ದಕ್ಷಿಣ ಭಾರತದ ಸ್ಟಾರ್ ನಟಿ ರಮ್ಯ ಕೃಷ್ಣ ಅವರು ಬಹುಬೇಡಿಕೆಯ ನಟಿಯಾಗಿದ್ದಾರೆ. ಬಾಹುಬಲಿಯ ಶಿವಗಾಮಿ ಪಾತ್ರದಲ್ಲಿ ಮಿಂಚಿದ್ದ ಅವರು ಈ ಮೂಲಕ ಜಗತ್ತೆ ತಮ್ಮತ್ತ ಕಣ್ ಅರಳಿಸುಂತೆ ಮಾಡಿದ್ದರು.
ಇನ್ನು ಒಂದು ಕಾಲದಲ್ಲಿ ಸಖತ್ ಗ್ಲಾಮರಸ್ ಆಗಿ ಕಾಣಿಸಿಕೊಳ್ಳುತ್ತಿದ್ದ ರಮ್ಯ ಕೃಷ್ಣ ಅವರು ಇದೀಗ ಗೌರಮ್ಮನ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಆದರೆ ಇದೀಗ ಮತ್ತೆ ಅವರು ಗ್ರಾಮರ್ ಪಾತ್ರದಲ್ಲಿ ಅಭಿನಯಿಸಲಿದ್ದಾರೆ ಎಂಬ ಮಾತುಗಳು ಚರ್ಚೆಯಾಗುತ್ತಿದೆ.ಇದಕ್ಕೆ ಕಾರಣ, ಹಿಂದಿಯಾ ಬ್ಲಾಕ್ ಬಸ್ಟರ್ ಅಂಧಾಧುನ್ ರಿಮೇಕ್ ಚಿತ್ರದಲ್ಲಿ ಅವರು ನಟಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಚಿತ್ರದಲ್ಲಿ ಟಬು ಗ್ಲಾಮರ್ ಪಾತ್ರದಲ್ಲಿ ನಟಿಸಿದ್ದರು. ಇದೇ ಪಾತ್ರದಲ್ಲಿ ನಟಿ ರಮ್ಯ ಕೃಷ್ಣ ನಟಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.ಆದರೆ ಇನ್ನು ಯಾವುದೇ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ. ಸದ್ಯಕ್ಕೆ ನಿರ್ಮಾಪಕರು ರಮ್ಯ ಕೃಷ್ಣ ಅವರ ಜೊತೆ ಒಂದು ಸುತ್ತಿನ ಮಾತುಕತೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.ನಟಿ ರಮ್ಯ ಕೃಷ್ಣನಟಿ ರಮ್ಯ ಕೃಷ್ಣನಟಿ ರಮ್ಯ ಕೃಷ್ಣನಟಿ ರಮ್ಯ ಕೃಷ್ಣನಟಿ ರಮ್ಯ ಕೃಷ್ಣನಟಿ ರಮ್ಯ ಕೃಷ್ಣನಟಿ ರಮ್ಯ ಕೃಷ್ಣನಟಿ ರಮ್ಯ ಕೃಷ್ಣಟಬುಟಬುಅಂಧಾಧುನ್ ಚಿತ್ರದ ಸ್ಟಿಲ್Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos