'ಲಾಲ್ ಸಿಂಗ್ ಚಡ್ಡಾ' ಚಿತ್ರದ ನಿರ್ದೇಶಕ ಅದ್ವೈತ್ ಚಂದನ್ ಅವರು ತಮ್ಮ ಇನ್ಸ್ಟಾಗ್ರಾಮ್ ಹ್ಯಾಂಡಲ್ನಲ್ಲಿ ಪೂಜೆಯ ಅನೇಕ ಚಿತ್ರಗಳನ್ನು ಹಂಚಿಕೊಂಡಿದ್ದಾರೆ.ಅಮೀರ್ ಸ್ವೆಟ್ಶರ್ಟ್ ಮತ್ತು ಡೆನಿಮ್ನಲ್ಲಿ ಸುಂದರವಾಗಿ ಕಾಣುತ್ತಿದ್ದಾರೆ ಮತ್ತು ನೆಹರು ಕ್ಯಾಪ್ ಮತ್ತು ಗಮ್ಚಾವನ್ನು ಹೊತ್ತಿದ್ದಾರೆ. ಪೂಜೆಯ ವೇಳೆ ಕಲಶವನ್ನೂ ಸ್ಥಾಪಿಸಿದರು. ಅವರ ಕಚೇರಿಯನ್ನು ಬಣ್ಣಬಣ್ಣದ ಬಲೂನುಗಳಿಂದ ಅಲಂಕರಿಸಲಾಗಿತ್ತು. ಆದರೂ ಈ ಪೂಜೆ ಮಾಡಿದ್ದು ಯಾಕೆ? ಈ ಬಗ್ಗೆ ಯಾವುದೇ ಮಾಹಿತಿ ಇಲ್ಲ.ಹಿಂದೂ ವಿರೋಧಿ ಹೇಳಿಕೆಗಳಿಂದ ತೀವ್ರ ವಿವಾದಕ್ಕೆ ಗುರಿಯಾಗಿದ್ದ ಅಮೀರ್ ಖಾನ್ ರ ಇತ್ತೀಚಿನ ಲಾಲ್ ಸಿಂಗ್ ಛಡ್ಡಾ ಸಿನಿಮಾ ಸಹ ಬಾಕ್ಸ್ ಆಫೀಸ್ ನಲ್ಲಿ ಸೋಲು ಕಂಡಿತ್ತು.ಅಮಿರ್ ಖಾನ್ ಹಣೆಗೆ ತಿಲಕವಿಟ್ಟು. ಕೈಗೆ ಕಂಕಣಕಟ್ಟಿ. ತಲೆಗೆ ಬಿಳಿ ಬಣ್ಣದ ಟೋಪಿ ಧರಿಸಿ ಕಲಶಕ್ಕೆ ಪೂಜೆ ಸಲ್ಲಿಸಿರುವುದು ಇದೀಗ ಅಭಿಮಾನಿಗಳಲ್ಲಿ ಕುತೂಹಲ ಕೆರಳಿಸಿದೆ.ಆರತಿ ಬೆಳಗಿದ ಕಿರಣ್ ರಾವ್