ರಾಜಕೀಯ

ಕಾಂಗ್ರೆಸ್ ಜತೆ ಮೈತ್ರಿಗೆ ಗೌಡರ ಸಮರ್ಥನೆ

Srinivasamurthy VN
ಹಾಸನ: ಬಿಬಿಎಂಪಿ ಅಧಿಕಾರಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಜೆಡಿಎಸ್ ಮೈತ್ರಿ ವಿರುದ್ಧ ಕಾನೂನು ಹೋರಾಟ ಮಾಡಲು ಹೊರಟಿರುವ ಬಿಜೆಪಿ ಕ್ರಮದ ವಿರುದ್ಧ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಕಿಡಿ ಕಾರಿದ್ದಾರೆ.
ನಗರದರಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯವರು ಯಾವ ಕಾನೂನು ಹೋರಾಟ ಮಾಡುತ್ತಾರೆ, ಅವರ ಕಾನೂನು ಹೋರಾಟ ನನಗೆ ಗೊತ್ತಿದೆ. ಈ ಹಿಂದೆ  10 ಜನ ಶಾಸಕರನ್ನು ಆಪರೇಷನ್ ಕಮಲ ಮಾಡಿದ್ದು ಯಾರು ಎಂದು ಪ್ರಶ್ನಿಸಿದ ಗೌಡರು, ಈಗ ಕಾನೂನು ಹೋರಾಟ ಮಾಡುತ್ತೇವೆ ಎನ್ನುವವರಿಗೆ ನಾಚಿಗೆಯಾಗುವುದಿಲ್ಲವೇ ಎಂದು ತರಾಟೆಗೆ  ತೆಗೆದುಕೊಂಡರು.
ಕಾವೇರಿ ಬಗ್ಗೆ ಉಸಿರಿಲ್ಲ
ಮಹದಾಯಿ ಯೋಜನೆ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ್ ಜೋಶಿ ಅವರ ದುರಹಂಕಾರದ ಮಾತಿನಿಂದ ನಾನು ಏನನ್ನೂ ಕಲಿಯಬೇಕಿಲ್ಲ ಎಂದರು.
SCROLL FOR NEXT