿ: 2,000ಕ್ಕಿಂತ ಹೆಚ್ಚಿನ UPI ಪಾವತಿಗಳಿಗೆ ಶೇ. 0.4ರಷ್ಟು MDR ಶುಲ್ಕ!

ದ್ವಿಪಕ್ಷೀಯ ಮಾತುಕತೆ ವೇಳೆ ಚೀನಾ ಅಧ್ಯಕ್ಷ ಜಿನ್ಪಿಂಗ್ ಗೆ ಮೋದಿ ಹೇಳಿದ್ದೇನು? MEA ಹೇಳಿದ್ದಿಷ್ಟು...

Sheikh Hasina: ಭಾರತದಲ್ಲಿ ಆಶ್ರಯ ಪಡೆದಿರುವ ಶೇಖ್ ಹಸೀನಾರ 7 ಆಪ್ತರಿಗೆ ಗಲ್ಲು ಶಿಕ್ಷೆ ವಿಧಿಸಿದ ಕೋರ್ಟ್‌!

ಬೆಂಗಳೂರಿನಲ್ಲಿ ವರುಣಾರ್ಭಟ: ಹಲವು ಕಡೆ 1 ಗಂಟೆಗೂ ಹೆಚ್ಚು ಕಾಲ ಸುರಿದ ಮಳೆ; ಸಂಚಾರ ಅಸ್ತವ್ಯಸ್ತ

ಡ್ರಾಮಾ ಬಿಡಿ, ಎರಡು ವಾರದಲ್ಲಿ 2 ಕೋಟಿ ರೂ. ಠೇವಣಿ ಇಡಿ: ಬಾಲಿವುಡ್ ನಟ ರಾಜ್‌ಪಾಲ್ ಯಾದವ್‌ಗೆ ಸುಪ್ರೀಂ ಕೋರ್ಟ್ ತೀವ್ರ ತರಾಟೆ