ಒಂದಲ್ಲ ಎರಡಲ್ಲ..ಇದುವರೆಗೆ ನಾಲ್ಕು ಬಾರಿ ವಿಚ್ಛೇದನ ಪಡೆದಿದ್ದಾಳೆ. ಅಷ್ಟೇ ಅಲ್ಲ ಇದೀಗ ತನ್ನ ಐದನೇ ಪತಿಗೂ ವಿಚ್ಛೇದನ ನೀಡಲು ಸಿದ್ಧತೆ ನಡೆಸಿದ್ದಾಳೆ. ಆಕೆ ಬೇರೇ ಯಾರು ಅಲ್ಲ. ಹಾಲಿವುಡ್ ನಟಿ ಪಮೇಲಾ ಆಂಡರ್ಸನ್. 
ಸಿನಿಮಾ

5ನೇ ಪತಿಗೂ ವಿಚ್ಛೇದನ ನೀಡಿದ ಹಾಲಿವುಡ್ ನಟಿ: ಪಮೇಲಾ ಆಂಡರ್ಸನ್ ರ ಮಾಜಿ ಗಂಡಂದಿರ ಪಟ್ಟಿ ಇಂತಿದೆ!

ಒಂದಲ್ಲ ಎರಡಲ್ಲ.. ಇದುವರೆಗೆ ನಾಲ್ಕು ಬಾರಿ ವಿಚ್ಛೇದನ ಪಡೆದಿದ್ದಾಳೆ. ಅಷ್ಟೇ ಅಲ್ಲ ಇದೀಗ ತನ್ನ ಐದನೇ ಪತಿಗೂ ವಿಚ್ಛೇದನ ನೀಡಲು ಸಿದ್ಧತೆ ನಡೆಸಿದ್ದಾಳೆ. ಆಕೆ ಬೇರೇ ಯಾರು ಅಲ್ಲ. ಹಾಲಿವುಡ್ ನಟಿ ಪಮೇಲಾ ಆಂಡರ್ಸನ್. 

54 ವರ್ಷದ ಪಮೇಲಾ ಆಂಡರ್ಸನ್ ನಾಲ್ಕು ಬಾರಿ ವಿವಾಹ ವಾಗಿದ್ದರು. ಅವೆಲ್ಲವೂ ಮುರಿದುಬಿದ್ದಿವೆ. ಆ ನಂತರ 2020ರಲ್ಲಿ ಐದನೇ ಬಾರಿಗೆ ವಿವಾಹವಾಗಿದ್ದರು. ಕೊರೊನಾ ಕಾರಣ ವಿಧಿಸಿದ ಲಾಕ್‌ಡೌನ್‌ ವೇಳೆ ತನ್ನ ಅಂಗ ರಕ್ಷಕ ಡಾನ್ ಹಾಸ್ಟ್ ಗೆ ಅತ್ಯಂತ ಸಮೀಪವಾಗಿದ್ದರು. ಆ ಸಮಯದಲ್ಲಿ ಇಬ್ಬರೂ ಪ್ರೇಮಕ್ಕೆ ಸಿಲುಕಿದರು.
ವಿವಾಹ ಬಂಧನದೊಂದಿಗೆ ಒಂದಾಗೋಣ ಎಂದು ನಿರ್ಧರಿಸಿದರು. ಲಾಕ್‌ಡೌನ್‌ನಲ್ಲಿ ಮದುವೆಯಾಗಿ ಒಟ್ಟಿಗೆ ಸೇರೋಣ ಎಂದು ನಿರ್ಧರಿಸಿದರು. ಆದರೆ, ಅವರು ದೀರ್ಘಕಾಲ ಒಟ್ಟಿಗೆ ಇರಲು ಸಾಧ್ಯವಾಗಿಲ್ಲ. ವಿವಾಹವಾಗಿ ವರ್ಷ ತುಂಬುವ ಮುನ್ನವೇ ದಂಪತಿ ನಡುವೆ ಮನಸ್ಥಾಪ ಸೃಷ್ಟಿಯಾಗಿದೆ. ಇದರಿಂದ ಆಕೆ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದ
ಪಮೇಲಾ ಆಂಡರ್ಸನ್ ಮೊದಲು 1995ರಲ್ಲಿ ಟಾಮಿ ಲೀ ಅವರನ್ನು ವಿವಾಹವಾಗಿದ್ದರು. ಅವರಿಗೆ ಬ್ರಾಂಡನ್ , ಡೈಲಾನ್‌ ಎಂಬ ಇಬ್ಬರು ಗಂಡು ಮಕ್ಕಳು ಜನಿಸಿದ್ದರು.
2006ರಲ್ಲಿ ಸಂಗೀತಗಾರ ಕಿಡ್ ರಾಕ್ ಅವರನ್ನು ವಿವಾಹವಾಗಿದ್ದರು. ಆದರೆ ಆ ಬಂಧ ದೀರ್ಘಕಾಲ ಉಳಿಯಲಿಲ್ಲ.
ಪಮೇಲಾ ಅವರು 2014ರಲ್ಲಿ ರಿಕ್ ಅವರನ್ನು ವಿವಾಹವಾಗಿದ್ದೇನೆ ಎಂದು ಕಾರ್ಯಕ್ರಮವೊಂದರಲ್ಲಿ ಘೋಷಿಸಿದ್ದರು. ಆದರೆ ಆ ಸಂತೋಷ ಕೂಡ ಬಹಳ ದಿನ ಉಳಿಯಲಿಲ್ಲ. ಮುಂದಿನ ವರ್ಷ ಇಬ್ಬರೂ ಬೇರೆಯಾದರು.
2020ರಲ್ಲಿ ಆಕೆ ನಿರ್ಮಾಪಕ ಜಾನ್ ಪೀಟರ್ಸ್ ಅವರನ್ನು ರಹಸ್ಯವಾಗಿ ಮದುವೆಯಾಗಿದ್ದು ಕೆಲ ದಿನಗಳ ನಂತರ ಅದು ಮುರಿದಿಬಿತ್ತು.
ಇದೇ ವರ್ಷ ಡಿಸೆಂಬರ್ ನಲ್ಲಿ ಬಾಡಿಗಾರ್ಡ್ ಡಾನ್ ಹಾಸ್ಟ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಪಮೇಲಾ ಈಗ ಅದನ್ನೂ ಮುಗಿಸಲು ತಯಾರಿ ನಡೆಸಿದ್ದಾರೆ.
ಪಮೇಲಾ ಅವರು ಹಾಲಿವುಡ್ ನಟ ಡ್ವೈನ್ ಜಾನ್ಸನ್ ನಟನೆಯ ಬೇವಾಚ್ ಚಿತ್ರದಲ್ಲಿ ನಟಿಸಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನಾವು ಏಕೆ ತಡೆಯಲಿ... ತಾಂತ್ರಿಕ ಸಮಸ್ಯೆ ಹೊರತು ಉದ್ದೇಶಪೂರ್ವಕವಲ್ಲ: ಮಹಿಳಾ ಪತ್ರಕರ್ತರನ್ನು ದೂರವಿಟ್ಟ ಬಗ್ಗೆ ಮುತ್ತಕಿ ಸ್ಪಷ್ಟನೆ

Afghan-Pak War: 'ಅಲ್ಲಾ ಕಾಪಾಡು' ಅಫ್ಘಾನ್ ಪ್ರತೀಕಾರದ ದಾಳಿ; ಆಗಸದೆತ್ತರಕ್ಕೆ ಚಿಮ್ಮಿದ ಪಾಕ್ ಸೈನಿಕರ ಶವಗಳು, ಗಡಿಯಿಂದ ಕಾಲ್ಕಿತ್ತ ಸೇನೆ, Video

'ಆಕೆ ಮಧ್ಯರಾತ್ರಿ 12.30ಕ್ಕೆ ಹೇಗೆ ಹೊರಬಂದಳು?': ಗ್ಯಾಂಗ್ ರೇಪ್ ಕುರಿತು ಮಮತಾ ಬ್ಯಾನರ್ಜಿ ಹೇಳಿಕೆ

ಹಾಸನಾಂಬ ದರ್ಶನಕ್ಕೆ ಭಕ್ತರ ಸಂಖ್ಯೆ ಹೆಚ್ಚಳ: ಎರಡೇ ದಿನಗಳಲ್ಲಿ ರೂ. 2.24 ಕೋಟಿ ಆದಾಯ, ಆರು ಸಿಬ್ಬಂದಿ ಅಮಾನತು!

ಸರ್ಕಾರಿ ಸಂಸ್ಥೆಗಳು, ಸಾರ್ವಜನಿಕ ಸ್ಥಳಗಳಲ್ಲಿ RSS ಚಟುವಟಿಕೆಗಳನ್ನು ನಿಷೇಧಿಸಿ: ಮುಖ್ಯಮಂತ್ರಿಗೆ ಪ್ರಿಯಾಂಕ್ ಖರ್ಗೆ ಪತ್ರ

SCROLL FOR NEXT