ವಿಧಾನ ಪರಿಷತ್ 
ರಾಜಕೀಯ

ಮೇಲ್ಮನೆ ವಿಸರ್ಜಿಸಿ: ಜೆಡಿಎಸ್ ಶಾಸಕನಿಂದ ಖಾಸಗಿ ನಿರ್ಣಯ

ದೇಶದ ಬಹು ರಾಜ್ಯಗಳಲ್ಲಿ ಇಲ್ಲದ ವಿಧಾನ ಪರಿಷತ್ತು ರಾಜ್ಯದಲ್ಲಿ ಸಹ ಇರುವುದು ಅವಶ್ಯಕವೆನಿಸುವುದಿಲ್ಲ. ಆದ ಕಾರಣ ರಾಜ್ಯ ವಿಧಾನ ಪರಿಷತ್ತನ್ನು ವಿಸರ್ಜನೆ ಮಾಡಬೇಕೆಂಬ....

ಬೆಂಗಳೂರು: ದೇಶದ ಬಹು ರಾಜ್ಯಗಳಲ್ಲಿ ಇಲ್ಲದ ವಿಧಾನ ಪರಿಷತ್ತು ರಾಜ್ಯದಲ್ಲಿ ಸಹ ಇರುವುದು ಅವಶ್ಯಕವೆನಿಸುವುದಿಲ್ಲ. ಆದ ಕಾರಣ ರಾಜ್ಯ ವಿಧಾನ ಪರಿಷತ್ತನ್ನು ವಿಸರ್ಜನೆ ಮಾಡಬೇಕೆಂಬ ತಿದ್ದುಪಡಿ ತರುವ ನಿರ್ಣ ಯವನ್ನು ಮುಂದಿನ ಅಧಿವೇಶನದಲ್ಲಿ ಮಂಡಿಸಲು ಅವಕಾಶ ನೀಡಬೇಕೆಂದು ತುರುವೆಕೆರೆ ಶಾಸಕ ಎಂ.ಟಿ. ಕೃಷ್ಣಪ್ಪ ವಿಧಾನ ಸಭಾಧ್ಯಕ್ಷರಿಗೆ ಮನವಿ ಮಾಡಿದ್ದಾರೆ.

ವಿವಿಧ ವಲಯದಲ್ಲಿ ಅನುಭವ ಹಾಗೂ ವಿಶೇಷ ಜ್ಞಾನ ಹೊಂದಿರುವ ಸದಸ್ಯರನ್ನು ನಾಮನಿರ್ದೇಶನ ಮಾಡುವುದರ ಮೂಲಕ 1907ರಲ್ಲಿ ಕರ್ನಾಟಕ ವಿಧಾನಪರಿಷತ್ತನ್ನು ಸ್ಥಾಪಿಸಲಾಗಿದೆ. ಆದರೆ, ಇತ್ತೀಚಿನ ದಿನ ಗಳಲ್ಲಿ ಪ್ರಸ್ತಾಪಿಸಿದ ವಿಭಾಗದಲ್ಲಿ ಪರಿಣಿತ ಹೊಂದಿರುವ ಅನುಭವಸ್ಥರನ್ನು ವಿಧಾನ ಪರಿಷತ್ತಿಗೆ ನಾಮ ನಿರ್ದೇಶನ ಮಾಡುವ ಪದ್ದತಿಯನ್ನು ಅನುಸರಿಸದೆ ರಾಜಕೀಯ ಒತ್ತಡದಿಂದ ಮತ್ತು ಸಾರ್ವತ್ರಿಕ ಚುನಾವಣೆಯಲ್ಲಿ ಸೋಲನುಭವಿಸಿದ ವ್ಯಕ್ತಿಗಳಿಗೆ ವಿಧಾನ ಪರಿಷತ್ ಗೆ ನಾಮನಿರ್ದೇಶನ ಮಾಡುತ್ತಿರು ವುದರಿಂದ ವಿಧಾನ ಪರಿಷತ್ತಿನ ಘನತೆಗೆ ಕುಂದುಂಟಾಗುತ್ತಿದೆ' ಎಂದು ತಮ್ಮ ಕೋರಿಕೆಯಲ್ಲಿ ವಿವರಿಸಿದ್ದಾರೆ.

ಈ ಕುರಿತಾಗಿ ಸ್ಪೀಕರ್ ಕಾಗೋಡು ತಿಮ್ಮಪ್ಪ ಅವರಿಗೆ ಬರೆದ ಪತ್ರದಲ್ಲಿ ತಮ್ಮ ಅಸಮಾಧಾನ ವ್ಯಕ್ತಪಡಿಸಿರುವ ಕೃಷ್ಣಪ್ಪ ಅವರು, ವಿಧಾನ ಪರಿಷತ್ತಿನಲ್ಲಿ ಕೇವಲ ಲಾಬಿಯ ಮುಖಾಂತರ ವಿಧಾನ ಪರಿಷತ್ತಿಗೆ ಬಂದಿರುತ್ತಾರೆ. ಜಾತಿ ಮುಖೇನ, ಲ್ಯಾಂಡ್ ಮಾಫಿಯಾ ಹಾಗೂ ಲಿಕ್ಕರ್ ಮಾಫಿಯಾದವರಿದ್ದಾರೆ. ವಿಧಾನ ಪರಿಷತ್ತಿನ ಮೂಲ ಉದ್ದೇಶ ಹಾಳಾಗಿದ್ದು, ಪರಿಷತ್ತಿನ ಪ್ರತಿ ವರ್ಷ ತಗಲುವ ವೆಚ್ಚ 34.46 ಕೋಟಿ ಹಾಗೂ ವಿಧಾನ ಪರಿಷತ್ ಸದಸ್ಯರಿಗೆ ಕೊಡುವ 3 ಕೋಟಿ ಅನುದಾನ ಕೂಡ ಉದ್ದೇಶ ರಹಿತ ಎಂದು ಟೀಸಿದ್ದಾರೆ.

ಪರಿಷತ್ ಸದಸ್ಯರು ಸಾಮಾನ್ಯ ಜನರೊಂದಿಗೆ ಸ್ಪಂದಿಸುವುದಿಲ್ಲ, ಯಾವುದೇ ಜವಾಬ್ದಾರಿ ಕೂಡ ಇರುವುದಿಲ್ಲ. ಆದ್ದರಿಂದ ಇವರಿಗೆ ನೀಡುವ ಎಲ್ಲಾ ಸವಲತ್ತು ಹಾಗೂ ಅನುದಾನ ರಾಜ್ಯದ ಜನರಿಗೆ ಹೊರೆಯಾಗುತ್ತದೆ. 30 ರಾಜ್ಯಗಳ ಪೈಕಿ 25 ರಾಜ್ಯಗಳಲ್ಲಿ ವಿಧಾನ ಪರಿಷತ್ ಇಲ್ಲ. ಪರಿಷತ್ ಇಲ್ಲದ ರಾಜ್ಯಗಳಲ್ಲಿ ಸಹ ಆಡಳಿತ ಮತ್ತು ಕಾನೂನು ವ್ಯವಸ್ಥೆ ಸುಗಮವಾಗಿದೆ. ಇವೆಲ್ಲವನ್ನೂ ಮನಗಂಡು ವಿಧಾನ ಪರಿಷತ್ತನ್ನು ವಿಸರ್ಜನೆ ಮಾಡಿ ಖಜಾನೆ ಹಣವನ್ನು ಉಳಿತಾಯ ಮಾಡಿ ರಾಜ್ಯದ ಜನತೆಗೆ ಒಳ್ಳೆಯ ಕಾರ್ಯ ಮಾಡಬಹುದು ಎಂದು ಅಭಿಪ್ರಾಯ ಪಟ್ಟಿದ್ದಾರೆ.ಅಬಿsಪ್ರಾಯಪಟ್ಟಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಭಾರತದ ಮೇಲೆ ಶೇ.50 ರಷ್ಟು ಸುಂಕಾಸ್ತ್ರ ಜಾರಿ: ಕೊನೆಗೆ ಒಟ್ಟಿಗೆ ಸೇರ್ತಿವಿ! US ಖಜಾನೆ ಮುಖ್ಯಸ್ಥ ಹಿಂಗ್ಯಾಕಂದ್ರು?

ಸಶಸ್ತ್ರ ಪಡೆಗಳು ಮುಂದಿನ ಭದ್ರತಾ ಸವಾಲುಗಳಿಗೆ ಸಿದ್ಧರಾಗಿರಬೇಕು: ರಾಜನಾಥ್ ಸಿಂಗ್

ಹಿಂದೂ ನಂಬಿಕೆ ಒಡೆಯುತ್ತಿರುವ ಬಾನು ಮುಷ್ತಾಕ್: ಶಿವನ ಬೆಟ್ಟವನ್ನೇ 'ಯೇಸು ಬೆಟ್ಟ' ಮಾಡಲು ಹೊರಟವರಿಂದ ಧರ್ಮದ ಪಾಠ ಬೇಡ- ಪ್ರತಾಪ್ ಸಿಂಹ

2030 Commonwealth Games: ಭಾರತದ ಬಿಡ್‌ಗೆ ಕೇಂದ್ರ ಸಂಪುಟ ಅನುಮೋದನೆ! ಅಹಮದಾಬಾದ್ ನಲ್ಲಿ ಆಯೋಜಿಸುವ ಪ್ರಸ್ತಾಪ!

'ಡೆವಿಲ್‌' ಸಿನಿಮಾದ '‘ಇದ್ರೆ ನೆಮ್ಮದಿಯಾಗ್ ಇರ್ಬೇಕ್' ಹಾಡಿಗೆ ಭರ್ಜರಿ ಸ್ಟೆಪ್ ಹಾಕಿದ ವಿನೋದ್ ರಾಜ್! Video

SCROLL FOR NEXT