ಕೆ.ಎಸ್ ಈಶ್ವರಪ್ಪ 
ರಾಜಕೀಯ

ಸರ್ಕಾರದ ವಿರುದ್ಧ ವಾಗ್ಬಾಣ ಮುಂದುವರಿಸಿದ ಈಶ್ವರಪ್ಪ

ರೈತರ ಸರಣಿ ಆತ್ಮಹತ್ಯೆ ಅಸ್ತ್ರ ಪ್ರಯೋಗಿಸಿದ ಪ್ರತಿ ಪಕ್ಷ ನಾಯಕ ಈಶ್ವರಪ್ಪ ಸದನದಲ್ಲಿ ಭಾರಿ ಸದ್ದು ಮಾಡಿದರು

ಬೆಂಗಳೂರು: ರೈತರ ಸರಣಿ ಆತ್ಮಹತ್ಯೆ ಅಸ್ತ್ರ ಪ್ರಯೋಗಿಸಿದ ವಿಧಾನಪರಿಷತ್ ಪ್ರತಿ ಪಕ್ಷ ನಾಯಕ ಈಶ್ವರಪ್ಪ ಸದನದಲ್ಲಿ ಭಾರಿ ಸದ್ದು ಮಾಡಿದರು.

ಸದನ ಆರಂಭವಾಗುತ್ತಿದ್ದಂತೆಯೇ ರೈತರ ಸರಣಿ ಆತ್ಮಹತ್ಯೆ ವಿಚಾರವಾಗಿ ನಿಲುವಳಿ ಸೂಚನೆ ಮಂಡಿಸಲು ಮುಂದಾದರು. ಇದಕ್ಕೆ ಅವಕಾಶ ಸಿಗದಿದ್ದಾಗ ಎಂದಿನಂತೆ ತಮ್ಮದೇಧಾಟಿಯಲ್ಲಿ ಸರ್ಕಾರದ ಮೇಲೆ ಟೀಕಾ ಪ್ರಹಾರ ಶುರು ಮಾಡಿದರು. ನಿಲುವಳಿ ಸೂಚನೆಗೆ ಅವಕಾಶ ಸಿಗದಿದ್ದಾಗ ದಿಧೀರ್ ಪ್ರತಿಭಟನೆ ಆಗುವಂತೆ ಮಾಡಿ ಸಭಾಪತಿ ಅವರನ್ನೇ ಇಕ್ಕಟ್ಟಿಗೆ ಸಿಲುಕಿಸಿದರು. ಆ ನಂತರ ತಮ್ಮ ಬೇಡಿಕೆಯಂತೆ ಪ್ರಾಸ್ತಾವಿಕ ವಿಚಾರ ಸಲ್ಲಿಕೆಗೆ ಅವಕಾಶ ಪಡೆದುಕೊಳ್ಳುವಲ್ಲಿ ಯಶಸ್ವಿಯಾದರು. ಮೊದಲಿಗೆ ಸರ್ಕಾರದ ಮೇಲೆ ಎರಗಿದ ಈಶ್ವರಪ್ಪ, ರಾಜ್ಯದಲ್ಲಿ ದಿನಕ್ಕೆ ಐವರಂತೆ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದರೆ. ಸರ್ಕಾರ ಈಗ ರೈತರ ಬಗ್ಗೆ ಮಾತನಾಡಲಾರಂಭಿಸಿದೆ ಎಂದು ರೇಗಾಡಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ರೈತರ ಬಗ್ಗೆ ಈಗ ಕಾಳಜಿ ವ್ಯಕ್ತಪಡಿಸಿದ್ದಾರೆ. ಅವರ ಮನೆಗೆ ಹೋಗುವ ಮಾತನಾಡುತ್ತಿದ್ದಾರೆ. ಇದೇ ಕೆಲಸ ಹಿಂದೆಯೇ ಮಾಡಿದ್ದರೆ ಇಂದು ಅನೇಕ ರೈತರ ಆತ್ಮಹತ್ಯೆ ತಪ್ಪಿಸಬಹುದಿತ್ತು. ಆದರೆ ಸರ್ಕಾರ ಕಬ್ಬು ಬೆಳೆಗಾರರ ಬಾಕಿ ಪಾವತಿಸಿಲ್ಲ. ಬೆಳೆಗೆ ಸೂಕ್ತ ಬೆಲೆ ಸಿಗುವಂತೆ ಮಾಡಲಿಲ್ಲ. ರೈತರಿಗೆ ಆರೋಗ್ಯ, ಶಿಕ್ಷಣವಂತೂ ಇಲ್ಲವೇ ಇಲ್ಲ. ಇದರಿಂದಾಗಿ ರೈತರು ಬೆಳೆ ನಷ್ಟವಾದಾಗ ಸಾಲದ ಬಾಧೆ ಹೆಚ್ಚಾದಾಗ ಆತ್ಮಹತ್ಯೆ ದಾರಿ ಹಿಡಿಯುತ್ತಾರೆ. ಅದರಲ್ಲೂ ಈಗ ರೈತರು ತಾನು ಸತ್ತರೆ ಹಣ ಸಿಗುತ್ತದೆ. ಕುಟುಂಬ ಉಳಿಯುತ್ತದೆ ಎನ್ನುವ ಭಾವಕ್ಕೆ ತಿರುಗುತ್ತಿದ್ದಾರೆ. ಆದ್ದರಿಂದ ಅವರ ಮನೆಗಳಿಗೆ ಸರ್ವಪಕ್ಷಗಳ ನಾಯಕರು ಸಂಘಟನೆಗಳ ಮುಖಂಡರು ಹೋಗಿ ಧೈರ್ಯ ತುಂಬಬೇಕು. ರೈತರ ಸಾಲ ಮನ್ನಾ ಮಾಡಬೇಕು. ಇದಕ್ಕಾಗಿ ಸರ್ಪಕ್ಷ ನಿಯೋಗ ಕರೆದೊಯ್ದು ನೆರವು ಕೋರಬೇಕು. ರೈತರಿಗೆ ನೆರವು, ಸಬ್ಸಿಡಿ ನೀಡಬೇಕು ಎಂದು ಈಶ್ವರಪ್ಪ ಆಗ್ರಹಿಸಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT