ರಾಜಕೀಯ

ಮತಾಂತರ ಕುರಿತು ಮೋದಿ ಮಾತಾಡಲಿ: ದೇವೇಗೌಡ

Mainashree

ಮಂಗಳೂರು: ದೇಶದಲ್ಲಿ ನಡೆಯುತ್ತಿರುವ ಮತಾಂತರ ಕುರಿತು ಪ್ರಧಾನಿ ನರೇಂದ್ರ ಮೋದಿಯೇ ಮಾತನಾಡಬೇಕು ಎಂದು ಮಾಜಿ ಪ್ರಧಾನಿ ದೇವೇಗೌಡ ಹೇಳಿದ್ದಾರೆ. ಸರ್ವಧರ್ಮವನ್ನು ಸಮಭಾವದಿಂದ ಪ್ರಧಾನಿ ನೋಡಬೇಕು.

ಮತಾಂತರ ಕುರಿತು ಪ್ರಧಾನಿ ಮೌನವಹಿಸಿರುವುದು ಸರಿಯಲ್ಲ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು. ಫೆಬ್ರವರಿ ಅಧಿವೇಶನದ ವೇಳೆ ಜನತಾ ಪರಿವಾರ ಒಂದಾಗರಿದೆ. ಈ ಕುರಿತು ಈಗಾಗಲೇ ಪ್ರಥಮ ಸುತ್ತಿನ ಮಾತುಕತೆಯಾಗಿದೆ.

ಲೋಕಸಭೆಯಲ್ಲಿ ಈಗ 15ನೇ ಸ್ಥಾನದಲ್ಲಿದ್ದೇವೆ. ಲೋಕಸಭೆಯಲ್ಲಿ ಪಕ್ಷದ ಸಂಸದರ ಸಂಖ್ಯೆ ಕಡಿಮೆ ಇರುವುದರಿಂದ ಜನರ ಸಮಸ್ಯೆಗಳ ಬಗ್ಗೆ ನಮಗೆ ಅರಿವಿದ್ದರೂ ದನಿ ಎತ್ತಲು ಅವಕಾಶ ಸಿಗುತ್ತಿಲ್ಲ. ಸಂಸದರ ಸಂಖ್ಯೆ ನೋಡಿಯೇ ಸ್ಪೀಕರ್ ನಮಗೆ ಮಾತನಾಡಲು ಅವಕಾಶ ನೀಡುತ್ತಾರೆ.

ಆದ್ದರಿಂದ ಜನತಾ ಪರಿವಾರ ಒಗ್ಗೂಡುವ ಅನಿರ್ವಾಯತೆ ಇದೆ. ಒಟ್ಟುಗೂಡಿದರೆ 15ರಿಂದ 5ನೇ ಸ್ಥಾನಕ್ಕೆ ಬರಲಿದ್ದೇವೆ ಎಂದರು.

SCROLL FOR NEXT