ಶಂಕರ ಬಿದರಿ 
ರಾಜಕೀಯ

ಸಂದಾಯವಾಗದೆ ಕಡತ ಚಲಿಸದು: ಆರೋಪ

ರಾಜ್ಯವನ್ನು ಒಬ್ಬ ವ್ಯಕ್ತಿ ಹಾಗೂ ಅವರ ಸಹಚರ ಆಳುತ್ತಿದ್ದಾರೆ. ಸಂದಾಯವಿಲ್ಲದೇ ಯಾವೊಂದು ಕಡತವೂ ಕದಲುವುದಿಲ್ಲ...

ಬೆಂಗಳೂರು: ರಾಜ್ಯವನ್ನು ಒಬ್ಬ ವ್ಯಕ್ತಿ ಹಾಗೂ ಅವರ ಸಹಚರ ಆಳುತ್ತಿದ್ದಾರೆ. ಸಂದಾಯವಿಲ್ಲದೇ ಯಾವೊಂದು ಕಡತವೂ ಕದಲುವುದಿಲ್ಲ. ಬಹಳ ಬುದ್ಧಿವಂತಿಕೆಯಿಂದ ಸರ್ಕಾರ ದಲ್ಲಿ ವ್ಯವಹಾರ ನಡೆಯುತ್ತಿದೆ ಎಂದುನಿವೃತ್ತ ಡಿಜಿಪಿ ಶಂಕರ ಬಿದರಿ ಆರೋಪಿಸಿದ್ದಾರೆ. ಕರ್ನಾಟಕವು ಇಂದು ಭ್ರಷ್ಟಾಚಾರದಲ್ಲಿ ನಂ.1 ಆಗಿದೆ.ಹಿಂದಿನ ಸರ್ಕಾರಗಳ ತಪ್ಪಿನಿಂದ ಪಾಠ ಕಲಿತಿರುವುದರಿಂದಎಲ್ಲ ಸಂದಾಯಗಳನ್ನು ಸೂಕ್ಷ್ಮವಾಗಿ ಮಾಡಲಾಗುತ್ತಿದೆ. ಕೆಲ ಅಧಿಕಾರಿಗಳ ಮೂಲಕ ಕಡತ ವಿಲೇವಾರಿಯಾಗುತ್ತಿದ್ದು, ನಿರೀಕ್ಷಿತ ವ್ಯವಹಾರ ನಡೆದು ಸಂದಾಯ ವಾಗದಿದ್ದರೆ ಆ ಕಡತಕ್ಕೆ ಮುಕ್ತಿಯೇ  ಸಿಗುತ್ತಿಲ್ಲ. ಆದರೆ, ಪ್ರಚಾರಕ್ಕೆ ಕಡತ ವಿಲೇವಾರಿ ಯಜ್ಞ ಎಂದು ಹೇಳುತ್ತಿದ್ದಾರೆ.
ಅದರಲ್ಲೂ  ಮುಖ್ಯ ಮಂತ್ರಿಗಳ ಬಳಿ ಇರುವ ಇಲಾಖೆಯಲ್ಲಿ ಈ ಸಂದಾಯ ವ್ಯವಹಾರ ಹೆಚ್ಚಿದೆ ಎಂದುರಾಜ್ಯ ಬಿಜೆಪಿ ಕಚೇರಿಯಲ್ಲಿ ಗಣರಾಜ್ಯೋತ್ಸವ ಕಾರ್ಯಕ್ರಮ ನಡೆಸಿ ತಿಳಿಸಿದರು. ಹಿಂದಿನ ಸರ್ಕಾರದಲ್ಲಿ ಸಚಿವರೇ ಸಿಕ್ಕಿಹಾಕಿಕೊಂಡಿರುವುದರಿಂದ ಜಾಣತನದಿಂದ ಅ„ಕಾರಿಗಳ ನೇತೃತ್ವದಲ್ಲೇ ಸಮಿತಿರಚಿಸಲಾಗಿದೆ. ಈ ಮೂಲಕ ಜಾಣತನದಿಂದ ಸೂಕ್ಷ್ಮವಾಗಿ ವ್ಯವಹಾರ ನಡೆಸಲಾಗುತ್ತಿದೆ. ದೇಶ, ಮನೆಯನ್ನೇ ಲೂಟಿ ಮಾಡಲು ನಿಂತರೆ ಪರಿಸ್ಥಿತಿ ಏನಾಗಬೇಕು? ರಾಜ್ಯದಲ್ಲಿ ಅದೇ ಕೆಲಸ ಪ್ರಾರಂಭವಾಗಿದೆ. ಇದಕ್ಕೆ ನಿಯಂತ್ರಣ ಹೇರಬೇಕಿದೆ ಎಂದು ಅವರು ಹೇಳಿದರು. ನಿಸ್ವಾರ್ಥ ಸೇವೆಗೆಂದು ರಾಜಕೀಯಕ್ಕೆ ಬರಬೇಕು. ಡೀಲ್ ನಡೆಸುವುದಾದರೆ ರಿಯಲ್ ಎಸ್ಟೇಟ್‍ನಂತಹ ಸಾಕಷ್ಟುಉದ್ಯಮಗಳಿವೆ. ರಾಜಕೀಯವನ್ನು ಇಂತಹ ಕಾರ್ಯಗಳಿಗೆ  ಬಳಸಿಕೊಳ್ಳಬಾರದು ಎಂದು ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

Gaza Hospital Strike: ಹಮಾಸ್ ಸೋಲಿಸುವುದಷ್ಟೇ ನಮ್ಮ ಗುರಿ, ನಾಗರೀಕರನ್ನು ಗೌರವಿಸುತ್ತೇವೆ; ಮೊದಲ ಬಾರಿಗೆ ದಾಳಿ ಕುರಿತು ಇಸ್ರೇಲ್ ವಿಷಾದ

ವಿಧಾನಪರಿಷತ್'ಗೆ ನಾಮನಿರ್ದೇಶನ: ನಾಲ್ವರು MLC ಅಭ್ಯರ್ಥಿಗಳು ಹೆಸರು ಬದಲು, ಪಟ್ಟಿಯಲ್ಲಿ TNIE ಮೈಸೂರು ವಿಭಾಗದ ಮುಖ್ಯಸ್ಥನಿಗೆ ಸ್ಥಾನ

ಬಾನು ಮುಷ್ತಾಕ್‌ ದಸರಾ ಉದ್ಘಾಟನೆಗೆ ಆಕ್ಷೇಪ; ಮುಸ್ಲಿಂ ದ್ವೇಷ ಮನಸ್ಥಿತಿಯನ್ನು ಬದಿಗಿಟ್ಟು, ಸಂವಿಧಾನದ ಆಶಯ ಅರ್ಥ ಮಾಡಿಕೊಳ್ಳಿ: ಸಚಿವ ಹೆಚ್.ಸಿ.ಮಹದೇವಪ್ಪ

ಚಾಮುಂಡೇಶ್ವರಿ ದೇವಿ ಬಗ್ಗೆ ಗೌರವವಿದ್ದು, ಧಾರ್ಮಿಕ ಭಾವನೆಗಳ ಗೌರವಿಸುತ್ತೇನೆ; ಬಾನು ಮುಷ್ತಾಕ್

JC ರಸ್ತೆಯಲ್ಲಿ White-topping ಕಾಮಗಾರಿ: ಆ.30ರವರೆಗೆ ಭಾರಿ ಗಾತ್ರದ ವಾಹನಗಳ ಸಂಚಾರಕ್ಕೆ ನಿರ್ಬಂಧ

SCROLL FOR NEXT